ಆ್ಯಪ್ನಗರ

ಬಿಎಸ್‌ವೈ ಅಥವಾ ಯೋಗಿ ಆದಿತ್ಯನಾಥ್, ಕರ್ನಾಟಕ ಸಿಎಂ ಯಾರು? ಕಾಂಗ್ರೆಸ್ ಪ್ರಶ್ನೆ

ರಾಜ್ಯದ ಸಿಎಂ ಯಾರು? ಬಿಎಸ್‌ ಯಡಿಯೂರಪ್ಪನವರಾ ಅಥವಾ ಯೋಗಿ ಆದಿತ್ಯನಾಥ್ ಅವರಾ? ಹೀಗಂತ ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ. ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ ಪ್ರಭು ಚೌಹ್ಹಾನ್ ನಡೆಯನ್ನು ಕಾಂಗ್ರೆಸ್ ಖಂಡಿಸಿದೆ.

Vijaya Karnataka Web 4 Dec 2020, 2:29 pm
ಬೆಂಗಳೂರು: ಕರ್ನಾಕಟದ ಮುಖ್ಯಮಂತ್ರಿ ಯಾರು? ಬಿಎಸ್ ಯಡಿಯೂರಪ್ಪನವರೇ ಅಥವಾ ಯೋಗಿ ಆದಿತ್ಯನಾಥ್‌ ಅವರಾ? ಹೀಗಂತ ಪ್ರಶ್ನಿಸಿದ್ದು ಕಾಂಗ್ರೆಸ್. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ವಿಚಾರವಾಗಿ ಸಚಿವ ಪ್ರಭುಚೌಹ್ಹಾನ್ ಅವರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
Vijaya Karnataka Web BS yediyurappa


ಈ ಕುರಿತಾಗಿ ಟ್ವೀಟ್‌ ಮಾಡಿರುವ ಕಾಂಗ್ರೆಸ್, ರಾಜ್ಯದ ಸಿಎಂ ಬಿಎಸ್‌ವೈ ಆವರಾ ಅಥವಾ ಯೋಗಿ ಆದಿತ್ಯನಾಥ್‌ ಅವರಾ? ಎನ್ನುವ ಅನುಮಾನ ಶುರುವಾಗಿದೆ! ಇದು ಬಿಎಸ್‌ವೈ ಅವರನ್ನ ಮೂಲೆಗುಂಪು ಮಾಡುವ ಪ್ರಯತ್ನವಾ?ರಾಜ್ಯದ ಆಡಳಿತ ಎಲ್ಲಿಂದ ನಡೆಯುತ್ತಿದೆ ಎಂದು ಬಿಜೆಪಿ ಸ್ಪಷ್ಟಪಡಿಸಬೇಕು ಎಂದಿದೆ.

ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ: ಕಾಯಿದೆ ಜಾರಿಯತ್ತ ಬಿಜೆಪಿ ಧೃಢ ನಿರ್ಧಾರ


ಅಲ್ಲದೆ ರಾಜ್ಯದ ವಿಷಯವನ್ನು ಚರ್ಚಿಸಲು,ನಿರ್ಧರಿಸಲು ಆದಿತ್ಯನಾಥ್ ಯಾರೆಂದು ಸಚಿವ ಪ್ರಭು ಚೌಹ್ಹಾನ್ ತಿಳಿಸಬೇಕು ಎಂದು ಕಾಂಗ್ರೆಸ್ ಆಗ್ರಹ ಮಾಡಿದೆ. ಈ ಬಾರಿಯ ವಿಧಾನಮಂಡಲ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಪಶುಸಂಗೋಪನಾ ಸಚಿವ ಪ್ರಭುಚೌಹ್ಹಾನ್ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ನಡೆಗೆ ಕಿಡಿಕಾರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ