ಆ್ಯಪ್ನಗರ

ಸಿಎಂ ಯಡಿಯೂರಪ್ಪ ಟ್ವೀಟ್‌ ಹುಟ್ಟು ಹಾಕಿದೆ ನೂರೆಂಟು ಪ್ರಶ್ನೆ..! ಇದು ವಿದಾಯದ ಮುನ್ಸೂಚನೆಯೇ..?

ಈ ಟ್ವೀಟ್‌ ಸೂಕ್ಷ್ಮವಾಗಿ ಗಮನಿಸಿದರೆ, ವಿದಾಯದ ಮುನ್ಸೂಚನೆ ಎಂಬ ಭಾವನೆ ಬಾರದೆ ಇರದು..! ಅಭಿಮಾನಿಗಳು ಪ್ರತಿಭಟನೆ ನಡೆಸುವ ಅನಿವಾರ್ಯತೆ ಏಕೆ ಬರುತ್ತದೆ..? ಸಿಎಂ ಪಟ್ಟದಿಂದ ಬಿಎಸ್‌ವೈ ಕೆಳಗಿಳಿಯಬೇಕಾದ ಅನಿವಾರ್ಯ ಸನ್ನಿವೇಶ ಸೃಷ್ಟಿಯಾಗಿದೆಯೇ..?

Vijaya Karnataka Web 21 Jul 2021, 10:18 pm
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತಾರಕಕ್ಕೇರಿರುವ ಬೆನ್ನಲ್ಲೇ, ಸಿಎಂ ಯಡಿಯೂರಪ್ಪ ಅವರ ಟ್ವೀಟ್ ಹೊರಬಿದ್ದಿದೆ. ಅಭಿಮಾನಿಗಳು, ಬೆಂಬಲಿಗರನ್ನು ಉದ್ದೇಶಿಸಿ ಯಡಿಯೂರಪ್ಪ ಮಾಡಿರುವ ಈ ಟ್ವೀಟ್ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಯಡಿಯೂರಪ್ಪ ಅವರ ಟ್ವೀಟ್‌ನ ಸಾರಾಂಶ ಹಾಗೂ ಭಾವಾರ್ಥ ಇಂತಿದೆ.
Vijaya Karnataka Web Yediyurappa
ಸಿಎಂ ಯಡಿಯೂರಪ್ಪ ಟ್ವೀಟ್‌ ಹುಟ್ಟು ಹಾಕಿದೆ ನೂರೆಂಟು ಪ್ರಶ್ನೆ..! ಇದು ವಿದಾಯದ ಮುನ್ಸೂಚನೆಯೇ..?


‘ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಇದೆ. ಪಕ್ಷದ ಸಿದ್ದಾಂತ ಹಾಗೂ ನೀತಿಯನ್ನು ಗೌರವಿಸಿ ದುಡಿಯುತ್ತಿದ್ದೇನೆ. ಹೀಗಾಗಿ, ಎಲ್ಲರೂ ಪಕ್ಷದ ಶಿಸ್ತನ್ನು ಪಾಲಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಅಭಿಮಾನಿಗಳು ಯಾರೂ ಕೂಡಾ ಪ್ರತಿಭಟನೆ ಸೇರಿದಂತೆ ಇನ್ಯಾವುದೇ ಅಹಿತಕರ ಕೃತ್ಯಗಳಿಗೆ ಕೈ ಹಾಕಬಾರದು ಹಾಗೂ ಪಕ್ಷದ ಘನತೆಗೆ ಧಕ್ಕೆ ತರುವ, ಮುಜುಗರ ಉಂಟುಮಾಡುವ ಕೆಲಸ ಮಾಡಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ’ ಎಂದು ಯಡಿಯೂರಪ್ಪ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.


ಈ ಟ್ವೀಟ್‌ ಸೂಕ್ಷ್ಮವಾಗಿ ಗಮನಿಸಿದರೆ, ವಿದಾಯದ ಮುನ್ಸೂಚನೆ ಎಂಬ ಭಾವನೆ ಬಾರದೆ ಇರದು..! ಅಭಿಮಾನಿಗಳು ಪ್ರತಿಭಟನೆ ನಡೆಸುವ ಅನಿವಾರ್ಯತೆ ಏಕೆ ಬರುತ್ತದೆ..? ಸಿಎಂ ಪಟ್ಟದಿಂದ ಬಿಎಸ್‌ವೈ ಕೆಳಗಿಳಿಯಬೇಕಾದ ಅನಿವಾರ್ಯ ಸನ್ನಿವೇಶ ಸೃಷ್ಟಿಯಾಗಿದೆಯೇ..? ಇದಕ್ಕೆ ಅವರೂ ಕೂಡಾ ಒಪ್ಪಿದ್ದಾರೆಯೇ..? ಈ ಕಾರಣಕ್ಕಾಗಿಯೇ ಮುಂಜಾಗ್ರತಾ ಕ್ರಮವಾಗಿ ಅಭಿಮಾನಿಗಳು, ಬೆಂಬಲಿಗರಿಗೆ ಸಮಾಧಾನ ಹೇಳುತ್ತಿದ್ದಾರೆಯೇ? ಎಂಬ ಅನುಮಾನ ಶುರುವಾಗಿದೆ.

ಕಾಂಗ್ರೆಸ್‌ ನಾಯಕರು ಯಡಿಯೂರಪ್ಪ ಪರ ನಿಂತಿರೋದು ಏಕೆ? ಬಿಜೆಪಿ ಹೈಕಮಾಂಡ್ ಅಚ್ಚರಿ ಆಯ್ಕೆ ಯಾರು..?
ಯಡಿಯೂರಪ್ಪ ಅವರ ಈ ಟ್ವೀಟ್‌ ಹೊರಬಿದ್ದ ಕೂಡಲೇ ಟ್ವಿಟ್ಟರ್‌ನಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ರಾಜ್ಯದ ಜನರು ನಿಮ್ಮ ಪರವಾಗಿ ಹೋರಾಟ ಮಾಡುತ್ತಾರೆ, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ ಎಂದು ಬಹುತೇಕರು ಟ್ವೀಟಿಸಿದ್ದಾರೆ.


ಬಿಜೆಪಿಯಿಂದ ಹೊರಬನ್ನಿ..! ಕೆಜೆಪಿ ರೀತಿ ನಿಮ್ಮದೇ ಪ್ರಾದೇಶಿಕ ಪಕ್ಷ ಕಟ್ಟಿ ಎಂದೂ ಕೆಲವರು ಹುರಿದುಂಬಿಸಿದ್ಧಾರೆ.


ಯಡಿಯೂರಪ್ಪ ಇಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ - ಸುಬ್ರಮಣಿಯನ್‌ ಸ್ವಾಮಿ
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಚಮಚಾರಿಗಿ ಮಾಡದ ಕಾರಣ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡುತ್ತಿದೆ ಎಂದೂ ಕೆಲವರು ಕಿಡಿಕಾರಿದ್ದಾರೆ.


ಕೆಲವರು ಯಡಿಯೂರಪ್ಪ ಅವರಿಗೆ ರಾಜೀನಾಮೆ ನೀಡುವಂತೆ ತಿಳಿಸಿದ್ದಾರೆ. ಸಂಸದರಾದ ತೇಜಸ್ವಿ ಸೂರ್ಯ ಅಥವಾ ಪ್ರತಾಪ್ ಸಿಂಹ ಅಂಥವರಿಗೆ ಸಿಎಂ ಆಗುವ ಅವಕಾಶ ನೀಡುವಂತೆ ಸೂಚಿಸಿದ್ಧಾರೆ.


ಇನ್ನೂ ಕೆಲವರು ಯಡಿಯೂರಪ್ಪ ಅವರಿಗೆ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.


ಹೀಗೆ.. ಲೆಕ್ಕವಿಲ್ಲದಷ್ಟು ಟ್ವೀಟ್‌ಗಳು, ಲೆಕ್ಕವಿಲ್ಲದಷ್ಟು ವಾದ ಸರಣಿಗಳು ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದೆ. ಬಹುತೇಕರು ಯಡಿಯೂರಪ್ಪ ಪರ ವಹಿಸಿದ್ದಾರೆ ಅನ್ನೋದು ವಿಶೇಷ..! ಕೆಲವರು ಯಡಿಯೂರಪ್ಪ ವಿರುದ್ಧವಾಗಿದ್ದರೆ, ಮತ್ತೆ ಕೆಲವರು ಹೊಸ ಪಕ್ಷ ಕಟ್ಟಿ, ಬಿಜೆಪಿ ಹೈಕಮಾಂಡ್‌ ಎದುರು ನಡು ಬಗ್ಗಿಸಬೇಡಿ ಎಂಬಂಥಾ ಸಲಹೆಗಳನ್ನು ನೀಡಿದ್ದಾರೆ. ಒಟ್ಟಿನಲ್ಲಿ ಇಡೀ ರಾಜಕೀಯ ವಿದ್ಯಮಾನವೇ ನಾಟಕೀಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ