ಆ್ಯಪ್ನಗರ

ಮುಂಬಯಿ ಸಿದ್ದಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿ ಅತೃಪ್ತ ಶಾಸಕರ ಪ್ರಾರ್ಥನೆ

ಕರ್ನಾಟಕದಲ್ಲಿ ರಾಜಕೀಯ ಕ್ಷಿಪ್ರಕ್ರಾಂತಿಗೆ ಕಾರಣರಾಗಿದ್ದ ಶಾಸಕರು ಈಗ ಮುಂಬಯಿ ರೌಂಡ್ಸ್‌ ಕೈಗೊಂಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಇವರೆಲ್ಲರೂ ಹೋಟೆಲ್‌ನಲ್ಲಿಯೇ ಬೀಡು ಬಿಟ್ಟಿದ್ದರು.

Vijaya Karnataka Web 12 Jul 2019, 5:31 pm
ಮುಂಬಯಿ: ಕರ್ನಾಟಕ ರಾಜಕೀಯ ಕ್ಷಿಪ್ರಕ್ರಾಂತಿಯಲ್ಲಿ ರಾಜೀನಾಮೆ ನೀಡಿದ ಕಳೆದ ಒಂದು ವಾರದಿಂದ ಮುಂಬಯಿಯಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರು ಈಗ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದಾರೆ.
Vijaya Karnataka Web ಸಿದ್ದಿ ವಿನಾಯಕ ದೇವಾಲಯ
ಸಿದ್ದಿ ವಿನಾಯಕ ದೇವಾಲಯ


ಗುರುವಾರ ಸಂಜೆ ಅತಿ ವೇಗವಾಗಿ 'ರನ್‌' ಮಾಡಿಕೊಂಡು ಬಂದು ಮತ್ತೊಮ್ಮೆ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ್ದ ಅತೃಪ್ತ ಶಾಸಕರು ಈಗ ಟೆಂಪಲ್‌ ರನ್‌ ಮಾಡುತ್ತಿದ್ದಾರೆ.

ನಾಲ್ವರು ಅತೃಪ್ತ ಶಾಸಕರಾದ ಭೈರತಿ ಬಸವರಾಜ್‌, ಎಸ್‌.ಟಿ. ಸೋಮಶೇಖರ್‌, ಬಿ.ಸಿ ಪಾಟೀಲ್‌ ಅವರು ಸೆಂಟ್ರಲ್‌ ಮುಂಬಯಿಯಲ್ಲಿರುವ ಸಿದ್ದಿ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಮುಂಬಯಿನ ಐಷಾರಾಮಿ ಹೋಟೆಲ್‌ನಲ್ಲಿ ತಂಗಿರುವ 14 ಶಾಸಕರ ಪೈಕಿ ನಾಲ್ವರು ಮಾತ್ರ ಹೊರಬಂದು ಸ್ವಲ್ಪ ಹೊತ್ತು ಸುತ್ತಾಡಿದ್ದಾರೆ.

ಪೊವಾಯಿಯಲ್ಲಿರುವ ರೆನೈಸಾನ್ಸ್ ಹೋಟೆಲ್‌ಗೆ ವಾಪಸಾಗಿರುವ ಅತೃಪ್ತ ಶಾಸಕರು ಇನ್ನೂ ಎರಡು ದಿನಗಳ ಕಾಲ ಇಲ್ಲಿಯೇ ತಂಗಲಿದ್ದಾರೆ ಎನ್ನಲಾಗಿದೆ.

ಕಳೆದ ಶನಿವಾರ ರಾಜೀನಾಮೆ ನೀಡಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅತೃಪ್ತ ಶಾಸಕರು ಮುಂಬಯಿ ಹೋಟೆಲ್‌ನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ