ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಲಿದ್ದು, ಇತರೆಡೆ ಇನ್ನೂ ಮೂರು ದಿನ ರಾಜ್ಯದಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೋಮವಾರದಿಂದ ಮೂರು ದಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಏ.17 ರಿಂದ ಮೂರು ದಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಉಷ್ಣಗಾಳಿಯೂ ತಗ್ಗಲಿದ್ದು, ಮಳೆಗಾಲದ ಅನುಭವ ಕೆಲವೆಡೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶಿವಮೊಗ್ಗ ಐದು ತಿಂಗಳ ಬಳಿಕ ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಬಿರುಗಾಳಿ, ಗುಡುಗು ಸಿಡಿಲು ಸಹಿತ ಸಾಧಾರಣದಿಂದ ಧಾರಾಕಾರವಾಗಿ ಮಳೆ ಸುರಿದಿದೆ. ತೀರ್ಥಹಳ್ಳಿ, ಸಾಗರ, ಜೋಗ್ಫಾಲ್ಸ್, ಆನಂದಪುರ, ರಿಪ್ಪನ್ಪೇಟೆ, ಶಿಕಾರಿ ಪುರ, ಶಿರಾಳಕೊಪ್ಪ, ಆನವಟ್ಟಿ ಸುತ್ತಮುತ್ತ ಧಾರಾಕಾರ ಮಳೆಯಾದರೆ, ಶಿವಮೊಗ್ಗ, ಹೊಸನಗರ, ಸೊರಬ ತಾಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. ವರ್ಷದ ಮೊದಲ ಮಳೆಯು ಭೂಮಿ ಮತ್ತು ಜನತೆಗೆ ತಂಪೆರೆದಿದೆ. ಮೂರು ತಿಂಗಳ ಸುಡು ಬಿಸಿಲಿನಿಂದ ಜನ ಬಸವಳಿದು ಮಳೆಯ ನಿರೀಕ್ಷೆಯಲ್ಲಿದ್ದರು. ತೋಟಗಳಿಗೂ ಜೀವ ಬಂದಂತಾಗಿದ್ದು ಕೊಳವೆ ಬಾವಿಗಳ ಯಂತ್ರಗಳಿಗೂ ವಿಶ್ರಾಂತಿ ಸಿಕ್ಕಿದೆ.
ಜಿಲ್ಲೆಯ ಜಗಳೂರು ತಾಲೂಕಿನ ಹಲವೆಡೆ ಸುಮಾರು ಅರ್ಧಗಂಟೆ ಕಾಲ ಮಳೆ ಸುರಿದಿದೆ. ದಾವಣಗೆರೆ ತಾಲೂಕಿನ ಆನಗೋಡು, ಹೆಬ್ಬಾಳು ಭಾಗದಲ್ಲಿ ಮಳೆಯಾಗಿದೆ. ಹೆಬ್ಬಾಳು ಟೋಲ್ ಬಳಿ ಅಂಗಡಿಗಳಿಗೆ ನೀರು ನುಗ್ಗಿದೆ. ನೀರು ಹೆದ್ದಾರಿ ಮೇಲೆ ಹರಿದಿದೆ. ದಾವಣಗೆರೆ ನಗರದಲ್ಲಿ ಸಂಜೆ ವೇಳೆಗೆ ಮೋಡ ಮುಸುಕಿದ ವಾತಾವರಣ ಇತ್ತು, ಗುಡುಗು, ಮಿಂಚಿನೊಂದಿಗೆ ತುಂತುರು ಮಳೆ ಸುರಿಯಿತು.
ಏ.17 ರಿಂದ ಮೂರು ದಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಉಷ್ಣಗಾಳಿಯೂ ತಗ್ಗಲಿದ್ದು, ಮಳೆಗಾಲದ ಅನುಭವ ಕೆಲವೆಡೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಎಷ್ಟು ಮಳೆ?
ಈ ನಡುವೆ, ಶಿವಮೊಗ್ಗ ಜಿಲ್ಲೆಆಗುಂಬೆಯಲ್ಲಿ8 ಸೆಂ.ಮೀ., ಕೊಪ್ಪಳ ಜಿಲ್ಲೆ ತಾವರೆಗೇರಾದಲ್ಲಿ 7 ಸೆಂ.ಮೀ., ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಜಯಪುರ ಮತ್ತು ಎನ್.ಆರ್. ಪುರದಲ್ಲಿ 4 ಸೆಂ.ಮೀ., ಧಾರವಾಡ, ಕೊಪ್ಪಳ ಜಿಲ್ಲೆಯ ಬೇವೂರು, ರಾಯಚೂರು ಜಿಲ್ಲೆಯ ಮುದಗಲ್, ವಿಜಯಪುರ ಜಿಲ್ಲೆಯ ಇಂಡಿ, ಶಿವಮೊಗ್ಗ, ಲಿಂಗನಮಕ್ಕಿ, ಅನವಟ್ಟಿಯಲ್ಲಿ ತಲಾ 3 ಸೆಂ.ಮೀ., ಬೀದರ್ ಜಿಲ್ಲೆಯ ಔರಾದ್, ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ, ಗದಗ ಜಿಲ್ಲೆಯ ರೋಣ, ಕಲಬುರಗಿ ಜಿಲ್ಲೆಯ ಯಡ್ರಾಮಿ, ಧಾರವಾಡ ಜಿಲ್ಲೆಯ ಕಲಘಟಗಿ, ಶಿವಮೊಗ್ಗ ಜಿಲ್ಲೆಯ ತ್ಯಾಗರ್ತಿ, ಚಿಕ್ಕಮಗಳೂರು ಜಿಲ್ಲೆಯ ಕಳಸ, ಬಳ್ಳಾರಿ ಜಿಲ್ಲೆಯ ಕುಡತಿನಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ತರೀಕೆರೆ, ಶೃಂಗೇರಿಯಲ್ಲಿತಲಾ 2 ಸೆಂ.ಮೀ. ಮಳೆಯಾಗಿದೆ.ಮಲೆನಾಡು ಭಾಗದಲ್ಲಿ ಮಳೆ
ಬಿಸಿಲ ಬೇಗೆಯಿಂದ ಹೈರಾಣಾಗಿದ್ದ ತಾಲೂಕಿನ ಮಲೆನಾಡು ಭಾಗಕ್ಕೆ ಮೊದಲ ಮಳೆಯ ಸಿಂಚನವಾಗಿದೆ. ಭಾನುವಾರ ಸಂಜೆ ರಭಸದ ಮಳೆ ಸುರಿದು ತಂಪೆರೆದಿದೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಚಿಕ್ಕಾಂಶಿ ಹೊಸೂರ, ಕ್ಯಾಸನೂರ, ಕೋಣನಕೊಪ್ಪ, ಚಿಕ್ಕಾಂಶಿ ಗ್ರಾಮ ಭಾಗದಲ್ಲಿಸುಮಾರು ಅರ್ಧ ಗಂಟೆ ಉತ್ತಮ ಮಳೆಯಾಗಿದೆ. ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಜನರು ಮಳೆಯ ಆಗಮನದಿಂದ ತಂಪಿನ ಅನುಭವ ಪಡೆದುಕೊಂಡಿದ್ದಾರೆ. ಚರಂಡಿ ತುಂಬಿ ಹರಿದ ಮಳೆ ನೀರು ಪಕ್ಕದ ಹೊಲಗದ್ದೆಗಳನ್ನು ಹೊಕ್ಕಿತ್ತು. ಜೋರು ಮಳೆ ಮತ್ತು ರಭಸದ ಗಾಳಿಗೆ ಬಾಳೆ ತೋಟಗಳು ಹಾನಿಗೊಂಡಿವೆ. ಗೋವಿನಜೋಳ ಮತ್ತು ಬಾಳೆ ಗಿಡಗಳು ಬಾಗಿಕೊಂಡಿವೆ.ಶಿವಮೊಗ್ಗ ಐದು ತಿಂಗಳ ಬಳಿಕ ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಬಿರುಗಾಳಿ, ಗುಡುಗು ಸಿಡಿಲು ಸಹಿತ ಸಾಧಾರಣದಿಂದ ಧಾರಾಕಾರವಾಗಿ ಮಳೆ ಸುರಿದಿದೆ. ತೀರ್ಥಹಳ್ಳಿ, ಸಾಗರ, ಜೋಗ್ಫಾಲ್ಸ್, ಆನಂದಪುರ, ರಿಪ್ಪನ್ಪೇಟೆ, ಶಿಕಾರಿ ಪುರ, ಶಿರಾಳಕೊಪ್ಪ, ಆನವಟ್ಟಿ ಸುತ್ತಮುತ್ತ ಧಾರಾಕಾರ ಮಳೆಯಾದರೆ, ಶಿವಮೊಗ್ಗ, ಹೊಸನಗರ, ಸೊರಬ ತಾಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. ವರ್ಷದ ಮೊದಲ ಮಳೆಯು ಭೂಮಿ ಮತ್ತು ಜನತೆಗೆ ತಂಪೆರೆದಿದೆ. ಮೂರು ತಿಂಗಳ ಸುಡು ಬಿಸಿಲಿನಿಂದ ಜನ ಬಸವಳಿದು ಮಳೆಯ ನಿರೀಕ್ಷೆಯಲ್ಲಿದ್ದರು. ತೋಟಗಳಿಗೂ ಜೀವ ಬಂದಂತಾಗಿದ್ದು ಕೊಳವೆ ಬಾವಿಗಳ ಯಂತ್ರಗಳಿಗೂ ವಿಶ್ರಾಂತಿ ಸಿಕ್ಕಿದೆ.
ದಾವಣಗೆರೆ ತಂಪು
ದಾವಣಗೆರೆಯಲ್ಲಿ ಎರಡು ದಿನದಿಂದ ಮಳೆಯ ವಾತಾವರಣ ಸೃಷ್ಟಿಯಾಗಿದ್ದು ಭಾನುವಾರವೂ ಜಿಲ್ಲೆಯ ಜಗಳೂರು ಸೇರಿ ಇತರೆಡೆ ಮಳೆಯಾಗಿದೆ. ದಾವಣಗೆರೆ ನಗರದಲ್ಲೂ ಸಂಜೆ ಮೋಡ ಮುಸುಕಿದ ವಾತಾವರಣವಿದ್ದು ತುಂತುರು ಮಳೆ ಸುರಿಯಿತು. ದಾವಣಗೆರೆಯಲ್ಲಿ ಬಿಸಿಲು ಜೋರಾಗಿದ್ದು, ತಾಪಮಾನ 40 ಡಿಗ್ರಿ ಮುಟ್ಟಿದೆ. ಈ ವೇಳೆ ಅಲ್ಲಲ್ಲಿ ಮಳೆ ಬರುತ್ತಿರುವುದು ಇಳೆಯನ್ನು ಕೊಂಚ ತಂಪಾಗಿಸಿದೆ.ಜಿಲ್ಲೆಯ ಜಗಳೂರು ತಾಲೂಕಿನ ಹಲವೆಡೆ ಸುಮಾರು ಅರ್ಧಗಂಟೆ ಕಾಲ ಮಳೆ ಸುರಿದಿದೆ. ದಾವಣಗೆರೆ ತಾಲೂಕಿನ ಆನಗೋಡು, ಹೆಬ್ಬಾಳು ಭಾಗದಲ್ಲಿ ಮಳೆಯಾಗಿದೆ. ಹೆಬ್ಬಾಳು ಟೋಲ್ ಬಳಿ ಅಂಗಡಿಗಳಿಗೆ ನೀರು ನುಗ್ಗಿದೆ. ನೀರು ಹೆದ್ದಾರಿ ಮೇಲೆ ಹರಿದಿದೆ. ದಾವಣಗೆರೆ ನಗರದಲ್ಲಿ ಸಂಜೆ ವೇಳೆಗೆ ಮೋಡ ಮುಸುಕಿದ ವಾತಾವರಣ ಇತ್ತು, ಗುಡುಗು, ಮಿಂಚಿನೊಂದಿಗೆ ತುಂತುರು ಮಳೆ ಸುರಿಯಿತು.