ಆ್ಯಪ್ನಗರ

ನೆರೆ ಪರಿಹಾರ ಕಾರ‍್ಯ ಸಮರ್ಪಕ

ನೆರೆ ಪರಿಹಾರ ಕಾರ್ಯ ಸಮರ್ಪಕವಾಗಿ ನಡೆಯುತ್ತಿದೆ...

Vijaya Karnataka 28 Sep 2019, 5:00 am
ಬೆಂಗಳೂರು: ನೆರೆ ಪರಿಹಾರ ಕಾರ್ಯ ಸಮರ್ಪಕವಾಗಿ ನಡೆಯುತ್ತಿದೆ. ರಸ್ತೆ ದುರಸ್ತಿ ಸೇರಿ ನಾನಾ ಕಾಮಗಾರಿಗಳಿಗೆ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಸಮರ್ಥಿಸಿಕೊಂಡಿದ್ದಾರೆ.
Vijaya Karnataka Web ashok r


ವಿಧಾನಸೌಧದಲ್ಲಿಭೇಟಿಯಾದ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ,'' ಪ್ರವಾಹ ಸಂತ್ರಸ್ತರ ಕುಟುಂಬಕ್ಕೆ ತಕ್ಷಣದಲ್ಲೇ ತಲಾ 10 ಸಾವಿರ ರೂ. ಬಿಡುಗಡೆ ಮಾಡಲಾಗಿದೆ. ಶಾಶ್ವತ ಪರಿಹಾರ ಹಾಗೂ ಪುನರ್ವಸತಿಗೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ,'' ಎಂದರು.

''ಬೆಳಗಾವಿ 200 ಕೋಟಿ ರೂ., ಬಾಗಲಕೋಟೆ 50 ಕೋಟಿ ರೂ., ಚಿಕ್ಕಮಗಳೂರು 35 ಕೋಟಿ ರೂ., ದಕ್ಷಿಣ ಕನ್ನಡ 30 ಕೋಟಿ ರೂ., ಉತ್ತರ ಕನ್ನಡ 25 ಕೋಟಿ ರೂ., ಗದಗ 10 ಕೋಟಿ ರೂ., ಹಾಸನ 15 ಕೋಟಿ ರೂ., ಕೊಡಗು 10 ಕೋಟಿ ರೂ., ಮೈಸೂರು 35 ಕೋಟಿ ರೂ., ಹಾವೇರಿ 35 ಕೋಟಿ ರೂ., ವಿಜಯಪುರ 40 ಕೋಟಿ ರೂ. ಹಾಗೂ ಉಡುಪಿ ಜಿಲ್ಲೆಗೆ 25 ಕೋಟಿ ರೂ. ನೀಡಲಾಗಿದೆ,'' ಎಂದು ಹೇಳಿದರು.

ವಾರದೊಳಗೆ ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗಲಿದೆ. ಬಳಿಕ ಬೆಳೆ ವಿಮೆ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪೈಸೆಯಲ್ಲ, ರೂಪಾಯಿ!

ನೆರೆ ಪರಿಹಾರಕ್ಕೆ ಸರಕಾರ ನಯಾಪೈಸೆ ನೀಡಿಲ್ಲಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಆರ್‌.ಅಶೋಕ್‌, ''ಸಿದ್ದರಾಮಯ್ಯ ಹೇಳುವುದು ಸರಿ. ಯಾಕೆಂದರೆ ನಾವು ಪೈಸೆ ಬಿಡುಗಡೆ ಮಾಡಿಲ್ಲ. ರೂಪಾಯಿ ಲೆಕ್ಕದಲ್ಲಿನೆರೆ ಪರಿಹಾರ ಒದಗಿಸುತ್ತಿದ್ದೇವೆ,'' ಎಂದು ಟಾಂಗ್‌ ಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ