Please enable javascript.Narendra Modi,ಪ್ರಧಾನಿ ಮೋದಿಯವರು ತಮ್ಮ 'ನಾ ಖಾನೆದುಂಗಾ' ಮಾತನ್ನು ನಿಜ ಮಾಡಿದ್ದಾರೆ: ಕಾಂಗ್ರೆಸ್‌ ಆರೋಪ - karnataka congress tweet on narendra modi - Vijay Karnataka

ಪ್ರಧಾನಿ ಮೋದಿಯವರು ತಮ್ಮ 'ನಾ ಖಾನೆದುಂಗಾ' ಮಾತನ್ನು ನಿಜ ಮಾಡಿದ್ದಾರೆ: ಕಾಂಗ್ರೆಸ್‌ ಆರೋಪ

Vijaya Karnataka Web 19 Jul 2022, 6:02 pm
Subscribe

ಪ್ರಧಾನಿ ಮೋದಿಯವರು ತಮ್ಮ 'ನಾ ಖಾನೆದುಂಗಾ' ಮಾತನ್ನು ನಿಜ ಮಾಡಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್‌ ಮೂಲಕ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನ ವ್ಯಂಗ್ಯವಾಗಿ ಟೀಕಿಸಿದೆ. ಈ ಕುರಿತಾಗಿ ವಿವರ ಇಲ್ಲಿದೆ.

ಹೈಲೈಟ್ಸ್‌:

  • ಪ್ರಧಾನಿ ಮೋದಿಯವರು ತಮ್ಮ 'ನಾ ಖಾನೆದುಂಗಾ' ಮಾತನ್ನು ನಿಜ ಮಾಡಿದ್ದಾರೆ
  • ಹಗರಣಗಳಂತಹ ಭ್ರಷ್ಟಾಚಾರಗಳಿಗೆ ಮೌನದ ಸಮ್ಮತಿ ಮೂಲಕ 'ನಾ ಖಾನೆದುಂಗಾ' ಮಾತನ್ನ ಸುಳ್ಳಾಗಿಸಿದ್ದಾರೆ
  • ಟ್ವಿಟ್ಟರ್‌ನಲ್ಲಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ
karnataka congress tweet on narendra modi
ಪ್ರಧಾನಿ ಮೋದಿಯವರು ತಮ್ಮ 'ನಾ ಖಾನೆದುಂಗಾ' ಮಾತನ್ನು ನಿಜ ಮಾಡಿದ್ದಾರೆ: ಕಾಂಗ್ರೆಸ್‌ ಆರೋಪ
ಬೆಂಗಳೂರು: ಪ್ರಧಾನಿ ಮೋದಿಯವರು ತಮ್ಮ 'ನಾ ಖಾನೆದುಂಗಾ' ಮಾತನ್ನು ನಿಜ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಆರೋಪ ಮಾಡಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್‌, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದೆ.


ಅಕ್ಕಿ, ಬೇಳೆ, ಗ್ಯಾಸ್, ಹಾಲು, ಮೊಸರುಗಳ ಬೆಲೆ ಏರಿಸುವ ಮೂಲಕ ಅವರ 'ನಾ ಖಾನೆದುಂಗಾ' ಮಾತನ್ನು ಸಾಕಾರಗೊಳಿಸಿದ್ದಾರೆ! ಹಾಗೆಯೇ 40% ಕಮಿಷನ್, PSI ಹಗರಣಗಳಂತಹ ಭ್ರಷ್ಟಾಚಾರಗಳಿಗೆ ಮೌನದ ಸಮ್ಮತಿ ಮೂಲಕ 'ನಾ ಖಾನೆದುಂಗಾ' ಮಾತನ್ನ ಸುಳ್ಳಾಗಿಸಿದ್ದಾರೆ ಎಂದು ಆರೋಪ ಮಾಡಿದೆ.
ಒಕ್ಕಲಿಗರಿಗೆ ಅವಕಾಶ ಒದಗಿ ಬಂದಿದೆ! ಚರ್ಚೆಗೆ ಗ್ರಾಸವಾಗುತ್ತಿದೆ ಡಿಕೆಶಿ ಮಾರ್ಮಿಕ ಮಾತು


ದುಬಾರಿ ದುನಿಯಾ ಎಂಬ ಹ್ಯಾಷ್‌ ಟ್ಯಾಗ್ ಮೂಲಕ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ಸಿರಿವಂತರಿಗೆ ಕಾರ್ಪೊರೇಟ್ ಟ್ಯಾಕ್ಸ್ - 30% ನಿಂದ 22% ಇಳಿಕೆ. ಜನಸಾಮಾನ್ಯರಿಗೆ - ಆಹಾರ ಧಾನ್ಯಗಳ ಟ್ಯಾಕ್ಸ್ 0% ನಿಂದ 5% ಹೇರಿಕೆ. ಸಿರಿವಂತರ 6.17 ಟ್ರಿಲಿಯನ್ ಮೊತ್ತ NPA ಮನ್ನಾ, ರೈತರ ಪಂಪ್‌ಸೆಟ್ ಮೇಲೆ 12%ರಿಂದ 18% ತೆರಿಗೆ ಗುನ್ನಾ! ಎಂದು ಕಿಡಿಕಾರಿದೆ.


ಬಿಜೆಪಿ ಆಡಳಿತದಲ್ಲಿ ಮೋದಿ ಗೆಳೆಯರದ್ದೇ ಪೂರಾ ದುನಿಯಾ, ಜನಸಾಮಾನ್ಯರಿಗೆ? ಎಂದು ಪ್ರಶ್ನೆ ಮಾಡಿದ ಕಾಂಗ್ರೆಸ್, ಯಡಿಯೂರಪ್ಪರಂತೆ ಅವರ ಸರ್ಕಾರದ ಯೋಜನೆಗಳನ್ನು ಮೂಲೆಗುಂಪು ಮಾಡುತ್ತಿರುವುದು ಯಾರ 'ಸಂತೋಷ'ಕ್ಕಾಗಿ ಬಿಜೆಪಿ? ಇದೂ ಕೂಡ ಬಿಎಸ್‌ವೈ ಮುಕ್ತ ಅಭಿಯಾನದ ಮುಂದುವರೆದ ಭಾಗವೇ? ಎಂದು ಪ್ರಶ್ನೆ ಮಾಡಿದೆ.

ಬಡವರಿಗಾಗಿ ಇದ್ದ ಅಟಲ್ ಸಾರಿಗೆಯನ್ನ ನಿರ್ಲಕ್ಷಿಸುವಷ್ಟು ಬಿಎಸ್‌ವೈ & ವಾಜಪೇಯಿಯವರ ಮೇಲೆ ಅಸಹನೆಯೇ ಬಸವರಾಜ ಬೊಮ್ಮಾಯಿ ಅವರೇ? ಹಿರಿಯರನ್ನು ಮರೆಯುವುದೇ ಬಿಜೆಪಿ ಸಂಸ್ಕೃತಿ! ಎಂದು ಟೀಕಿಸಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ