ಆ್ಯಪ್ನಗರ

ಮುಂಬಯಿಯಲ್ಲಿ ಅತೃಪ್ತರ ಭೇಟಿ ಯತ್ನ ಕೈಬಿಟ್ಟ ಕಾಂಗ್ರೆಸ್‌, ಜೆಡಿಎಸ್‌ ಪ್ರಮುಖರು

ಕೊನೆಗೂ ದೋಸ್ತಿ ಸರಕಾರದ ಪತನ ಖಚಿತ ಎಂಬ ನಿಲುವಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರೂ ಬಂದಂತೆ ತೋರುತ್ತಿದೆ. ಅತೃಪ್ತ ಶಾಸಕರನ್ನು ಭೇಟಿ ಮಾಡಲು ಮುಂಬಯಿಗೆ ತೆರಳುವ ಯತ್ನವನ್ನು ಹಿರಿಯ ಕಾಂಗ್ರೆಸ್, ಜೆಡಿಎಸ್ ಮುಖಂಡರು ಕೈಬಿಟ್ಟಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ನಾಯಕರು ತಮ್ಮ ಭೇಟಿಗೆ ಬರದಂತೆ ತಡೆಯಬೇಕು ಎಂದು ಕೋರಿ ಅತೃಪ್ತ ಶಾಸಕರು ಮುಂಬಯಿ ಪೊಲೀಸರಿಗೆ ಮನವಿ ಸಲ್ಲಿಸಿದ್ದರು.

Vijaya Karnataka Web 15 Jul 2019, 10:56 am
ಬೆಂಗಳೂರು: ಅತೃಪ್ತ ಶಾಸಕರ ಮನವೊಲಿಸುವುದಕ್ಕಾಗಿ ಮುಂಬಯಿಗೆ ತೆರಳದಿರಲು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ ಶಿವಕುಮಾರ್ ನಿರ್ಧರಿಸಿದ್ದಾರೆ. ಅತೃಪ್ತರ ಮನವೊಲಿಸಲು ಮುಂಬಯಿಗೆ ತೆರಳುವ ತಮ್ಮ ನಿಗದಿತ ಭೇಟಿಯನ್ನು ಈ ನಾಯಕರು ರದ್ದುಪಡಿಸಿದ್ದಾರೆ.
Vijaya Karnataka Web HD Kumaraswamy


ಕಾಂಗ್ರೆಸ್‌ ಹಿರಿಯ ಮುಖಂಡರು ತಮ್ಮ ಭೇಟಿಗೆ ಬರುತ್ತಿದ್ದು, ತಮಗೆ ಅಪಾಯದ ಭೀತಿಯಿದೆ ಎಂದು ಅತೃಪ್ತ ಶಾಸಕರು ಮುಂಬಯಿ ಪೊಲೀಸರಿಗೆ ದೂರು ನೀಡಿದ್ದರು. ಈ ನಾಯಕರು ತಮ್ಮ ಭೇಟಿಗೆ ಬರದಂತೆ ತಡೆದು ರಕ್ಷಣೆ ನೀಡಬೇಕೆಂದು ಕೋರಿದ್ದರು.

ಒಂದೊಮ್ಮೆ ಪೊಲೀಸರು ರಕ್ಷಣೆ ನೀಡದಿದ್ದಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಲೂ ಅತೃಪ್ತ ಶಾಸಕರು ನಿರ್ಧರಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಅತೃಪ್ತ ಶಾಸಕರ ಭೇಟಿ ಯತ್ನವನ್ನು ಕೈಬಿಟ್ಟಿದ್ದಾರೆ.

ಕಾಂಗ್ರೆಸ್ ನಾಯಕರಿಂದ ರಕ್ಷಣೆ ನೀಡಿ: ಅತೃಪ್ತ ಶಾಸಕರಿಂದ ಪೊಲೀಸರಿಗೆ ಮೊರೆ

ಇದರೊಂದಿಗೆ ದೋಸ್ತಿ ಸರಕಾರವನ್ನು ಉಳಿಸಿಕೊಳ್ಳುವ ಕೊನೇ ಯತ್ನವನ್ನೂ ಕಾಂಗ್ರೆಸ್ ನಾಯಕರು ಕೈಚೆಲ್ಲಿದಂತೆ ತೋರುತ್ತಿದೆ. ಜೆಡಿಎಸ್ ವರಿಷ್ಠ ನಾಯಕರಂತೂ ಕಾಂಗ್ರೆಸ್ ಅತೃಪ್ತರ ಮನವೊಲಿಸುವ ಹೊಣೆಯನ್ನು ಕಾಂಗ್ರೆಸ್‌ ಹಿರಿಯರಿಗೇ ಬಿಟ್ಟಿದ್ದಾರೆ. ಹೀಗಾಗಿ ದೋಸ್ತಿ ಪಕ್ಷಗಳಲ್ಲಿ ಕೊನೇ ಕ್ಷಣದಲ್ಲೂ ಸಮನ್ವಯ ಕಾಣಿಸುತ್ತಿಲ್ಲ.

ಇಂದೇ ವಿಶ್ವಾಸಮತಕ್ಕೆ ಬಿಜೆಪಿ ಪಟ್ಟು ಹಿಡಿದರೆ ಸರಕಾರ ಪತನ ಖಚಿತ: ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಆತಂಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ