ಆ್ಯಪ್ನಗರ

ಸಿಎಂ ಸ್ಥಾನ ನಮಗೇ ಇರಲಿ: ಹೈಕಮಾಂಡ್‌ ಬಳಿ ರಾಜ್ಯ ಕಾಂಗ್ರೆಸ್‌ ಮನವಿ

ಮೈತ್ರಿಗೆ ಸಮಸ್ಯೆಯಾಗುವಂತೆ ಜೆಡಿಎಸ್‌ ಮುಖಂಡರೂ ಹೇಳಿಕೆ ನೀಡದಂತೆ ಸೂಚಿಸಲು ಅವರಿಗೆ ತಿಳಿಸಲಾಗುವುದು ಎಂಬ ಭರವಸೆಯನ್ನು ರಾಹುಲ್‌ ಗಾಂಧಿ ನೀಡಿದ್ದಾರೆ ಎನ್ನಲಾಗಿದೆ.

Vijaya Karnataka 20 May 2019, 7:24 am
ಬೆಂಗಳೂರು: 37 ಸೀಟು ಬಂದವರಿಗೆ ಸಿಎಂ ಸ್ಥಾನ ನೀಡಿದ್ದಕ್ಕೆ ಕಾಂಗ್ರೆಸ್‌ ಶಾಸಕರ ವಲಯದಲ್ಲಿ ಅಸಮಾಧಾನವಿದೆ. ನಮಗೇ ಮುಖ್ಯಮಂತ್ರಿ ಸ್ಥಾನವಿದ್ದರೆ ಒಳಿತು ಎಂಬ ಒತ್ತಡ ಜಾಸ್ತಿಯಾಗುತ್ತಿದೆ.
Vijaya Karnataka Web karnataka congress leaders suggested rahul gandhi to keep cm post with the party
ಸಿಎಂ ಸ್ಥಾನ ನಮಗೇ ಇರಲಿ: ಹೈಕಮಾಂಡ್‌ ಬಳಿ ರಾಜ್ಯ ಕಾಂಗ್ರೆಸ್‌ ಮನವಿ


ಮೈತ್ರಿ ಮುಂದುವರಿಸುವುದು ಅನಿವಾರ್ಯವಾದರೆ ಮುಖ್ಯಮಂತ್ರಿ ಬದಲಾವಣೆಯಾಗಬೇಕು. ಕಾಂಗ್ರೆಸ್‌ಗೇ ಈ ಸ್ಥಾನ ಉಳಿಸಿಕೊಂಡು ಜೆಡಿಎಸ್‌ಗೆ ಡಿಸಿಎಂ ಸ್ಥಾನ ನೀಡಿದರೆ ಸಾಕು ಎಂಬ ಸಲಹೆಯನ್ನೂ ರಾಜ್ಯ ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ಗೆ ನೀಡಿದ್ದಾರೆ. ಆದರೆ ಈ ಹಂತದಲ್ಲಿ ಇಂಥ ಪ್ರಸ್ತಾಪ ಬೇಡವೆಂದು ರಾಹುಲ್‌ ಸ್ಪಷ್ಟವಾಗಿ ನಿರಾಕರಿಸಿದರು ಎಂದು ಗೊತ್ತಾಗಿದೆ.

ಜೆಡಿಎಸ್‌ಗೂ ಸೂಚಿಸುವೆ ಎಂದ ರಾಹುಲ್‌: ಸರಕಾರದಲ್ಲಿ ಜೆಡಿಎಸ್‌ ಮೈಲುಗೈ ಸಾಧಿಸಿದ್ದರ ಜತೆಗೆ ಕಾಂಗ್ರೆಸ್‌ ಶಾಸಕರ ಯಾವ ಕೆಲಸವೂ ಆಗುತ್ತಿಲ್ಲ. ಕಾಂಗ್ರೆಸ್‌ ಸಚಿವರ ಇಲಾಖೆಗಳಲ್ಲೂ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಜೆಡಿಎಸ್‌ಗೆ ಉತ್ತಮ ಆಡಳಿತ ನೀಡುವುದಕ್ಕಿಂತ ಇದ್ದಷ್ಟು ದಿನ ಅಧಿಕಾರ ಅನುಭವಿಸುವ ಹಂಬಲವಷ್ಟೇ ಇದೆ. ಇದರಿಂದ ಅಭಿವೃದ್ಧಿಗೂ ಹಿನ್ನಡೆಯಾಗುತ್ತಿದೆ ಎಂಬ ರಾಜ್ಯ ನಾಯಕರ ದೂರಿಗೆ ಜವಾಬು ಕೊಟ್ಟಿರುವ ರಾಹುಲ್‌, ಈ ವಿಚಾರದಲ್ಲಿ ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಲಾಗುವುದು. ಮೈತ್ರಿಗೆ ಸಮಸ್ಯೆಯಾಗುವಂತೆ ಜೆಡಿಎಸ್‌ ಮುಖಂಡರೂ ಹೇಳಿಕೆ ನೀಡದಂತೆ ಸೂಚಿಸಲು ಅವರಿಗೆ ತಿಳಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ