ಬೆಂಗಳೂರು: ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲೀಷ್ ಕಲಿಸಲು ವಿರೊಧ ವ್ಯಕ್ತಪಡಿಸುವವರು, ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಿಲ್ಲ ಎಂಬುದನ್ನು ಸಾಬೀತು ಮಾಡಿ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಿಬಿಎಂಪಿಯು ಮೈಕ್ರೋಸಾಫ್ಟ್ ಮತ್ತು ಟೆಂಕ್ ಅವಂತ್-ಗಾರ್ಡೆ ಕಂಪೆನಿಯ ಸಹಭಾಗಿತ್ವದಲ್ಲಿ ಬುಧವಾರ 'ಬಿಬಿಎಂಪಿ ರೋಶಿನಿ ಯೋಜನೆ'ಗೆ (ಸಾಮಾಜಿಕ ಶಾಲೆ ಮತ್ತು 21ನೇ ಶತಮಾನದ ಸಿದ್ಧ ಶಾಲೆ) ಚಾಲನೆ ನೀಡಿ ಅವರು ಮಾತನಾಡಿದರು.
'' ಕನ್ನಡ ಭಾಷೆ ಉಳಿಸುವ ಜತೆಗೆ ಇಂಗ್ಲಿಷ್ ಒಂದು ವಿಷಯವನ್ನಾಗಿ ಮಕ್ಕಳಿಗೆ ಕಲಿಸಲು ಸರಕಾರ ತೀರ್ಮಾನಿಸಿದೆ. ವಿರೋಧಿಸುತ್ತಿರುವವರು ನಿಮ್ಮ ಕುಟುಂಬದ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುತ್ತಿಲ್ಲ ಎನ್ನುವುದಾದರೆ, ಜಾಹೀರಾತು ಕೊಡಿ. ಆಗ ನಿಮಗೆ ಗೌರವ ಕೊಡ್ತೀವಿ. ವಿನಾಕಾರಣ ನಮ್ಮ ಮೇಲೆ ಗದಾಪ್ರಹಾರ ನಡೆಸಬೇಡಿ,'' ಎಂದು ಸವಾಲು ಹಾಕಿದ್ದಾರೆ.
''ಗ್ರಾಮೀಣ ಭಾಗದ ಬಡ ಮಕ್ಕಳು ಏನು ಮಾಡಿದ್ದಾರೆ. ಅವರು ಇಂಗ್ಲೀಷ್ ಕಲಿಯುವುದು ಬೇಡವೇ. ಅವರನ್ನು ಉಳಿಗಮಾನ್ಯ ಪದ್ಧತಿಯಲ್ಲೇ ಉಳಿಸಬೇಕೆ' ಎಂದು ಪ್ರಶ್ನಿಸಿದ ಸಿಎಂ, 'ಕನ್ನಡ ಉಳಿಸುವ ಜತೆಗೆ ಬಡ ಕುಟುಂಬದ ಮಕ್ಕಳಿಗೆ ಇಂಗ್ಲೀಷ್ ಕಲಿಸಲಾಗುವುದು. ಇದರಿಂದ ಅವರು ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ನಡೆಸಲು ಸಾಧ್ಯವಾಗಲಿದೆ,'' ಎಂದರು.
''ಸರಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳಂತೆಯೇ ಗುಣಮಟ್ಟದ ಶಿಕ್ಷಣ ನೀಡಲಾಗುವುದು. ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆತರೆ, ಅವರು ಆರ್ಥಿಕವಾಗಿ ಸದೃಢವಾಗಿ ಸಮಾಜದ ಮುಖ್ಯವಾಹಿನಿಗೆ ಬರಲಿದ್ದಾರೆ. ರಾಜ್ಯದಲ್ಲಿನ ಸರಕಾರಿ ಶಾಲಾ ಕಟ್ಟಡಗಳ ನವೀಕರಣ, ಹೊಸ ಕಟ್ಟಡಗಳ ನಿರ್ಮಾಣಕ್ಕೆ 1000 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಕೊಡಗು, ಕರಾವಳಿ ಭಾಗದಲ್ಲಿ ಮಕ್ಕಳು 3-4 ಕಿ.ಮೀ ನಡೆದು ನದಿ, ತೊರೆಗಳನ್ನು ದಾಟಿ ಶಾಲೆಗೆ ಹೋಗಬೇಕಿದೆ. ಇಲ್ಲಿ ನಿರ್ಮಿಸಿರುವ ತಾತ್ಕಾಲಿಕ ಸೇತುವೆಗಳಿಂದ ಪ್ರಾಣ ಹಾನಿಯಾಗುತ್ತಿದೆ. ಹೀಗಾಗಿ, 121 ಕೋಟಿ ರೂ. ವೆಚ್ಚದಲ್ಲಿ ಸದೃಢವಾದ ಕಾಲು ಸಂಕಗಳನ್ನು ನಿರ್ಮಿಸಲಾಗುತ್ತಿದೆ. ಈ ಕೆಲಸವು 10 ದಿನಗಳೊಳಗೆ ಶುರುವಾಗಲಿದೆ,'' ಎಂದು ತಿಳಿಸಿದರು.
''ಪಾಲಿಕೆಯ ಶಾಲಾ-ಕಾಲೇಜುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಮೈಕ್ರೋಸಾಫ್ಟ್ ಕಂಪೆನಿಯು 500 ಕೋಟಿ ರೂ. ವೆಚ್ಚ ಮಾಡುತ್ತಿದೆ. ಪ್ರತಿ ವರ್ಷ 20-25 ಮಂದಿ ಶಿಕ್ಷಕರು, ವಿದ್ಯಾರ್ಥಿಗಳನ್ನು ವಿದೇಶಗಳಿಗೆ ಕರೆದೊಯ್ದು ತರಬೇತಿ ನೀಡಲಿದೆ. ಈ ರೋಶಿನಿ ಯೋಜನೆಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ಸರಕಾರ ನೀಡಲು ಸಿದ್ಧವಿದೆ,'' ಎಂದು ಹೇಳಿದರು.
ಮದ್ಯದಂಗಡಿಗಳಿಗಿಲ್ಲ ಪರವಾನಗಿ:
''ಹೊಸ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ಕುರಿತು ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಬಕಾರಿ ಇಲಾಖೆಯು ನನ್ನ ಬಳಿಯೇ ಇದೆ. ಹೊಸದಾಗಿ ಲೈಸೆನ್ಸ್ ನೀಡುವ ವಿಚಾರ ನನಗೆ ಗೊತ್ತಿಲ್ಲ. ಅಧಿಕಾರಿಗಳ ಬಳಿ ಚರ್ಚಿಸುತ್ತೇನೆ'' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಪ್ರಯಾಣ ದರ ಏರಿಕೆಗೆ ತಡೆ:
''ಬಸ್ ಪ್ರಯಾಣ ದರ ಏರಿಕೆಗೆ ನಾನೇ ತಡೆ ನೀಡಿದ್ದೇನೆ. ಜನಸಾಮಾನ್ಯರಿಗೆ ಹೊರೆಯಾಗದಂತೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಈ ಸಂಬಂಧ ಸಾರಿಗೆ ಸಂಸ್ಥೆಗಳೊಂದಿಗೆ ಚರ್ಚಿಸಲಾಗುವುದು,'' ಎಂದು ತಿಳಿಸಿದರು.
ಬಿಬಿಎಂಪಿಯು ಮೈಕ್ರೋಸಾಫ್ಟ್ ಮತ್ತು ಟೆಂಕ್ ಅವಂತ್-ಗಾರ್ಡೆ ಕಂಪೆನಿಯ ಸಹಭಾಗಿತ್ವದಲ್ಲಿ ಬುಧವಾರ 'ಬಿಬಿಎಂಪಿ ರೋಶಿನಿ ಯೋಜನೆ'ಗೆ (ಸಾಮಾಜಿಕ ಶಾಲೆ ಮತ್ತು 21ನೇ ಶತಮಾನದ ಸಿದ್ಧ ಶಾಲೆ) ಚಾಲನೆ ನೀಡಿ ಅವರು ಮಾತನಾಡಿದರು.
'' ಕನ್ನಡ ಭಾಷೆ ಉಳಿಸುವ ಜತೆಗೆ ಇಂಗ್ಲಿಷ್ ಒಂದು ವಿಷಯವನ್ನಾಗಿ ಮಕ್ಕಳಿಗೆ ಕಲಿಸಲು ಸರಕಾರ ತೀರ್ಮಾನಿಸಿದೆ. ವಿರೋಧಿಸುತ್ತಿರುವವರು ನಿಮ್ಮ ಕುಟುಂಬದ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುತ್ತಿಲ್ಲ ಎನ್ನುವುದಾದರೆ, ಜಾಹೀರಾತು ಕೊಡಿ. ಆಗ ನಿಮಗೆ ಗೌರವ ಕೊಡ್ತೀವಿ. ವಿನಾಕಾರಣ ನಮ್ಮ ಮೇಲೆ ಗದಾಪ್ರಹಾರ ನಡೆಸಬೇಡಿ,'' ಎಂದು ಸವಾಲು ಹಾಕಿದ್ದಾರೆ.
''ಗ್ರಾಮೀಣ ಭಾಗದ ಬಡ ಮಕ್ಕಳು ಏನು ಮಾಡಿದ್ದಾರೆ. ಅವರು ಇಂಗ್ಲೀಷ್ ಕಲಿಯುವುದು ಬೇಡವೇ. ಅವರನ್ನು ಉಳಿಗಮಾನ್ಯ ಪದ್ಧತಿಯಲ್ಲೇ ಉಳಿಸಬೇಕೆ' ಎಂದು ಪ್ರಶ್ನಿಸಿದ ಸಿಎಂ, 'ಕನ್ನಡ ಉಳಿಸುವ ಜತೆಗೆ ಬಡ ಕುಟುಂಬದ ಮಕ್ಕಳಿಗೆ ಇಂಗ್ಲೀಷ್ ಕಲಿಸಲಾಗುವುದು. ಇದರಿಂದ ಅವರು ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ನಡೆಸಲು ಸಾಧ್ಯವಾಗಲಿದೆ,'' ಎಂದರು.
''ಸರಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳಂತೆಯೇ ಗುಣಮಟ್ಟದ ಶಿಕ್ಷಣ ನೀಡಲಾಗುವುದು. ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆತರೆ, ಅವರು ಆರ್ಥಿಕವಾಗಿ ಸದೃಢವಾಗಿ ಸಮಾಜದ ಮುಖ್ಯವಾಹಿನಿಗೆ ಬರಲಿದ್ದಾರೆ. ರಾಜ್ಯದಲ್ಲಿನ ಸರಕಾರಿ ಶಾಲಾ ಕಟ್ಟಡಗಳ ನವೀಕರಣ, ಹೊಸ ಕಟ್ಟಡಗಳ ನಿರ್ಮಾಣಕ್ಕೆ 1000 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಕೊಡಗು, ಕರಾವಳಿ ಭಾಗದಲ್ಲಿ ಮಕ್ಕಳು 3-4 ಕಿ.ಮೀ ನಡೆದು ನದಿ, ತೊರೆಗಳನ್ನು ದಾಟಿ ಶಾಲೆಗೆ ಹೋಗಬೇಕಿದೆ. ಇಲ್ಲಿ ನಿರ್ಮಿಸಿರುವ ತಾತ್ಕಾಲಿಕ ಸೇತುವೆಗಳಿಂದ ಪ್ರಾಣ ಹಾನಿಯಾಗುತ್ತಿದೆ. ಹೀಗಾಗಿ, 121 ಕೋಟಿ ರೂ. ವೆಚ್ಚದಲ್ಲಿ ಸದೃಢವಾದ ಕಾಲು ಸಂಕಗಳನ್ನು ನಿರ್ಮಿಸಲಾಗುತ್ತಿದೆ. ಈ ಕೆಲಸವು 10 ದಿನಗಳೊಳಗೆ ಶುರುವಾಗಲಿದೆ,'' ಎಂದು ತಿಳಿಸಿದರು.
''ಪಾಲಿಕೆಯ ಶಾಲಾ-ಕಾಲೇಜುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಮೈಕ್ರೋಸಾಫ್ಟ್ ಕಂಪೆನಿಯು 500 ಕೋಟಿ ರೂ. ವೆಚ್ಚ ಮಾಡುತ್ತಿದೆ. ಪ್ರತಿ ವರ್ಷ 20-25 ಮಂದಿ ಶಿಕ್ಷಕರು, ವಿದ್ಯಾರ್ಥಿಗಳನ್ನು ವಿದೇಶಗಳಿಗೆ ಕರೆದೊಯ್ದು ತರಬೇತಿ ನೀಡಲಿದೆ. ಈ ರೋಶಿನಿ ಯೋಜನೆಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ಸರಕಾರ ನೀಡಲು ಸಿದ್ಧವಿದೆ,'' ಎಂದು ಹೇಳಿದರು.
ಮದ್ಯದಂಗಡಿಗಳಿಗಿಲ್ಲ ಪರವಾನಗಿ:
''ಹೊಸ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ಕುರಿತು ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಬಕಾರಿ ಇಲಾಖೆಯು ನನ್ನ ಬಳಿಯೇ ಇದೆ. ಹೊಸದಾಗಿ ಲೈಸೆನ್ಸ್ ನೀಡುವ ವಿಚಾರ ನನಗೆ ಗೊತ್ತಿಲ್ಲ. ಅಧಿಕಾರಿಗಳ ಬಳಿ ಚರ್ಚಿಸುತ್ತೇನೆ'' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಪ್ರಯಾಣ ದರ ಏರಿಕೆಗೆ ತಡೆ:
''ಬಸ್ ಪ್ರಯಾಣ ದರ ಏರಿಕೆಗೆ ನಾನೇ ತಡೆ ನೀಡಿದ್ದೇನೆ. ಜನಸಾಮಾನ್ಯರಿಗೆ ಹೊರೆಯಾಗದಂತೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಈ ಸಂಬಂಧ ಸಾರಿಗೆ ಸಂಸ್ಥೆಗಳೊಂದಿಗೆ ಚರ್ಚಿಸಲಾಗುವುದು,'' ಎಂದು ತಿಳಿಸಿದರು.