ಆ್ಯಪ್ನಗರ

ಮನ್ನಾ ಆದ ಸಾಲದ ಹಣ ಬ್ಯಾಂಕಿನಿಂದ ಸರಕಾರಕ್ಕೆ ವಾಪಸ್: ರಾಜ್ಯದ ರೈತರಿಗೆ ಶಾಕ್

ಸಾಲ ಮನ್ನಾ ಯೋಜನೆಯಡಿ ಸರಕಾರದಿಂದ ಬಂದ ಹಣ ವಾಪಸ್ ಹೋಗಿರುವುದು ಬೆಳಕಿಗೆ ಬಂದಿದೆ. ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿನ ಎಸ್‌ಬಿಐ ಖಾತೆಗೆ ಶಿವಪ್ಪ ಕಾವಲಿ ಅವರ ಖಾತೆಗೆ ಜ. 29 ರಂದು 50 ಸಾವಿರ ರೂ. ಹಾಗೂ ಏ. 17ರಂದು 44,926 ರೂ. ಜಮಾ ಮಾಡಲಾಗಿದೆ. ಮೇ 23ರಂದು ಬ್ಯಾಂಕಿಗೆ ಹೋಗಿ ಖಾತೆ ಪರಿಶೀಲನೆ ನಡೆಸಿದ ವೇಳೆ ಹಣ ವಾಪಸ್ ಹೋಗಿದೆ.

Vijaya Karnataka Web 11 Jun 2019, 11:44 am
Vijaya Karnataka Web farmers
ಯಾದಗಿರಿ: ಚುನಾವಣೆ ಸಂದರ್ಭದಲ್ಲಿ ಸಾಲ ಮನ್ನಾ ಕುರಿತು ರಾಜ್ಯದ ರೈತರಿಗೆ ಕೇಂದ್ರದಿಂದ ಯಾವುದೇ ಹಣ ಬಂದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಟೀಕಿಸಿದ್ದರೆ, ರಾಜ್ಯದ ಕುಮಾರಸ್ವಾಮಿ ಸರಕಾರ ಏನೂ ಮಾಡಿಲ್ಲ, ಪಟ್ಟಿಯನ್ನೂ ಕಳುಹಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದರು. ಅದಕ್ಕೂ ಮುನ್ನವೇ, ನರೇಂದ್ರ ಮೋದಿ ಸುಳ್ಳು ಹೇಳುತ್ತಿದ್ದಾರೆ, 4 ಲಕ್ಷ ಕುಟುಂಬಗಳಿಗೆ ಹಣ ತಲುಪಿಸಲಾಗಿದೆ ಎಂದು ಕುಮಾರಸ್ವಾಮಿ ಅಂದು ಹೇಳಿದ್ದರು.

ಚುನಾವಣೆಗೆ ಮುನ್ನ ಸಾಕಷ್ಟು ಸದ್ದು ಮಾಡಿದ್ದ ಈ ವಿಷಯದ ಹುಳುಕು, ಫಲಿತಾಂಶ ಘೋಷಣೆಯಾದ ಬಳಿಕ ನಿಧಾನವಾಗಿ ಹೊರಬರತೊಡಗಿದೆ.ರೈತರ ಖಾತೆಗೆ ಜಮೆಯಾದ ಸಾಲ ಮನ್ನಾದ ಹಣವು ಸದ್ದಿಲ್ಲದೇ ಸರಕಾರಕ್ಕೆ ವಾಪಸ್ ಹೋಗಿರುವುದು ರಾಜ್ಯದ ರೈತರನ್ನು ದಂಗಾಗಿಸಿದೆ.

ಸಾಲ ಮನ್ನಾ ಯೋಜನೆಯಡಿ ಸರಕಾರದಿಂದ ಬಂದ ಹಣ ವಾಪಸ್ ಹೋಗಿರುವುದು ಬೆಳಕಿಗೆ ಬಂದಿದೆ. ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿನ ಎಸ್‌ಬಿಐ ಖಾತೆಗೆ ಶಿವಪ್ಪ ಕಾವಲಿ ಅವರ ಖಾತೆಗೆ ಜ. 29 ರಂದು 50 ಸಾವಿರ ರೂ. ಹಾಗೂ ಏ. 17ರಂದು 44,926 ರೂ. ಜಮಾ ಮಾಡಲಾಗಿದೆ. ಮೇ 23ರಂದು ಬ್ಯಾಂಕಿಗೆ ಹೋಗಿ ಖಾತೆ ಪರಿಶೀಲನೆ ನಡೆಸಿದ ವೇಳೆ ಹಣ ವಾಪಸ್ ಹೋಗಿದೆ. ಈ ಗ್ರಾಮದಲ್ಲಿರುವ ಶಾಖೆಯಲ್ಲಿ ಸುಮಾರು 200ಕ್ಕೂ ಅಧಿಕ ರೈತರಿಗೆ ಹೀಗೆ ಆಗಿದೆ ಎಂದು ತಿಳಿದು ಬಂದಿದೆ.

ಸಾಲ ಮನ್ನಾ ಹಣ ಜಮಾವಣೆ ಆದ ಮೇಲೆ ಖುಷಿಯಲ್ಲಿ ಇದ್ದ ರೈತರು ಇದು ವಾಪಸ್ ಹೋಗಿರುವುದು ಕೇಳಿ ಇದೀಗ ದಂಗಾಗಿದ್ದಾರೆ. ಹಣ ವಾಪಸ್ ಹೋಗಿರುವ ಕುರಿತಂತೆ ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದ ರೈತರಿಗೆ ಸಮರ್ಪಕವಾಗಿ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಇದರಿಂದಾಗಿ ಅನ್ನದಾತರು ಆತಂಕಕ್ಕೀಡಾಗಿದ್ದಾರೆ.

ಶಹಾಪುರ, ಸಗರ, ಗೋಗಿ ಸೇರಿದಂತೆ ಇನ್ನಿತರ ಕಡೆಗೆ ಬ್ಯಾಂಕ್ ಗಳಲ್ಲಿ ರೈತರ ಖಾತೆಗೆ ಹೋಗಿದ್ದ ಸಾಲ ಮನ್ನಾ ಹಣ ವಾಪಸ್ ಹೋಗಿದೆ. ಎಷ್ಟು ಹೋಗಿದೆ ಎಂಬುದು ಅಧಿಕಾರಿಗಳು ನಿಖರವಾಗಿ ಮಾಹಿತಿ ನೀಡಲು ನಿರಾಕರಣೆ ಮಾಡಿದ್ದಾರೆ.

ಸಾಲ ಮನ್ನಾ ಘೋಷಣೆ ವೇಳೆ ಕೆಲ ಬ್ಯಾಂಕ್ ಗಳು ತಪ್ಪಾಗಿ ಫಲಾನುಭಿಗಳನ್ನು ಪಟ್ಟಿ ಮಾಡಿ ಕಳುಹಿಸಿದ ಪರಿಣಾಮ ಗೊಂದಲವಾಗಿದೆ ಎಂಬುದು ಲೀಡ್ ಬ್ಯಾಂಕ್ ಅಧಿಕಾರಿ ಹೇಳುತ್ತಾರೆ. ಆದರೆ ರೈತರು ಹೇಳುತ್ತಾರೆ ಸುಮಾರು 20 ಕೋಟಿ ರೂ. ಗಿಂತಲೂ ಹೆಚ್ಚು ವಾಪಸ್ ಹೋಗಿದೆ ಎನ್ನುತ್ತಾರೆ. ಎಲ್ಲೂ ತನಿಖೆ ನಡೆಸಿದ ಬಳಿಕವೇ ಗೊತ್ತಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ