ಆ್ಯಪ್ನಗರ

ಇಂದಿನ ಚುಟುಕು ಸುದ್ದಿಗಳು: ಜೂನ್ 18, ಕರ್ನಾಟಕದಲ್ಲಿ ಇಂದು ಮಾಸ್ಕ್ ದಿನಾಚರಣೆ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂದಿನ ಪ್ರಮುಖ ಆಗುಹೋಗುಗಳ ಸಂಕ್ಷಿಪ್ತ ವರದಿ ಇಲ್ಲಿದೆ. ತಾಜಾ ಸುದ್ದಿಗಳಿಗಾಗಿ ಕಾದಿರಿ

Vijaya Karnataka Web 18 Jun 2020, 4:34 pm
ಕಾಂಗ್ರೆಸ್‌ನಲ್ಲಿ ಬಲಗೊಳ್ಳುತ್ತಿದೆ ಡಿಕೆಶಿ ಹಿಡಿತ! ಸಿದ್ದು ಬಣದಲ್ಲಿ ತಳಮಳ
Vijaya Karnataka Web ಚುಟುಕು ಸುದ್ದಿಗಳು

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಿಡಿತ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡ ಡಿಕೆಶಿ ಭಾರೀ ಹುಮ್ಮಸ್ಸಿನಲ್ಲಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಬಾಹ್ಯವಾಗಿ ಪಕ್ಷದ ವರ್ಚಸ್ಸನ್ನು ಬಲಗೊಳಿಸುವುದರ ಜೊತೆಗೆ ಆಂತರಿಕವಾಗಿಯೂ ತಮ್ಮ ಹಿಡಿತವನ್ನು ಬಿಗಿಗೊಳಿಸುವ ಪ್ರಯತ್ನದಲ್ಲಿದ್ದಾರೆ. ಡಿಕೆಶಿ ಈ ನಡೆ ಪಕ್ಷದ ಒಂದು ಬಣದ ಅಸಮಾಧಾನಕ್ಕೆ ಕಾರಣವಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ಕಾಂಗ್ರೆಸ್‌ನಲ್ಲಿ ಬಲಗೊಳ್ಳುತ್ತಿದೆ ಡಿಕೆಶಿ ಹಿಡಿತ! ಸಿದ್ದು ಬಣದಲ್ಲಿ ತಳಮಳ

ಮೇಲ್ಮನೆ ಚುನಾವಣೆ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿಗಳು, ಎಂಟಿಬಿ ಮುಖದಲ್ಲಿ ಮೂಡಿದ ನಗು!
ವಿಧಾನಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಎಂಟಿಬಿ ನಾಗರಾಜ್‌, ಆರ್‌. ಶಂಕರ್‌, ಪ್ರತಾಪ್‌ ಸಿಂಹ ನಾಯಕ್‌ ಹಾಗೂ ಸುನೀಲ್ ವಲ್ಯಾಪುರೆ ಗುರುವಾರ ವಿಧಾನಸೌಧದಲ್ಲಿ ನಾಮಪತ್ರವನ್ನು ಸಲ್ಲಿಸಿದರು. ಜೂನ್ 29 ಕ್ಕೆ ಚುನಾವಣೆ ನಡೆಯಲಿದೆ.
ಮೇಲ್ಮನೆ ಚುನಾವಣೆ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿಗಳು, ಎಂಟಿಬಿ ಮುಖದಲ್ಲಿ ಮೂಡಿದ ನಗು!

ಕೊರೊನಾ ಸೋಂಕಿನ ಭೀತಿ ನಡುವೆಯೂ ದ್ವಿತೀಯ ಪಿಯುಸಿ ಪರೀಕ್ಷೆ ಯಶಸ್ವಿ
ಮೈಸೂರು ಜಿಲ್ಲೆಯೊಂದರಲ್ಲೇ ಒಟ್ಟು 31 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು 50 ಕೇಂದ್ರಗಳಲ್ಲಿ ಪರೀಕ್ಷೆ ಬರೆದರು. ಹೊರ ಜಿಲ್ಲೆಯ 436 ವಿದ್ಯಾರ್ಥಿಗಳೂ ಮೈಸೂರಿನಲ್ಲೇ ಪರೀಕ್ಷೆ ಬರೆದಿದ್ದಾರೆ.
ಕೊರೊನಾ ಸೋಂಕಿನ ಭೀತಿ ನಡುವೆಯೂ ದ್ವಿತೀಯ ಪಿಯುಸಿ ಪರೀಕ್ಷೆ ಯಶಸ್ವಿ

ರಾಮನಗರ: ಕನಕಪುರದಲ್ಲಿ ವೈದ್ಯ ದಂಪತಿಗೆ ಸೋಂಕು, 800ಕ್ಕೂ ಅಧಿಕ ಮಂದಿ ಕ್ವಾರಂಟೈನ್‌ಗೆ
ರಾಮನಗರ: ಕನಕಪುರದಲ್ಲಿ ವೈದ್ಯ ದಂಪತಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಇವರಿಬ್ಬರೂ ವೈದ್ಯರಾದ ಕಾರಣ ಇವರ ಬಳಿ ಚಿಕಿತ್ಸೆ ಪಡೆದ 800ಕ್ಕೂ ಅಧಿಕ ಮಂದಿಯನ್ನು ಸ್ವಯಂ ಕ್ವಾರಂಟೈನ್ ಗೆ ಒಳಗಾಗಲು ಕನಕಪುರ ತಾಲೂಕು ಸೂಚಿಸಿದೆ.
ರಾಮನಗರ: ಕನಕಪುರದಲ್ಲಿ ವೈದ್ಯ ದಂಪತಿಗೆ ಸೋಂಕು, 800ಕ್ಕೂ ಅಧಿಕ ಮಂದಿ ಕ್ವಾರಂಟೈನ್‌ಗೆ

ಬ್ಯಾಂಕ್‌ ಗ್ರಾಹಕರ ಮನೆ ಬಾಗಿಲಿಗೇ ಹಣ..! ಅಂಚೆಯಣ್ಣ ಈಗ ಚಲಿಸುವ ಎಟಿಎಂ..!
ಇದುವರೆಗೂ ತಮ್ಮ ಇಲಾಖೆಯಲ್ಲಿ ಖಾತೆ ಹೊಂದಿದ್ದ ಗ್ರಾಹಕರಿಗೆ ಹಣ ಪಡೆಯುವ ಮತ್ತು ಜಮಾ ಮಾಡುವ ಸೌಲಭ್ಯ ಕಲ್ಪಿಸಿದ್ದ ಅಂಚೆ ಇಲಾಖೆ, ಇದೀಗ ಬ್ಯಾಂಕ್‌ ಗ್ರಾಹಕರಿಗೂ ತನ್ನ ಸೌಲಭ್ಯ ವಿಸ್ತರಿಸಿದೆ. ಪೋಸ್ಟ್‌ ಮನ್‌ ಇದೀಗ ಪತ್ರವನ್ನಷ್ಟೇ ಅಲ್ಲ, ನಿಮ್ಮ ಮನೆ ಬಾಗಿಲಿಗೆ ಬಂದು ಹಣವನ್ನೂ ನೀಡುತ್ತಾರೆ.
ಬ್ಯಾಂಕ್‌ ಗ್ರಾಹಕರ ಮನೆ ಬಾಗಿಲಿಗೇ ಹಣ..! ಅಂಚೆಯಣ್ಣ ಈಗ ಚಲಿಸುವ ಎಟಿಎಂ..!

ಭಾಗಮಂಡಲ-ಕರಿಕೆ ರಸ್ತೆ ನಿರ್ವಹಣೆ ನಿರ್ಲಕ್ಷ್ಯ: ಹೊರಜಗತ್ತಿನೊಂದಿಗೆ ಸಂಪರ್ಕ ಕಡಿತದ ಆತಂಕದಲ್ಲಿ ಕರಿಕೆ ನಿವಾಸಿಗಳು
ಮಡಿಕೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಒಂದು ವೇಳೆ ಭೂ ಕುಸಿತವಾಗಿ ರಸ್ತೆ ಸಂಪರ್ಕ ಕಡಿತಗೊಂಡರೆ ಇರುವ ಏಕೈಕ ಪರ್ಯಾಯ ಮಾರ್ಗ ಭಾಗಮಂಡಲ-ಕರಿಕೆ ರಸ್ತೆ. ಆದರೆ, ಮಳೆಗಾಲ ಆರಂಭವಾದರೂ ಈ ಹಾದಿಯ ನಿರ್ವಹಣಾ ಕಾರ್ಯವೇ ನಡೆದಿಲ್ಲ
ಭಾಗಮಂಡಲ-ಕರಿಕೆ ರಸ್ತೆ ನಿರ್ವಹಣೆ ನಿರ್ಲಕ್ಷ್ಯ: ಹೊರಜಗತ್ತಿನೊಂದಿಗೆ ಸಂಪರ್ಕ ಕಡಿತದ ಆತಂಕದಲ್ಲಿ ಕರಿಕೆ ನಿವಾಸಿಗಳು

ವಿಜಯಪುರ: ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ
ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಹಿನ್ನೆಲೆ ಜಿಲ್ಲೆಯ 41 ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ 41 ಪರೀಕ್ಷಾ ಕೇಂದ್ರಗಳಲ್ಲಿ‌ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಪರೀಕ್ಷಾ ಕೊಠಡಿಯೊಳಗೆ ಬಿಡಲಾಯಿತು.
ವಿಜಯಪುರ: ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ

ಬಿತ್ತನೆಗೆ ಮುಂದಾದ ಅನ್ನದಾತ
ಕಳೆದ ವರ್ಷದ ಮುಂಗಾರು ಆರಂಭದಲ್ಲಿಅಸಮರ್ಪಕ ಮಳೆ, ನಂತರ ಪ್ರವಾಹ. ಹೀಗಾಗಿ ಬೆಳೆ ಅನ್ನದಾನ ಕೈ ಸೇರಲಿಲ್ಲ. ಈಗ ಕೊರೊನಾ ಲಾಕ್‌ಡೌನ್‌ನಿಂದಾಗಿ ಹಿಂಗಾರಿಯಲ್ಲಿ ಹಣ್ಣು, ತರಕಾರಿ ಬೆಳೆ ಹಾನಿ ಹಾನಿ. ಹೀಗೆ ಸರಣಿ ಹಾನಿ ನಡುವೆಯೂ ಪ್ರಸಕ್ತ ಮುಂಗಾರು ಕೈ ಹಿಡಿಯುವ ನಂಬಿಕೆಯಲ್ಲಿ ಹದ ಮಳೆಯಾಗಿದ್ದು, ಉತ್ತಮ ಬೆಳೆಯ ಆಶಾವಾದ ಮೂಡಿಸಿದೆ. ಜಿಲ್ಲಾದ್ಯಂತ ಬಿತ್ತನೆಗೆ ಶುರುವಾಗಿದೆ.
ಬಿತ್ತನೆಗೆ ಮುಂದಾದ ಅನ್ನದಾತ

ಮಾಸ್ಕ್‌ ತಯಾರಿಸಿ ಒಂಟಿ ಕೈ ಬಾಲೆಯಿಂದ ಸಮಾಜ ಸೇವೆ!
ಉಡುಪಿಯ ಈ ಯುವತಿ ಸಮಾಜ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ. ಒಂಟಿ ಕೈಯಿಂದಲೇ ಮಾಸ್ಕ್ ಧರಿಸಿ ಎಲ್ಲರಿಗೂ ಮಾದರಿಯಾಗಿದ್ದಾಳೆ.
ಮಾಸ್ಕ್‌ ತಯಾರಿಸಿ ಒಂಟಿ ಕೈ ಬಾಲೆಯಿಂದ ಸಮಾಜ ಸೇವೆ!

ಉಡುಪಿ: ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೀಡಾದವರ ನೆರವಿಗೆ ಮೊರೆ
ಕತಾರ್‌ನಲ್ಲಿ ಕಳೆದ 3ತಿಂಗಳಿಂದ ಉದ್ಯೋಗ ಹಾಗೂ ಆದಾಯವಿಲ್ಲದೆ ಸಂಕಷ್ಟಕ್ಕೊಳಗಾಗಿರುವ ಜಿಲ್ಲೆಯ ಹಲವು ಮಂದಿ ಇದೀಗ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿ ಸಹಕಾರ ಯಾಚಿಸಿದ್ದಾರೆ.
ಉಡುಪಿ: ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೀಡಾದವರ ನೆರವಿಗೆ ಮೊರೆ

ಕೃಷಿಯ ಕಡೆ ಒಲವು ತೋರಿದ ಯುವ ಪಡೆ: ಪಂಜ ಶ್ರೀಹರಿ ಸ್ಫೋರ್ಟ್ಸ್ ಕ್ಲಬ್‌ ಸದಸ್ಯರಿಂದ ಹಡಿಲು ಭೂಮಿಯಲ್ಲಿ ಭತ್ತದ ಬೇಸಾಯ
ಕೊರೊನಾ ಸಂಕಷ್ಟದಿಂದಾಗಿ ಅದೆಷ್ಟೋ ಜನರು ಕೆಲಸವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಇದನ್ನೇ ಸವಾಲಾಗಿ ತೆಗೆದುಕೊಂಡ ಪಕ್ಷಿಕೆರೆ ಪಂಜ ಶ್ರೀ ಹರಿ ಸ್ಫೋರ್ಟ್ಸ್ ಕ್ಲಬ್‌ ಹರಿಪಾದ ಇದರ ಅಧ್ಯಕ್ಷ ಚೇತನ್‌ ಹಾಗೂ ಸದಸ್ಯರು ಕೃಷಿಯತ್ತ ಒಲವು ತೋರಿ 'ನಮ್ಮ ನಡೆ ಕೃಷಿಯ ಕಡೆ' ಎಂಬ ಧ್ಯೇಯ ಮುಂದಿಟ್ಟುಕೊಂಡು ಕೃಷಿಯ ಕಡೆ ತಮ್ಮ ಒಲವು ವ್ಯಕ್ತಪಡಿಸಿದ್ದಾರೆ
ಕೃಷಿಯ ಕಡೆ ಒಲವು ತೋರಿದ ಯುವ ಪಡೆ: ಪಂಜ ಶ್ರೀಹರಿ ಸ್ಫೋರ್ಟ್ಸ್ ಕ್ಲಬ್‌ ಸದಸ್ಯರಿಂದ ಹಡಿಲು ಭೂಮಿಯಲ್ಲಿ ಭತ್ತದ ಬೇಸಾಯ

ಸಾಮಾನ್ಯ ಕಾರ್ಯಕರ್ತ ಗೋವಿಂದರಾಜುಗೆ ಜೆಡಿಎಸ್‌ನಿಂದ ಟಿಕೆಟ್‌: ಮಾಜಿ ಸಿಎಂ ಎಚ್‌ಡಿಕೆ
ಸಾಮಾನ್ಯ ಕಾರ್ಯಕರ್ತನಾಗಿರುವ ಗೋವಿಂದರಾಜುಗೆ ಮೇಲ್ಮನೆ ಟಿಕೆಟ್‌ ನೀಡಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷನಿಷ್ಟೆ ಹಾಗೂ ಸಂಘಟನಾ ಸಾಮರ್ಥ್ಯವಿರುವವರಿಗೆ ಮಣೆ ಹಾಕಲಾಗಿದೆ ಎಂದು ಎಚ್‌ಡಿಕೆ ತಿಳಿಸಿದ್ದಾರೆ.
ಸಾಮಾನ್ಯ ಕಾರ್ಯಕರ್ತ ಗೋವಿಂದರಾಜುಗೆ ಜೆಡಿಎಸ್‌ನಿಂದ ಟಿಕೆಟ್‌: ಮಾಜಿ ಸಿಎಂ ಎಚ್‌ಡಿಕೆ

ಮಾಸ್ಕ್ ಧರಿಸಿ ಕೊರೊನಾ ಓಡಿಸಿ: ಮಾಸ್ಕ್ ಡೇ ಗೆ ಬಿಎಸ್‌ವೈ ಚಾಲನೆ
ಕೊರೊನಾ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜನರು ಮಾಸ್ಕ್ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಜಾಗೃತಿ ಮೂಡಿಸುವ ಸಲುವಾಗಿ ಗುರುವಾರ ರಾಜ್ಯಾದ್ಯಂತ ಮಾಸ್ಕ್‌ ಡೇ ಹಮ್ಮಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದರ ಅಂಗವಾಗಿ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಪಾದಯಾತ್ರೆಗೆ ಚಾಲನೆ ನೀಡಿದರು.
ಮಾಸ್ಕ್ ಧರಿಸಿ ಕೊರೊನಾ ಓಡಿಸಿ: ಮಾಸ್ಕ್ ಡೇ ಗೆ ಬಿಎಸ್‌ವೈ ಚಾಲನೆ

ಬೆಂಗಳೂರಿನಲ್ಲಿ ಮತ್ತೆ 55 ಮಂದಿಗೆ ಕೊರೊನಾ ಸೋಂಕು: ಐವರ ಸಾವು, 800 ಗಡಿ ದಾಟಿದ ಸೋಂಕಿತರ ಸಂಖ್ಯೆ
ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಶತಕ ದಾಟಿದ್ದು, ರಾಜಧಾನಿ ಬೆಂಗಳೂರಿನಲ್ಲೇ ಅತಿ ಹೆಚ್ಚು ಮಂದಿಯನ್ನು ಸೋಂಕು ಬಲಿ ಪಡೆದಿದೆ. ನಗರದಲ್ಲಿ ಸೋಂಕಿತರ ಸಂಖ್ಯೆ 800 ದಾಟಿದ್ದು, ಬುಧವಾರ ಒಂದೇ ದಿನ 55 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ
ಬೆಂಗಳೂರಿನಲ್ಲಿ ಮತ್ತೆ 55 ಮಂದಿಗೆ ಕೊರೊನಾ ಸೋಂಕು: ಐವರ ಸಾವು, 800 ಗಡಿ ದಾಟಿದ ಸೋಂಕಿತರ ಸಂಖ್ಯೆ

ಸಾಮಾನ್ಯ ಕಾರ್ಯಕರ್ತ ಗೋವಿಂದರಾಜುಗೆ ಜೆಡಿಎಸ್‌ನಿಂದ ಟಿಕೆಟ್‌: ಮಾಜಿ ಸಿಎಂ ಎಚ್‌ಡಿಕೆ
ಸಾಮಾನ್ಯ ಕಾರ್ಯಕರ್ತನಾಗಿರುವ ಗೋವಿಂದರಾಜುಗೆ ಮೇಲ್ಮನೆ ಟಿಕೆಟ್‌ ನೀಡಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷನಿಷ್ಟೆ ಹಾಗೂ ಸಂಘಟನಾ ಸಾಮರ್ಥ್ಯವಿರುವವರಿಗೆ ಮಣೆ ಹಾಕಲಾಗಿದೆ ಎಂದು ಎಚ್‌ಡಿಕೆ ತಿಳಿಸಿದ್ದಾರೆ.
ಸಾಮಾನ್ಯ ಕಾರ್ಯಕರ್ತ ಗೋವಿಂದರಾಜುಗೆ ಜೆಡಿಎಸ್‌ನಿಂದ ಟಿಕೆಟ್‌: ಮಾಜಿ ಸಿಎಂ ಎಚ್‌ಡಿಕೆ

ಮೈಸೂರಿನ ಮುಡಾ ಅಪಾರ್ಟ್‌ಮೆಂಟ್‌ ಯೋಜನೆ ಅತಂತ್ರ: 45 ಸಾವಿರ ಮಂದಿಗೆ ಭ್ರಮನಿರಸನ
ನಿಜವಾದ ಮೈಸೂರು ವಾಸಿಯಾದವರಿಗೆ ಹಾಗೂ ಹತ್ತು ವರ್ಷಕ್ಕೂ ಹೆಚ್ಚಿನ ಕಾಲದಿಂದಲೂ ಇಲ್ಲಿ ವಾಸಿಸುತ್ತಿರುವ ಇಲ್ಲಿವರೆಗೂ ಸರಕಾರಿ ನಿವೇಶನ, ಮನೆ ಪಡೆಯದವರಿಗೆ ಗುಂಪು ಮನೆ ಯೋಜನೆಯಲ್ಲಿ ಸ್ವಂತ ಮನೆ ನಿರ್ಮಿಸಿಕೊಡುವ ಉದ್ದೇಶ ಹಾಕಿಕೊಳ್ಳಲಾಗಿದೆ.
ಮೈಸೂರಿನ ಮುಡಾ ಅಪಾರ್ಟ್‌ಮೆಂಟ್‌ ಯೋಜನೆ ಅತಂತ್ರ: 45 ಸಾವಿರ ಮಂದಿಗೆ ಭ್ರಮನಿರಸನ

ಅಂತಾರಾಷ್ಟ್ರೀಯ ಯೋಗ ದಿನದಂದು ನಿಮ್ಮ ಮನೆಯ ಟೆರೇಸ್‌ನಲ್ಲಿ ಯೋಗ ಮಾಡಿ..!
ಕೊರೊನಾ ವೈರಸ್ ಭೀತಿ ಮಧ್ಯೆಯೂ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈ ಪೈಕಿ ಮೈಸೂರಿನಲ್ಲಿ ವರ್ಚುಯಲ್ ಟೆರೇಸ್ ಯೋಗ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ದಾಖಲೆ ನಿರ್ಮಿಸುವ ಹಂಬಲವಿದೆ.
ಅಂತಾರಾಷ್ಟ್ರೀಯ ಯೋಗ ದಿನದಂದು ನಿಮ್ಮ ಮನೆಯ ಟೆರೇಸ್‌ನಲ್ಲಿ ಯೋಗ ಮಾಡಿ..!

ಮಗನ ಕ್ವಾರಂಟೈನ್‌, ಅಮ್ಮನ ಅಂತ್ಯ ಸಂಸ್ಕಾರ
ಶಿವಮೊಗ್ಗ : ಮೂಲವ್ಯಾಧಿ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಯ ಚಿಕಿತ್ಸೆ ಪಡೆಯುವುದಕ್ಕಾಗಿ ನಗರದ ಜಿಲ್ಲಾಮೆಗ್ಗಾನ್‌ ಬೋಧನಾ ಆಸ್ಪತ್ರೆಗೆ ಬಂದಿದ್ದ 70 ವರ್ಷದ ಮಹಿಳೆ ಕೊರೊನಾದಿಂದ ಮೃತಪಟ್ಟಿದ್ದಾರೆ. ಅಮ್ಮನ ಶವಸಂಸ್ಕಾರದಲ್ಲೂ ಮಗ ಭಾಗಿಯಾಗದಂತೆ ವಿಧಿ ಇವರ ಬಾಳಲ್ಲಿಆಟವಾಡಿದೆ.
ಮಗನ ಕ್ವಾರಂಟೈನ್‌, ಅಮ್ಮನ ಅಂತ್ಯಸಂಸ್ಕಾರ

ವೈರಲ್‌ ಆಗಿದ್ದ ಬಾಲಕಿ, ಹುತಾತ್ಮ ಯೋಧ ಸಂತೋಷ್‌ ಬಾಬು ಪುತ್ರಿಯಲ್ಲ, ನೆಲಮಂಗಲದವಳು!
ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಾಲಕಿ ಚೀನಾ ಸೈನಿಕರ ವಿರುದ್ಧ ಹೋರಾಡಿ ಹುತಾತ್ಮರಾದ ಹೈದ್ರಾಬಾದ್‌ ಮೂಲದ ಕರ್ನಲ್‌ ಸಂತೋಷ್‌ ಬಾಬು ಅವರ ಪುತ್ರಿಯಲ್ಲ. ವೈರಲ್‌ ಫೋಟೊದ ಅಸಲಿ ಸ್ಟೋರಿ ಇಲ್ಲಿದೆ.
ವೈರಲ್‌ ಆಗಿದ್ದ ಬಾಲಕಿ, ಹುತಾತ್ಮ ಯೋಧ ಸಂತೋಷ್‌ ಬಾಬು ಪುತ್ರಿಯಲ್ಲ, ನೆಲಮಂಗಲದವಳು!

ಜೂನ್ 21ಕ್ಕೆ ಕಂಕಣ ಸೂರ್ಯಗ್ರಹಣ, ವೀಕ್ಷಣೆಗೆ ಅವಕಾಶ
ಕಂಕಣ ಸೂರ್ಯಗ್ರಹಣ ಜೂನ್‌ 21ಕ್ಕೆ ಸಂಭವಿಸಲಿದ್ದು, ಮೌಢ್ಯದಿಂದ ಹೊರಬಂದು ನಭೋ ಮಂಡಲದಲ್ಲಿ ಭಾನುವಾರ ಕಾಣುವ ನೆರಳು ಬೆಳಕಿನ ಆಟದ ವಿಸ್ಮಯವನ್ನು ಕಣ್ತುಂಬಿಕೊಳ್ಳಬಹುದು.
ಜೂನ್ 21ಕ್ಕೆ ಕಂಕಣ ಸೂರ್ಯಗ್ರಹಣ, ವೀಕ್ಷಣೆಗೆ ಅವಕಾಶ

ಬಾಗಲಕೋಟೆಯಲ್ಲಿ ಮಾಸ್ಕ್ ಡೇ ಆಚರಣೆ: ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಕಾಲ್ನಡಿಗೆ ಜಾಥಾ
ಕೊರೊನಾವೈರಸ್‌ನ ಬಗ್ಗೆ ಜಾಗೃತಿ ಮೂಡಿಸಲು ಕರ್ನಾಟಕದಾದ್ಯಂತ ಇಂದು (ಜೂನ್ 18 ರಂದು) ಮಾಸ್ಕ್‌ ಡೇ ಯನ್ನು ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಬಾಗಲಕೋಟೆಯಲ್ಲಿ ಕಾಲ್ನಡಿಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.
ಬಾಗಲಕೋಟೆಯಲ್ಲಿ ಮಾಸ್ಕ್ ಡೇ ಆಚರಣೆ: ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಕಾಲ್ನಡಿಗೆ ಜಾಥಾ

ರಾತ್ರೋರಾತ್ರಿ ನೆಲಸಮವಾಯ್ತು ವಿವೇಕಾನಂದರ ವಿಕಾರ ಪ್ರತಿಮೆ, ಸಿ.ಟಿ.ರವಿ ಸ್ಪಷ್ಟನೆ
ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಇಲ್ಲದೆ ಸ್ವಾಮಿ ವಿವೇಕಾನಂದರ ವಿಕಾರ ರೂಪದ ಪ್ರತಿಮೆಯನ್ನು ರಾತ್ರೋರಾತ್ರಿ ಯಾರ ಅನುಮತಿಯೂ ಇಲ್ಲದೆ ನೆಲಸಮ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಮೂರ್ತಿಯನ್ನು ಮಾಡಲಾಗಿತ್ತು.
ರಾತ್ರೋರಾತ್ರಿ ನೆಲಸಮವಾಯ್ತು ವಿವೇಕಾನಂದರ ವಿಕಾರ ಪ್ರತಿಮೆ, ಸಿ.ಟಿ.ರವಿ ಸ್ಪಷ್ಟನೆ

10 ಲಕ್ಷ ಬಾಡಿಗೆ ಮನ್ನಾ ಮಾಡಿದ ಕಲಬುರಗಿಯ ಬಿಲ್ಡಿಂಗ್‌ ಒಡೆಯ!
ಲಾಕ್‌ಡೌನ್‌ನಿಂದಾಗಿ ಸುಮಾರು ಎರಡು ತಿಂಗಳಿಗೂ ಹೆಚ್ಚು ದಿನ ದೇಶದಾದ್ಯಂತ ಅಂಗಡಿಗಳು ಬಂದ್‌ ಆಗಿದ್ದವು. ಇದರಿಂದ ಬಾಡಿಗೆ ಹೇಗೆ ಕಟ್ಟುವುದು ಅನ್ನುವ ಯೋಚನೆಯಲ್ಲಿ ವ್ಯಾಪಾರಸ್ಥರು ಇದ್ಗರು. ಇದೀಗ ಕಲಬುರ್ಗಿಯ ಉದ್ಯಮಿಯೊಬ್ಬರು ತಮ್ಮ 65 ಅಂಗಡಿಗಳ ವ್ಯಾಪಾರಿಗಳಿಗೆ ಬಾಡಿಗೆ ರಿಯಾಯಿತಿ ನೀಡಿದ್ದಾರೆ.
10 ಲಕ್ಷ ಬಾಡಿಗೆ ಮನ್ನಾ ಮಾಡಿದ ಕಲಬುರಗಿಯ ಬಿಲ್ಡಿಂಗ್‌ ಒಡೆಯ!

'ಚೀನಾ ವಸ್ತುಗಳ ಬಹಿಷ್ಕಾರ, ಯುದ್ಧಕ್ಕಿಂತ ದೊಡ್ಡ ಹೊಡೆತ': ಜಗದೀಶ್‌ ಶೆಟ್ಟರ್‌
ಚೀನಾದ ಆಕ್ರಮಣಕಾರಿ ನೀತಿಯಿಂದ ದೇಶದ ಜನರಲ್ಲಿ ಜಾಗೃತಿ ಬಂದಿದೆ. ಪ್ರಧಾನಿ ಮೋದಿ ದೇಶದ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಜಗದೀಶ್ ಶೆಟ್ಟರ್‌ ಹೇಳಿದ್ದಾರೆ.
'ಚೀನಾ ವಸ್ತುಗಳ ಬಹಿಷ್ಕಾರ, ಯುದ್ಧಕ್ಕಿಂತ ದೊಡ್ಡ ಹೊಡೆತ': ಜಗದೀಶ್‌ ಶೆಟ್ಟರ್‌

ಮಾಸ್ಕ್‌ ಧರಿಸದ ಜನರ ಪಾಲಿಗೆ 'ಯಮ ಕಿಂಕರ'ರಾದ ಮೈಸೂರು ಪೊಲೀಸರು..!
ಕೊರೊನಾ ವೈರಸ್‌ ವಿಚಾರದಲ್ಲಿ ನೀವು ಜಾಗೃತರಾಗಿ ಇರದಿದ್ದರೆ ಯಮ ಧರ್ಮ ಪ್ರತ್ಯಕ್ಷನಾಗೋದು ಖಚಿತ ಎಂದು ಸಾರಲು ಮೈಸೂರು ಪೊಲೀಸರು, ಯಮ ಧರ್ಮನನ್ನು ರಸ್ತೆಗೆ ಇಳಿಸಿದ್ದರು. ಜನರಲ್ಲಿ ಮಾಸ್ಕ್ ಧಾರಣೆಯ ಮಹತ್ವವನ್ನು ತಿಳಿ ಹೇಳಿದರು.
ಮಾಸ್ಕ್‌ ಧರಿಸದ ಜನರ ಪಾಲಿಗೆ 'ಯಮ ಕಿಂಕರ'ರಾದ ಮೈಸೂರು ಪೊಲೀಸರು..!

ಶಿವಮೊಗ್ಗ: ಗಾಜನೂರಿನ ತುಂಗಾ ಜಲಾಶಯ ಭರ್ತಿ, 2000 ಕ್ಯೂಸೆಕ್‌ ನೀರು ಬಿಡುಗಡೆ
ಮಲೆನಾಡು ಪ್ರದೇಶ ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ಮುಂಗಾರು ಚುರುಕುಗೊಂಡಿದ್ದು, ಕಳೆದ ಒಂದು ವಾರದಿಂದ ಉತ್ತಮವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆ ಶಿವಮೊಗ್ಗ ಬಳಿಯ ಗಾಜನೂರು ಜಲಾಶಯ ಭರ್ತಿಯಾಗಿದ್ದು, 2000 ಕ್ಯೂಸೆಕ್‌ ನೀರನ್ನು ನದಿಗೆ ಹರಿಬಿಡಲಾಗಿದೆ.
ಶಿವಮೊಗ್ಗ: ಗಾಜನೂರಿನ ತುಂಗಾ ಜಲಾಶಯ ಭರ್ತಿ, 2000 ಕ್ಯೂಸೆಕ್‌ ನೀರು ಬಿಡುಗಡೆ

ಮಂಗಳೂರಿನಲ್ಲಿ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ
ಮಂಗಳೂರಿನಲ್ಲಿ ಗುರುವಾರ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಯಿತು. ಕೆನರಾ ಕಾಲೇಜಿನ ಪರೀಕ್ಷೆ ಕೇಂದ್ರದಲ್ಲಿ ವಿದ್ಯಾರ್ಥಿಗಳನ್ನು ಸ್ಯಾನಿಟೈಸರ್ ನೀಡಿ, ಮಾಸ್ಕ್‌ ಸಹಿತ ಎಲ್ಲ ಸುರಕ್ಷಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ