ಆ್ಯಪ್ನಗರ

ಮತದಾನದ ಬೆನ್ನಲ್ಲೇ ಫಲಿತಾಂಶದ ಚಿಂತೆ ! ಮಂಜುನಾಥನ ಮೊರೆ ಹೋದ ಬಿಎಸ್‌ವೈ

ಮತದಾನದ ಬಳಿಕ ಸಿಎಂ ಬಿಎಸ್‌ ಯಡಿಯೂರಪ್ಪನವರಿಗೆ ಇದೀಗ ಫಲಿತಾಂಶದ ಚಿಂತೆ. ಡಿಸೆಂಬರ್ 9 ಕ್ಕೆ ಉಪಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದ್ದು ಅನರ್ಹ ಶಾಸಕರ ಭವಿಷ್ಯದ ಜೊತೆಗೆ ರಾಜ್ಯ ಸರಕಾರದ ಭವಿಷ್ಯ ಕೂಡಾ ಫಲಿತಾಂಶದ ಮೇಲೆ ನಿಂತಿದೆ.

Vijaya Karnataka Web 5 Dec 2019, 4:57 pm
ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯುತ್ತಿದ್ದು ಡಿಸೆಂಬರ್ 9 ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ. ಉಪಚುನಾವಣೆಯ ಅದೃಷ್ಟ ಪರೀಕ್ಷೆಯಲ್ಲಿ ಸೋಲಾಗುತ್ತದೂ ಗೆಲುವಾಗುತ್ತದೋ ಎಂಬ ಆತಂಕ ಅನರ್ಹ ಶಾಸಕರ ಜೊತೆಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಕಾಡುತ್ತಿದೆ. ಈ ನಡುವೆ ಸಿಎಂ ಬಿಎಸ್‌ವೈ ಧರ್ಮಸ್ಥಳ ಮಂಜುನಾಥನ ಮೊರೆ ಹೋಗಿದ್ದಾರೆ.
Vijaya Karnataka Web karnataka chief minister bs yeddyurappa visit dharmasthala
ಮತದಾನದ ಬೆನ್ನಲ್ಲೇ ಫಲಿತಾಂಶದ ಚಿಂತೆ ! ಮಂಜುನಾಥನ ಮೊರೆ ಹೋದ ಬಿಎಸ್‌ವೈ


ಭಾನುವಾರ ಸಿಎಂ ಬಿಎಸ್‌ವೈ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಪಡೆಯಲಿದ್ದಾರೆ. ಕ್ಷೇತ್ರದಲ್ಲಿ ನಡೆಯಲಿರುವ ವಿಶೇಷ ಪೂಜೆ ಪುರಸ್ಕಾರದಲ್ಲೂ ಸಿಎಂ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಉಪಚುನಾವಣಾ ಫಲಿತಾಂಶ ಅನರ್ಹ ಶಾಸಕರಿಷ್ಟೇ ಅಲ್ಲದೆ ಸಿಎಂ ಬಿಎಸ್‌ವೈ ಅವರಿಗೂ ಸಾಕಷ್ಟು ಮಹತ್ವವಾಗಿದೆ. ಸರಕಾರ ಉಳಿಯಬೇಕಾದರೆ ಕನಿಷ್ಠ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಬಿಜೆಪಿಗಿದೆ.

ನಿರೀಕ್ಷಿತ ಸ್ಥಾನಗಳನ್ನು ಗಳಿಸದೇ ಇದ್ದರೆ ರಾಜ್ಯ ಸರಕಾರ ಪತನವಾಗುವ ಸಾಧ್ಯತೆಯಿದ್ದು ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡಾ ಬಿಎಸ್‌ವೈ ಉರುಳಿಸಲು ತಂತ್ರ ಹೂಡುತ್ತಿದೆ. ಇದು ಸಿಎಂ ಆತಂಕಕ್ಕೆ ಕಾರಣವಾಗಿದೆ. ಒಂದು ವೇಳೆ ಅಂತಹ ಪರಿಸ್ಥಿತಿ ಎದುರಾದರೆ ಸರಕಾರ ಉಳಿಸಿಕೊಳ್ಳಲು ಪರ್ಯಾಯ ಮಾರ್ಗೋಪಾಯಗಳನ್ನು ಸಿಎಂ ಬಿ.ಎಸ್‌ ಯಡಿಯೂರಪ್ಪ ಕಂಡುಹಿಡಿಯಬೇಕಾಗಿದೆ.

ಮತದಾರರಲ್ಲಿ ನಿರುತ್ಸಾಹ; ಮಧ್ಯಾಹ್ನ 3 ಗಂಟೆ ವರೆಗೆ ಶೇ. 46.62 ಓಟಿಂಗ್

ಈ ಕಾರಣಕ್ಕಾಗಿ ಉಪಚುನಾವಣೆಯ ಫಲಿತಾಂಶ ಬಿಎಸ್‌ವೈ ಪಾಲಿಗೆ ಬಹು ಮುಖ್ಯವಾಗಿದೆ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ನಡುವೆಯೂ ಸ್ವತಃ ಸಿಎಂ ಬಿಎಸ್‌ವೈ ಉಪಚುನಾವಣೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಪ್ರತಿ ಕ್ಷೇತ್ರಗಳಲ್ಲೂ ಎರೆಡೆರಡು ಬಾರಿ ಪ್ರಚಾರ ನಡೆಸಿದ್ದರು. ಅಲ್ಲದೆ ತಮ್ಮ ಆಪ್ತ ವಲಯದ ಶಾಸಕರು ಹಾಗೂ ಸಚಿವರಿಗೆ ಚುನಾವಣೆಯ ಸಂಪೂರ್ಣ ಜಾವಾಬ್ದಾರಿ ಹೊರುವಂತೆ ಸೂಚಿಸಿದ್ದರು.

ಉಪಸಮರ ನೀರಸವಾದ್ರೂ ಕಾವೇರಿದೆ ಕೈ ಕಮಲ ಟ್ವೀಟ್ ಸಮರ

15 ವಿಧಾನಸಭಾ ಕ್ಷೇತ್ರಗಳಿಗೂ ಸಿಎಂ ಕಾಲಿಗೆ ಚಕ್ರ ಕಟ್ಟಿಕೊಂಡ ರೀತಿಯಲ್ಲಿ ತಿರುಗಾಡಿ ಪ್ರಚಾರದ ಜೊತೆಗೆ ತಂತ್ರಗಾರಿಗೆ ನಡೆಸಿದ್ದರು. ಕೆಲವು ಕ್ಷೇತ್ರಗಳಲ್ಲಿ ತಲೆಧೋರಿದ್ದ ಬಂಡಾಯದ ಹಿನ್ನೆಲೆಯಲ್ಲಿ ಸಿಎಂ ಪುತ್ರರಾದ ರಾಘವೇಂದ್ರ ಹಾಗೂ ವಿಜಯೇಂದ್ರ ಅವರು ಸಿಎಂ ಸೂಚನೆಯಂತೆ ತೆರಳಿ ಬಂಡಾಯ ಶಮನ ಮಾಡುವ ಪ್ರಯತ್ನ ನಡೆಸಿದ್ದರು.

ಇದೀಗ ಮತದಾನ ಪ್ರಕ್ರಿಯೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಎಲ್ಲರದ್ದು. ಈ ಹಿನ್ನೆಲೆಯಲ್ಲಿ ಉಪಚುನಾವಣೆಯ ಫಲಿತಾಂಶಕ್ಕೂ ಮುನ್ನ ಸಿಎಂ ಬಿಎಸ್‌ ಯಡಿಯೂರಪ್ಪ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಪಡೆಯಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ