ಆ್ಯಪ್ನಗರ

ಯೋಧನ ಪ್ರತಿಮೆ ಮಾಡಿಸುವುದಾಗಿ ಸಾ.ರಾ ಗೋವಿಂದ್‌ ಪೊಳ್ಳು ಭರವಸೆ ?

ಸಿಯಾಚಿನ್ ಹಿಮಪ್ರವಾಹದಲ್ಲಿ ಸಿಲುಕಿ ಹುತಾತ್ಮರಾದ ಜಿಲ್ಲೆಯ ವೀರಯೋಧ ಸಂದೀಪ್‌ ಕುಮಾರ್‌ ಸ್ಮರಣಾರ್ಥ ಪ್ರತಿಮೆ ಮಾಡುತ್ತೇನೆ

Vijaya Karnataka Web 15 Dec 2017, 6:55 pm
ಹಾಸನ: ಸಿಯಾಚಿನ್ ಹಿಮಪ್ರವಾಹದಲ್ಲಿ ಸಿಲುಕಿ ಹುತಾತ್ಮರಾದ ಜಿಲ್ಲೆಯ ವೀರಯೋಧ ಸಂದೀಪ್‌ ಕುಮಾರ್‌ ಸ್ಮರಣಾರ್ಥ ಪ್ರತಿಮೆ ಮಾಡುತ್ತೇನೆ ಎಂದು ಹೇಳಿದ್ದ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಕಾರಾತ್ಮಕ ಉತ್ತರ ನೀಡುತ್ತಿಲ್ಲ ಎಂದು ಯೋಧನ ತಂದೆ ಬೇಸರ ವ್ಯಕ್ತಪಡಿಸಿದ್ದಾರೆ.
Vijaya Karnataka Web karnataka film board president given fake promise
ಯೋಧನ ಪ್ರತಿಮೆ ಮಾಡಿಸುವುದಾಗಿ ಸಾ.ರಾ ಗೋವಿಂದ್‌ ಪೊಳ್ಳು ಭರವಸೆ ?


ತಾಲೂಕಿನ ದೇವಿಹಳ್ಳಿಯ ಸಂದೀಪ್ ಕುಮಾರ್ ಸ್ಮರಣಾರ್ಥ ಪ್ರತಿಮೆ ಮಾಡಿಸಿಕೊಡುವುದಾಗಿ, ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಭರವಸೆ ನೀಡಿದ್ದರು, ಹೀಗಾಗಿ ಮಗನಿಗಾಗಿ ಸಂದೀಪ್‌ ತಂದೆ ಪುಟ್ಟುರಾಜು ಸ್ಮಾರಕ ನಿರ್ಮಿಸಿದ್ದಾರೆ. ಆದರೆ ಇದೀಗ ಪ್ರತಿಮೆ ನಿರ್ಮಾಣ ಮಾಡುವ ವಿಚಾರದಲ್ಲಿ ಸಾ.ರಾ. ಗೋವಿಂದ್‌ ಸಕಾರಾತ್ಮಕವಾಗಿ ಸ್ಮಂದಿಸುತ್ತಿಲ್ಲ.

'ಸಾ.ರಾ ಗೋವಿಂದ್‌ ನೀಡಿದ್ದ ಭರವಸೆ ಹಿನ್ನೆಲೆಯಲ್ಲಿ ಲಕ್ಷಾಂತರ ರೂ.ವೆಚ್ಚಮಾಡಿ ಸ್ಮಾರಕ ನಿರ್ಮಿಸಿದ್ದೇನೆ, ಆದರೆ ಪ್ರತಿಮೆ ಇಲ್ಲದಂತಾಗಿದೆ' ಎಂದು ಮೃತ ಯೋಧನ ತಂದೆ ನೋವು ತೋಡಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ