ಬೆಂಗಳೂರು: ಸಮ್ಮಿಶ್ರ ಸರಕಾರ ಸದ್ಯದ ಬಿಕ್ಕಟ್ಟಿನಿಂದ ಪಾರಾಗಲಿದೆಯೇ ಎಂಬ ವಿಚಾರದಲ್ಲಿ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಪಾಳಯದಲ್ಲಿ ಆತಂಕದ ಕಾರ್ಮೋಡ ಮುಂದುವರಿದಿದೆ.
ಗುರುವಾರ ವಿಶ್ವಾಸಮತ ಯಾಚನೆ ನಡೆಯಲಿರುವ ಹಿನ್ನೆಲೆಯಲ್ಲಿ ಮೈತ್ರಿ ಸರಕಾರ ಈ ಅಗ್ನಿಪರೀಕ್ಷೆಯಲ್ಲಿ ಗೆಲ್ಲುತ್ತಾ ಅಥವಾ ಸೋಲುತ್ತಾ ಎಂಬ ವಿಚಾರದಲ್ಲಿ ದೋಸ್ತಿ ಮುಖಂಡರನ್ನು ಕಾಡುತ್ತಿರುವ ಗೊಂದಲ ತಿಳಿಯಾಗಿಲ್ಲ.
ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಬಳಿಕ ಮೈತ್ರಿ ಪಾಳಯದಲ್ಲಿ ಸ್ವಲ್ಪಮಟ್ಟಿಗೆ ಆತಂಕ, ನಿರಾಶೆಯ ವಾತಾವರಣ ಸೃಷ್ಟಿಯಾಯಿತು. ಆದರೆ, ಸರಕಾರದ ಸುರಕ್ಷತೆಗೆ ವಿಭಿನ್ನ ಕಾರ್ಯತಂತ್ರವನ್ನು ದೋಸ್ತಿ ನಾಯಕರು ಹೆಣೆದಿರುವ ಸುಳಿವು ಉಭಯ ಪಕ್ಷಗಳ ಶಾಸಕರು ಮತ್ತು ಮುಖಂಡರಲ್ಲಿ ಹೊಸ ಭರವಸೆ ಮೂಡಿಸಿದೆ.
ಆತಂಕ, ಭರವಸೆ: ಕಾಂಗ್ರೆಸ್ ಮತ್ತು ಜೆಡಿಎಸ್ ಮುಂಚೂಣಿ ನಾಯಕರು ಮಧ್ಯಾಹ್ನ ಹೋಟೆಲ್ವೊಂದರಲ್ಲಿ ಒಟ್ಟಿಗೆ ಗೌಪ್ಯ ಸಭೆ ನಡೆಸಿ, ಬಳಿಕ ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡಿದರು. ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಭಾಗಿಯಾದರು. ಮತ್ತೊಂದೆಡೆ, ಕಳೆದ 10 ದಿನಗಳಿಂದ ಬೆಂಗಳೂರು ಹೊರವಲಯದ ನಂದಿ ಬೆಟ್ಟದ ರಸ್ತೆಯ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್ ಶಾಸಕರಿಗೆ ಸಚಿವ ಬಂಡೆಪ್ಪ ಕಾಶಂಪುರ ಮತ್ತಿತರ ಹಿರಿಯ ಸಚಿವರು ವಿಶ್ವಾಸ ತುಂಬಿದರು. ಸರಕಾರಕ್ಕೆ ಸದ್ಯಕ್ಕೆ ಯಾವ ಅಪಾಯವೂ ಇಲ್ಲ. ಅದಕ್ಕೆ ಪೂರಕವಾದ ಕಾರ್ಯತಂತ್ರವನ್ನು ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರು ಜಂಟಿಯಾಗಿ ಹೆಣೆದಿದ್ದು, ಫಲಿತಾಂಶವನ್ನು ಕಾದುನೋಡಬೇಕಿದೆ. ಹೀಗಾಗಿ, ಕೊನೇ ಕ್ಷಣದ ವರೆಗೂ ಒಗ್ಗಟ್ಟಿನಿಂದ ಮುಂದುವರಿಯೋಣ ಎಂದು ಜೆಡಿಎಸ್ ಶಾಸಕರಿಗೆ ಆತ್ಮಸ್ಥೈರ್ಯ ತುಂಬಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ವಿಶ್ವಾಸಮತ ಯಾಚನೆ ನಡೆಯಲಿರುವ ಹಿನ್ನೆಲೆಯಲ್ಲಿ ಮೈತ್ರಿ ಸರಕಾರ ಈ ಅಗ್ನಿಪರೀಕ್ಷೆಯಲ್ಲಿ ಗೆಲ್ಲುತ್ತಾ ಅಥವಾ ಸೋಲುತ್ತಾ ಎಂಬ ವಿಚಾರದಲ್ಲಿ ದೋಸ್ತಿ ಮುಖಂಡರನ್ನು ಕಾಡುತ್ತಿರುವ ಗೊಂದಲ ತಿಳಿಯಾಗಿಲ್ಲ.
ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಬಳಿಕ ಮೈತ್ರಿ ಪಾಳಯದಲ್ಲಿ ಸ್ವಲ್ಪಮಟ್ಟಿಗೆ ಆತಂಕ, ನಿರಾಶೆಯ ವಾತಾವರಣ ಸೃಷ್ಟಿಯಾಯಿತು. ಆದರೆ, ಸರಕಾರದ ಸುರಕ್ಷತೆಗೆ ವಿಭಿನ್ನ ಕಾರ್ಯತಂತ್ರವನ್ನು ದೋಸ್ತಿ ನಾಯಕರು ಹೆಣೆದಿರುವ ಸುಳಿವು ಉಭಯ ಪಕ್ಷಗಳ ಶಾಸಕರು ಮತ್ತು ಮುಖಂಡರಲ್ಲಿ ಹೊಸ ಭರವಸೆ ಮೂಡಿಸಿದೆ.
ಆತಂಕ, ಭರವಸೆ: ಕಾಂಗ್ರೆಸ್ ಮತ್ತು ಜೆಡಿಎಸ್ ಮುಂಚೂಣಿ ನಾಯಕರು ಮಧ್ಯಾಹ್ನ ಹೋಟೆಲ್ವೊಂದರಲ್ಲಿ ಒಟ್ಟಿಗೆ ಗೌಪ್ಯ ಸಭೆ ನಡೆಸಿ, ಬಳಿಕ ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡಿದರು. ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಭಾಗಿಯಾದರು. ಮತ್ತೊಂದೆಡೆ, ಕಳೆದ 10 ದಿನಗಳಿಂದ ಬೆಂಗಳೂರು ಹೊರವಲಯದ ನಂದಿ ಬೆಟ್ಟದ ರಸ್ತೆಯ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್ ಶಾಸಕರಿಗೆ ಸಚಿವ ಬಂಡೆಪ್ಪ ಕಾಶಂಪುರ ಮತ್ತಿತರ ಹಿರಿಯ ಸಚಿವರು ವಿಶ್ವಾಸ ತುಂಬಿದರು. ಸರಕಾರಕ್ಕೆ ಸದ್ಯಕ್ಕೆ ಯಾವ ಅಪಾಯವೂ ಇಲ್ಲ. ಅದಕ್ಕೆ ಪೂರಕವಾದ ಕಾರ್ಯತಂತ್ರವನ್ನು ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರು ಜಂಟಿಯಾಗಿ ಹೆಣೆದಿದ್ದು, ಫಲಿತಾಂಶವನ್ನು ಕಾದುನೋಡಬೇಕಿದೆ. ಹೀಗಾಗಿ, ಕೊನೇ ಕ್ಷಣದ ವರೆಗೂ ಒಗ್ಗಟ್ಟಿನಿಂದ ಮುಂದುವರಿಯೋಣ ಎಂದು ಜೆಡಿಎಸ್ ಶಾಸಕರಿಗೆ ಆತ್ಮಸ್ಥೈರ್ಯ ತುಂಬಲಾಗಿದೆ ಎಂದು ಮೂಲಗಳು ತಿಳಿಸಿವೆ.