ಆ್ಯಪ್ನಗರ

ಅಂಚೆ ಕಚೇರಿ ಗ್ರಾಹಕ ಸೇವೆ: ದೇಶಕ್ಕೇ ಎರಡನೇ ಸ್ಥಾನ ಪಡೆದ ಕರ್ನಾಟಕ

ಕರ್ನಾಟಕದ ಪೋಸ್ಟ್‌ ಆಫೀಸ್‌ಗಳಲ್ಲಿ ವಹಿವಾಟು ಗಣನೀಯವಾಗಿ ಏರಿಕೆಯಾಗಿದೆ. ಈ ಮೂಲಕ ವಹಿವಾಟು ಮತ್ತು ಆದಾಯ ಸಂಗ್ರಹಣೆಯಲ್ಲಿ ಕರ್ನಾಟಕವು ದೇಶದಲ್ಲೇ 2ನೇ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.

Vijaya Karnataka Web 27 Feb 2021, 4:30 pm
ಬೆಂಗಳೂರು: ಅಂಚೆ ಕಚೇರಿಗಳಲ್ಲಿ ಗ್ರಾಹಕ ಸೇವೆಗಳನ್ನು ಪ್ರಾರಂಭಿಸಿದ ಎರಡೇ ತಿಂಗಳಲ್ಲಿ ಕರ್ನಾಟಕದ ಪೋಸ್ಟ್‌ ಆಫೀಸ್‌ಗಳಲ್ಲಿ ವಹಿವಾಟು ಗಣನೀಯವಾಗಿ ಏರಿಕೆಯಾಗಿದೆ. ಈ ಮೂಲಕ ವಹಿವಾಟು ಮತ್ತು ಆದಾಯ ಸಂಗ್ರಹಣೆಯಲ್ಲಿ ಕರ್ನಾಟಕವು ದೇಶದಲ್ಲೇ 2ನೇ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.
Vijaya Karnataka Web india post


ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವಿಶೇಷ ಉದ್ದೇಶದ ಸಾಮಾನ್ಯ ಸೇವಾ ಕೇಂದ್ರದೊಂದಿಗಿನ ಒಪ್ಪಂದದ ಆಧಾರದ ಮೇಲೆ ಅಂಚೆ ಕಚೇರಿಗಳಲ್ಲಿ ನಾಗರಿಕ ಸೇವಾ ಕೇಂದ್ರ(ಸಿಎಸ್‌ಸಿ) ಸ್ಥಾಪಿಸಲಾಗಿತ್ತು. ಕಳೆದ ವರ್ಷ ಡಿಸೆಂಬರ್ 15 ರಿಂದ ರಾಜ್ಯದಲ್ಲಿ ಒಟ್ಟು 1,701 ಅಂಚೆ ಕಚೇರಿಗಳ ಪೈಕಿ 851 ಕಚೇರಿಗಳಲ್ಲಿ ಗ್ರಾಹಕ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ.

ಭಾಗ್ಯಲಕ್ಷ್ಮಿ ಯೋಜನೆ ಅಂಚೆ ಕಚೇರಿಗೆ ಶಿಫ್ಟ್‌; ಹೆಸರು ಬದಲಾವಣೆ ಜತೆಗೆ ಹೊಸ ಸೌಲಭ್ಯ

ಈ ಸಿಎಸ್‌ಸಿಗಳ ಮೂಲಕ ನಾಗರಿಕರು ವ್ಯಾಪಾರಿಯಿಂದ ಗ್ರಾಹಕ ಸೇವೆ (ಬಿ 2 ಸಿ) ಮತ್ತು ಸರ್ಕಾರದಿಂದ ನಾಗರಿಕ ಸೇವೆಗಳನ್ನು (ಜಿ 2 ಸಿ) ಪಡೆಯಬಹುದು. ಬಿ 2 ಸಿ ಸೇವೆಗಳಲ್ಲಿ ಮೊಬೈಲ್ ರೀಚಾರ್ಜ್, ನೀರು, ಅನಿಲ ಮತ್ತು ವಿದ್ಯುತ್ ಬಿಲ್‌ಗಳ ಪಾವತಿ, ವಿಮಾ ನವೀಕರಣ, ಇಎಂಐ ಪಾವತಿ, ವಿಮಾನ, ರೈಲು ಮತ್ತು ಬಸ್ ಇತ್ಯಾದಿ ಸೇರಿವೆ. ಜಿ2ಸಿ ಸೇವೆಯಲ್ಲಿ ಪ್ಯಾನ್ ಕಾರ್ಡ್, ಇ-ಸ್ಟ್ಯಾಂಪಿಂಗ್ ಸೇವೆಗಳು ಮತ್ತು ಜೀವನ್ ಪ್ರಮಾಣ್ ಪತ್ರ (ಡಿಜಿಟಲ್ ಲೈಫ್ ಸರ್ಟಿಫಿಕೇಟ್), ಇತ್ಯಾದಿ ಸೇವೆ ಸಿಗುತ್ತವೆ.

ಗಮನಿಸಿ: ಇನ್ಮುಂದೆ ಅಂಚೆ ಕಚೇರಿಯಲ್ಲಿ ವಿದ್ಯುತ್‌ ಬಿಲ್‌ ಪಾವತಿ ಮಾಡಬಹುದು!

ಕರ್ನಾಟಕ ಸರ್ಕಲ್‌ನ ಬಿಸಿನೆಸ್ ಡೆವಲಪ್‌ಮೆಂಟ್‌ನ ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ (ಎಪಿಎಂಜಿ) ವಿ ತಾರಾ, 'ನಾವು ಸಿಎಸ್‌ಸಿಗಳ ಮೂಲಕ ಇಲ್ಲಿಯವರೆಗೆ ಸುಮಾರು 20,000 ವಹಿವಾಟುಗಳನ್ನು ನಡೆಸಿದ್ದೇವೆ. ನಮ್ಮ ಆದಾಯ ಸಂಗ್ರಹವು ಇಲ್ಲಿಯವರೆಗೆ 61,36,986 ರೂ.ಆಗಿದೆ. ನಾವು ಎರಡನೇ ಸ್ಥಾನದಲ್ಲಿದ್ದೇವೆ. ದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿನ ನಾಗರಿಕರಿಗೆ ಜಿ 2 ಸಿ ಮತ್ತು ಬಿ 2 ಸಿ ಸೇವೆಗಳನ್ನು ಒದಗಿಸುವ ಮೂಲಕ, ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ಡಿಜಿಟಲ್‌ನಲ್ಲಿ ಎಲ್ಲರನ್ನೂ ಒಳಗೊಂಡ ಸಮಾಜವನ್ನು ರಚಿಸಲಾಗುತ್ತಿದೆ' ಎಂದು ಹೇಳಿದರು.

ಅಂಚೆ ಕಚೇರಿ ಇಂಟರ್ನೆಟ್‌ ಬ್ಯಾಂಕಿಂಗ್ ಆಕ್ಟಿವೇಶನ್ ಹೇಗೆ? ಇಲ್ಲಿದೆ ಮಾಹಿತಿ!

ಮಾರ್ಚ್ 2021 ರ ವೇಳೆಗೆ ರಾಜ್ಯದ ಉಳಿದ 850 ಅಂಚೆ ಕಚೇರಿಗಳು ಈ ಸೇವೆಗಳನ್ನು ನೀಡಲಿವೆ ಎಂದು ಬೆಂಗಳೂರಿನ ಅಂಚೆ ಸೇವೆಗಳ ನಿರ್ದೇಶಕ ಕೆ. ರವೀಂದ್ರನ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ