ಆ್ಯಪ್ನಗರ

ಅನ್‌ಲಾಕ್‌ 1.0: ಸೀಮಿತ ರೀತಿಯಲ್ಲಿ ಕೋರ್ಟ್‌ ಕಲಾಪ ಆರಂಭ

ಛತ್ತೀಸಗಢ, ದೆಹಲಿ ಹೈಕೋರ್ಟ್ ಗಳು ಕಲಾಪ ಆರಂಭ ಮಾಡಿತ್ತು, ಆದ್ರೆ ಈಗ ಅಲ್ಲಿಯೂ ಕಲಾಪಗಳನ್ನು ಸ್ಥಗಿತಗೊಳಿಸಲಾಗಿದೆ, ಅನವಶ್ಯಕವಾಗಿ ಇಲ್ಲಿ ಗುಂಪು ಸೇರಬಾರದು ಎಂದು ಮುಖ್ಯ ನ್ಯಾಯಮೂರ್ತಿ ಖಡಕ್ಕಾಗಿ ಎಚ್ಚರಿಸಿದರು.

Vijaya Karnataka Web 1 Jun 2020, 2:14 pm
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕೊರೊನಾದಿಂದಾಗಿ ಲಾಕ್‌ಡೌನ್‌ ಆಗಿದ್ದ ಬೆಂಗಳೂರಿನ ಹೈಕೋರ್ಟ್ ಪ್ರಧಾನಪೀಠದಲ್ಲಿ ಸೀಮಿತ ರೀತಿಯಲ್ಲಿ ನ್ಯಾಯಪೀಠಗಳ ಕಾರ್ಯಕಲಾಪ ಆರಂಭವಾಗಿದೆ.
Vijaya Karnataka Web ಹೈಕೋರ್ಟ್‌
ಹೈಕೋರ್ಟ್‌


ಎಲ್ಲ ಅಗತ್ಯ ರೀತಿಯಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಸ್ವತಃ ಮುಖ್ಯ ನ್ಯಾಯಮೂರ್ತಿಗಳೇ ನಿಯಮ ಪಾಲನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಹೆಚ್ಚಿನ ಸಂಖ್ಯೆಯ ವಕೀಲರು ಹಾಗೂ ಕಕ್ಷಿದಾರರ ಗುಂಪು ಕಂಡು ಆಕ್ರೋಶ ವ್ಯಕ್ತಪಡಿಸಿದರು ಅಲ್ಲದೇ, ಕಲಾಪ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹೈಕೋರ್ಟ್ ಕೋರ್ಟ್ ಕಲಾಪ ಆರಂಭಗೊಂಡ ಬೆನ್ನಲ್ಲೇ ಹೆಚ್ಚು ವಕೀಲರು ಹೈಕೋರ್ಟ್ ಆವರಣ ಪ್ರವೇಶಿಸಿದ್ದಕ್ಕೆ ಮುಖ್ಯ ನ್ಯಾಯಮೂರ್ತಿ
ಅಸಮಾಧಾನ ವ್ಯಕ್ತಪಡಿಸಿದರು.

ವಕೀಲರು ಸಾಮಾಜಿಕ ಅಂತರ ಕಾಯ್ದುಗೊಳ್ಳದೇ ಹೈಕೋರ್ಟ್ ಪ್ರವೇಶದ್ವಾರಕ್ಕೆ ಆಗಮಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ವಕೀಲರ ಬೆಂಬಲ ನೀಡದ ಹೋದರೆ ಹೇಗೆ ಕಲಾಪ ನಡೆಸುವುದು ಎಂದು ಪ್ರಶ್ನಿಸಿದರು.

ಕೊರೊನಾ ಸೋಂಕು ಭಾನುವಾರ ಒಂದೇ ದಿನ 300ಕ್ಕೆ ಏರಿಕೆಯಾಗಿದೆ, ನಮ್ಮ ಜೀವವನ್ನು ಪಣಕ್ಕಿಟ್ಟು ನ್ಯಾಯಮೂರ್ತಿಗಳು ಕಲಾಪ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಕೀಲರು ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು, ದೇಶದಲ್ಲಿ ಎಲ್ಲಿಯೂ ಹೈಕೋರ್ಟ್ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ ಎಂದರು.

ಛತ್ತೀಸಗಢ, ದೆಹಲಿ ಹೈಕೋರ್ಟ್ ಗಳು ಕಲಾಪ ಆರಂಭ ಮಾಡಿತ್ತು, ಆದ್ರೆ ಈಗ ಅಲ್ಲಿಯೂ ಕಲಾಪಗಳನ್ನು ಸ್ಥಗಿತಗೊಳಿಸಲಾಗಿದೆ, ಅನವಶ್ಯಕವಾಗಿ ಇಲ್ಲಿ ಗುಂಪು ಸೇರಬಾರದು ಎಂದು ಮುಖ್ಯ ನ್ಯಾಯಮೂರ್ತಿ ಖಡಕ್ಕಾಗಿ ಎಚ್ಚರಿಸಿದರು.

ಯಾರಿಗೆ ಅನುಮತಿ ನೀಡಲಾಗಿದೆ ಅವರಿಗೆ ಮಾತ್ರ ಪ್ರವೇಶಕ್ಕೆ ನೀಡಲು ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ