ಆ್ಯಪ್ನಗರ

ಉಪ ಚುನಾವಣೆಯ ಸಮರದಲ್ಲಿ ಗೆಲ್ಲುವ ಸೇನಾನಿಗಳು ಇವರು?

ಅನರ್ಹ ಶಾಸಕರು ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಭವಿಷ್ಯ ನಿರ್ಧರಿಸುವ ಮಹತ್ವದ ಜನಮತ 'ಗಣನೆ' ಪೂರ್ಣಗೊಂಡಿದೆ. ಇನ್ನೇನ್ನಿದ್ದರೂ ಸೋಲು ಗೆಲುವಿನ ಲೆಕ್ಕಾಚಾರದ ಸಮಯ. ಈಗ ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದೆ. ಸಿ-ವೋಟರ್‌ ಸಂಸ್ಥೆ ಮಾಡಿರುವ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಈ ಬಾರಿ ಮುನ್ನಡೆ ಸಿಗಲಿದೆ. ಒಟ್ಟು 15 ಕ್ಷೇತ್ರಗಳ ಪೈಕಿ ಬಿಜೆಪಿಗೆ 9-12 ಕ್ಷೇತ್ರಗಳಲ್ಲಿ, ಕಾಂಗ್ರೆಸ್‌ 3 ರಿಂದ 6 ಕ್ಷೇತ್ರದಲ್ಲಿ ಹಾಗೂ ಜೆಡಿಎಸ್‌ಗೆ 1 ಕಡೆ ಮುನ್ನಡೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 15 ಕ್ಷೇತ್ರಗಳ ಸಮೀಕ್ಷಾ ಚಿತ್ರಣವನ್ನೂ ನೀಡಲಾಗಿದ್ದು, ಪರಸ್ಪರ ಸ್ಪರ್ಧೆಯಲ್ಲಿ ಯಾರಿಗೆ ವಿಜಯಮಾಲೆ ದೊರೆಯಲಿದೆ ಎಂಬುದು ಡಿಸೆಂಬರ್‌ 9ರಂದು ಗೊತ್ತಾಗಲಿದೆ.

Vijaya Karnataka Web | 5 Dec 2019, 8:00 pm
Vijaya Karnataka Web karnataka exit poll results bjp has upper hand
ಉಪ ಚುನಾವಣೆಯ ಸಮರದಲ್ಲಿ ಗೆಲ್ಲುವ ಸೇನಾನಿಗಳು ಇವರು?
ಅನರ್ಹ ಶಾಸಕರು ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಭವಿಷ್ಯ ನಿರ್ಧರಿಸುವ ಮಹತ್ವದ ಜನಮತ 'ಗಣನೆ' ಪೂರ್ಣಗೊಂಡಿದೆ. ಇನ್ನೇನ್ನಿದ್ದರೂ ಸೋಲು ಗೆಲುವಿನ ಲೆಕ್ಕಾಚಾರದ ಸಮಯ. ಈಗ ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದೆ. ಸಿ-ವೋಟರ್‌ ಸಂಸ್ಥೆ ಮಾಡಿರುವ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಈ ಬಾರಿ ಮುನ್ನಡೆ ಸಿಗಲಿದೆ. ಒಟ್ಟು 15 ಕ್ಷೇತ್ರಗಳ ಪೈಕಿ ಬಿಜೆಪಿಗೆ 9-12 ಕ್ಷೇತ್ರಗಳಲ್ಲಿ, ಕಾಂಗ್ರೆಸ್‌ 3 ರಿಂದ 6 ಕ್ಷೇತ್ರದಲ್ಲಿ ಹಾಗೂ ಜೆಡಿಎಸ್‌ಗೆ 1 ಕಡೆ ಮುನ್ನಡೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 15 ಕ್ಷೇತ್ರಗಳ ಸಮೀಕ್ಷಾ ಚಿತ್ರಣವನ್ನೂ ನೀಡಲಾಗಿದ್ದು, ಪರಸ್ಪರ ಸ್ಪರ್ಧೆಯಲ್ಲಿ ಯಾರಿಗೆ ವಿಜಯಮಾಲೆ ದೊರೆಯಲಿದೆ ಎಂಬುದು ಡಿಸೆಂಬರ್‌ 9ರಂದು ಗೊತ್ತಾಗಲಿದೆ.

ಯಲ್ಲಾಪುರದಲ್ಲಿ ಯಾರು ವೀರ?

ಯಲ್ಲಾಪುರದಲ್ಲಿ ಬಿಜೆಪಿಯ ಶಿವರಾಮ್‌ ಹೆಬ್ಬಾರ್ ಅಬ್ಬರಿಸಲಿದ್ದಾರೆ. ಭೀಮಣ್ಣ ನಾಯ್ಕ್‌ ವಿರುದ್ಧ ಶಿವರಾಮ್‌ ಹೆಬ್ಬಾರ್‌ ಮುನ್ನಡೆ ಪಡೆಯಲಿದ್ದಾರೆ.

'ಯಶವಂತ'ರು ಯಾರು ಆಗುತ್ತಾರೆ?

ಯಶವಂತಪುರದಲ್ಲಿ ಬಿಜೆಪಿಯ ಎಸ್‌ಟಿ ಸೋಮಶೇಖರ್‌ಗೆ ಮತದಾರ ಕೈ ಹಿಡಿಯಲಿದ್ದಾನೆ ಎಂದು ಸಮೀಕ್ಷೆ ವರದಿ ತಿಳಿಸಿದೆ. ಜೆಡಿಎಸ್‌ ಜವರಾಯಿ ಗೌಡ ಹಾಗೂ ಕಾಂಗ್ರೆಸ್‌ನ ಪಿ ನಾಗರಾಜ್‌ಗೆ ಹಿನ್ನಡೆಯಾಗಲಿದೆ.

ವಿಜಯನಗರದ 'ವೀರಪುತ್ರ'ನಿಗೆ ಸಿಗಲಿದೆ 'ಆನಂದ'

ವಿಜಯನಗರದಲ್ಲಿ ಆನಂದ್‌ ಸಿಂಗ್‌ಗೆ ಗೆಲುವಿನ ಆನಂದ ಬೀರಲಿದ್ದಾರೆ. ಮತದಾರ ಆನಂದ್‌ ಪರವಾಗಿ ಜೈ ಎನ್ನುವ ಸಾಧ್ಯತೆಯೇ ಹೆಚ್ಚಾಗಿದೆ. ವೆಂಕಟರಾವ್‌ ಘೋರ್ಷಡೆ ಹಿನ್ನಡೆ ಅನುಭವಿಸಲಿದ್ದಾರೆ ಎಂದು ಸಮೀಕ್ಷಾ ವರದಿಗಳು ತಿಳಿಸಿವೆ.

ಯಾರಾಗ್ತಾರೆ ಶಿವಾಜಿನಗರದ 'ಸುಲ್ತಾನ'

ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿಯೂ ಫಲಿತಾಂಶ ಕುತೂಹಲ ಕೆರಳಿಸಲಿದೆ. ಕಾಂಗ್ರೆಸ್‌ ರಿಜ್ವಾನ್‌ ಅರ್ಷದ್‌ ಮತ್ತು ಬಿಜೆಪಿಯ ಎಂ ಸರವಣ ನಡುವೆ ದಂಗಲ್‌ ಏರ್ಪಡಲಿದೆ.

ರಾಣೆಬೆನ್ನೂರಿನಲ್ಲಿ 'ರಾಜ' ಯಾರು?

ರಾಣೆಬೆನ್ನೂರು ಕ್ಷೇತ್ರದಲ್ಲಿಯೂ ಸಮಬಲದ ಹೋರಾಟ ಇದೆ. ಕಾಂಗ್ರೆಸ್‌ನ ಕೆಬಿ ಕೋಳಿವಾಡ, ಬಿಜೆಪಿಯ ಅರುಣ್‌ ಕುಮಾರ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ.

ಕೆಆರ್‌ಪುರಂನಲ್ಲಿ ಕಿಂಗ್‌ ಆಗೋದು ಯಾರು?

ಕೆಆರ್‌ ಪುರಂ ಕ್ಷೇತ್ರದಲ್ಲಿ ಬೈರತಿ ಬಸವರಾಜ್‌ ಮತ್ತೆ ಕಿಂಗ್‌ ಆಗಲಿದ್ದಾರೆ. ಕಾಂಗ್ರೆಸ್‌ನ ನಾರಾಯಣಸ್ವಾಮಿಗೆ ಹಿನ್ನಡೆ ಉಂಟಾಗಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಕೆಆರ್‌ ಪುರಂನಲ್ಲಿ ಕಮಲ ಅರಳಲಿದೆ.

ಯಾರಿಗೆ ಒಲಿಯುತ್ತೆ ಕೆಆರ್‌ ಪೇಟೆ

ಕೆಆರ್‌ ಪೇಟೆಯಲ್ಲಿ ಸಮಬಲದ ಹೋರಾಟ ಕಂಡುಬರಲಿದೆ. ಬಿಜೆಪಿಯ ನಾರಾಯಣ ಗೌಡ ಹಾಗೂ ಜೆಡಿಎಸ್‌ನ ಬಿಎಲ್‌ ದೇವರಾಜ್‌ ನಡುವೆ ಜಿದ್ದಾಜಿದ್ದಿ ಹೋರಾಟ ಇರಲಿದೆ ಎನ್ನಲಾಗಿದೆ.

ಕಾಗವಾಡ: ಮತದಾರ ಯಾರ ಸಂಗಡ

ಕಾಗವಾಡದಲ್ಲಿ ಕಾಂಗ್ರೆಸ್‌ಗೆ ಮುನ್ನಡೆಯಾಗಲಿದೆ. ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಸೇರಿದ ರಾಜು ಕಾಗೆಗೆ ಮತದಾರ ಒಲವು ತೋರಲಿದ್ದಾನೆ ಎಂದು ತಿಳಿದುಬಂದಿದೆ. ಬಿಜೆಪಿಯ ಶ್ರೀಮಂತ ಪಾಟೀಲ್‌ಗೆ ಹಿನ್ನಡೆಯಾಗಲಿದೆ.

ಹುಣಸೂರು: ಆಳುವವರು ಯಾರು? ಅಳುವವರು ಯಾರು?

ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಮುನ್ನಡೆ ಪಡೆಯುವ ಸಾಧ್ಯತೆ ಇದೆ. ಹಳ್ಳಿಹಕ್ಕಿ ಎಚ್‌ ವಿಶ್ವನಾಥ್‌ ಕೂಗು ಮತದಾರನಿಗೆ ಕೇಳಿಸಲಿಲ್ಲ ಎಂದು ಕಾಣಿಸುತ್ತದೆ. ಕಾಂಗ್ರೆಸ್‌ನ ಎಚ್‌ಪಿ ಮಂಜುನಾಥ್‌ ಮೇಲುಗೈ ಸಾಧಿಸಲಿದ್ದಾರೆ.

ಹೊಸ'ಕೋಟೆ' ಕಟ್ಟಿ ದರ್ಬಾರು ಮಾಡುವವರಾರು?

ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್‌ ಮತ್ತೆ ತಮ್ಮ ದರ್ಬಾರು ಮುಂದುವರಿಸಲಿದ್ದಾರೆ. ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡಗಿಂತ ಭಾರಿ ಮುನ್ನಡೆ ಪಡೆಯಲಿದ್ದಾರೆ ಎಂಟಿಬಿ ನಾಗರಾಜ್‌. ಕಾಂಗ್ರೆಸ್‌ನ ಪದ್ಮಾವತಿ ಸುರೇಶ್‌ಗಿಂತಲೂ ಶರತ್‌ ಹಿನ್ನಡೆ ಅನುಭವಿಸಲಿದ್ದಾರೆ.

ಹಿರೇಕೆರೂರು: ಮೀಸೆ ತಿರುಗಿಸೋ ಕೌರವನಾರು?

ಹಿರೇಕೆರೂರು ಕ್ಷೇತ್ರದಲ್ಲಿ ಬಿಸಿ ಪಾಟೀಲ್‌ಗೆ ಸ್ಪಷ್ಟ ಮುನ್ನಡೆ ದೊರೆಯುವ ನಿರೀಕ್ಷೆ ಇದೆ. ಬಿಜೆಪಿಯ ಬಿಸಿ ಪಾಟೀಲ್‌ಗೆ ಕಾಂಗ್ರೆಸ್‌ನ ಬಿಎಚ್‌ ಬನ್ನಿಕೋಡ್‌ಗಿಂತ ಹೆಚ್ಚು ಮತ ಬೀಳುವ ನಿರೀಕ್ಷೆ ಇದೆ.

ಗೋಕಾಕ ಕರದಂಟು ಯಾರಿಗೆ

ಗೋಕಾಕದಲ್ಲಿ ಮತ್ತೆ ರಮೇಶ್‌ ಜಾರಕಿಹೊಳಿ 'ಸಾಹುಕಾರ' ಆಗಲಿದ್ದಾರೆ. ಸಹೋದರ, ಕಾಂಗ್ರೆಸ್‌ ಅಭ್ಯರ್ಥಿ ಲಖನ್‌ಗಿಂತಲೂ ರಮೇಶ್‌ ಜಾರಕಿಹೊಳಿ ಪರವಾಗಿ ಮತದಾರ ಒಲವು ತೋರಿದ್ದಾರೆ ಎಂದು ಹೇಳಲಾಗಿದೆ.

ಚಿಕ್ಕಬಳ್ಳಾಪುರದ ದೊಡ್ಡ ನಾಯಕ ಯಾರಾಗ್ತಾರೆ?

ಚಿಕ್ಕಬಳ್ಳಾಪುರದಲ್ಲಿಯೂ ನೆಕ್‌ ಟು ನೆಕ್‌ ಫೈಟ್‌ ಇರಲಿದೆ. ಬಿಜೆಪಿಯ ಡಾ. ಕೆ ಸುಧಾಕರ್‌ ಮತ್ತು ಕಾಂಗ್ರೆಸ್‌ನ ಎಂ ಆಂಜಿನಪ್ಪ ನಡುವೆ ಭಾರಿ ಪೈಪೋಟಿ ಇರಲಿದೆ.

ಅಥಣಿಯಲ್ಲಿ ಯಾರು ಧಣಿ?

ಅಥಣಿಯಲ್ಲಿ ಮತ್ತೆ ಮತದಾರ ಮನಸ್ಸು ಗೆಲ್ಲುವಲ್ಲಿ ಮಹೇಶ್ ಕುಮಟಳ್ಳಿ ಯಶಸ್ವಿಯಾಗಲಿದೆ ಎಂದು ಸಿವೋಟರ್‌ ಸಮೀಕ್ಷೆ ತಿಳಿಸಿದೆ. ಕಾಂಗ್ರೆಸ್‌ನ ಗಜಾನನ ಮಂಗಸೂಳಿಗೆ ಹಿನ್ನಡೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ