ಆ್ಯಪ್ನಗರ

ಸಿದ್ದರಾಮಯ್ಯ ಪತ್ರಕ್ಕೂ ಒಲಿಯಲಿಲ್ಲ ‘ಕಾವೇರಿ’! ರೇಸ್ ವ್ಯೂ ಕಾಟೇಜ್ ಫಿಕ್ಸ್

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕಾವೇರಿ ನಿವಾಸ ಕೊನೆಗೂ ಒಲಿಯಲಿಲ್ಲ. ಕಾವೇರಿ ನಿವಾಸದ ಬದಲಿಗೆ ರೇಸ್ ವ್ಯೂ ಕಾಟೇಜ್ ಹಂಚಿಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಕಾವೇರಿ ನನಗೇ ಬೇಕೆಂದು ಸಿದ್ದರಾಮಯ್ಯ ಪತ್ರ ಬರೆದಿದ್ದರು.

Vijaya Karnataka Web 17 Oct 2019, 7:11 pm
ಬೆಂಗಳೂರು: ಕಾವೇರಿ ನಿವಾಸ ನನಗೇ ಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರಕಾರಕ್ಕೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಕಾವೇರಿಯನ್ನು ಖಾಲಿ ಮಾಡುವಂತೆ ಸೂಚಿಸಿರುವ ಸರಕಾರ, ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜನ್ನು ಸಿದ್ದರಾಮಯ್ಯ ಅವರಿಗೆ ಹಂಚಿಕೆ ಮಾಡಿದೆ. ಪರಿಣಾಮ ಅದೃಷ್ಟದ ನಿವಾಸದಿಂದ ಕೊನೆಗೂ ವಾಸ್ತವ್ಯವನ್ನು ಬದಲಾಯಿಸಬೇಕಿದೆ.
Vijaya Karnataka Web siddaramaiah and bsy


ಸಿಎಂ ಗೃಹ ಕಚೇರಿ ಕೃಷ್ಣಾದ ಪಕ್ಕದಲ್ಲೇ ಇರುವ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಸಿಎಂ ಆದ ದಿನದಿಂದ ವಾಸ್ತವ್ಯ ಹೂಡಿದ್ದರು. ಸಮ್ಮಿಶ್ರ ಸರಕಾರದ ಅವಧಿಯಲ್ಲೂ ಕಾವೇರಿ ನಿವಾಸದಲ್ಲೇ ತಮ್ಮ ವಾಸ್ತವ್ಯ ಮುಂದುವರಿಸಿದ್ದರು. ಸಮ್ಮಿಶ್ರ ಸರಕಾರದ ಪತನದ ಬಳಿಕವೂ ವಾಸ್ತವ್ಯವನ್ನು ಸಿದ್ದರಾಮಯ್ಯ ಬದಲಾಯಿಸಿರಲಿಲ್ಲ. ಸಿದ್ದರಾಮಯ್ಯ ಪಾಲಿಗೆ ಕಾವೇರಿ ನಿವಾಸ ಅದೃಷ್ಟ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿಯೇ ಬಿಟ್ಟುಕೊಡಲು ಅವರು ತಯಾರಿರಲಿಲ್ಲ.


'ಕಾವೇರಿ' ನನಗೇ ಬೇಕೆಂದು ಸರಕಾರಕ್ಕೆ ಸಿದ್ದರಾಮಯ್ಯ ಪತ್ರ !

ಹೀಗಿದ್ದರೂ ಸಿಎಂ ಬಿಎಸ್‌ವೈ ಅವರಿಗೆ ಕಾವೇರಿ ನಿವಾಸವನ್ನು ಹಂಚಿಕೆ ಮಾಡುವ ಕುರಿತಾಗಿ ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿತ್ತು. ಬೆಂಗಳೂರಿನ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿರುವ ಸಿಎಂ ಬಿಎಸ್‌ವೈ ಗೃಹ ಕಚೇರಿ ಕೃಷ್ಣಾಗೆ ಬರಲು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ಕಚೇರಿ ಪಕ್ಕದಲ್ಲೇ ಇರುವ ಕಾವೇರಿಯಲ್ಲಿ ವಾಸ್ತವ್ಯ ಹೂಡಲು ಮುಂದಾಗಿದ್ದಾರೆ.

ಕಾವೇರಿಗೆ ಸಿದ್ದು ಗುಡ್ ಬೈ !ಸಿಎಂ ಬಿಎಸ್‌ವೈ ಮನೆ ಶಿಫ್ಟ್‌ಗೆ ಸರಕಾರಿ ಆದೇಶ

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರಕಾರಕ್ಕೆ ಪತ್ರ ಬರೆಯುವ ಮೂಲಕ ಕಾವೇರಿ ನಿವಾಸವನ್ನು ನನಗೇ ಬಿಟ್ಟುಕೊಡಿ ಎಂದು ಕೋರಿದ್ದರು. ಆದರೆ ರಾಜ್ಯ ಸರಕಾರ ಸಿದ್ದರಾಮಯ್ಯ ಪತ್ರಕ್ಕೆ ಸ್ಪಂದಿಸಲಿಲ್ಲ. ಕಾವೇರಿ ಬದಲಾಗಿ ಈಗಾಗಲೇ ಸಿಎಂ ಬಿಎಸ್‌ವೈ ಅವರಿಗೆ ಹಂಚಿಕೆಯಾಗಿದ್ದ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್‌ನ್ನು ಸಿದ್ದರಾಮಯ್ಯ ಅವರಿಗೆ ಹಸ್ತಾಂತರ ಮಾಡಿ ಆದೇಶ ಹೊರಡಿಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ