ಆ್ಯಪ್ನಗರ

ಸಿದ್ದರಾಮಯ್ಯರ ಅದೃಷ್ಟದ ನಿವಾಸಕ್ಕೆ ಬಿಎಸ್‌ವೈ, ಫೆ. 27 ರಂದು ಗೃಹ ಪ್ರವೇಶ?

ಸಿದ್ದರಾಮಯ್ಯ ಅವರ ಅದೃಷ್ಟದ ನಿವಾಸ ಕಾವೇರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ವಾಸ್ತವ್ಯವನ್ನು ಬದಲಾಯಿಸಲಿದ್ದಾರೆ. ಫೆಬ್ರವರಿ 27 ರಂದು ಬಿಎಸ್‌ವೈ ಹುಟ್ಟುಹಬ್ಬದ ದಿನವಾಗಿದ್ದು ಆ ದಿನದಂದೇ ಗೃಹ ಪ್ರವೇಶ ಮಾಡುವ ಸಾಧ್ಯತೆ ಇದೆ.

Vijaya Karnataka Web 23 Feb 2020, 11:01 am
ಬೆಂಗಳೂರು: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ತಮ್ಮ ವಾಸ್ತವ್ಯವನ್ನು ಧವಳಗಿರಿಯಿಂದ ಸರ್ಕಾರಿ ಅಧಿಕೃತ ನಿವಾಸ ಕಾವೇರಿಗೆ ಬದಲಾಯಿಸಲಿದ್ದಾರೆ. ಫೆಬ್ರವರಿ 27 ರಂದು ಬಿಎಸ್‌ವೈ 78ನೇ ಹುಟ್ಟುಹಬ್ಬವನ್ನು ಆಚರಿಸಲಿದ್ದು, ಆ ದಿನದಂದೇ ತಮ್ಮ ಧವಳಗಿರಿ ನಿವಾಸವನ್ನು ತೊರೆಯಲಿದ್ದಾರೆ.
Vijaya Karnataka Web karnataka chief minister bs yeddyurappa will shift his home to kaveri
ಸಿದ್ದರಾಮಯ್ಯರ ಅದೃಷ್ಟದ ನಿವಾಸಕ್ಕೆ ಬಿಎಸ್‌ವೈ, ಫೆ. 27 ರಂದು ಗೃಹ ಪ್ರವೇಶ?


ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಸಿಎಂ ಆದ ದಿನದಿಂದ ಕಾವೇರಿ ಪ್ರವೇಶಿಸಿದ ಅವರು ಅದೃಷ್ಟದ ನಿವಾಸವನ್ನು ತೊರೆಯಲು ತಯಾರಿರಲಿಲ್ಲ.

ಸಿದ್ದರಾಮಯ್ಯಗೆ ಇನ್ನೂ ಸಿಕ್ಕಿಲ್ಲ ಸರ್ಕಾರಿ ಕಾರು, ಸಿಬ್ಬಂದಿ - ಪತ್ರ ಬರೆದರೂ ಉತ್ತರವಿಲ್ಲ!

ಕಾವೇರಿ ನಿವಾಸದಲ್ಲಿ ವಾಸ್ತವ್ಯ ಮುಂದುವರಿಸಲು ಅವಕಾಶ ನೀಡುವಂತೆ ಕೋರಿ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದರು. ಕೊನೆಗೂ ಸರ್ಕಾರದ ಒತ್ತಡದಿಂದ ಅವರು ಈ ನಿವಾಸವನ್ನು ತೊರೆಯಬೇಕಾಯಿತು.

ಇದೀಗ ಸಿದ್ದರಾಮಯ್ಯ ಅದೃಷ್ಟದ ನಿವಾಸಕ್ಕೆ ಬಿಎಸ್‌ವೈ ತಮ್ಮ ವಾಸ್ತವ್ಯವನ್ನು ಬದಲಾಯಿಸಲಿದ್ದಾರೆ. ಸದ್ಯ ಡಾಲರ್ಸ್‌ ಕಾಲೊನಿಯ ಧವಳಗಿರಿ ನಿವಾಸದಲ್ಲಿ ಬಿಎಸ್‌ವೈ ಉಳಿದುಕೊಂಡಿದ್ದಾರೆ. ಗೃಹ ಕಚೇರಿ ಕೃಷ್ಣಾಗೆ ಧವಳಗಿರಿಯಿಂದ ತೆರಳಲು ದೂರವಾಗಿರುವ ಕಾರಣದಿಂದಾಗಿ ಕಾವೇರಿಗೆ ವಾಸ್ತವ್ಯವನ್ನು ಬದಲಾಯಿಸಲು ಬಿಎಸ್‌ವೈ ನಿರ್ಧರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾವೇರಿ ನಿವಾಸದಲ್ಲಿ ಸ್ವಚ್ಛತಾ ಕಾರ್ಯಗಳು ನಡೆಯುತ್ತಿದ್ದು ಹುಟ್ಟುಹಬ್ಬದ ದಿನ (ಫೆ.27) ರಂದು ಕಾವೇರಿ ಗೃಹ ಪ್ರವೇಶ ಮಾಡಲು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ