ಬೆಂಗಳೂರು: ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಮನವೊಲಿಕೆ ಮಾಡುವ ಸಚಿವ ಡಿ.ಕೆ ಶಿವಕುಮಾರ್ ಯತ್ನ ವಿಫಲವಾಗಿದೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ.
ಆದರೂ ಪ್ರಯತ್ನ ಕೈಬಿಡದ ಕಾಂಗ್ರೆಸ್ ಮುಖಂಡರು ಮತ್ತೊಂದು ಸುತ್ತಿನ ಸಂಧಾನಕ್ಕೆ ಮುಂದಾಗಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ರಿಜ್ವಾನ್ ಅರ್ಷದ್ ಮತ್ತು ಕೃಷ್ಣ ಭೈರೇಗೌಡರು ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ನಿವಾಸಕ್ಕೆ ತೆರಳಿದ್ದಾರೆ.
ಡಿಕೆ ಶಿವಕುಮಾರ್ ಜತೆಗಿನ ಭೇಟಿ ವೇಳೆ ನಾಗರಾಜ್ ಅವರು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ವಿರುದ್ಧ ತೀವ್ರ ಕಿಡಿಕಾರಿದರು. ತಾವು ಹೆಸರಿಗಷ್ಟೇ ಸಚಿವರಾಗಿದ್ದು ತಮ್ಮ ಖಾತೆಯಲ್ಲಿ ತಮಗೇ ತಿಳಿಯದಂತೆ ವ್ಯವಹಾರಗಳು ನಡೆಯುತ್ತಿವೆ ಎಂದು ನಾಗರಾಜ್ ಕಿಡಿ ಕಾರಿದ್ದಾರೆ.
ಅತೃಪ್ತ ಶಾಸಕರ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರಕ್ಕೆ ಮುಂದೂಡಿದ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರಕಾರದ ನಾಯಕರು ಮತ್ತು ಅತೃಪ್ತರಿಗೆ ನಾಲ್ಕು ದಿನಗಳ ಕಾಲಾವಕಾಶ ದೊರೆತಿದೆ. ಈ ಅವಧಿಯನ್ನು ಸರಕಾರವನ್ನು ಸುರಕ್ಷಿತಗೊಳಿಸುವ ಯತ್ನಕ್ಕೆ ಮುಖಂಡರು ಕೈಹಾಕಿದ್ದಾರೆ. ಅದರ ಭಾಗವಾಗಿಯೇ ಸಚಿವರಾದ ಎಂಟಿಬಿ ನಾಗರಾಜ್ ಮತ್ತು ಡಾ. ಸುಧಾಕರ್ ಅವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ.
ನಾಲ್ಕು ದಿನಗಳ ಕಾಲಾವಕಾಶ ದೊರೆತಿರುವ ಧೈರ್ಯದಿಂದಲೇ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿಶ್ವಾಸಮತ ಕೋರಲು ಅವಕಾಶ ನೀಡಿ ಎಂದು ಶುಕ್ರವಾರ ವಿಧಾನಸಭೆ ಅಧ್ಯಕ್ಷರಿಗೆ ಮನವಿ ಮಾಡಿದ್ದರು.
ವಿಶ್ವಾಸ ಮತಯಾಚನೆಯ ದಾಳ ಉರುಳಿಸಿದ ಸಿಎಂ ಕುಮಾರಸ್ವಾಮಿ
ಆಪರೇಷನ್, ರಿವರ್ಸ್ ಆಪರೇಷನ್ ಸೇರಿದಂತೆ ನಾನಾ ಬಗೆಯ ರಾಜಕೀಯ ಕಸರತ್ತುಗಳು ತೆರೆಮರೆಯಲ್ಲಿ ನಡೆಯುವಂತೆ ತೋರುತ್ತಿದೆ. ಇವಕ್ಕೆಲ್ಲ ಸಾಕ್ಷಿ ಎಂಬಂತೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಶಾಸಕರೆಲ್ಲ ರೆಸಾರ್ಟ್ಗೆ ತೆರಳಿ ಗೂಢಾಲೋಚನೆ ನಡೆಸುತ್ತಿದ್ದಾರೆ.
ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಎಂಟಿಬಿ:
ಸಿದ್ದರಾಮಯ್ಯನವರೇ ನಮ್ಮ ನಾಯಕರಾಗಿದ್ದು, ಅವರಿಗೆ ಕಿಮ್ಮತ್ತು ಕೊಡದ ಸಮ್ಮಿಶ್ರ ಸರಕಾರದಲ್ಲಿ ನಾವು ಇರುವುದಿಲ್ಲ ಎಂದು ಎಂಟಿಬಿ ನಾಗರಾಜ್ ಮಾಜಿ ಮುಖ್ಯಮಂತ್ರಿ ಪರ ಬ್ಯಾಟ್ ಬೀಸಿದ್ದಾರೆ.
ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡಿರುವ ಅವರು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿಮ್ಮತ್ತು ಕೊಡುತ್ತಿಲ್ಲ. ಹೀಗಾಗಿ ಬೇಸರದಿಂದ ರಾಜೀನಾಮೆ ಸಲ್ಲಿಸಿದ್ದೇನೆ ಎಂದಿದ್ದಾರೆ.
ಆದರೂ ಪ್ರಯತ್ನ ಕೈಬಿಡದ ಕಾಂಗ್ರೆಸ್ ಮುಖಂಡರು ಮತ್ತೊಂದು ಸುತ್ತಿನ ಸಂಧಾನಕ್ಕೆ ಮುಂದಾಗಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ರಿಜ್ವಾನ್ ಅರ್ಷದ್ ಮತ್ತು ಕೃಷ್ಣ ಭೈರೇಗೌಡರು ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ನಿವಾಸಕ್ಕೆ ತೆರಳಿದ್ದಾರೆ.
ಡಿಕೆ ಶಿವಕುಮಾರ್ ಜತೆಗಿನ ಭೇಟಿ ವೇಳೆ ನಾಗರಾಜ್ ಅವರು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ವಿರುದ್ಧ ತೀವ್ರ ಕಿಡಿಕಾರಿದರು. ತಾವು ಹೆಸರಿಗಷ್ಟೇ ಸಚಿವರಾಗಿದ್ದು ತಮ್ಮ ಖಾತೆಯಲ್ಲಿ ತಮಗೇ ತಿಳಿಯದಂತೆ ವ್ಯವಹಾರಗಳು ನಡೆಯುತ್ತಿವೆ ಎಂದು ನಾಗರಾಜ್ ಕಿಡಿ ಕಾರಿದ್ದಾರೆ.
ಅತೃಪ್ತ ಶಾಸಕರ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರಕ್ಕೆ ಮುಂದೂಡಿದ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರಕಾರದ ನಾಯಕರು ಮತ್ತು ಅತೃಪ್ತರಿಗೆ ನಾಲ್ಕು ದಿನಗಳ ಕಾಲಾವಕಾಶ ದೊರೆತಿದೆ. ಈ ಅವಧಿಯನ್ನು ಸರಕಾರವನ್ನು ಸುರಕ್ಷಿತಗೊಳಿಸುವ ಯತ್ನಕ್ಕೆ ಮುಖಂಡರು ಕೈಹಾಕಿದ್ದಾರೆ. ಅದರ ಭಾಗವಾಗಿಯೇ ಸಚಿವರಾದ ಎಂಟಿಬಿ ನಾಗರಾಜ್ ಮತ್ತು ಡಾ. ಸುಧಾಕರ್ ಅವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ.
ಬುಧವಾರ ಮಂಗಳ?, ಜು.17ರಂದು ಸಿಎಂ ವಿಶ್ವಾಸಮತ ಯಾಚನೆ
ನಾಲ್ಕು ದಿನಗಳ ಕಾಲಾವಕಾಶ ದೊರೆತಿರುವ ಧೈರ್ಯದಿಂದಲೇ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿಶ್ವಾಸಮತ ಕೋರಲು ಅವಕಾಶ ನೀಡಿ ಎಂದು ಶುಕ್ರವಾರ ವಿಧಾನಸಭೆ ಅಧ್ಯಕ್ಷರಿಗೆ ಮನವಿ ಮಾಡಿದ್ದರು.
ವಿಶ್ವಾಸ ಮತಯಾಚನೆಯ ದಾಳ ಉರುಳಿಸಿದ ಸಿಎಂ ಕುಮಾರಸ್ವಾಮಿ
ಆಪರೇಷನ್, ರಿವರ್ಸ್ ಆಪರೇಷನ್ ಸೇರಿದಂತೆ ನಾನಾ ಬಗೆಯ ರಾಜಕೀಯ ಕಸರತ್ತುಗಳು ತೆರೆಮರೆಯಲ್ಲಿ ನಡೆಯುವಂತೆ ತೋರುತ್ತಿದೆ. ಇವಕ್ಕೆಲ್ಲ ಸಾಕ್ಷಿ ಎಂಬಂತೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಶಾಸಕರೆಲ್ಲ ರೆಸಾರ್ಟ್ಗೆ ತೆರಳಿ ಗೂಢಾಲೋಚನೆ ನಡೆಸುತ್ತಿದ್ದಾರೆ.
ದೋಸ್ತಿ ಸರಕಾರದ ಅಳಿವು-ಉಳಿವು: ರಾಜಕೀಯ ನಾಟಕದಲ್ಲಿ ಎಲ್ಲರ ಕಣ್ಣೂ ಇವರ ಮೇಲೆ
ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಎಂಟಿಬಿ:
ಸಿದ್ದರಾಮಯ್ಯನವರೇ ನಮ್ಮ ನಾಯಕರಾಗಿದ್ದು, ಅವರಿಗೆ ಕಿಮ್ಮತ್ತು ಕೊಡದ ಸಮ್ಮಿಶ್ರ ಸರಕಾರದಲ್ಲಿ ನಾವು ಇರುವುದಿಲ್ಲ ಎಂದು ಎಂಟಿಬಿ ನಾಗರಾಜ್ ಮಾಜಿ ಮುಖ್ಯಮಂತ್ರಿ ಪರ ಬ್ಯಾಟ್ ಬೀಸಿದ್ದಾರೆ.
ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡಿರುವ ಅವರು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿಮ್ಮತ್ತು ಕೊಡುತ್ತಿಲ್ಲ. ಹೀಗಾಗಿ ಬೇಸರದಿಂದ ರಾಜೀನಾಮೆ ಸಲ್ಲಿಸಿದ್ದೇನೆ ಎಂದಿದ್ದಾರೆ.