ಆ್ಯಪ್ನಗರ

ಕೊನೆಗೂ ಖಾತೆ ಹಂಚಿಕೆ; 'ಪವರ್‌' ಉಳಿಸಿಕೊಂಡ ಕುಮಾರಸ್ವಾಮಿ; ಡಿಕೆಶಿ, ರೇವಣ್ಣಗೆ ಸಿಕ್ಕಿಲ್ಲ ಇಂಧನ

ಶುಕ್ರವಾರ ರಾತ್ರಿ ಬಹಿರಂಗವಾಯಿತು ಖಾತೆಗಳ ವಿವರ

Vijaya Karnataka Web 8 Jun 2018, 8:45 pm
ಬೆಂಗಳೂರು: ಗಜ ಪ್ರಸವದ ನಂತರ ಸಂಪುಟ ರಚನೆಯಾಗಿ, ಭಿನ್ನಮತದ ಅಗ್ನಿಯ ಕೆನ್ನಾಲಗೆ ಎಲ್ಲೆಡೆ ಚಾಚುತ್ತಿರುವ ಬೆನ್ನಲ್ಲೇ ಖಾತೆಗಳ ಹಂಚಿಕೆ ಸರ್ಕಸ್‌ ಕೂಡ ಮುಗಿದಿದೆ.
Vijaya Karnataka Web ವಿಧಾನಸೌಧ
ವಿಧಾನಸೌಧ


ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶುಕ್ರವಾರ ರಾತ್ರಿ ಕಳುಹಿಸಿಕೊಟ್ಟ ಸಚಿವರ ಖಾತೆಗಳ ಪಟ್ಟಿಗೆ ರಾಜ್ಯಪಾಲ ವಜೂಭಾಯಿ ವಾಲಾ ಅಂಗೀಕಾರ ನೀಡಿದ್ದಾರೆ.

ಭಾರಿ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದ್ದ ಇಂಧನ ಖಾತೆ ಅನ್ನು ಕುಮಾರಸ್ವಾಮಿ ಅವರೇ ಉಳಿಸಿಕೊಂಡಿದ್ದಾರೆ.

ಖಾತೆಗಳ ವಿವರ ಹೀಗಿದೆ....

ಎಚ್‌ಡಿ ಕುಮಾರಸ್ವಾಮಿ (ಮುಖ್ಯಮಂತ್ರಿ) - ಹಣಕಾಸು, ವಾರ್ತಾ ಮತ್ತು ಸಂಪರ್ಕ, ಇಂಧನ, ಅಬಕಾರಿ, ಗುಪ್ತಚರ, ಜವಳಿ, ಯೋಜನಾ ಮತ್ತು ಸಾಂಖ್ಯಿಕ
ಡಾ.ಜಿ. ಪರಮೇಶ್ವರ್‌ (ಉಪ ಮುಖ್ಯಮಂತ್ರಿ) - ಗೃಹ, ಬೆಂಗಳೂರು ಅಭಿವೃದ್ಧಿ, ಯುವಜನ, ಕ್ರೀಡೆ

ಕಾಂಗ್ರೆಸ್‌ ಸಚಿವರು

ಆರ್.ವಿ. ದೇಶಪಾಂಡೆ - ಕಂದಾಯ, ಕೌಶಲ್ಯ ಅಭಿವೃದ್ಧಿ
ಡಿ.ಕೆ.ಶಿವಕುಮಾರ್ - ಜಲಸಂಪನ್ಮೂಲ/ ವೈದ್ಯಕೀಯ ಶಿಕ್ಷಣ
ಕೆ.ಜೆ. ಜಾರ್ಜ್ - ಬೃಹತ್ ಕೈಗಾರಿಕೆ, ಐಟಿ-ಬಿಟಿ
ಕೃಷ್ಣ ಬೈರೇಗೌಡ - ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌, ಕಾನೂನು
ಶಿವಶಂಕರ ರೆಡ್ಡಿ - ಕೃಷಿ
ರಮೇಶ್ ಜಾರಕಿಹೊಳಿ - ಪೌರಾಡಳಿತ, ನಗರ, ಸ್ಥಳೀಯ ಸಂಸ್ಥೆ, ಬಂದರು, ಒಳನಾಡು ಸಾರಿಗೆ
ಪ್ರಿಯಾಂಕ್ ಖರ್ಗೆ - ಸಮಾಜ ಕಲ್ಯಾಣ
ಯು.ಟಿ. ಖಾದರ್ - ನಗರಾಭಿವೃದ್ಧಿ (ಬೆಂಗಳೂರು, ಬಿಪಿಎಂಪಿ ಹೊರತುಪಡಿಸಿ) ವಸತಿ
ಜಮೀರ್ ಅಹ್ಮದ್ - ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್‌
ಶಿವಾನಂದ ಪಾಟೀಲ್ - ಆರೋಗ್ಯ
ವೆಂಕಟರಮಣಪ್ಪ - ಕಾರ್ಮಿಕ
ರಾಜಶೇಖರ್ ಪಾಟೀಲ್ - ಗಣಿ ಮತ್ತು ಭೂ ವಿಜ್ಞಾನ, ಮುಜರಾಯಿ
ಪುಟ್ಟರಂಗಶೆಟ್ಟಿ - ಹಿಂದುಳಿದ ವರ್ಗಗಳ ಕಲ್ಯಾಣ
ಶಂಕರ್ - ಅರಣ್ಯ, ಪರಿಸರ ವಿಜ್ಞಾನ
ಜಯಮಾಲಾ - ಮಹಿಳಾ ಮತ್ತು ಮಕ್ಕಳ ಕಲ್ಯಾಣ

ಜೆಡಿಎಸ್‌ ಸಚಿವರು

ಎಚ್.ಡಿ.ರೇವಣ್ಣ - ಲೋಕೋಪಯೋಗಿ
ಬಂಡೆಪ್ಪ ಕಾಶೆಂಪುರ - ಸಹಕಾರ
ಜಿ.ಟಿ. ದೇವೇಗೌಡ - ಉನ್ನತ ಶಿಕ್ಷಣ
ಮನಗೂಳಿ - ತೋಟಗಾರಿಕೆ
ಗುಬ್ಬಿ ಶ್ರೀನಿವಾಸ್ - ಸಣ್ಣ ಕೈಗಾರಿಕೆ
ವೆಂಕಟರಾವ್ ನಾಡಗೌಡ - ಪಶು ಸಂಗೋಪನಾ
ಸಿ.ಎಸ್.ಪುಟ್ಟರಾಜು - ಸಣ್ಣ ನೀರಾವರಿ
ಸಾ.ರಾ.ಮಹೇಶ್ - ಪ್ರವಾಸೋದ್ಯಮ, ರೇಷ್ಮೆ
ಎನ್.ಮಹೇಶ್ - ಪ್ರಾಥಮಿಕ, ಪ್ರೌಢ ಶಿಕ್ಷಣ
ಡಿ.ಸಿ ತಮ್ಮಣ್ಣ - ಸಾರಿಗೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ