ಆ್ಯಪ್ನಗರ

ಕರ್ನಾಟಕ ಹೈಡ್ರಾಮಾ: ನಾಳೆ ವರೆಗೆ ಕಾದು ನೋಡಲು ಬಿಜೆಪಿ ಹೈಕಮಾಂಡ್ ನಿರ್ಧಾರ

ಹಲವು ದಿನಗಳಿಂದ ಪತನದ ಅಂಚಿನಲ್ಲಿರುವ ರಾಜ್ಯದ ಸಮ್ಮಿಶ್ರ ಸರಕಾರಕ್ಕೆ ವಿಶ್ವಾಸಮತ ಸಾಬೀತುಪಡಿಸಲು ಸೋಮವಾರವೇ ಕೊನೇ ಅವಕಾಶವಾಗಲಿದೆ. ಈಗಾಗಲೇ ಎರಡು ದಿನಗಳನ್ನು ವ್ಯರ್ಥಗೊಳಿಸಿ ಕಾಲಹರಣ ತಂತ್ರ ಅನುಸರಿಸಿದ ದೋಸ್ತಿ ಪಕ್ಷಗಳು, ಶನಿವಾರ ಮತ್ತು ಭಾನುವಾರ ರಜೆಯ ಲಾಭ ಪಡೆದು ಅತೃಪ್ತರ ಸಂಪರ್ಕಿಸಲು ಯತ್ನಿಸುತ್ತಿವೆ. ಆದರೆ ಅವೆಲ್ಲವೂ ವಿಫಲವಾಗಿದೆ.

Vijaya Karnataka Web 21 Jul 2019, 10:10 am
ಬೆಂಗಳೂರು: ವಿಶ್ವಾಸಮತ ಸಾಬೀತು ಮಾಡಲು ಸಮ್ಮಿಶ್ರ ಸರಕಾರಕ್ಕೆ ಇನ್ನೊಂದೇ ಅವಕಾಶ ಉಳಿದಿದೆ. ರಾಜ್ಯಪಾಲರು ನೀಡಿರುವ ಎರಡು ಗಡುವುಗಳನ್ನು ಮೀರಿರುವ ಸರಕಾರಕ್ಕೆ ಕೊನೆಯದಾಗಿ ಮೂರನೇ ಗಡುವನ್ನು ನೀಡಿ ಸೋಮವಾರವೇ ವಿಶ್ವಾಸಮತ ಸಾಬೀತುಪಡಿಸಲು ಸೂಚಿಸಲಾಗಿದೆ.
Vijaya Karnataka Web Karnataka Crisis new


ಈಗಾಗಲೇ ಎರಡು ಗಡುವುಗಳನ್ನು ಮೀರಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಮ್ಮಿಶ್ರ ಸರಕಾರ ತಮ್ಮ ಸೂಚನೆ ಪಾಲಿಸುತ್ತಿಲ್ಲ ಎಂದು ಮಧ್ಯಂತರ ವರದಿ ಸಲ್ಲಿಸಿದ್ದಾರೆ. ನಾಳೆಯೂ ಸೂಚನೆ ಪಾಲಿಸದೆ ಹೋದರೆ, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾದ ಬಗ್ಗೆ ಅಂತಿಮ ವರದಿ ಸಲ್ಲಿಸಿ ದೋಸ್ತಿ ಸರಕಾರವನ್ನು ವಜಾಗೊಳಿಸಲು ಬಿಜೆಪಿ ಹೈಕಮಾಂಡ್ ಸಿದ್ಧತೆ ಮಾಡಿಕೊಂಡಿದೆ.

16 ಮಂದಿ ಅತೃಪ್ತ ಶಾಸಕರ ರಾಜೀನಾಮೆ ಹಾಗೂ ಅನಾರೋಗ್ಯಕ್ಕೆ ತುತ್ತಾಗಿ ಮುಂಬಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಕಲಾಪಕ್ಕೆ ಹಾಜರಾಗುತ್ತಿಲ್ಲ. ಹೀಗಾಗಿ ಆಡಳಿತ ಮೈತ್ರಿಕೂಟದ ಬಲ 98ಕ್ಕೆ ಕುಸಿದಿದೆ ಎಂದು ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ.

ಸೋಮವಾರದ ಕದನ ಗೆಲ್ಲಲು ಬಿಜೆಪಿ ರಣತಂತ್ರ

ಇಬ್ಬರು ಪಕ್ಷೇತರ ಶಾಸಕರು ಈಗಾಗಲೇ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಹೀಗಾಗಿ ಬಿಜೆಪಿ ಬಲ 107ಕ್ಕೆ ಏರಿದಂತಾಗಿದೆ.

ಪಕ್ಷಾಂತರ ಪರ್ವಕ್ಕೆ ಎದ್ದು- ಬಿದ್ದ ಸರಕಾರಗಳು!

ಈಗಾಗಲೇ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಿಗೆ ವಿಪ್ ಅನ್ವಯವಾಗುವುದೆ? ಅವರನ್ನು ಅನರ್ಹಗೊಳಿಸಲು ಸಾಧ್ಯವೆ ಎಂಬ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಿಂದ ಸ್ಪಷ್ಟತೆ ಬಯಸಿ ಕಾಂಗ್ರೆಸ್ ಅರ್ಜಿ ಸಲ್ಲಿಸಿದೆ. ಸೋಮವಾರ ಅದನ್ನು ವಿಚಾರಣೆ ನಡೆಸಲಿರುವ ಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. ಸುಪ್ರೀಂ ತೀರ್ಪು ಕಾಂಗ್ರೆಸ್ ನಿರೀಕ್ಷೆಗೆ ವಿರುದ್ಧವಾಗಿ ಬಂದಲ್ಲಿ ದೋಸ್ತಿ ಸರಕಾರಕ್ಕೆ ಅದೇ ಅಂತಿಮ ಮೊಳೆಯಾಗಲಿದೆ.

ಇತ್ಯರ್ಥವಾಗದ ಅತೃಪ್ತ ಶಾಸಕರ ರಾಜೀನಾಮೆ ಪ್ರಹಸನ

ನಾನಾ ನೆಪಗಳನ್ನೊಡ್ಡಿ ವಿಶ್ವಾಸ ಮತ ಸಾಬೀತುಪಡಿಸದೆ ಕಾಲಹರಣ ತಂತ್ರ ಅನುಸರಿಸುವ ದೋಸ್ತಿ ಪಕ್ಷಗಳ ನಡೆಗೆ ರಾಜ್ಯದ ಜನತೆ ಕೂಡ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸೋಮವಾರವೇ ವಿಶ್ವಾಸಮತ ಸಾಬೀತುಪಡಿಸಲು ಇರುವ ಕೊನೆಯ ಅವಕಾಶವನ್ನು ಸರಕಾರ ಬಳಸಿಕೊಳ್ಳುವುದೇ ಕಾದುನೋಡಬೇಕಿದೆ.

ನಾಯಕರ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್‌ ಶಾಸಕರು: ಸೋಮವಾರ ಮುಗಿಸದಿದ್ದರೆ ಮಂಗಳವಾರ ಸದನಕ್ಕೆ ಬರಲ್ಲ

ದೋಸ್ತಿ ಸರಕಾರವನ್ನು ಅಮಾನತುಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದಲ್ಲಿ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ಹೊಸ ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ