ಆ್ಯಪ್ನಗರ

ರಾಜ್ಯದ 6 ಮಂದಿಗೆ ಮಾತ್ರ ಕಿಸಾನ್‌ ಸಮ್ಮಾನ್‌: ಕುಮಾರಸ್ವಾಮಿ

ಕರ್ನಾಟಕ ಸರಕಾರ ಸಹಕಾರ ನೀಡುತ್ತಿಲ್ಲ ಎಂಬ ಪ್ರಧಾನಿ ಹೇಳಿಕೆ ಶುದ್ದ ಸುಳ್ಳು. ಕೇಂದ್ರದ ಪ್ರಧಾನ ಮಂತ್ರಿ ಕೃಷಿ ಸನ್ಮಾನ್‌ ಯೋಜನೆಗೆ ರೈತರ ಸಂಪೂರ್ಣ ಮಾಹಿತಿಯನ್ನು ರಾಜ್ಯ ಸರಕಾರ ನೀಡಿದೆ. 40 ಸಾವಿರ ರೈತರ ಖಾತೆಗಳು ಸರಿ ಇಲ್ಲ ಎಂದು ಕೇಂದ್ರವೇ ತಿರಸ್ಕರಿಸಿದೆ ಎಂದು ಹೇಳಿದ ಅವರು, ಒಬ್ಬ ರೈತನಿಗೆ 2 ಸಾವಿರ ರೂ. ಬರುವ ಬದಲು ಕೇವಲ 950 ರೂ. ಬಂದಿದೆ.

Vijaya Karnataka 8 Mar 2019, 7:27 am
ರಾಮನಗರ: ರಾಜ್ಯ ಸರಕಾರ 2.8ಲಕ್ಷ ರೈತರ ಮಾಹಿತಿಯನ್ನು ಕೇಂದ್ರಕ್ಕೆ ನೀಡಿದ್ದರೂ ಕಿಸಾನ್‌ ಸಮ್ಮಾನ್‌ ಯೋಜನೆಗೆ ಕೇವಲ 17 ರೈತರನ್ನು ಆಯ್ಕೆ ಮಾಡಿದ್ದು, ಆರು ಮಂದಿಗೆ ಮಾತ್ರ ಹಣ ಬಂದಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
Vijaya Karnataka Web kumaraswamy..


ಮಾಗಡಿಯ ಕೋಟೆ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಮಾಗಡಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕರ್ನಾಟಕ ಸರಕಾರ ಸಹಕಾರ ನೀಡುತ್ತಿಲ್ಲ ಎಂಬ ಪ್ರಧಾನಿ ಹೇಳಿಕೆ ಶುದ್ದ ಸುಳ್ಳು. ಕೇಂದ್ರದ ಪ್ರಧಾನ ಮಂತ್ರಿ ಕೃಷಿ ಸನ್ಮಾನ್‌ ಯೋಜನೆಗೆ ರೈತರ ಸಂಪೂರ್ಣ ಮಾಹಿತಿಯನ್ನು ರಾಜ್ಯ ಸರಕಾರ ನೀಡಿದೆ. 40 ಸಾವಿರ ರೈತರ ಖಾತೆಗಳು ಸರಿ ಇಲ್ಲ ಎಂದು ಕೇಂದ್ರವೇ ತಿರಸ್ಕರಿಸಿದೆ ಎಂದು ಹೇಳಿದ ಅವರು, ಒಬ್ಬ ರೈತನಿಗೆ 2 ಸಾವಿರ ರೂ. ಬರುವ ಬದಲು ಕೇವಲ 950 ರೂ. ಬಂದಿದೆ. ಹೈನುಗಾರರಿಗೆ 2 ಸಾವಿರ ಕೋಟಿ, ರೈತರಿಗೆ ವಿದ್ಯುತ್‌ ಪೂರೈಕೆ ಮಾಡಲು 11.5 ಸಾವಿರ ಕೋಟಿ ರೂ.ಗಳನ್ನು ರಾಜ್ಯ ಸರಕಾರ ನೀಡಿದ್ದರೆ, ಕೇಂದ್ರದಿಂದ ಬಂದಿರುವುದು ಕೇವಲ 12 ಸಾವಿರ ರೂ. ಮಾತ್ರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ