ಆ್ಯಪ್ನಗರ

ಸಿಎಂ ಬಿಎಸ್‌ವೈ v/s ಕಟೀಲ್‌ -ಸಂಭ್ರಮಕ್ಕೂ ಜಟಾಪಟಿ !

ಸಿಎಂ ಯಡಿಯೂರಪ್ಪ ನೇತೃತ್ವದ ಸರಕಾರದ ಶತಕ ಸಂಭ್ರಮ ಕಾರ್ಯಕ್ರಮ ಪಕ್ಷದ ವತಿಯಿಂದಲೇ ನಡೆಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಟ್ಟುಹಿಡಿದಿದ್ದು ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಗೊಂದಲಕ್ಕೆ ಕಾರಣವಾಗಿದೆ.

Vijaya Karnataka 17 Oct 2019, 10:02 pm
ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಸರಕಾರದ ಶತಕ ಸಂಭ್ರಮ ಕಾರ್ಯಕ್ರಮ ಪಕ್ಷದ ವತಿಯಿಂದಲೇ ನಡೆಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಒತ್ತಡ ಹಾಕಿದ್ದು, ಪಕ್ಷ ಮತ್ತು ಸರಕಾರದ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ಕಾರಣವಾಗಿದೆ.
Vijaya Karnataka Web bsy and nalin


ನವೆಂಬರ್‌ 2ರಂದು ಬಿಎಸ್‌ವೈ ಸರಕಾರಕ್ಕೆ 100 ದಿನ ತುಂಬಲಿದೆ. ಈ ಹಿನ್ನೆಲೆಯಲ್ಲಿಸರಕಾರದ ಸಾಧನೆ ಬಗ್ಗೆ ಜನರಿಗೆ ತಿಳಿಸಲು ಸಮಾರಂಭ ಆಯೋಜಿಸಲು ಸಿಎಂ ಚಿಂತನೆ ನಡೆಸಿದ್ದಾರೆ. ಆದರೆ ಈ ಸಮಾರಂಭ ಪಕ್ಷದ ವೇದಿಕೆಯಲ್ಲೇ ನಡೆಯಬೇಕು ಎನ್ನುವುದು ಕಟೀಲ್‌ ಒತ್ತಡವಾಗಿದೆ ಎನ್ನಲಾಗಿದೆ.

ಮಹದಾಯಿಗೆ ಹಠ ಮಾಡುವ ಗೋವಾ ಜತೆ ಕೇಂದ್ರವೇ ಸಮಾಲೋಚಿಸಲಿ: ಬಸನಗೌಡ ಪಾಟೀಲ ಯತ್ನಾಳ

ಕಟೀಲ್‌ ಅಧ್ಯಕ್ಷರಾದ ಬಳಿಕ ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲೆ ಬಿಎಸ್‌ವೈ ಮತ್ತು ಅವರ ನಡುವೆ ಭಿನ್ನಾಭಿಪ್ರಾಯ ಹುಟ್ಟಿತ್ತು. ಅದಾದ ನಂತರ ಪಕ್ಷದ ವಿಚಾರದಲ್ಲಿ ಸಿಎಂ ತಲೆ ಹಾಕುತ್ತಿಲ್ಲ. ಕಟೀಲ್‌ ತಾವೇ ನಿರ್ಧಾರ ತೆಗೆದುಕೊಳ್ಳುತ್ತಿದ್ದು ಸಿಎಂ ಅವರೊಂದಿಗೆ ಅಂತರ ಕಾಯ್ದುಕೊಂಡಿರುವುದು ಪಕ್ಷ ಹಾಗೂ ಸರಕಾರದ ನಡುವೆ ಕಂದಕ ಸೃಷ್ಟಿಯಾಗಿದೆ ಎಂಬ ಆರೋಪವಿದೆ.

ನಮ್ಮಲ್ಲಿ 36 ಸಂಘಟನಾ ಜಿಲ್ಲೆಗಳಿವೆ- ಕಟೀಲ್ 'ಜಿಲ್ಲಾ' ಹೇಳಿಕೆಗೆ ಬಿಜೆಪಿ ಸಮರ್ಥನೆ

ಈ ಮಧ್ಯೆ ಸರಕಾರ ಶತದಿನದ ಸಂಭ್ರಮದಲ್ಲೂ ತಿಕ್ಕಾಟ ಶುರುವಾಗಿದ್ದರಿಂದ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಬೇಸರ ಮೂಡಿಸಿದೆ. ಈಗಾಗಲೇ ಇಬ್ಬರು ಮುಖಂಡರ ನಡುವೆ ತಲೆಧೋರಿರುವ ಭಿನ್ನಮತ ಪಕ್ಷಕ್ಕೂ ಹಾನಿಯಾಗುತ್ತಿದ್ದು ಪರಿಸ್ಥಿತಿ ತಿಳಿಗೊಳಿಸಲು ಹಿರಿಯ ಬಿಜೆಪಿ ಮುಖಂಡರು ಮುಂದಾಗಿದ್ದಾರೆ. ಇಬ್ಬರ ನಡುವೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ