ಆ್ಯಪ್ನಗರ

ಪರಂ, ಜಾಲಪ್ಪಗೆ ಐಟಿ ಶಾಕ್: ದಾಳಿ ವೇಳೆ ಸಿಕ್ತು ಕಂತೆ ಕಂತೆ ನೋಟು!

ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಅವರ ನಿವಾಸ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಿದ್ದು ಒಟ್ಟು 4.50 ಕೋಟಿ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಜೊತೆಗೆ ಮಹತ್ವದ ದಾಖಲೆಗಳನ್ನು ಐಟಿ ವಶಕ್ಕೆ ಪಡೆದುಕೊಂಡಿದೆ.

Vijaya Karnataka Web 10 Oct 2019, 11:46 pm
ಬೆಂಗಳೂರು: ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಅವರ ನಿವಾಸ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿದ್ದು ತಪಾಸಣೆಯ ವೇಳೆ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ದಾಳಿ ವೇಳೆ ಒಟ್ಟು 4.50 ಕೋಟಿ ರೂಪಾಯಿ ಪತ್ತೆಯಾಗಿದ್ದು, ಜಿ ಪರಮೇಶ್ವರ್ ನಿವಾಸದಲ್ಲಿ 70 ಲಕ್ಷ, ನೆಲಮಂಗಲದಲ್ಲಿರುವ ಪುರಸಭೆ ಸದಸ್ಯ ಶಿವಕುಮಾರ್ ಮನೆಯಲ್ಲಿ 1.80 ಕೋಟಿ ನಗದನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
Vijaya Karnataka Web dr-g-parameswara


ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಸಂಸ್ಥೆಯ ಹಣಕಾಸು ವ್ಯವಹಾರಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಗರದ ಕುಣಿಗಲ್‌ ರಸ್ತೆಯಲ್ಲಿರುವ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ, ಪದವಿ ಕಾಲೇಜು ಹಾಗೂ ಹೆಗ್ಗೆರೆಯಲ್ಲಿನ ಸಿದ್ಧಾರ್ಥ ಮೆಡಿ ಕಲ್‌ ಕಾಲೇಜಿನ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಮಹತ್ವದ ದಾಖಲೆಪತ್ರಗಳನ್ನು ಪರಿಶೀಲಿಸಿದ್ದಾರೆ.

ಪರಮೇಶ್ವರ್‌, ಜಾಲಪ್ಪಗೆ ಐಟಿ ಶಾಕ್‌: ದಿನದ ಪ್ರಮುಖ 10 ಬೆಳವಣಿಗೆಗಳು

ವಿದ್ಯಾರ್ಥಿಗಳ ದಾಖಲಾತಿ, ಶುಲ್ಕ ಸಂಗ್ರಹ ಸೇರಿದಂತೆ ಹಲವು ವಿಷಯಗಳ ಕುರಿತು ದಾಖಲೆಗಳನ್ನು ಪರಿಶೀಲಿಸಿ, ವಿವರಣೆ ಪಡೆದು ಕೊಂಡಿದ್ದಾರೆ. ಬೆಳಗ್ಗೆ 7 ಗಂಟೆ ಸಮಯದಲ್ಲಿಮೂರು ಕಾರಿನಲ್ಲಿ ಮೂರು ತಂಡಗಳಲ್ಲಿಆಗಮಿಸಿದ 7 ಮಂದಿ ಅಧಿಕಾರಿಗಳು, ಆಡಳಿತ ಕಚೇರಿಯನ್ನು ಹೊಕ್ಕು ಸಂಜೆವರೆಗೂ ತಪಾಸಣೆ ನಡೆಸಿದ್ದಾರೆ.

ತಮ್ಮ ಮತಕ್ಷೇತ್ರ ಕೊರಟಗೆರೆಯಲ್ಲಿ ಪ್ರವಾಸದಲ್ಲಿದ್ದ ಪರಮೇಶ್ವರ್‌ಗೆ ಮಾರ್ಗ ಮಧ್ಯೆ ಐಟಿ ದಾಳಿಯ ಮಾಹಿತಿ ಲಭಿಸಿದೆ. ಜಂಪೇನಹಳ್ಳಿ ಕೆರೆಗೆ ಬಾಗಿನ ಅರ್ಪಿಸಲು ತೆರಳಿದ್ದ ಪರಮೇಶ್ವರ್‌ ಐಟಿ ದಾಳಿಯ ಮಾಹಿತಿ ಪಡೆದು ಪಟ್ಟಣದಲ್ಲಿನ ಪ್ರವಾಸಿ ಮಂದಿರಕ್ಕೆ ಮರಳಿದ್ದರು. ಪರಮೇಶ್ವರ್‌ ಬೆನ್ನ ಹಿಂದೆಯೇ ಪ್ರವಾಸಿ ಮಂದಿರ ಪ್ರವೇಶಿಸಿದ ಐಟಿ ಅಧಿಕಾರಿಗಳು, ದಾಳಿಯ ವಿವರ ನೀಡಿ ಅಲ್ಲಿಯೇ 20 ನಿಮಿಷಗಳ ಕಾಲ ವಿಚಾರಣೆ ನಡೆಸಿದ್ದಾರೆ.

ರಾತ್ರಿಯವರೆಗೂ ಐಟಿ ಅಧಿಕಾರಿಗಳು ತಪಾಸಣೆ ನಡೆಸಿದ್ದು ಹಲವಾರು ದಾಖಲೆಗಳನ್ನೂ ವಶಪಡಿಸಿಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆಯಿಂದ ಮತ್ತೆ ದಾಖಲೆ ಪರಿಶೀಲನೆ ಕಾರ್ಯ ಮುಂದುವರಿಯುವ ಸಾಧ್ಯತೆ ಇದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಬಳಿಕ ಎರಡು ಪ್ರತ್ಯೇಕ ಕಾರಿನಲ್ಲಿಐಟಿ ಅಧಿಕಾರಿಗಳು ಹಾಗೂ ಪರಮೇಶ್ವರ್‌ ಕೊರಟಗೆರೆಯಿಂದ ಬೆಂಗಳೂರು ಕಡೆಗೆ ಪ್ರಯಾಣಿಸಿದ್ದಾರೆ. ದಾಳಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಾ.ಪರಮೇ ಶ್ವರ್‌, ಅಧಿಕಾರಿಗಳು ದಾಳಿ ನಡೆಸಲಿ. ನಮ್ಮ ಅಭ್ಯಂತರವಿಲ್ಲ. ನಾವು ಏನಾದರೂ ತಪ್ಪು ಮಾಡಿದ್ದರೆ ಮಾತ್ರ ಯೋಚಿಸಬೇಕಿತ್ತು. ನಮ್ಮಿಂದ ಯಾವುದೇ ತಪ್ಪು, ಅವ್ಯವಹಾರಗಳಾಗಿಲ್ಲ' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ