ಬೆಂಗಳೂರು: ಪಕ್ಷದ ವಿರುದ್ಧ ಬಂಡಾಯವೆದ್ದು ಕಾಂಗ್ರೆಸ್ ಸೇರಲು ಮುಂದಾಗಿರುವ ಬಿಜೆಪಿ ಮುಖಂಡರಾದ ರಾಜು ಕಾಗೆ ಹಾಗೂ ಅಶೋಕ್ ಪೂಜಾರಿ ಜೊತೆಗೆ ಮಾತುಕತೆ ನಡೆಸುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ ಮಾತುಕತೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಇಬ್ಬರು ಮುಖಂಡರು ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದು ಗೊತ್ತಿಲ್ಲ. ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ ಎಂದರು.
ಅಲ್ಲದೆ, ನಮ್ಮವರು ಅವರ ಕಡೆ ಹೋಗ್ತಾರೆ. ಅವರ ಕಡೆಯವರು ನಮ್ಮಲ್ಲಿಗೆ ಬರುತ್ತಾರೆ. ಅಂತಿಮವಾಗಿ ಏನಾಗುತ್ತೆ ಅಂತ ಕಾದು ನೋಡೋಣ. ಏನೇ ಆದರೂ ನಾವು ಉಪಚುನಾವಣೆಯಲ್ಲಿ 12 ಸೀಟ್ ಗಳ ಮೇಲೆ ಗೆಲ್ತೇವೆ ಎಂದಿದ್ದಾರೆ. ಬಿಜೆಪಿ ಮುಖಂಡರಾದ ಅಶೋಕ್ ಪೂಜಾರಿ ಹಾಗೂ ರಾಜು ಕಾಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಗೋಕಾಕ್ನಿಂದ ಅಶೋಕ್ ಪೂಜಾರಿ ಹಾಗೂ ಕಾಗವಾಡದಿಂದ ರಾಜು ಕಾಗೆ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ.
ಸುಪ್ರೀಂ ತೀರ್ಪು ಬಳಿಕ ಅಭ್ಯರ್ಥಿ ಘೋಷಣೆ - ಕಾಂಗ್ರೆಸ್ ಸಭೆಯಲ್ಲಿ ನಿರ್ಧಾರ
ಅನರ್ಹ ಶಾಸಕರ ಕುರಿತಾದ ಸುಪ್ರೀಂ ಕೋರ್ಟ್ ಆದೇಶ ಪ್ರಕಟಗೊಂಡ ಬಳಿಕ ಉಳಿದ ಏಳು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸುವ ನಿರ್ಧಾರವನ್ನು ಸೋಮವಾರ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಕೈಗೊಳ್ಳಲಾಗಿದೆ. ಡಿಸೆಂಬರ್ 5 ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು ಈಗಾಗಲೇ ಎಂಟು ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದೆ.
ಸುಪ್ರೀಂ ತೀರ್ಪಿನ ಬಳಿಕ 7 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ: ದಿನೇಶ್ ಗುಂಡೂರಾವ್
ಉಪಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಯಿತು. ಚುನಾವಣಾ ತಂತ್ರಗಾರಿಕೆ ಜೊತೆಗೆ ಉಳಿದ ಎಂಟು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕುರಿತಾಗಿ ಚರ್ಚೆ ನಡೆದಿದೆ. ಶಿವಾಜಿನಗರ, ಗೋಕಾಕ್ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಸರತ್ತು ಜಟಿಲಗೊಂಡಿದ್ದು ಒಮ್ಮತ ನಿರ್ಧಾರಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ.
ಟಿಕೆಟ್ಗಾಗಿ ಲಾಬಿ ನಡೆಯುತ್ತಿರುವುದರಿಂದ ಬುಧವಾರ ಪ್ರಕಟಗೊಳ್ಳಲಿರುವ ಅನರ್ಹ ಶಾಸಕರ ಕುರಿತಾದ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಏಳು ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಮಾಡಲು ಕಾಂಗ್ರೆಸ್ ಮುಂದಾಗಿದೆ. ಈ ನಡುವೆ ಬಿಜೆಪಿ ಮುಖಂಡರಾದ ರಾಜು ಕಾಗೆ ಹಾಗೂ ಅಶೋಕ್ ಪೂಜಾರಿ ಕಾಂಗ್ರೆಸ್ ಸೇರ್ಪಡೆ ಕುರಿತಾಗಿ ಮಾತುಕತೆ ನಡೆಯುತ್ತಿದೆ.
ಎಂಟು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು
ಹುಣಸೂರು: ಹೆಚ್.ಪಿ ಮಂಜುನಾಥ್
ಹೊಸಕೋಟೆ: ಪದ್ಮಾವತಿ ಸುರೇಶ್
ಕೆ.ಆರ್ ಪುರ: ನಾರಾಯಣಸ್ವಾಮಿ
ಯಲ್ಲಾಪುರ: ಭೀಮಾನಾಯ್ಕ
ಚಿಕ್ಕಬಳ್ಳಾಪುರ: ಎಂ ಆಂಜಿನಪ್ಪ
ಮಹಾಲಕ್ಷ್ಮಿ ಲೇಔಟ್: ಎಂ ಶಿವರಾಜ್
ರಾಣೆಬೆನ್ನೂರು: ಕೆ.ಬಿ ಕೋಳಿವಾಡ
ಹಿರೇಕೆರೂರು: ಬಿ.ಎಚ್. ಬನ್ನಿಕೋಡ್
ಅಲ್ಲದೆ, ನಮ್ಮವರು ಅವರ ಕಡೆ ಹೋಗ್ತಾರೆ. ಅವರ ಕಡೆಯವರು ನಮ್ಮಲ್ಲಿಗೆ ಬರುತ್ತಾರೆ. ಅಂತಿಮವಾಗಿ ಏನಾಗುತ್ತೆ ಅಂತ ಕಾದು ನೋಡೋಣ. ಏನೇ ಆದರೂ ನಾವು ಉಪಚುನಾವಣೆಯಲ್ಲಿ 12 ಸೀಟ್ ಗಳ ಮೇಲೆ ಗೆಲ್ತೇವೆ ಎಂದಿದ್ದಾರೆ. ಬಿಜೆಪಿ ಮುಖಂಡರಾದ ಅಶೋಕ್ ಪೂಜಾರಿ ಹಾಗೂ ರಾಜು ಕಾಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಗೋಕಾಕ್ನಿಂದ ಅಶೋಕ್ ಪೂಜಾರಿ ಹಾಗೂ ಕಾಗವಾಡದಿಂದ ರಾಜು ಕಾಗೆ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ.
ಸುಪ್ರೀಂ ತೀರ್ಪು ಬಳಿಕ ಅಭ್ಯರ್ಥಿ ಘೋಷಣೆ - ಕಾಂಗ್ರೆಸ್ ಸಭೆಯಲ್ಲಿ ನಿರ್ಧಾರ
ಅನರ್ಹ ಶಾಸಕರ ಕುರಿತಾದ ಸುಪ್ರೀಂ ಕೋರ್ಟ್ ಆದೇಶ ಪ್ರಕಟಗೊಂಡ ಬಳಿಕ ಉಳಿದ ಏಳು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸುವ ನಿರ್ಧಾರವನ್ನು ಸೋಮವಾರ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಕೈಗೊಳ್ಳಲಾಗಿದೆ. ಡಿಸೆಂಬರ್ 5 ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು ಈಗಾಗಲೇ ಎಂಟು ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದೆ.
ಸುಪ್ರೀಂ ತೀರ್ಪಿನ ಬಳಿಕ 7 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ: ದಿನೇಶ್ ಗುಂಡೂರಾವ್
ಉಪಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಯಿತು. ಚುನಾವಣಾ ತಂತ್ರಗಾರಿಕೆ ಜೊತೆಗೆ ಉಳಿದ ಎಂಟು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕುರಿತಾಗಿ ಚರ್ಚೆ ನಡೆದಿದೆ. ಶಿವಾಜಿನಗರ, ಗೋಕಾಕ್ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಸರತ್ತು ಜಟಿಲಗೊಂಡಿದ್ದು ಒಮ್ಮತ ನಿರ್ಧಾರಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ.
ಟಿಕೆಟ್ಗಾಗಿ ಲಾಬಿ ನಡೆಯುತ್ತಿರುವುದರಿಂದ ಬುಧವಾರ ಪ್ರಕಟಗೊಳ್ಳಲಿರುವ ಅನರ್ಹ ಶಾಸಕರ ಕುರಿತಾದ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಏಳು ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಮಾಡಲು ಕಾಂಗ್ರೆಸ್ ಮುಂದಾಗಿದೆ. ಈ ನಡುವೆ ಬಿಜೆಪಿ ಮುಖಂಡರಾದ ರಾಜು ಕಾಗೆ ಹಾಗೂ ಅಶೋಕ್ ಪೂಜಾರಿ ಕಾಂಗ್ರೆಸ್ ಸೇರ್ಪಡೆ ಕುರಿತಾಗಿ ಮಾತುಕತೆ ನಡೆಯುತ್ತಿದೆ.
ಎಂಟು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು
ಹುಣಸೂರು: ಹೆಚ್.ಪಿ ಮಂಜುನಾಥ್
ಹೊಸಕೋಟೆ: ಪದ್ಮಾವತಿ ಸುರೇಶ್
ಕೆ.ಆರ್ ಪುರ: ನಾರಾಯಣಸ್ವಾಮಿ
ಯಲ್ಲಾಪುರ: ಭೀಮಾನಾಯ್ಕ
ಚಿಕ್ಕಬಳ್ಳಾಪುರ: ಎಂ ಆಂಜಿನಪ್ಪ
ಮಹಾಲಕ್ಷ್ಮಿ ಲೇಔಟ್: ಎಂ ಶಿವರಾಜ್
ರಾಣೆಬೆನ್ನೂರು: ಕೆ.ಬಿ ಕೋಳಿವಾಡ
ಹಿರೇಕೆರೂರು: ಬಿ.ಎಚ್. ಬನ್ನಿಕೋಡ್