ಆ್ಯಪ್ನಗರ

ಡಿಜಿಟಲ್‌ ಮಾಧ್ಯಮಗಳ ನಿಯಂತ್ರಣಕ್ಕೆ ಚಿಂತನೆ ನಡೆಸಿರುವ ರಾಜ್ಯ ಸರ್ಕಾರ

'ಲೋಕಸಭಾ ಮಾದರಿ'ಯಲ್ಲಿ ವಿದ್ಯುನ್ಮಾನ ಮಾಧ್ಯಮಗಳಿಗೆ ಮಾಹಿತಿ ಪೂರೈಕೆ ಮಾಡುವ ವಿವಾದಾತ್ಮಕ ನಿರ್ಧಾರಕ್ಕೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದಾಗಿದ್ದು, ಮುಂಬ ರುವ ವಿಧಾನಸಭಾ ಕಲಾಪ ಸಂದರ್ಭದಲ್ಲೇ ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ.

Vijaya Karnataka 6 Oct 2019, 7:55 am
ಬೆಂಗಳೂರು: 'ಲೋಕಸಭಾ ಮಾದರಿ'ಯಲ್ಲಿ ವಿದ್ಯುನ್ಮಾನ ಮಾಧ್ಯಮಗಳಿಗೆ ಮಾಹಿತಿ ಪೂರೈಕೆ ಮಾಡುವ ವಿವಾದಾತ್ಮಕ ನಿರ್ಧಾರಕ್ಕೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದಾಗಿದ್ದು, ಮುಂಬ ರುವ ವಿಧಾನಸಭಾ ಕಲಾಪ ಸಂದರ್ಭದಲ್ಲೇ ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ.
Vijaya Karnataka Web digital media


ರಾಜ್ಯದಲ್ಲಿಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲೇ ಲೋಕ ಸಭಾ ಮಾದರಿ ಜಾರಿಗೆ ಚರ್ಚೆ ನಡೆದಿತ್ತು. ಆದರೆ ಮಾಧ್ಯಮ ಹಾಗೂ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿಅಂದಿನ ಸ್ಪೀಕರ್‌ ಕೆ.ಜಿ.ಬೋಪಯ್ಯ ಪ್ರಸ್ತಾಪ ಕೈ ಬಿಟ್ಟಿದ್ದರು. ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿಮಾಧ್ಯಮ ನಿಯಂತ್ರಣಕ್ಕೆ ಮುಂದಾದ ಮಾಜಿ ಸ್ಪೀಕರ್‌ ಕೋಳಿವಾಡ ಕೂಡಾ ಈ ಬಗ್ಗೆ ಚಿಂತನೆ ನಡೆಸಿದ್ದರೂ ಜಾರಿಯಾಗಿರಲಿಲ್ಲ.

ಈಗ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸ್ಪೀಕರ್‌ ಕಾಗೇರಿ ಈ ಬಗ್ಗೆ ಚಿಂತನೆ ನಡೆಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಆದರೆ ಮೂಲಗಳ ಪ್ರಕಾರ ಇದು ವಿದ್ಯುನ್ಮಾನ ಮಾಧ್ಯಮ ಕ್ಯಾಮೆರಾಗಳಿಗೆ ಮಾತ್ರ ಅನ್ವಯವಾಗಧಿಲಿದ್ದು, ವರದಿಗಾರರು ಹಾಗೂ ಮುದ್ರಣ ಮಾಧ್ಯಮ ಪ್ರತಿನಿಧಿಗಳ ಕಲಾಪ ವೀಕ್ಷಣೆ ಹಾಗೂ ವರದಿಗಾರಿಕೆಗೆ ನಿಯಂತ್ರಣ ಹೇರುವ ಉದ್ದೇಶ ಹೊಂದಿಲ್ಲಎಂದು ತಿಳಿದು ಬಂದಿದೆ.

ಅಧಿವೇಶನದ ಕಾರ್ಯ ಕಲಾಪದ ಬಗ್ಗೆ ವಿವರಣೆ ನೀಡಲು ಬುಧವಾರ ಸ್ಪೀಕರ್‌ ಕಾಗೇರಿ ಬುಧವಾರ ಪತ್ರಿಕಾಗೋಷ್ಠಿ ನಡೆಸಲು ನಿರ್ಧರಿಸಿದ್ದು, ಆ ಸಂದರ್ಭದಲ್ಲಿಲೋಕಸಭಾ ಮಾದರಿಯಲ್ಲಿಕಲಾಪ ನೇರ ಪ್ರಸಾರ ವಿಧಾನದ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಏನಿದು ಮಾದರಿ ರಾಜ್ಯ ವಿಧಾನಸಭೆ ಹಾಗೂ ಪರಿಷತ್‌ ಕಲಾಪವನ್ನು ಸಂಪೂರ್ಣ ನೇರ ಪ್ರಸಾರಕ್ಕೆ ಈಗ ಅವಕಾಶವಿದೆ. ಆದರೆ ಲೋಕಸಭೆ ಸೇರಿದಂತೆ ಕೆಲ ರಾಜ್ಯಗಳಲ್ಲಿಇದಕ್ಕೆ ಅವಕಾಶವಿಲ್ಲ. ಶಾಸಕರು ಆಕಳಿಸಿದ್ದು, ಮೊಬೈಲ್‌ ವೀಕ್ಷಿಸಿದ್ದು, ಗುಟ್ಕಾ ಸೇವಿಸಿದ್ದೆಲ್ಲವೂ ನೇರ ಪ್ರಸಾರಗೊಂಡ ಹಿನ್ನೆಲೆಯಲ್ಲಿಕಲಾಪ ಸಂದರ್ಭದಲ್ಲಿಮಾಧ್ಯಮ ನಿಯಂತ್ರಿಸುವ ಬಗೆ ಹೇಗೆ? ಎಂದು ಹಿಂದಿನಿಂದಲೂ ಚರ್ಚೆ ನಡೆಯುತ್ತಿದೆ.

ಲೋಕಸಭೆಯ ಕಲಾಪಗಳ ನೇರ ಚಿತ್ರೀಕರಣಕ್ಕೆ ಅವಕಾಶವಿಲ್ಲವಾದರೂ ಸಾರ್ವಧಿಜನಿಕ ಹಿತಾಸಕ್ತಿ ದೃಷ್ಟಿಯಿಂದ ದೃಶ್ಯಾವಳಿಗಳು ಮಾಧ್ಯಮಕ್ಕೆ ಲಭಿಸುವಂತೆ ಅವಕಾಶ ಕಲ್ಪಿಸಲಾಗಿದೆ. ಇದೇ ಮಾದರಿ ಅನುಷ್ಠಾನಕ್ಕೆ ಈಗ ಚಿಂತನೆ ನಡೆಸಲಾಗಿದ್ದು, ವಿಧಾನಸಭೆ ಗ್ಯಾಲರಿಗೆ ಕ್ಯಾಮರಾ ಪ್ರವೇಶಕ್ಕೆ ನಿಷೇಧ ಹೇರಲಾಗುತ್ತದೆ ಎಂದು ತಿಳಿದು ಬಂದಿದೆ.

ಇದೇ ಮೊದಲಲ್ಲ ಮಾಧ್ಯಮ ನಿಯಂತ್ರಣಕ್ಕೆ ಸ್ಪೀಕರ್‌ ಕಾರ್ಯಾಲಯ ಪ್ರಯತ್ನ ನಡೆಸಿದ್ದು ಇದೇ ಮೊದಲಲ್ಲ. ಕಾಗೋಡು ತಿಮ್ಮಪ್ಪ ಹೊರತುಪಡಿಸಿ ಕಳೆದ ಹತ್ತು ವರ್ಷದ ಅವಧಿಯಲ್ಲಿಸ್ಪೀಕರ್‌ ಸ್ಥಾನ ಅಲಂಕರಿಸಿಧಿದವರೆಲ್ಲರೂ ಈ ಬಗ್ಗೆ ಪ್ರಯತ್ನ ನಡೆಸಿದ್ದಾರೆ. ವರದಿಗಾ ರರನ್ನು ಗ್ಯಾಲರಿಗೆ ಮಾತ್ರ ಸೀಮಿತಗೊಳಿಸಲು ವಿಧಾನಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಈ ಹಿಂದೆ ಯತ್ನಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ