ಆ್ಯಪ್ನಗರ

ಮಗಳ ಮದುವೆಗೆ ಕೇವಲ 1 ದಿನ ರಜೆ ತೆಗೆದುಕೊಂಡ ರಾಜ್ಯದ ಮುಖ್ಯ ಕಾರ್ಯದರ್ಶಿ!

ಇಂದು ಎರಡನೇ ಶನಿವಾರ, ಭಾನುವಾರ ಹೇಗೂ ರಜೆ. ಶುಕ್ರವಾರ ಒಂದು ದಿನ ರಜೆ ಹಾಕಿರುವ ಭಾಸ್ಕರ್‌ ಒಟ್ಟಾರೆ ಮಗಳ ಮದುವೆಗೆ ಕೇವಲ ಮೂರು ದಿನ ವ್ಯಯಿಸುತ್ತಿದ್ದಾರೆ.

TOI.in 8 Jun 2019, 11:27 am
ಬೆಂಗಳೂರು: ಮದುವೆ ನೆಪದಲ್ಲಿ ಎಷ್ಟು ಸಾಧ್ಯವೋ ಅಷ್ಟು ರಜೆಗಳನ್ನು ಪಡೆಯುವ ಅಧಿಕಾರಿಗಳೇ ಹೆಚ್ಚು. ಆದರೆ ಅತ್ಯಂತ ಉನ್ನತ ಸ್ಥಾನದಲ್ಲಿರುವ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್‌ ಅವರು ತಮ್ಮ ಮಗಳ ಮದುವೆಗೆ ಕೇವಲ 1 ದಿನ ರಜೆ ಪಡೆಯುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
Vijaya Karnataka Web TS Bhaskar


ಬಹಳ ಸಿಂಪಲ್‌ ಆಗಿ ಮಗಳ ಮದುವೆ ಮಾಡಬೇಕು ಎಂದು ನಿರ್ಧರಿಸಿದ ವಿಜಯ್‌ ಭಾಸ್ಕರ್‌ ಶುಕ್ರವಾರ ಒಂದು ದಿನ ರಜೆ ಪಡೆದು ಮದುವೆ ಕಾರ್ಯಕ್ರಮ ಪೂರೈಸಿದ್ದಾರೆ.

ಕರ್ತವ್ಯ ಪ್ರಜ್ಞೆ ಮಾತ್ರವಲ್ಲ, ಸಿಂಪ್ಲಿಸಿಟಿಯನ್ನು ಮೆರೆದಿರುವ ಉನ್ನತ ಹಿರಿಯ ಅಧಿಕಾರಿ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ವಯ್ಯಲಿಕವಲ್‌ನ ಸಾಮಾನ್ಯ ಕಲ್ಯಾಣ ಮಂಟಪದಲ್ಲಿ ಮಗಳ ಮದುವೆಯನ್ನು ಹಮ್ಮಿಕೊಂಡಿದ್ದರು. ಭಾಸ್ಕರ್‌ ಅವರ ಹಿರಿಯ ಮಗಳು ವಿಶೃತಿ ಅವರ ಮದುವೆ ಭಾನುವಾರ ನಡೆಯಲಿದೆ. ವಕೀಲರಾಗಿರುವ ವಿಶೃತಿ ಗೌತಮ್‌ ಕುಮಾರ್‌ ರಾಜಾ ಎಂಬುವವರನ್ನು ವರಿಸಲಿದ್ದಾರೆ.

ಇಂದು ಎರಡನೇ ಶನಿವಾರ, ಭಾನುವಾರ ಹೇಗೂ ರಜೆ. ಶುಕ್ರವಾರ ಒಂದು ದಿನ ರಜೆ ಹಾಕಿರುವ ಭಾಸ್ಕರ್‌ ಒಟ್ಟಾರೆ ಮಗಳ ಮದುವೆಗೆ ಕೇವಲ ಮೂರು ದಿನ ವ್ಯಯಿಸುತ್ತಿದ್ದಾರೆ.

ಸುಮಾರು 500 ಮಂದಿಗೆ ಆಹ್ವಾನ ನೀಡಿರುವ ಭಾಸ್ಕರ್‌, ಉಡುಗೊರೆಗಳನ್ನು ತರಬೇಡಿ ಎಂದು ಕೇಳಿಕೊಂಡಿದ್ದಾರೆ. ನಾನು ಅತ್ಯಂತ ಸರಳ ಮನುಷ್ಯ. ನನ್ನ ಮಗಳು ಸೇರಿದಂತೆ ಕುಟುಂಬದ ಸದಸ್ಯರೂ ಸರಳಿಗರು. ಸರಳವಾಗಿ ಮದುವೆ ಮಾಡಲು ನಿಶ್ಚಯಿಸಿದ್ದೇವೆ ಎಂದು ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದ್ದಾರೆ.

ನಾನು ಕೆಲಸದಲ್ಲಿ ಬ್ಯುಸಿಯಿದ್ದಾಗ ನನ್ನ ಪತ್ನಿ ರುಕ್ಮಿಣಿ ಎಲ್ಲವನ್ನೂ ನಿಭಾಯಿಸಿದ್ದಾರೆ. ಮದುವೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ ಎಂದು ಪತ್ನಿ ಬಗ್ಗೆ ಭಾಸ್ಕರ್‌ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಮಗಳ ಮದುವೆಗೆ ಸಿಎಂ ಎಚ್‌ಡಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ ಪರಮೇಶ್ವರ ಅವರನ್ನು ಆಹ್ವಾನಿಸಿರುವುದಾಗಿ ಭಾಸ್ಕರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ