ಆ್ಯಪ್ನಗರ

ಫೆ.17 ರಿಂದ ವಿಧಾನಮಂಡಲ ಜಂಟಿ ಅಧಿವೇಶನ: ಒಟ್ಟು 25 ದಿನ ಕಲಾಪ

ಪ್ರಸಕ್ತ 15ನೇ ರಾಜ್ಯ ವಿಧಾನಸಭೆಯ 6ನೇ ಅಧಿವೇಶನ ಈ ತಿಂಗಳ 17ರಿಂದ ಆರಂಭವಾಗಲಿದೆ. ವರ್ಷಾರಂಭದ ಮೊದಲ ಜಂಟಿ ಅಧಿವೇಶನ ಉದ್ದೇಶಿಸಿ ಸಂಪ್ರದಾಯದಂತೆ ರಾಜ್ಯಪಾಲ ವಜುಭಾಯಿ ವಾಲಾ ಫೆ.17 ರಂದು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

Vijaya Karnataka Web 14 Feb 2020, 7:31 pm
ಬೆಂಗಳೂರು: ಪ್ರಸಕ್ತ 15ನೇ ರಾಜ್ಯ ವಿಧಾನಸಭೆಯ 6ನೇ ಅಧಿವೇಶನ ಈ ತಿಂಗಳ 17ರಿಂದ ಆರಂಭವಾಗಲಿದೆ. ವರ್ಷಾರಂಭದ ಮೊದಲ ಜಂಟಿ ಅಧಿವೇಶನ ಉದ್ದೇಶಿಸಿ ಸಂಪ್ರದಾಯದಂತೆ ರಾಜ್ಯಪಾಲ ವಜುಭಾಯಿ ವಾಲಾ ಫೆ.17 ರಂದು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
Vijaya Karnataka Web vidhana soudha


ಅಧಿವೇಶನ ಕುರಿತು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿವಿವರ ಪ್ರಕಟಿಸಿದರು. ''ಈ ಬಾರಿ ಒಟ್ಟು 25 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಎಲ್ಲಸದಸ್ಯರು ಸದನದ ಕಲಾಪದಲ್ಲಿಸಕ್ರಿಯವಾಗಿ ಪಾಲ್ಗೊಳ್ಳಬೇಕು. ರಾಜ್ಯಪಾಲರ ಭಾಷಣದ ಬಳಿಕ ಸಂತಾಪ ಸೂಚನೆ ನಡೆಯಲಿದೆ. ಫೆ.18, 19 ಮತ್ತು 20ರಂದು ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. ಬಳಿಕ, ಮಾ.2 ರಿಂದ ಅಧಿವೇಶನ ಮತ್ತೆ ಆರಂಭವಾಗಲಿದ್ದು, ಯಡಿಯೂರಪ್ಪ ಅವರು ಮಾ.5 ರಂದು 2020 -21ನೇ ಸಾಲಿನ ಬಜೆಟ್‌ ಮಂಡಿಸಲಿದ್ದಾರೆ.

ವಿಧಾನಮಂಡಲ ಕಲಾಪಕ್ಕೆ ಮಾಧ್ಯಮ ಕ್ಯಾಮರಾಗಳಿಗಿಲ್ಲ ಅವಕಾಶ, ಬದಲಾಗದ ಸ್ಪೀಕರ್‌ ನಿಲುವು

ವಿಶೇಷ ಚರ್ಚೆ
''ಮಾ.2 ಮತ್ತು ಮಾ.3 ರಂದು 'ಭಾರತ ಸಂವಿಧಾನ'ದ ಆಶಯ ಕುರಿತು ವಿಶೇಷ ಚರ್ಚೆ ನಡೆಯಲಿದೆ. ಸಂವಿಧಾನ ಜಾರಿಯಾಗಿ 70 ವರ್ಷ ತುಂಬಿದ ಹಿನ್ನೆಲೆಯಲ್ಲಿಈ ವಿಶೇಷ ಕಲಾಪ ನಡೆಸಲಾಗುತ್ತಿದೆ. ಸಂವಿಧಾನದ ಆಶಯ, ವಿಶೇಷತೆ ಕುರಿತಂತೆ ರಾಜಕೀಯ ಹೊರತಾಗಿ ಚರ್ಚೆ ನಡೆಯಬೇಕು ಎಂಬುದು ನನ್ನ ಆಶಯ. ಯಾರು ದಿಕ್ಸೂಚಿ ಭಾಷಣ ಮಾಡಬೇಕು, ಚರ್ಚೆಯ ಚೌಕಟ್ಟು ಮತ್ತಿತರ ವಿಚಾರಗಳ ಕುರಿತು ಫೆ.17 ಅಥವಾ ಫೆ.18 ರಂದು ನಡೆಯಲಿರುವ ಸದನ ಕಲಾಪ ಸಮಿತಿ (ಬಿಎಸಿ) ಸಭೆಯಲ್ಲಿಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು'' ಎಂದು ಸ್ಪೀಕರ್‌ ತಿಳಿಸಿದರು.

ಅಧಿವೇಶದಲ್ಲಿ ಸರ್ಕಾರಕ್ಕೆ ಚಾಟಿ ಬೀಸಲು ಸಿದ್ದು ಪ್ಲಾನ್ , ಫೆ. 16ರಂದು ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ

ಹೊಸದಾಗಿ ಮಂಡನೆಯಾಗಲಿರುವ ವಿಧೇಯಕಗಳ ಪಟ್ಟಿ
  • - ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ವಿಧೇಯಕ -2020
  • - ಕರ್ನಾಟಕ ನಾವೀನ್ಯತಾ ಪ್ರಾಧಿಕಾರ ವಿಧೇಯಕ -2020
  • - ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ (ತಿದ್ದುಪಡಿ) ವಿಧೇಯಕ- 2020
  • - ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ -2020
  • -ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿಪಾರದರ್ಶಕತೆ (ತಿದ್ದುಪಡಿ) ವಿಧೇಯಕ -2020

ಅಂಗೀಕಾರಕ್ಕೆ ಬಾಕಿ ಇರುವ ವಿಧೇಯಕ
-ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮತ್ತಿತರ ಮೀಸಲಾತಿ) ತಿದ್ದುಪಡಿ ವಿಧೇಯಕ -2018.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ