ಆ್ಯಪ್ನಗರ

ಬಿಜೆಪಿ ಭಿನ್ನಮತದಿಂದ ಅಂತರ ಕಾಯ್ದುಕೊಳ್ಳಲು ಕಾಂಗ್ರೆಸ್‌ ಒಲವು, ಪಕ್ಷ ಸಂಘಟನೆಗೆ ಒತ್ತು

ಸಿಎಂ ವಿರುದ್ದವೇ ಸ್ವಪಕ್ಷೀಯರ ಗುಟುರು ಬಲಗೊಂಡು ಇನ್ನು ಆರು ತಿಂಗಳಲ್ಲಿ ಸರಕಾರದ ಆಯಸ್ಸು ಮುಗಿಯಲಿದೆ ಎಂಬ ವಿಶ್ವಾಸ ಪ್ರತಿಪಕ್ಷದಲ್ಲಿ ಮೊಳೆತಿದೆ. ಆದರೆ, ಆಡಳಿತ ಪಕ್ಷದೊಳಗಿನ ಆಂತರಿಕ ವಿದ್ಯಮಾನಗಳಲ್ಲಿ ಮೂಗು ತೂರಿಸಿ ಪ್ರಯೋಜನವಿಲ್ಲ ಎಂಬ ನಿರ್ಧಾರಕ್ಕೆ ಕಾಂಗ್ರೆಸ್‌ ಬಂದಿದೆ.

Vijaya Karnataka 29 May 2020, 9:02 pm
ಬೆಂಗಳೂರು: ವರ್ಷ ತುಂಬುವ ಮೊದಲೆ ಆಡಳಿತಾರೂಢ ಬಿಜೆಪಿಯಲ್ಲಿ ಸಿಎಂ ಯಡಿಯೂರಪ್ಪ ನಾಯಕತ್ವದ ವಿರುದ್ದ ಕಾಣಿಸಿಕೊಂಡಿರುವ ಅಸಮಾಧಾನ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯನ್ನು ಪ್ರತಿಪಕ್ಷ ಕಾಂಗ್ರೆಸ್‌ ಅಂದಾಜಿಸಿದೆ. ಆದರೆ, ಬಿಜೆಪಿ ಸರಕಾರದ ಆಂತರಿಕ ಭಿನ್ನಮತದಲ್ಲಿ ತಲೆಹಾಕದೆ, ಬೆಳವಣಿಗೆಗಳಿಂದ ಅಂತರ ಕಾಯ್ದುಕೊಳ್ಳಲು ಕಾಂಗ್ರೆಸ್‌ ಬಯಸಿದೆ.
Vijaya Karnataka Web DK Shivakumar Siddaramaiah


ಈ ಹಿಂದೆ 2008 ರಲ್ಲಿ ಯಡಿಯೂರಪ್ಪ ನಾಯಕತ್ವದ ವಿರುದ್ಧ ಸ್ಫೋಟಗೊಂಡಿದ್ದ ಬಂಡಾಯ ಈಗ ಪುನರಾವರ್ತನೆ ಆಗುವ ಸ್ಪಷ್ಟ ಸುಳಿವು ‘ಕೈ’ ಪಾಳಯಕ್ಕೆ ಸಿಕ್ಕಿದೆ. ಸಿಎಂ ವಿರುದ್ದವೇ ಸ್ವಪಕ್ಷೀಯರ ಗುಟುರು ಬಲಗೊಂಡು ಇನ್ನು ಆರು ತಿಂಗಳಲ್ಲಿ ಸರಕಾರದ ಆಯಸ್ಸು ಮುಗಿಯಲಿದೆ ಎಂಬ ವಿಶ್ವಾಸ ಪ್ರತಿಪಕ್ಷ ದಲ್ಲಿ ಮೊಳೆತಿದೆ. ಆದರೆ, ಆಡಳಿತ ಪಕ್ಷದೊಳಗಿನ ಆಂತರಿಕ ವಿದ್ಯಮಾನಗಳಲ್ಲಿ ಮೂಗು ತೂರಿಸಿ ಪ್ರಯೋಜನವಿಲ್ಲ. ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ದೀರ್ಘಾವಧಿ ಗುರಿಯೊಂದಿಗೆ ಪಕ್ಷ ಸಂಘಟನೆಗೆ ಒತ್ತು ನೀಡಲು ಕಾಂಗ್ರೆಸ್‌ ತೀರ್ಮಾನಿಸಿದೆ. ಸರಕಾರದ ವೈಫಲ್ಯ ಹಾಗೂ ಬಿಜೆಪಿಯೊಳಗಿನ ಕಿತ್ತಾಟವೇ ಪಕ್ಷ ಸಂಘಟನೆಗೆ ಸದಾವಕಾಶವಾಗಿ ಬಳಸಿಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಕೆಪಿಸಿಸಿ ಅಧ್ಯಕ್ಷ ರಾಗಿ ಡಿಕೆ ಶಿವಕುಮಾರ್‌ ನೇಮಕ ಬಳಿಕ ಕಾಂಗ್ರೆಸ್‌ನಲ್ಲಿ ಉತ್ಸಾಹದ ವಾತಾವರಣ ಸೃಷ್ಟಿಯಾಗಿದೆ. ಈ ಉತ್ಸಾಹಕ್ಕೆ ಕೊರೊನಾ ತಾತ್ಕಾಲಿಕ ತಡೆಯೊಡ್ಡಿದ್ದರೂ, ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಯೋಜಿತ ರೀತಿಯಲ್ಲಿ ಪಕ್ಷವನ್ನು ಅಣಿಗೊಳಿಸುವ ಉದ್ದೇಶದಲ್ಲಿ ಕಾಂಗ್ರೆಸ್‌ ಗಮನ ಕೇಂದ್ರೀಕರಿಸಿದೆ. ಜೂ.7 ರಂದು ಡಿಕೆ ಶಿವಕುಮಾರ್‌ ಹಾಗೂ ಮೂವರು ನೂತನ ಕಾರ್ಯಾಧ್ಯಕ್ಷರ ಪದಗ್ರಹಣದ ಬಳಿಕ ತಳಮಟ್ಟದಿಂದ ಪಕ್ಷ ಸಂಘಟನೆ ಬಲಪಡಿಸುವ ಪ್ರಯತ್ನ ಚುರುಕುಗೊಳಿಸಲು ಉದ್ದೇಶಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ