ಆ್ಯಪ್ನಗರ

ಆಂತರಿಕ ಗೊಂದಲಗಳ ನಡುವೆಯೂ ಪಕ್ಷ ಸಂಘಟನೆಗೆ ಮುಂದಾದ ಕಾಂಗ್ರೆಸ್, ಸೋಮವಾರ ಪ್ರಮುಖರ ಸಭೆ

ಶಿರಾ ಹಾಗೂ ಆರ್‌ ಆರ್‌ ನಗರ ಹೀನಾಯ ಸೋಲಿನ ಬಳಿಕ ಇದೀಗ ಮುಂದಿನ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗತೊಡಗಿದ್ದು ಸೋಮವಾರ ಬೆಂಗಳೂರಿನಲ್ಲಿ ಪ್ರಮುಖ ನಾಯಕರ ಸಭೆ ನಡೆಯಲಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.

Vijaya Karnataka Web 29 Nov 2020, 2:04 pm
ಬೆಂಗಳೂರು: ಆಂತರಿಕ ಭಿನ್ನ,ಮತ, ನಾಯಕತ್ವದ ಕುರಿತಾದ ಗೊಂದಲದ ನಡುವೆಯೂ ಪಕ್ಷ ಸಂಘಟನೆಗೆ ಕಾಂಗ್ರೆಸ್ ಮುಂದಾಗಿದ್ದು ಸೋಮವಾರ ಪ್ರಮುಖ ನಾಯಕರ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ನಗರದ ಹೊರ ವಲಯದ ಸಾದಹಳ್ಳಿ ಗೇಟ್‌ ಬಳಿಯ ಹೋಟೆಲ್‌ನಲ್ಲಿ ಪ್ರಮುಖರ ನಾಯಕರ ಸಭೆ ನಡೆಯಲಿದೆ.
Vijaya Karnataka Web Siddaramaiah DK Shivakumar


ಗ್ರಾಮಪಂಚಾಯತ್ ಚುನಾವಣೆ, ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಚುನಾವಣಾ ತಯಾರಿ ವಿಚಾರವಾಗಿ ಪ್ರಮುಖ ನಾಯಕರು ಚರ್ಚೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಎಐಸಿಸಿ ಪ್ರತಿನಿಧಿಯಾಗಿ ಮಹರಾಷ್ಟ್ರದ ಸಚಿವೆ ಯಶೋಮತಿ ಠಾಕೂರ್‌ ಭಾಗಿಯಾಗಲಿದ್ದಾರೆ.

ಸ್ಫೋಟಕ ವಿಡಿಯೋ ಸದ್ದು! ಕೆ.ಎಸ್ ಈಶ್ವರಪ್ಪ ಏಕೆ ಹೆಗಲು ಮುಟ್ಟಿ ನೋಡುತ್ತಿದ್ದಾರೆ? ಡಿಕೆಶಿ ಪ್ರಶ್ನೆ

ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲು ಕಾಂಗ್ರೆಸ್‌ ಪಾಳಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇದರ ಜೊತೆಗೆ ಸಿಎಂ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೂ ಪಕ್ಷದಲ್ಲಿ ಆಂತರಿಕ ಭಿನ್ನಮತವನ್ನು ಸೃಷ್ಟಿಸಿದೆ. ಪರಿಣಾಮ ಕಾರ್ಯಕರ್ತರಲ್ಲೂ ಹಾಗೂ ಎರಡನೇ ಹಂತದ ಮುಖಂಡರಲ್ಲೂ ಗೊಂದಲ ಸೃಷ್ಟಿಯಾಗಿದೆ.

ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯದಲ್ಲಿ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಂದಾಗಿದೆ. ಈ ಕುರಿತಾಗಿ ಕಾರ್ಯತಂತ್ರ ರೂಪಿಸಲು ಸಭೆಯಲ್ಲಿ ಮಹತ್ವದ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ