ಆ್ಯಪ್ನಗರ

ರೈತರಿಗೆ ಗುಡ್‌ನ್ಯೂಸ್‌: ಕರ್ನಾಟಕ ಭೂಕಬಳಿಕೆ ನಿಷೇಧ (ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

ಸರ್ಕಾರಿ ಭೂಮಿಯನ್ನು ಕೃಷಿಗಾಗಿ ಬಳಕೆ ಮಾಡಿದ ರೈತರಿಗೆ ಭೂಕಬಳಿಕೆ ಅಧಿನಿಯಮದ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯುವ ಉದ್ದೇಶ ಹೊಂದಿರುವ ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ) ವಿಧೇಯಕಯನ್ನು ಕೆಲವು ತಿದ್ದುಪಡಿಯೊಂದಿಗೆ ಅಂಗೀಕಾರ ಪಡೆಯಲಾಯಿತು. ಗುರುವಾರ ವಿಧೇಯಕವನ್ನು ಕಂದಾಯ ಸಚಿವ ಆರ್ ಅಶೋಕ್ ಮಂಡಿಸಿ ಅಂಗೀಕಾರ ಪಡೆದುಕೊಂಡರು.

Authored byಇರ್ಷಾದ್ ಉಪ್ಪಿನಂಗಡಿ | Edited byAvinash Kadeshivalaya | Vijaya Karnataka Web 22 Sep 2022, 7:27 pm

ಹೈಲೈಟ್ಸ್‌:

  • ಸರ್ಕಾರಿ ಭೂಮಿ ಬಳಸಿರುವ ರೈತರಿಗೆ ಗುಡ್‌ನ್ಯೂಸ್‌
  • ಭೂಕಬಳಿಕೆ ನಿಷೇಧ ವಿಧೇಯಕ ಅಂಗೀಕಾರ
  • ಕೆಲವು ತಿದ್ದುಪಡಿಗಳೊಂದಿಗೆ ಅಂಗೀಕಾರಗೊಂಡ ವಿಧೇಯಕ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web karnataka land grabbing prohibition amendment bill passed in karnataka assembly session
ಬೆಂಗಳೂರು: ಸರ್ಕಾರಿ ಭೂಮಿಯನ್ನು ಕೃಷಿಗಾಗಿ ಬಳಕೆ ಮಾಡಿದ ರೈತರಿಗೆ ಭೂಕಬಳಿಕೆ ಅಧಿನಿಯಮದ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯುವ ಉದ್ದೇಶ ಹೊಂದಿರುವ ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ) ವಿಧೇಯಕಯನ್ನು ಕೆಲವು ತಿದ್ದುಪಡಿಯೊಂದಿಗೆ ಅಂಗೀಕಾರ ಪಡೆಯಲಾಯಿತು.
ಗುರುವಾರ ವಿಧೇಯಕವನ್ನು ಕಂದಾಯ ಸಚಿವ ಆರ್ ಅಶೋಕ್ ಮಂಡಿಸಿ ಅಂಗೀಕಾರ ಪಡೆದುಕೊಂಡರು. ಬುಧವಾರ ವಿಧೇಯಕವನ್ನು ಮಂಡಿಸಲಾಗಿತ್ತು, ಆದರೆ ವಿಧೇಯಕಕ್ಕೆ ವಿರೋಧ ವ್ಯಕ್ತವಾಗಿತ್ತು. ಜೆಡಿಎಸ್ ಸದಸ್ಯ ಎಟಿ ರಾಮಸ್ವಾಮಿ, ಆಡಳಿತ ಪಕ್ಷದ ಶಾಸಕ ಗೂಳಿಹಟ್ಟಿ ಶೇಖರ್ ವಿರೋಧ ವ್ಯಕ್ತಪಡಿಸಿದ್ದರು.
Anti Conversion Bill: ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್-ಜೆಡಿಎಸ್ ವಿರೋಧದ ನಡುವೆ ಮತಾಂತರ ನಿಷೇಧ ವಿಧೇಯಕ ಅಂಗೀಕಾರ
ಎಟಿ ರಾಮಸ್ವಾಮಿ ವಿರೋಧ ವ್ಯಕ್ತಪಡಿಸಿ, ಸರ್ಕಾರಿ ಭೂಮಿಯನ್ನು ಕೃಷಿಗಾಗಿ ಬಳಕೆ ಮಾಡಿದ ರೈತರಿಗೆ ಕಿರುಕುಳ ಆಗುತ್ತಿತ್ತು. ರೈತರಿಗೆ ಅನುಕೂಲ ಮಾಡಲು ತಿದ್ದುಪಡಿ ತರಲಾಗಿದೆ ಎಂದು ಹೇಳುತ್ತೀರಿ. ಆದರೆ ಈ ವಿಧೇಯಕದ ಅಗತ್ಯ ಇರಲಿಲ್ಲ ಎಂದಿದ್ದರು. ಅಂತಹ ರೈತರ ವಿರುದ್ಧ ಭೂಕಂದಾಯ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿದ್ದು‌ ಕಂದಾಯ, ಅರಣ್ಯ ಇಲಾಖೆ.‌ ಇದನ್ನು ತಡೆಯಬಹುದಿತ್ತಲ್ವಾ? ಸರ್ಕಾರದ ಇಲಾಖೆಗಳೇ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದೆ ಎಂದು ಹೇಳಿದ್ದರು.

ಪ್ರಭಾವಿಗಳು ಸುಳ್ಳು ದಾಖಲೆ ಸೃಷ್ಟಿ ಮಾಡಿ ಭೂಕಬಳಿಕೆ ಮಾಡುತ್ತಿದ್ದಾರೆ ಅವರು ಭೂಕಬಳಿಕೆದಾದರು, ರೈತರು ಒತ್ತುವರಿದಾರರು. ‌ಒತ್ತುವರಿದಾರರ ವಿವಾದ ಕೊನೆಗೊಳಿಸುವ ಹೆಸರಿನಲ್ಲಿ ರೈತರನ್ನು ಭೂಕಬಳಿಕೆದಾರರನ್ನಾಗಿ ಮಾಡಲಾಗಿದೆ.‌ಈ ತಿದ್ದುಪಡಿಯಿಂದ ರೈತರಿಗೆ ರಕ್ಷಣೆ ನೀಡುವ ಹೆಸರಿನಲ್ಲಿ ಭೂಗಳ್ಳರಿಗೆ ಅನುಕೂಲ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು.
Karnataka Assembly: ವಿಶ್ವವಿದ್ಯಾಲಯಗಳ ಶಿಕ್ಷಣ ಗುಣಮಟ್ಟದ ಬಗ್ಗೆ ಸ್ಪೀಕರ್ ಕಾಗೇರಿ ಬೇಸರ
ಐಎಎಸ್ ಐಪಿಎಸ್ ಅಧಿಕಾರಿಗಳು ಹೊರ ರಾಜ್ಯದಿಂದ ಬಂದವರು ಬೆಂಗಳೂರು ಬಿಟ್ಟು ಹೋಗುದಿಲ್ಲ. ಹೊರ ರಾಜ್ಯದಲ್ಲಿ ಇದ್ದವರೂ ಕೂಡಾ ಬೆಂಗಳೂರಿನಲ್ಲಿ ನೆಲೆಸುತ್ತಿದ್ದಾರೆ. ಆದರೆ ಏಕೆ ಬರುತ್ತಿದ್ದಾರೆ ಎಂದರೆ ಇಲ್ಲಿ ಆಸ್ತಿ ವ್ಯವಹಾರಕ್ಕೆ‌ ಲಂಗು ಲಗಾಮು ಇಲ್ಲ.‌ ಬೇರೆ ರಾಜ್ಯಗಳಲ್ಲಿ ಹಿಡಿತ ಇದೆ ಮಹಾರಾಷ್ಟ್ರ, ತಮಿಳುನಾಡಿನ ಆಂದ್ರ ಪ್ರದೇಶದವರು ಬೆಂಗಳೂರಿಗೆ ಬರುತ್ತಿದ್ದಾರೆ.‌‌ ಬೆಂಗಳೂರು ಭೂಗಳ್ಳರ ಸ್ವರ್ಗ ಮಾಡಲು ಅವಕಾಶ ಕೊಡಬೇಡಿ ಎಂದಿದ್ದರು.

ಗೂಳಿ ಹಟ್ಟಿ ಶೇಖರ್ ಮಾತನಾಡಿ, ರೈತರ ಹಿತದೃಷ್ಟಿಯಿಂದ ವಿಧೇಯಕ ಸ್ವಾಗತ. ಆದರೆ ಕೆಲವೊಂದು ಆತಂಕ ಇದೆ. ಸರ್ಕಾರಿ ಜಾಗಗಳನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲಾಗುತ್ತಿದೆ. ವಿಧೇಯಕದಲ್ಲಿ ಇದಕ್ಕೆ ಪರಿಹಾರ ಏನಿದೆ ಎಂದು ಸ್ಪಷ್ಟನೆ ನೀಡಬೇಕು. ಈ ವಿಧೇಯಕದಿಂದ ಭೂಗಳ್ಳರಿಗೆ ಅನುಕೂಲ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿ ಕೆಲವೊಂದು ತಿದ್ದುಪಡಿಯೊಂದಿಗೆ ವಿಧೇಯಕವನ್ನು ಮತ್ತೆ ಮಂಡಿಸಿ ಅಂಗೀಕಾರ ಪಡೆಯಲಾಯಿತು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ