ಆ್ಯಪ್ನಗರ

ಪ್ರತಿಪಕ್ಷ ಸಚೇತಕ ಹುದ್ದೆಗೆ ಕಾಂಗ್ರೆಸ್‌ನಲ್ಲಿ ಸಿಕ್ಕಾಪಟ್ಟೆ ಪೈಪೋಟಿ

ಪ್ರತಿಪಕ್ಷ ನಾಯಕ ಹುದ್ದೆಗಳ ಗೊಂದಲ ಬಗೆಹರಿದ ಬೆನ್ನಲ್ಲೆ ಕಾಂಗ್ರೆಸ್‌ನಲ್ಲಿ ವಿಧಾನಸಭೆ ಮತ್ತು ಮೇಲ್ಮನೆ ಪ್ರತಿಪಕ್ಷ ಸಚೇತಕ ಹುದ್ದೆಗಳಿಗೆ ಪೈಪೋಟಿ ಶುರುವಾಗಿದೆ. ಸಿದ್ದರಾಮಯ್ಯ ಆಪ್ತರು ಈ ಹುದ್ದೆಗಳಿಗೆ ಲಾಬಿ ನಡೆಸುತ್ತಿದ್ದಾರೆ.

Vijaya Karnataka 16 Oct 2019, 8:42 pm
ಬೆಂಗಳೂರು: ಪ್ರತಿಪಕ್ಷ ನಾಯಕ ಹುದ್ದೆಗಳ ಗೊಂದಲ ಬಗೆಹರಿದ ಬೆನ್ನಲ್ಲೆ ಕಾಂಗ್ರೆಸ್‌ನಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ ಪ್ರತಿಪಕ್ಷ ಸಚೇತಕ ಹುದ್ದೆಗಳಿಗೆ ಪೈಪೋಟಿ ಶುರುವಾಗಿದೆ. ಹುದ್ದೆಗಾಗಿ ಸಿದ್ದರಾಮಯ್ಯ ಆಪ್ತರು ಲಾಬಿ ನಡೆಸುತ್ತಿದ್ದು ಪಕ್ಷದಲ್ಲಿ ಮತ್ತೊಂದು ಸುತ್ತಿನ ಗೊಂದಲಕ್ಕೆ ಕಾರಣವಾಗಿದೆ.
Vijaya Karnataka Web mla 3


ಮೈತ್ರಿ ಸರಕಾರದ ಅವಧಿಯಲ್ಲಿ ವಿಧಾನಸಭೆಯಲ್ಲಿ ಸರಕಾರಿ ಮುಖ್ಯ ಸಚೇತಕರಾಗಿದ್ದ ಗಣೇಶ್‌ ಹುಕ್ಕೇರಿ ಇದೀಗ, ಪ್ರತಿಪಕ್ಷ ಸಚೇತಕ ಹುದ್ದೆಯಲ್ಲಿ ಮುಂದುವರಿಕೆ ಬಯಸಿದ್ದಾರೆ. ಮತ್ತೊಂದೆಡೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತ ಶಾಸಕ ರಾಘವೇಂದ್ರ ಹಿಟ್ನಾಳ್‌ ಈ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಗುರುವಾರ ಸಾರಾ ಮಹೇಶ್ ರಾಜೀನಾಮೆ ವಾಪಸ್: ಎಚ್‌ಡಿ ದೇವೇಗೌಡ

ಪರಿಷತ್ತಿನಲ್ಲೂ ಪ್ರತಿಪಕ್ಷ ಸಚೇತಕ ಹುದ್ದೆಗೆ ಕಾಂಗ್ರೆಸ್‌ನಲ್ಲಿ ತ್ರಿಕೋನ ಪೈಪೋಟಿ ನಡೆಯುತ್ತಿದೆ. ಹಿಂದಿನ ಸರಕಾರದಲ್ಲಿ ಸದನದಲ್ಲಿ ಸರಕಾರಿ ಮುಖ್ಯ ಸಚೇತಕರಾಗಿದ್ದ ಐವಾನ್‌ ಡಿಸೋಜ ಇದೀಗ ಮತ್ತೆ ಪ್ರತಿಪಕ್ಷ ಸಚೇತಕರಾಗಿ ಮುಂದುವರಿಯಲು ಬಯಸಿದ್ದಾರೆ. ಪ್ರಕಾಶ್‌ ರಾಥೋಡ್‌ ಪರ ಕೆಲವು ಹಿರಿಯರು ಒತ್ತಡ ತರುತ್ತಿದ್ದಾರೆ. ಈ ಮಧ್ಯೆ, ರಘು ಆಚಾರ್‌ ಕೂಡ ಪೈಪೋಟಿಗೆ ಇಳಿದಿದ್ದಾರೆ.

ಚಾಮುಂಡೇಶ್ವರಿ ತಾಯಿ ಎದುರು ಪ್ರಮಾಣ: ವಿಶ್ವನಾಥ್‌ ಸವಾಲು ಸ್ವೀಕರಿಸಿದ ಸಾ.ರಾ. ಮಹೇಶ್‌

ಈ ಮಧ್ಯೆ ದಿಲ್ಲಿಯಲ್ಲಿ ಸೋನಿಯಾ ಭೇಟಿಯಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜತೆ ಪ್ರಕಾಶ್‌ ರಾಥೋಡ್‌ ಹಾಗೂ ಹಿಟ್ನಾಳ್‌ ಕಾಣಿಸಿಕೊಂಡಿರುವುದು ಕೆಲವರ ಕಣ್ಣು ಕೆಂಪಾಗಿಸಿದೆ. ಪ್ರಕಾಶ್ ರಾಢೋಡ್ ಹಾಗೂ ಹಿಟ್ನಾಳ್ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ