ಆ್ಯಪ್ನಗರ

ಕರ್ನಾಟಕದ ಮೋಸ್ಟ್‌ ವಾಂಟೆಡ್‌ ಕಳಂಕಿತರಿಗೆ ಟಿಕೆಟ್‌ ನೀಡಿದ್ದೇಕೆ? ರಾಹುಲ್‌ ಪ್ರಶ್ನೆ

ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಭ್ರಷ್ಟಾಚಾರ ಆರೋಪ ಹೊತ್ತ ಹಲವು ಕಳಂಕಿತರಿಗೆ ಪಕ್ಷದ ಟಿಕೆಟ್‌ ನೀಡಿದ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆಗ್ರಹಿಸಿದ್ದಾರೆ.

Vijaya Karnataka 6 May 2018, 7:45 am
ಹೊಸದಿಲ್ಲಿ: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಭ್ರಷ್ಟಾಚಾರ ಆರೋಪ ಹೊತ್ತ ಹಲವು ಕಳಂಕಿತರಿಗೆ ಪಕ್ಷದ ಟಿಕೆಟ್‌ ನೀಡಿದ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆಗ್ರಹಿಸಿದ್ದಾರೆ.
Vijaya Karnataka Web RAHUL1


ಟ್ವಿಟರ್‌ನಲ್ಲಿ 'ಕರ್ನಾಟಕದ ಮೋಸ್ಟ್‌ ವಾಂಟೆಡ್‌' ಎಂಬ ಶೀರ್ಷಿಕೆಯಲ್ಲಿ ವಿಡಿಯೊ ತುಣುಕೊಂದನ್ನು ರಾಹುಲ್‌ ಪೋಸ್ಟ್‌ ಮಾಡಿದ್ದಾರೆ. ಮೋದಿ ಹಾಗೂ ಕಳಂಕಿತ ನಾಯಕರ ಚಿತ್ರಗಳನ್ನು ಈ ವಿಡಿಯೊ ಒಳಗೊಂಡಿದೆ.

''ಡಿಯರ್‌ ಮೋದಿ ಜೀ, ನೀವು ಬಹಳಷ್ಟು ಮಾತನಾಡುತ್ತೀರಿ. ಸಮಸ್ಯೆ ಏನೆಂದರೆ, ನಿಮ್ಮ ನಡೆಗೂ, ನುಡಿಗೂ ಹೊಂದಿಕೆಯಿಲ್ಲ. ನಿಮ್ಮ ಅಭ್ಯರ್ಥಿ ಆಯ್ಕೆಯನ್ನೊಮ್ಮೆ ನೋಡಿ,'' ಎಂದು ರಾಹುಲ್‌ ಟ್ವೀಟರ್‌ನಲ್ಲಿ ಪ್ರಶ್ನಿಸಿದ್ದಾರೆ. 'ಆನ್ಸರ್‌ ಮಾಡಿ ಮೋದಿ' ಎಂಬ ಹ್ಯಾಷ್‌ಟ್ಯಾಗ್‌ ಅನ್ನೂ ರಾಹುಲ್‌ ಬಳಸಿದ್ದಾರೆ.


5 ನಿಮಿಷ ಮಾತನಾಡಬಲ್ಲಿರಾ?

''ಡಿಯರ್‌ ಮೋದಿ, ರೆಡ್ಡಿ ಬ್ರದರ್ಸ್‌ ಗ್ಯಾಂಗ್‌ಗೆ 8 ಟಿಕೆಟ್‌ ನೀಡಿರುವ ಬಗ್ಗೆ ನೀವು 5 ನಿಮಿಷ ಮಾತನಾಡಬಲ್ಲಿರಾ? ಭ್ರಷ್ಟಾಚಾರ, ವಂಚನೆ ಸೇರಿದಂತೆ 23 ಪ್ರಕರಣಗಳನ್ನು ಹೊಂದಿರುವವರು ನಿಮ್ಮ ಸಿಎಂ ಅಭ್ಯರ್ಥಿಗಳೇ? ನಿಮ್ಮ 11 ಹಿರಿಯ ನಾಯಕರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಅವರ ಬಗ್ಗೆ ಯಾವಾಗ ಮಾತನಾಡುತ್ತೀರಿ?'' ಎಂದು ರಾಹುಲ್‌ ಪ್ರಶ್ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ