ಬೆಂಗಳೂರು: ಇತ್ತೀಚೆಗೆ ರಾಜ್ಯ ಸರಕಾರದ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ನೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಮತ್ತೆ ಬಯಲಾಗುತ್ತಿದೆ. ಕಾಂಗ್ರೆಸ್ ನಾಯಕರಾದ ಎಂ. ಬಿ.ಪಾಟೀಲ್ ಹಾಗೂ ಶಾಮನೂರು ಶಿವಶಂಕರಪ್ಪ ಪರಸ್ಪರ ಕಿತ್ತಾಡಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಎಂ.ಬಿ.ಪಾಟೀಲ್ರನ್ನು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ 'ಮಂಗ' ಎಂದಿದ್ದಾರೆ. ಇದಕ್ಕೆ ಶಾಮನೂರು ವಿರುದ್ಧ ಬಾಗಲಕೋಟೆ ಜಿಲ್ಲೆಯಲ್ಲಿ ಎಂ.ಬಿ. ಪಾಟೀಲ್ ಗರಂ ಆಗಿದ್ದು, ನಾನು ಯಾವಾಗಲೂ ಹೇಳ್ತಿದ್ದೆ. ಶಾಮನೂರು ಶಿವಶಂಕರಪ್ಪ ನನಗೆ ತಂದೆ ಸಮಾನ. ಮಲ್ಲಿಕಾರ್ಜುನ ಬೇರೆಯಲ್ಲ, ನಾನು ಬೇರೆಯಲ್ಲ. ಅವರು ಮಾತನಾಡಿರೋದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದೆ. ಮತ್ತೆ ಅವರೀಗ ತಮ್ಮ ಸಣ್ಣತನ ತೋರಿಸಿದ್ದಾರೆ. ಅವರು ತಮ್ಮ ಚಿಲ್ಲರೆ ಬುದ್ಧಿ ತೋರಿಸಿದ್ದಾರೆ ಎಂದು ಕೂಡಲಸಂಗಮದಲ್ಲಿ ಗೃಹ ಸಚಿವ ಎಂ. ಬಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ನನಗೆ ಮಂಗ ಎಂದು ಕರೆದಿದ್ದಾರೆ ಎಂದು ಕೇಳಿದ್ದೇನೆ ಎಂದ ಗೃಹ ಸಚಿವ ಎಂ.ಬಿ.ಪಾಟೀಲ್, ನಾನು ಅವರಿಗೆ ಮಂಗ, ಹುಚ್ಚಮಂಗ, ಗೊರಿಲ್ಲಾವೆಂದು ಕರೆಯಬಹುದು. ಆದ್ರೆ ಅದು ನಮ್ಮ ಸಂಸ್ಕೃತಿ ಅಲ್ಲ. ಮಂಗ ಎಂದು ಕರೆದಿರೋದು ಅವರ ಸಂಸ್ಕೃತಿ ತೋರಿಸುತ್ತೆ. ನನ್ನನ್ನು ಅವರು, ಪ್ರಭಾಕರ್ ಕೋರೆ ಬೆಳೆಸಿದ್ದಾರೆ ಎಂದು ಹೇಳಿದ್ದಾರೆ. ನಾನು, ನಮ್ಮ ತಂದೆ ಆಶೀರ್ವಾದದಿಂದ ಬೆಳೆದಿದ್ದೇನೆ. ಹಾದಿ ತಪ್ಪಿಲ್ಲ. ಮೊದಲು ಅವರು ಸರಿಯಾದ ಹಾದಿಗೆ ಬರಲಿ.
ಯಾವ ಶಿವಶಂಕರಪ್ಪ,ಕೋರೆಯಿಂದ ನಾನು ಬೆಳೆದಿಲ್ಲ ಎಂದು ಶಾಮನೂರು ಶಿವಶಂಕರಪ್ಪಗೆ ಎಂ ಬಿ ಪಾಟೀಲ್ ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಟಾಂಗ್ ನೀಡಿದ್ದಾರೆ.
ಎಂ.ಬಿ. ಪಾಟೀಲ್ ಸಣ್ಣ ಹುಡುಗ, ನನ್ನ ಬಗ್ಗೆ ಏನು ಗೊತ್ತು?: ಶಾಮನೂರು ತಿರುಗೇಟು
ದಾವಣಗೆರೆ: ಎಂ.ಬಿ. ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಚಿವ ಶಾಮನೂರು, ನಾನು ಹೇಗೆ ಬೆಳೆದು ಬಂದಿದ್ದೇನೆ ಎಂಬ ಬಗ್ಗೆ ಎಂ.ಬಿ.ಪಾಟೀಲ್ಗೆ ಏನು ಗೊತ್ತು ? ಆತ ಇನ್ನು ಸಣ್ಣ ಹುಡುಗ. ನಾನು ನಗರದ ರೇಣುಕಾ ಮಂದಿರದಲ್ಲಿ ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್ನಿಂದ ನಡೆದ ಅಭಿನಂದನಾ ಧರ್ಮ ಸಮಾರಂಭದಲ್ಲಿ ಮಾತನಾಡುವಾಗ ಅವರ ಹೆಸರನ್ನೇ ಪ್ರಸ್ತಾಪಿಸಿಲ್ಲ ಎಂದು ಶಾಸಕ ಹಾಗೂ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಶಾಮನೂರು ಶಿವಶಂಕರಪ್ಪ ಮೊದಲು ಕಿರಾಣಿ ಅಂಗಡಿ ಮಾಡುತ್ತಿದ್ದರು, ಆ ನಂತರ ದಲ್ಲಾಳಿ ಕೆಲಸ ಮಾಡುತ್ತಿದ್ದರು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹುಬ್ಬಳ್ಳಿಯಲ್ಲಿ ನೀಡಿದ ಹೇಳಿಕೆಗೆ ಭಾನುವಾರ ಶಾಮನೂರು ಶಿವಶಂಕರಪ್ಪ ಅವರು ತಮ್ಮ ನಿವಾಸದಲ್ಲಿ ಈ ರೀತಿ ಹೇಳಿದರು.
ಒಟ್ಟಾರೆ ಜನರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಮಾತ್ರ ಹೇಳಿದ್ದೇನೆ. ಇಷ್ಟು ವರ್ಷ ಲಿಂಗಾಯತ ಧರ್ಮದ ಬಗ್ಗೆ ನಾನು ಮಾತನಾಡಿರಲಿಲ್ಲ. ನೂರು ವರ್ಷಗಳಿಂದಲೂ ಈ ಹೋರಾಟ ಇದೆ. ಇಷ್ಟು ವರ್ಷ ಇಲ್ಲದವರು ಈಗ ಯಾಕೆ ಬಂದಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.
ಪಾಟೀಲ್ ಒಬ್ಬ ಮಂಗ: ಸಚಿವ ಎಂ.ಬಿ.ಪಾಟೀಲ್ ಬಹಳ ಸಣ್ಣ ವಯಸ್ಸಿನವವಾಗಿದ್ದು, ಬಿ ಫಾರ್ಮ್ ಹರಿದು ಹಾಕಿದ ಬಗ್ಗೆ ಹೇಳಿದ್ದಾನೆ ಆತನಿಗೆ ಏನು ಗೊತ್ತು. ಆತ ಮಂಗ. ಆತನ ಬಗ್ಗೆ ನಾನು ಏನು ಹೇಳಲ್ಲ. ನಾನು ಹೇಗೆ ಬೆಳೆದಿದ್ದೇನೆ ಎಂಬುದು ಆತನಿಗೆ ಏನು ಗೊತ್ತಿಲ್ಲ. ಎಂ.ಬಿ.ಪಾಟೀಲ್ ಅಡ್ಡ ದಾರಿ ಹಿಡಿದಿದ್ದ. ನಾನು ಮತ್ತು ಪ್ರಭಾಕರ ಕೋರೆ ಸೇರಿ ಆತನನ್ನ ಉದ್ಧಾರ ಮಾಡಿದ್ದೇವೆ. ಆತನ ಬಗ್ಗೆ ಹೆಚ್ಚು ಕಾಮೆಂಟ್ ಬೇಡ, ಸಿಕ್ಕಾಗ ಮಾತನಾಡುತ್ತೇನೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದರು.
ನನಗೆ ಮಂಗ ಎಂದು ಕರೆದಿದ್ದಾರೆ ಎಂದು ಕೇಳಿದ್ದೇನೆ ಎಂದ ಗೃಹ ಸಚಿವ ಎಂ.ಬಿ.ಪಾಟೀಲ್, ನಾನು ಅವರಿಗೆ ಮಂಗ, ಹುಚ್ಚಮಂಗ, ಗೊರಿಲ್ಲಾವೆಂದು ಕರೆಯಬಹುದು. ಆದ್ರೆ ಅದು ನಮ್ಮ ಸಂಸ್ಕೃತಿ ಅಲ್ಲ. ಮಂಗ ಎಂದು ಕರೆದಿರೋದು ಅವರ ಸಂಸ್ಕೃತಿ ತೋರಿಸುತ್ತೆ. ನನ್ನನ್ನು ಅವರು, ಪ್ರಭಾಕರ್ ಕೋರೆ ಬೆಳೆಸಿದ್ದಾರೆ ಎಂದು ಹೇಳಿದ್ದಾರೆ. ನಾನು, ನಮ್ಮ ತಂದೆ ಆಶೀರ್ವಾದದಿಂದ ಬೆಳೆದಿದ್ದೇನೆ. ಹಾದಿ ತಪ್ಪಿಲ್ಲ. ಮೊದಲು ಅವರು ಸರಿಯಾದ ಹಾದಿಗೆ ಬರಲಿ.
ಯಾವ ಶಿವಶಂಕರಪ್ಪ,ಕೋರೆಯಿಂದ ನಾನು ಬೆಳೆದಿಲ್ಲ ಎಂದು ಶಾಮನೂರು ಶಿವಶಂಕರಪ್ಪಗೆ ಎಂ ಬಿ ಪಾಟೀಲ್ ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಟಾಂಗ್ ನೀಡಿದ್ದಾರೆ.
ಎಂ.ಬಿ. ಪಾಟೀಲ್ ಸಣ್ಣ ಹುಡುಗ, ನನ್ನ ಬಗ್ಗೆ ಏನು ಗೊತ್ತು?: ಶಾಮನೂರು ತಿರುಗೇಟು
ದಾವಣಗೆರೆ: ಎಂ.ಬಿ. ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಚಿವ ಶಾಮನೂರು, ನಾನು ಹೇಗೆ ಬೆಳೆದು ಬಂದಿದ್ದೇನೆ ಎಂಬ ಬಗ್ಗೆ ಎಂ.ಬಿ.ಪಾಟೀಲ್ಗೆ ಏನು ಗೊತ್ತು ? ಆತ ಇನ್ನು ಸಣ್ಣ ಹುಡುಗ. ನಾನು ನಗರದ ರೇಣುಕಾ ಮಂದಿರದಲ್ಲಿ ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್ನಿಂದ ನಡೆದ ಅಭಿನಂದನಾ ಧರ್ಮ ಸಮಾರಂಭದಲ್ಲಿ ಮಾತನಾಡುವಾಗ ಅವರ ಹೆಸರನ್ನೇ ಪ್ರಸ್ತಾಪಿಸಿಲ್ಲ ಎಂದು ಶಾಸಕ ಹಾಗೂ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಶಾಮನೂರು ಶಿವಶಂಕರಪ್ಪ ಮೊದಲು ಕಿರಾಣಿ ಅಂಗಡಿ ಮಾಡುತ್ತಿದ್ದರು, ಆ ನಂತರ ದಲ್ಲಾಳಿ ಕೆಲಸ ಮಾಡುತ್ತಿದ್ದರು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹುಬ್ಬಳ್ಳಿಯಲ್ಲಿ ನೀಡಿದ ಹೇಳಿಕೆಗೆ ಭಾನುವಾರ ಶಾಮನೂರು ಶಿವಶಂಕರಪ್ಪ ಅವರು ತಮ್ಮ ನಿವಾಸದಲ್ಲಿ ಈ ರೀತಿ ಹೇಳಿದರು.
ಒಟ್ಟಾರೆ ಜನರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಮಾತ್ರ ಹೇಳಿದ್ದೇನೆ. ಇಷ್ಟು ವರ್ಷ ಲಿಂಗಾಯತ ಧರ್ಮದ ಬಗ್ಗೆ ನಾನು ಮಾತನಾಡಿರಲಿಲ್ಲ. ನೂರು ವರ್ಷಗಳಿಂದಲೂ ಈ ಹೋರಾಟ ಇದೆ. ಇಷ್ಟು ವರ್ಷ ಇಲ್ಲದವರು ಈಗ ಯಾಕೆ ಬಂದಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.
ಪಾಟೀಲ್ ಒಬ್ಬ ಮಂಗ: ಸಚಿವ ಎಂ.ಬಿ.ಪಾಟೀಲ್ ಬಹಳ ಸಣ್ಣ ವಯಸ್ಸಿನವವಾಗಿದ್ದು, ಬಿ ಫಾರ್ಮ್ ಹರಿದು ಹಾಕಿದ ಬಗ್ಗೆ ಹೇಳಿದ್ದಾನೆ ಆತನಿಗೆ ಏನು ಗೊತ್ತು. ಆತ ಮಂಗ. ಆತನ ಬಗ್ಗೆ ನಾನು ಏನು ಹೇಳಲ್ಲ. ನಾನು ಹೇಗೆ ಬೆಳೆದಿದ್ದೇನೆ ಎಂಬುದು ಆತನಿಗೆ ಏನು ಗೊತ್ತಿಲ್ಲ. ಎಂ.ಬಿ.ಪಾಟೀಲ್ ಅಡ್ಡ ದಾರಿ ಹಿಡಿದಿದ್ದ. ನಾನು ಮತ್ತು ಪ್ರಭಾಕರ ಕೋರೆ ಸೇರಿ ಆತನನ್ನ ಉದ್ಧಾರ ಮಾಡಿದ್ದೇವೆ. ಆತನ ಬಗ್ಗೆ ಹೆಚ್ಚು ಕಾಮೆಂಟ್ ಬೇಡ, ಸಿಕ್ಕಾಗ ಮಾತನಾಡುತ್ತೇನೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದರು.