ಇಂದಿನ ಚುಟುಕು ಸುದ್ದಿಗಳು: ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವವೇ ಇಲ್ಲ, ಬಿಎಸ್ ವೈ ಚಾಟಿ!
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂದಿನ ಪ್ರಮುಖ ಆಗುಹೋಗುಗಳ ಸಂಕ್ಷಿಪ್ತ ವರದಿ ಇಲ್ಲಿದೆ. ತಾಜಾ ಸುದ್ದಿಗಳಿಗಾಗಿ ಕಾದಿರಿ
Vijaya Karnataka Web 11 Jan 2021, 3:48 pm
ಅಪಾರ್ಟ್ಮೆಂಟ್ ತ್ಯಾಜ್ಯಕ್ಕೆ ಎನ್ಜಿಒಗಳ ಹೆಗಲು
ಬೃಹತ್ ಅಪಾರ್ಟ್ಮೆಂಟ್ಗಳಿಂದ ಪಾಲಿಕೆಯು ಕಸ ಸಂಗ್ರಹಿಸದ ಕಾರಣ ತ್ಯಾಜ್ಯ ವಿಲೇವಾರಿ ಬಹುದೊಡ್ಡ ಸವಾಲಾಗಿದೆ. ಆದರೆ ಇದನ್ನು ನಿಭಾಯಿಸಲು ಎನ್ಜಿಒಗಳು ಹೆಗಲು ಕೊಟ್ಟಿವೆ. ಅಪಾರ್ಟ್ಮೆಂಟ್ ಆವರಣದಲ್ಲಿ ಸಂಸ್ಕರಣಾ ಘಟಕಕ್ಕೆ ಸೂಕ್ತ ಜಾಗ ಇಲ್ಲದ ಅಪಾರ್ಟ್ಮೆಂಟ್ಗಳಿಗೆ ಇದು ವರದಾನವಾಗಿದೆ.
ಅಪಾರ್ಟ್ಮೆಂಟ್ ತ್ಯಾಜ್ಯಕ್ಕೆ ಎನ್ಜಿಒಗಳ ಹೆಗಲು: ನಿರ್ದಿಷ್ಟ ಶುಲ್ಕ ಪಡೆದು ಕಸ ವಿಲೇವಾರಿ!
ಸಚಿವ ಸ್ಥಾನ ಕೊಟ್ಟರೆ ನಿಭಾಯಿಸ್ತೇನೆ, ಎನ್. ಮಹೇಶ್
ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ ಎಂದು ಶಾಸಕ ಎನ್ ಮಹೇಶ್ ಹೇಳುವ ಮೂಲಕ ಪರೋಕ್ಷವಾಗಿ ನಾನೂ ಕೂಡಾ ಸಚಿವ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ.
ಸಚಿವ ಸ್ಥಾನ ಕೊಟ್ಟರೆ ನಿಭಾಯಿಸ್ತೇನೆ! ಪರೋಕ್ಷವಾಗಿ ನಾನು ಆಕಾಂಕ್ಷಿ ಎಂದ ಎನ್. ಮಹೇಶ್
ಯಡಿಯೂರಪ್ಪ ಅವರೇ ನಮ್ಮ ಕ್ಯಾಪ್ಟನ್!
ಸಿಎಂ ಬದಲಾವಣೆ ಚರ್ಚೆ ಅನಗತ್ಯ ವಿಚಾರ. ನಮ್ಮ ಮುಂದಿನ ಎರಡೂವರೆ ವರ್ಷವೂ ಯಡಿಯೂರಪ್ಪ ಅವರೇ ನಮ್ಮ ಕ್ಯಾಪ್ಟನ್ ಆಗಿ ಮುಂದುವರೆಯುತ್ತಾರೆ ಎಂದು ಶಾಸಕ ರಾಮದಾಸ್ ಹೇಳಿದ್ದಾರೆ.
ಮುಂದಿನ ಎರಡೂವರೆ ವರ್ಷವೂ ಯಡಿಯೂರಪ್ಪ ಅವರೇ ನಮ್ಮ ಕ್ಯಾಪ್ಟನ್: ಶಾಸಕ ರಾಮದಾಸ್
ಈಶ್ವರಪ್ಪ ಕಿಡಿ
ಮುಖ್ಯಮಂತ್ರಿ ಸ್ಥಾನದಿಂದಯಡಿಯೂರಪ್ಪ ಇಳಿಯುತ್ತಾರೆ ಎಂದು ಯಾವ ಬಿಜೆಪಿ ನಾಯಕರು ಹೇಳಿಲ್ಲ. ಸಿಎಂ ಬದಲಾವಣೆ ವಿಚಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೃಷ್ಟಿಸಿರುವ ಅನಗತ್ಯ ವಿಚಾರ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಕಿಡಿಕಾರಿದರು.
ಸಿಎಂ ಬದಲಾವಣೆ ಎಂಬುದು ಸಿದ್ದರಾಮಯ್ಯ ಸೃಷ್ಟಿಸಿರೋ ಅನಗತ್ಯ ವಿಚಾರ: ಈಶ್ವರಪ್ಪ ಕಿಡಿ
'ರಾಜಕಾರಣಿಗಳು, ಅಧಿಕಾರಿಗಳು ಬ್ರಹ್ಮ ರಾಕ್ಷಸರು'
ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜಕಾರಣಿಗಳು ಬ್ರಹ್ಮ ರಾಕ್ಷಸರಾಗಿದ್ದಾರೆ. ಅವರ ಸೇವೆ ಮಾಡುವ ಅಧಿಕಾರಿಗಳು ಕೂಡ ರಾಕ್ಷಸರಾಗಿ ಪರಿವರ್ತನೆಯಾಗಿದ್ದಾರೆ ಎಂದು ಮಾಜಿ ಸ್ಪೀಕರ್ ಕೃಷ್ಣ ಸಾತ್ವಿಕ ಸಿಟ್ಟು ಹೊರ ಹಾಕಿದರು.
'ರಾಜಕಾರಣಿಗಳು, ಅಧಿಕಾರಿಗಳು ಬ್ರಹ್ಮ ರಾಕ್ಷಸರು': ಮೈಸೂರಲ್ಲಿ ಮಾಜಿ ಸ್ಪೀಕರ್ ಕೃಷ್ಣ ಆಕ್ರೋಶ
ಕನಕಪುರಕ್ಕೆ ಬಿಎಸ್ವೈ ಬಿಡಿಗಾಸು ಕೊಟ್ಟಿಲ್ಲ!
ನಾನು ಸಚಿವನಾಗಿದ್ದಾಗ ನನ್ನ ಬಳಿ ಬಂದಿದ್ದ ಯಡಿಯೂರಪ್ಪ ತಮ್ಮ ಕ್ಷೇತ್ರಕ್ಕೆ ಒಂದು ಸಾವಿರ ಕೋಟಿ ರೂ. ಅನುದಾನ ಪಡೆದುಕೊಂಡಿದ್ದರು. ಈಗ ಅವರೇ ಸರಕಾರದ ಮುಖ್ಯಸ್ಥರಾಗಿದ್ದರೂ ನನ್ನ ಕ್ಷೇತ್ರಕ್ಕೆ ಬಿಡಿಗಾಸನ್ನೂ ನೀಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
‘ನಾನು ಸಾವಿರ ಕೋಟಿ ಕೊಟ್ಟರೂ, ಕನಕಪುರಕ್ಕೆ ಬಿಎಸ್ವೈ ಬಿಡಿಗಾಸು ಕೊಟ್ಟಿಲ್ಲ’-ಡಿಕೆಶಿ ಕಿಡಿ
ಬೋಟ್ನಲ್ಲಿ ಸಿಲಿಂಡರ್ ಸ್ಫೋಟ
ತಟದಿಂದ ಸುಮಾರು 140 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ವೊಂದರಲ್ಲಿ ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಗಂಭೀರ ಗಾಯಗೊಂಡ ಮೀನುಗಾರರನ್ನು ಕೋಸ್ಟ್ಗಾರ್ಡ್ ರಕ್ಷಣೆ ಮಾಡಿದೆ.
ಬೋಟ್ನಲ್ಲಿ ಸಿಲಿಂಡರ್ ಸ್ಫೋಟ; ಮೀನುಗಾರನನ್ನು ರಕ್ಷಿಸಿದ ಕೋಸ್ಟ್ಗಾರ್ಡ್..!
ಸಸಿಹಿತ್ಲು ಬೀಚ್ನಲ್ಲಿ ಇಬ್ಬರು ಸಮುದ್ರಪಾಲು
ಅತ್ಯಂತ ಅಪಾಯಕಾರಿ ಪ್ರದೇಶವಾದ ಸಸಿಹಿತ್ಲು ಬೀಚ್ ಬಳಿ ಸಮುದ್ರ ಸ್ನಾನಕ್ಕಿಳಿದ 9 ಮಂದಿಯ ಪೈಕಿ ಒಬ್ಬರು ಮೃತಪಟ್ಟು, ಇನ್ನೊಬ್ಬರು ನಾಪತ್ತೆಯಾಗಿರೋ ಘಟನೆ ನಡೆದಿದೆ.
ಸಸಿಹಿತ್ಲು ಬೀಚ್ನಲ್ಲಿ ಇಬ್ಬರು ಸಮುದ್ರಪಾಲು; ಗರ್ಭಿಣಿ ಸಹಿತ 7 ಮಂದಿಯ ರಕ್ಷಣೆ..!
ಕಾಂಗ್ರೆಸ್ ಚುನಾವಣೆಯಿಂದ ಹಿಂದಕ್ಕೆ ಸರಿದ ಮಿಥುನ್ ರೈ..!
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಕಣದಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಅವರು, ‘ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲಹೆಯಂತೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. ಅಧಿಕಾರ ಮುಖ್ಯವಲ್ಲ, ಪಕ್ಷದ ನಿರ್ಧಾರಕ್ಕೆ ಬೆಲೆ ಕೊಡುವುದು ನನ್ನ ಧರ್ಮ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಮಿಥುನ್ ರೈ ಹೇಳಿದ್ದಾರೆ.
ಡಿಕೆಶಿ ಸಲಹೆಯಂತೆ ಯುವ ಕಾಂಗ್ರೆಸ್ ಚುನಾವಣೆಯಿಂದ ಹಿಂದಕ್ಕೆ ಸರಿದ ಮಿಥುನ್ ರೈ..!
ರಣದೀಪ್ ಸಿಂಗ್ ಸುರ್ಜೇವಾಲ ಜೊತೆಗೆ ಡಿಕೆಶಿ, ಸಿದ್ದರಾಮಯ್ಯ
ಪಕ್ಷ ಸಂಘಟನೆ, ಬಲವರ್ಧನೆ, ಹೋರಾಟದ ರೂಪುರೇಷೆಗಳ ಕುರಿತಾಗಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಡಿಯೋ ಸಂವಾದ ನಡೆಸಿದರು.
ಪಕ್ಷ ಸಂಘಟನೆ: ರಣದೀಪ್ ಸಿಂಗ್ ಸುರ್ಜೇವಾಲ ಜೊತೆಗೆ ಡಿಕೆಶಿ, ಸಿದ್ದರಾಮಯ್ಯ ಸಂವಾದ
ಕಣಕ್ಕಿಳಿಯುತ್ತಾರಾ ಸತೀಶ್ ಜಾರಕಿಹೊಳಿ?
ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ಕಣಕ್ಕೆ ಇಳಿಯುತ್ತಾರಾ ಎಂಬ ಕುತೂಹಲ ತೀವ್ರಗೊಂಡಿದೆ. ಸತೀಶ್ ಜಾರಕಿಹೊಳಿ ಸ್ಪರ್ಧೆಗೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಬೆಂಬಲವನ್ನು ವ್ಯಕ್ತಪಡಿಸಿದ್ದು ಕಣಕ್ಕೆ ಇಳಿಯುವಂತೆ ಮನವಿ ಮಾಡಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆ: ಕಣಕ್ಕಿಳಿಯುತ್ತಾರಾ ಸತೀಶ್ ಜಾರಕಿಹೊಳಿ?
ವಿದ್ಯಾರ್ಥಿಗಳಿಗೆ ಕೊರೊನಾ ರಿಪೋರ್ಟ್ ತಲೆ ಬಿಸಿ!
ಶಾಲೆ ಕಾಲೇಜು ಆರಂಭವಾಗಿದ್ದು, ವಿದ್ಯಾರ್ಥಿಗಳಲ್ಲಿ ಕೊರೊನಾ ರಿಪೋರ್ಟ್ ತಲೆಬಿಸಿ ಇನ್ನಿಲ್ಲದಂತೆ ಕಾಡುತ್ತಿದೆ. ಜಿಲ್ಲೆಯಲ್ಲಿ ಒಟ್ಟು 6 ಕೊರೊನಾ ಟೆಸ್ಟಿಂಗ್ ಸೆಂಟರ್ಗಳಿದ್ದು, ನೆಲಮಂಗಲದಲ್ಲಿ ಸಿದ್ಧಾರ್ಥ ಮೆಡಿಕಲ್ ಕಾಲೇಜು, ಹೊಸಕೋಟೆಯ ಎಂವಿಜೆ, ಏರ್ ಪೋರ್ಟ್, ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ಕೆಲವು ಆಸ್ಪತ್ರೆಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಿದರೂ ರಿಪೋರ್ಟ್ ಸಿಗದೆ ಅಲೆದಾಟ ತಪ್ಪುತ್ತಿಲ್ಲ ಎಂದು ಕೆಲವು ಪೋಷಕರು ದೂರಿದ್ದಾರೆ.
ವಿದ್ಯಾರ್ಥಿಗಳಿಗೆ ಕೊರೊನಾ ರಿಪೋರ್ಟ್ ತಲೆ ಬಿಸಿ; ಆಸ್ಪತ್ರೆಗೆ ದಿನನಿತ್ಯ ಅಲೆದಾಟ!
ಹಕ್ಕಿ ಜ್ವರ ಭೀತಿ, ಕುಕ್ಕುಟೋದ್ಯಮಕ್ಕೆ ಬಂತು ಕುತ್ತು!
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಆತಂಕ ಮನೆ ಮಾಡಿದೆ. ಚಿಕ್ಕಬಳ್ಳಾಪುರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಕಸ್ಮಿಕವಾಗಿ ಸತ್ತಿರುವ ಪಕ್ಷಿಗಳು ಹಕ್ಕಿಜ್ವರ ಭೀತಿಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದ್ದು, ಜಿಲ್ಲೆಯ ಕೋಳಿಗಳ ವ್ಯಾಪಾರದಲ್ಲಿ ಭಾರೀ ಇಳಿಕೆಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚಿದ ಹಕ್ಕಿ ಜ್ವರ ಭೀತಿ: ಕುಕ್ಕುಟೋದ್ಯಮಕ್ಕೆ ಬಂತು ಕುತ್ತು!
ರಾಧಿಕಾ ಯಾರು ಅಂತ ನನಗೆ ಗೊತ್ತಿಲ್ಲ, ಎಚ್ಡಿಕೆ
ರಾಧಿಕಾ ಕುಮಾರಸ್ವಾಮಿ ಯಾರು ಅಂತ ತನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ಭಾನುವಾರ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನೇರಳಕೆರೆ ಹಾಗೂ ಮಹದೇವಪುರ ಗ್ರಾಮದಲ್ಲಿ 50 ಕೋಟಿ ರೂ. ವೆಚ್ಚದ ಬಹು ಗ್ರಾಮಗಳ ಕುಡಿಯುವ ನೀರು ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ಯಾರಪ್ಪ ಅದ್ಯಾರು ನಂಗೆ ಗೊತ್ತಿಲ್ಲ ಎಂದಿದ್ದಾರೆ.
ರಾಧಿಕಾ ಯಾರು ಅಂತ ನನಗೆ ಗೊತ್ತಿಲ್ಲ: ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ
ಮೀನುಗಾರಿಕಾ ಬೋಟ್ಗಳಿಗೆ ದೇಶೀ ನಿರ್ಮಿತ ಯಂತ್ರ!
ರಾಜ್ಯದಲ್ಲಿ ಮೀನುಗಾರಿಕೆ ಬೋಟ್ಗಳಿಗೆ ಈಗ ಬಳಸಲಾಗುತ್ತಿರುವ ಚೀನಾ ನಿರ್ಮಿತ ಯಂತ್ರಗಳ ಬದಲಿಗೆ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಯ ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಂತೆ ದೇಶೀ ನಿರ್ಮಿತ ಯಂತ್ರಗಳನ್ನು ಬಳಸಲು ಚಿಂತನೆ ನಡೆಸಲಾಗಿದೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮೀನುಗಾರಿಕಾ ಬೋಟ್ಗಳಿಗೆ ದೇಶೀ ನಿರ್ಮಿತ ಯಂತ್ರ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಯತ್ನಾಳ್ ಮಾತಿಗೆ ನಾವ್ಯಾರು ಬೆಲೆಕೊಡಲ್ಲ!
ಯತ್ನಾಳ್ ಅವರ ಹೆಸರನ್ನು ಶಿಸ್ತು ಸಮಿತಿಗೆ ಕಳುಹಿಸಿದ್ದೇವೆ. ಅವರ ಮಾತಿಗೆ ನಾವ್ಯಾರು ಬೆಲೆಕೊಡಲ್ಲ ಎಂದು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ. ಚುನಾವಣೆ ಬಂದಾಗೆಲ್ಲ ಆ ರೀತಿ ಸಿದ್ದರಾಮಯ್ಯ ಹೇಳ್ತಾರೆ. ಸಂಕ್ರಾಂತಿ ವೇಳೆ ಬದಲಾವಣೆ ಆಗುತ್ತೆ ಅನ್ನುತ್ತಿದ್ದಾರೆ, ಇದು ಸಿದ್ದರಾಮಯ್ಯನವರದ್ದು ಹಗಲುಗನಸು, ಸಿಎಂ ಸ್ಥಾನದ ಬಗ್ಗೆ ಸಿದ್ದರಾಮಯ್ಯ ತೀರ್ಮಾನ ಮಾಡೋಕಾಗಲ್ಲ ಎಂದರು.
ಯತ್ನಾಳ್ ಮಾತಿಗೆ ನಾವ್ಯಾರು ಬೆಲೆಕೊಡಲ್ಲ, ಅವರ ಹೆಸರನ್ನು ಶಿಸ್ತುಸಮಿತಿಗೆ ಕಳುಹಿಸಿದ್ದೇವೆ; ಈಶ್ವರಪ್ಪ
ಬಿಜೆಪಿ ಬಗ್ಗೆ ಮಾತನಾಡಲು ಸಿದ್ಧರಾಮಯ್ಯ ಯಾರು?
ಬಿಜೆಪಿ ಬಗ್ಗೆ ಮಾತನಾಡಲು ಸಿದ್ಧರಾಮಯ್ಯ ಯಾರು? ಎಂದು ಸಚಿವ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ. ಬಿಎಸ್ ವೈ ಸಿಎಂ ಕುರ್ಚಿ ಅಲುಗಾಡುತ್ತಿದೆ, ಶೀಘ್ರ ಕುರ್ಚಿಯಿಂದ ಇಳಿಯಲಿದ್ದಾರೆ ಎಂದು ಸಿದ್ದರಾಮಯ್ಯನವರು ಪದೇ ಪದೇ ಹೇಳುತ್ತಿರುವುದಕ್ಕೆ ಬೀದರ್ನಲ್ಲಿ ಪ್ರತಿಕ್ರಿಯೆ ನೀಡಿದ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯನವರೇನು ಬಿಜೆಪಿ ಹೈ ಕಮಾಂಡಾ? ಅಥವಾ ಬಿಜೆಪಿ ವಕ್ತಾರರಾ ? ಎಂದು ಸಚಿವ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.
ಬಿಜೆಪಿ ಬಗ್ಗೆ ಮಾತನಾಡಲು ಸಿದ್ಧರಾಮಯ್ಯ ಯಾರು?: ಸಚಿವ ಜಗದೀಶ್ ಶೆಟ್ಟರ್
ಮಾಜಿ ಸಚಿವ ಎಂ.ಸಿ.ಮನಗೂಳಿ ಆಸ್ಪತ್ರೆಗೆ ದಾಖಲು
ಮಾಜಿ ಸಚಿವ, ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಅವರು ಅನಾರೋಗ್ಯದಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಂದೆಯವರು ಚೇತರಿಸಿಕೊಂಡಿದ್ದಾರೆಂದು ಮನಗೂಳಿಯವರ ಪುತ್ರ ಡಾ.ಶಾಂತವೀರ ಮನಗೂಳಿ ತಿಳಿಸಿದ್ದಾರೆ.
ಉಸಿರಾಟದ ಸಮಸ್ಯೆ, ಮಾಜಿ ಸಚಿವ ಎಂ.ಸಿ.ಮನಗೂಳಿ ಆಸ್ಪತ್ರೆಗೆ ದಾಖಲು
ಎಚ್. ನಾಗೇಶ್ ವಿಶ್ವಾಸ
ಕಷ್ಟ ಕಾಲದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಕೈ ಹಿಡಿದಿದ್ದೇನೆ ಈ ಕಾರಣದಿಂದ ನನ್ನನ್ನು ಸಂಪುಟದಿಂದ ಕೈ ಬಿಡಲ್ಲ ಎಂಬ ವಿಶ್ವಾಸ ಇದೆ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನನ್ನನ್ನು ಸಂಪುಟದಿಂದ ಕೈ ಬಿಡುವುದಿಲ್ಲ, ಎಚ್. ನಾಗೇಶ್ ವಿಶ್ವಾಸ
ಪಕ್ಷಗಳ ಜತೆ ‘ಸಮಾನ ಅಂತರ’ ಕಾಯ್ದುಕೊಳ್ಳಲು ಕಾಂಗ್ರೆಸ್ ನಿರ್ಧಾರ!
ಹಿಂದೂ, ಮುಸ್ಲಿಮ್ ಮತೀಯವಾದಿ ಸಂಘಟನೆಗಳು ಹಾಗೂ ಪಕ್ಷಗಳ ಜತೆ ರಾಜಕೀಯವಾಗಿ ಸಮಾನ ಅಂತರವನ್ನು ಕಾಯ್ದುಕೊಳ್ಳಲು ರಾಜ್ಯ ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಯಾವುದೇ ರೀತಿಯ ಚುನಾವಣಾ ಹೊಂದಾಣಿಕೆ ಹಾಗೂ ಪಕ್ಷ, ಸಂಘಟನೆಗಳ ನಿಲುವುಗಳ ಕುರಿತಾಗಿ ರಾಜಿ ಆಗದಂತೆ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಸ್ಪಷ್ಟ ಸೂಚನೆಯನ್ನು ನೀಡಿದೆ. ಪಕ್ಷ ಸಂಘಟನೆ ನಿಟ್ಟಿನಲ್ಲಿ ನಡೆಯುತ್ತಿರುವ ವಿಭಾಗೀಯ ಸಂಕಲ್ಪ ಸಮಾವೇಶದಲ್ಲಿ ಈ ಸೂಚನೆಯನ್ನು ನೀಡಲಾಗಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಹಿಂದೂ-ಮುಸ್ಲಿಮ್ ಮತೀಯವಾದಿ ಸಂಘಟನೆ, ಪಕ್ಷಗಳ ಜತೆ ‘ಸಮಾನ ಅಂತರ’ ಕಾಯ್ದುಕೊಳ್ಳಲು ಕಾಂಗ್ರೆಸ್ ನಿರ್ಧಾರ!
ಸಂಪುಟ ವಿಸ್ತರಣೆಗೆ ಅಮಾವಾಸ್ಯೆ ಕಂಟಕ?
ಜನವರಿ 13 ಅಥವಾ 14 ರಂದು ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದರೂ ಗೊಂದಲ ಮನೆಮಾಡಿದೆ. 13ರಂದು ಮಧ್ಯಾಹ್ನ ದವರೆಗೆ ಅಮಾವಾಸ್ಯೆ ಇರುವುದರಿಂದ ಇದು ಕಂಟಕವಾಗಿ ಪರಿಣಮಿಸಲಿದ್ಯಾ ಎಂಬುವುದು ಆಕಾಂಕ್ಷಿಗಳ ಆತಂಕಕ್ಕೆ ಕಾರಣವಾಗಿದೆ.
ಸಂಪುಟ ವಿಸ್ತರಣೆಗೆ ಅಮಾವಾಸ್ಯೆ ಕಂಟಕ? ಆಕಾಂಕ್ಷಿಗಳಲ್ಲಿ ಆತಂಕ
ಆಯುಷ್ಮಾನ್ ಹೆಲ್ತ್ ಕಾರ್ಡ್ ವಿತರಣೆಗೆ ಮರುಜೀವ
ಕೊರೊನಾ ಹಿನ್ನೆಲೆಯಲ್ಲಿ 2020ರ ಮಾರ್ಚ್ 19ರಿಂದ ನಿಂತು ಹೋಗಿದ್ದ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ 'ಆಯುಷ್ಮಾನ್ ಭಾರತ್ ಆರೋಗ್ಯ ಹೆಲ್ತ್ಕಾರ್ಡ್' ಯೋಜನೆಗೆ ಮರು ಜೀವ ಸಿಕ್ಕಿದೆ.
ಆಯುಷ್ಮಾನ್ ಹೆಲ್ತ್ ಕಾರ್ಡ್ ವಿತರಣೆಗೆ ಮರುಜೀವ: ಗ್ರಾಪಂ ಬಾಪೂಜಿ ಕೇಂದ್ರಗಳಲ್ಲಿ ಲಭ್ಯ!
ಶಿಕ್ಷಕ ವರ್ಗಕ್ಕೆ ಹಿನ್ನಡೆ
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ) ಅಧಿನಿಯಮ- 2020ರ ಅನ್ವಯ ಕಾಯಿದೆಯಲ್ಲಿರುವ ಅಂಶ ಹೊರತುಪಡಿಸಿ ಬೇರೆ ಯಾವುದೇ ಅಂಶಗಳನ್ನು ಜಾರಿಗೊಳಿಸದೆ ಪ್ರಸ್ತಕ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸುವಂತೆ 'ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಟಿ)' ಆದೇಶ ಹೊರಡಿಸಿದೆ.
ಶಿಕ್ಷಕ ವರ್ಗಕ್ಕೆ ಹಿನ್ನಡೆ: ಹೆಚ್ಚುವರಿ, ಕಡ್ಡಾಯ ವರ್ಗವಾಗಿದ್ದ ಶಿಕ್ಷಕರ ಟ್ರಾನ್ಸ್ಫರ್ಗೆ ಕೆಎಟಿ ತಡೆ!
ಜಿಪಿಟಿಯವರಿಗೂ ಬಡ್ತಿ ನೀಡಲು ಕೋರ್ಟ್ ಆದೇಶ!
1ರಿಂದ 5ನೇ ತರಗತಿ ಪಾಠ ಮಾಡುವ 6 ಸಾವಿರ ಶಿಕ್ಷಕರಿಗೆ ಸರಕಾರ ಪ್ರೌಢ ಶಾಲೆಗೆ ಈಚೆಗೆ ಬಡ್ತಿ ನೀಡಿದ್ದು, ಇದರಿಂದ ಈಗ ಸರಕಾರವೇ ಇಕ್ಕಟ್ಟಿಗೆ ಸಿಲುಕಿದೆ. ಇದಕ್ಕೆ ಕಾರಣ ಪದವೀಧರರ ಶಿಕ್ಷಕರು ಅಂದರೆ 6ರಿಂದ 8ನೇ ತರಗತಿಯವರೆಗೆ ನೇಮಕಗೊಂಡಿರುವ ಶಿಕ್ಷಕರು ತಮಗೂ ಬಡ್ತಿ ನೀಡಬೇಕೆಂದು ಕೆಎಟಿ ಮೊರೆ ಹೋಗಿದ್ದಾರೆ. ಕೆಎಟಿ ಕೂಡ ಸಿ ಆ್ಯಂಡ್ ಆರ್ ನಿಯಮಾವಳಿ ತಿದ್ದುಪಡಿ ಮಾಡಿ ಇವರಿಗೂ ಬಡ್ತಿ ನೀಡಬೇಕು ಎಂದು ಆದೇಶಿಸಿದೆ.
ಶಿಕ್ಷಕರ ಬಡ್ತಿ ತಾರತಮ್ಯ, ಇಕ್ಕಟ್ಟಲ್ಲಿ ಸರಕಾರ: ಜಿಪಿಟಿಯವರಿಗೂ ಬಡ್ತಿ ನೀಡಲು ಕೋರ್ಟ್ ಆದೇಶ!
ಬಹುನಿರೀಕ್ಷಿತ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್..!
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಈ ಬಾರಿಯ ದೆಹಲಿ ಯಾತ್ರೆ ಯಶಸ್ವಿಯಾಗಿದ್ದು, ಬಹುನಿರೀಕ್ಷಿತ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಜನವರಿ 13ರಂದು ಬಿಎಸ್ವೈ ಸಂಪುಟಕ್ಕೆ 7 ಜನ ಸೇರುವುದು ಖಚಿತವಾಗಿದೆ. ಪೂರ್ಣ ಪ್ರಮಾಣದ ಸಚಿವ ಸಂಪುಟ ರೂಪುಗೊಳ್ಳುವ ಸಾಧ್ಯತೆಯಿದೆ.
ಬಹುನಿರೀಕ್ಷಿತ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್..! ಜನವರಿ 13ರಂದು 7 ಹೊಸ ಸಚಿವರ ಪ್ರಮಾಣ ವಚನ
ತಲೆ ಬೋಳಿಸಿ ಅವಮಾನ, ಯುವಕ ಆತ್ಮಹತ್ಯೆಗೆ ಯತ್ನ
ಪೋಸ್ಟ್ ಆಫೀಸ್ನಲ್ಲಿ ಹಣ ಕಳುವು ಮಾಡಿದ್ದಾರೆಂದು ಆರೋಪಿಸಿ ಯುವಕನೊಬ್ಬನ ತಲೆ ಬೋಳಿಸಿದ ಹಿನ್ನೆಲೆಯಲ್ಲಿ ಆತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರಿನ ಬೀರಿಹುಂಡಿಯಲ್ಲಿ ನಡೆದಿದೆ.
ಮೈಸೂರಿನಲ್ಲಿ ಕಳ್ಳತನ ಆರೋಪಿಗೆ ತಲೆ ಬೋಳಿಸಿ ಅವಮಾನ: ಮನನೊಂದ ಯುವಕ ಆತ್ಮಹತ್ಯೆ ಯತ್ನ
ರಾಜ್ಯದಲ್ಲಿ ಕಾಂಗ್ರೆಸ್ ಎಂಬುದೇ ಇಲ್ಲ..!
ರಾಜ್ಯದಲ್ಲಿ ಕಾಂಗ್ರೆಸ್ ಎನ್ನುವುದೇ ಇಲ್ಲ. ಅದರ ನೆನಪು ಏಕೆ ಮಾಡಿಕೊಳ್ಳುತ್ತೀರಿ ಎಂದು ಪಕ್ಷದ ನಾಯಕರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಶ್ನಿಸಿದ್ದಾರೆ. ನಗರದಲ್ಲಿ ಆಯೋಜಿಸಿದ್ದ ಜನಸೇವಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವವೇ ಇಲ್ಲ. ಆದ್ದರಿಂದ ಕಾಂಗ್ರೆಸ್ನ್ನು ನೆನಪಿಸಿಕೊಳ್ಳುವ ಅವಶ್ಯಕತೆ ಇಲ್ಲ. ಗೋ ಮಾಂಸ ತಿನ್ನುವುದನ್ನು ಮೈಸೂರಿನ ಕಾಂಗ್ರೆಸ್ ನಾಯಕರೊಬ್ಬರು ಸಾಧನೆ ಎಂದು ಹೇಳುತ್ತಿದ್ದಾರೆ. ಅವರಿಗೆಲ್ಲಾ ಉತ್ತರ ನೀಡುವ ಅಗತ್ಯ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಎಂಬುದೇ ಇಲ್ಲ..! ನಿಮಗೇಕೆ ಅದರ ನೆನಪು: ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಪ್ರಶ್ನೆ
ಬೃಹತ್ ಅಪಾರ್ಟ್ಮೆಂಟ್ಗಳಿಂದ ಪಾಲಿಕೆಯು ಕಸ ಸಂಗ್ರಹಿಸದ ಕಾರಣ ತ್ಯಾಜ್ಯ ವಿಲೇವಾರಿ ಬಹುದೊಡ್ಡ ಸವಾಲಾಗಿದೆ. ಆದರೆ ಇದನ್ನು ನಿಭಾಯಿಸಲು ಎನ್ಜಿಒಗಳು ಹೆಗಲು ಕೊಟ್ಟಿವೆ. ಅಪಾರ್ಟ್ಮೆಂಟ್ ಆವರಣದಲ್ಲಿ ಸಂಸ್ಕರಣಾ ಘಟಕಕ್ಕೆ ಸೂಕ್ತ ಜಾಗ ಇಲ್ಲದ ಅಪಾರ್ಟ್ಮೆಂಟ್ಗಳಿಗೆ ಇದು ವರದಾನವಾಗಿದೆ.
ಅಪಾರ್ಟ್ಮೆಂಟ್ ತ್ಯಾಜ್ಯಕ್ಕೆ ಎನ್ಜಿಒಗಳ ಹೆಗಲು: ನಿರ್ದಿಷ್ಟ ಶುಲ್ಕ ಪಡೆದು ಕಸ ವಿಲೇವಾರಿ!
ಸಚಿವ ಸ್ಥಾನ ಕೊಟ್ಟರೆ ನಿಭಾಯಿಸ್ತೇನೆ, ಎನ್. ಮಹೇಶ್
ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ ಎಂದು ಶಾಸಕ ಎನ್ ಮಹೇಶ್ ಹೇಳುವ ಮೂಲಕ ಪರೋಕ್ಷವಾಗಿ ನಾನೂ ಕೂಡಾ ಸಚಿವ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ.
ಸಚಿವ ಸ್ಥಾನ ಕೊಟ್ಟರೆ ನಿಭಾಯಿಸ್ತೇನೆ! ಪರೋಕ್ಷವಾಗಿ ನಾನು ಆಕಾಂಕ್ಷಿ ಎಂದ ಎನ್. ಮಹೇಶ್
ಯಡಿಯೂರಪ್ಪ ಅವರೇ ನಮ್ಮ ಕ್ಯಾಪ್ಟನ್!
ಸಿಎಂ ಬದಲಾವಣೆ ಚರ್ಚೆ ಅನಗತ್ಯ ವಿಚಾರ. ನಮ್ಮ ಮುಂದಿನ ಎರಡೂವರೆ ವರ್ಷವೂ ಯಡಿಯೂರಪ್ಪ ಅವರೇ ನಮ್ಮ ಕ್ಯಾಪ್ಟನ್ ಆಗಿ ಮುಂದುವರೆಯುತ್ತಾರೆ ಎಂದು ಶಾಸಕ ರಾಮದಾಸ್ ಹೇಳಿದ್ದಾರೆ.
ಮುಂದಿನ ಎರಡೂವರೆ ವರ್ಷವೂ ಯಡಿಯೂರಪ್ಪ ಅವರೇ ನಮ್ಮ ಕ್ಯಾಪ್ಟನ್: ಶಾಸಕ ರಾಮದಾಸ್
ಈಶ್ವರಪ್ಪ ಕಿಡಿ
ಮುಖ್ಯಮಂತ್ರಿ ಸ್ಥಾನದಿಂದಯಡಿಯೂರಪ್ಪ ಇಳಿಯುತ್ತಾರೆ ಎಂದು ಯಾವ ಬಿಜೆಪಿ ನಾಯಕರು ಹೇಳಿಲ್ಲ. ಸಿಎಂ ಬದಲಾವಣೆ ವಿಚಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೃಷ್ಟಿಸಿರುವ ಅನಗತ್ಯ ವಿಚಾರ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಕಿಡಿಕಾರಿದರು.
ಸಿಎಂ ಬದಲಾವಣೆ ಎಂಬುದು ಸಿದ್ದರಾಮಯ್ಯ ಸೃಷ್ಟಿಸಿರೋ ಅನಗತ್ಯ ವಿಚಾರ: ಈಶ್ವರಪ್ಪ ಕಿಡಿ
'ರಾಜಕಾರಣಿಗಳು, ಅಧಿಕಾರಿಗಳು ಬ್ರಹ್ಮ ರಾಕ್ಷಸರು'
ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜಕಾರಣಿಗಳು ಬ್ರಹ್ಮ ರಾಕ್ಷಸರಾಗಿದ್ದಾರೆ. ಅವರ ಸೇವೆ ಮಾಡುವ ಅಧಿಕಾರಿಗಳು ಕೂಡ ರಾಕ್ಷಸರಾಗಿ ಪರಿವರ್ತನೆಯಾಗಿದ್ದಾರೆ ಎಂದು ಮಾಜಿ ಸ್ಪೀಕರ್ ಕೃಷ್ಣ ಸಾತ್ವಿಕ ಸಿಟ್ಟು ಹೊರ ಹಾಕಿದರು.
'ರಾಜಕಾರಣಿಗಳು, ಅಧಿಕಾರಿಗಳು ಬ್ರಹ್ಮ ರಾಕ್ಷಸರು': ಮೈಸೂರಲ್ಲಿ ಮಾಜಿ ಸ್ಪೀಕರ್ ಕೃಷ್ಣ ಆಕ್ರೋಶ
ಕನಕಪುರಕ್ಕೆ ಬಿಎಸ್ವೈ ಬಿಡಿಗಾಸು ಕೊಟ್ಟಿಲ್ಲ!
ನಾನು ಸಚಿವನಾಗಿದ್ದಾಗ ನನ್ನ ಬಳಿ ಬಂದಿದ್ದ ಯಡಿಯೂರಪ್ಪ ತಮ್ಮ ಕ್ಷೇತ್ರಕ್ಕೆ ಒಂದು ಸಾವಿರ ಕೋಟಿ ರೂ. ಅನುದಾನ ಪಡೆದುಕೊಂಡಿದ್ದರು. ಈಗ ಅವರೇ ಸರಕಾರದ ಮುಖ್ಯಸ್ಥರಾಗಿದ್ದರೂ ನನ್ನ ಕ್ಷೇತ್ರಕ್ಕೆ ಬಿಡಿಗಾಸನ್ನೂ ನೀಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
‘ನಾನು ಸಾವಿರ ಕೋಟಿ ಕೊಟ್ಟರೂ, ಕನಕಪುರಕ್ಕೆ ಬಿಎಸ್ವೈ ಬಿಡಿಗಾಸು ಕೊಟ್ಟಿಲ್ಲ’-ಡಿಕೆಶಿ ಕಿಡಿ
ಬೋಟ್ನಲ್ಲಿ ಸಿಲಿಂಡರ್ ಸ್ಫೋಟ
ತಟದಿಂದ ಸುಮಾರು 140 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ವೊಂದರಲ್ಲಿ ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಗಂಭೀರ ಗಾಯಗೊಂಡ ಮೀನುಗಾರರನ್ನು ಕೋಸ್ಟ್ಗಾರ್ಡ್ ರಕ್ಷಣೆ ಮಾಡಿದೆ.
ಬೋಟ್ನಲ್ಲಿ ಸಿಲಿಂಡರ್ ಸ್ಫೋಟ; ಮೀನುಗಾರನನ್ನು ರಕ್ಷಿಸಿದ ಕೋಸ್ಟ್ಗಾರ್ಡ್..!
ಸಸಿಹಿತ್ಲು ಬೀಚ್ನಲ್ಲಿ ಇಬ್ಬರು ಸಮುದ್ರಪಾಲು
ಅತ್ಯಂತ ಅಪಾಯಕಾರಿ ಪ್ರದೇಶವಾದ ಸಸಿಹಿತ್ಲು ಬೀಚ್ ಬಳಿ ಸಮುದ್ರ ಸ್ನಾನಕ್ಕಿಳಿದ 9 ಮಂದಿಯ ಪೈಕಿ ಒಬ್ಬರು ಮೃತಪಟ್ಟು, ಇನ್ನೊಬ್ಬರು ನಾಪತ್ತೆಯಾಗಿರೋ ಘಟನೆ ನಡೆದಿದೆ.
ಸಸಿಹಿತ್ಲು ಬೀಚ್ನಲ್ಲಿ ಇಬ್ಬರು ಸಮುದ್ರಪಾಲು; ಗರ್ಭಿಣಿ ಸಹಿತ 7 ಮಂದಿಯ ರಕ್ಷಣೆ..!
ಕಾಂಗ್ರೆಸ್ ಚುನಾವಣೆಯಿಂದ ಹಿಂದಕ್ಕೆ ಸರಿದ ಮಿಥುನ್ ರೈ..!
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಕಣದಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಅವರು, ‘ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲಹೆಯಂತೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. ಅಧಿಕಾರ ಮುಖ್ಯವಲ್ಲ, ಪಕ್ಷದ ನಿರ್ಧಾರಕ್ಕೆ ಬೆಲೆ ಕೊಡುವುದು ನನ್ನ ಧರ್ಮ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಮಿಥುನ್ ರೈ ಹೇಳಿದ್ದಾರೆ.
ಡಿಕೆಶಿ ಸಲಹೆಯಂತೆ ಯುವ ಕಾಂಗ್ರೆಸ್ ಚುನಾವಣೆಯಿಂದ ಹಿಂದಕ್ಕೆ ಸರಿದ ಮಿಥುನ್ ರೈ..!
ರಣದೀಪ್ ಸಿಂಗ್ ಸುರ್ಜೇವಾಲ ಜೊತೆಗೆ ಡಿಕೆಶಿ, ಸಿದ್ದರಾಮಯ್ಯ
ಪಕ್ಷ ಸಂಘಟನೆ, ಬಲವರ್ಧನೆ, ಹೋರಾಟದ ರೂಪುರೇಷೆಗಳ ಕುರಿತಾಗಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಡಿಯೋ ಸಂವಾದ ನಡೆಸಿದರು.
ಪಕ್ಷ ಸಂಘಟನೆ: ರಣದೀಪ್ ಸಿಂಗ್ ಸುರ್ಜೇವಾಲ ಜೊತೆಗೆ ಡಿಕೆಶಿ, ಸಿದ್ದರಾಮಯ್ಯ ಸಂವಾದ
ಕಣಕ್ಕಿಳಿಯುತ್ತಾರಾ ಸತೀಶ್ ಜಾರಕಿಹೊಳಿ?
ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ಕಣಕ್ಕೆ ಇಳಿಯುತ್ತಾರಾ ಎಂಬ ಕುತೂಹಲ ತೀವ್ರಗೊಂಡಿದೆ. ಸತೀಶ್ ಜಾರಕಿಹೊಳಿ ಸ್ಪರ್ಧೆಗೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಬೆಂಬಲವನ್ನು ವ್ಯಕ್ತಪಡಿಸಿದ್ದು ಕಣಕ್ಕೆ ಇಳಿಯುವಂತೆ ಮನವಿ ಮಾಡಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆ: ಕಣಕ್ಕಿಳಿಯುತ್ತಾರಾ ಸತೀಶ್ ಜಾರಕಿಹೊಳಿ?
ವಿದ್ಯಾರ್ಥಿಗಳಿಗೆ ಕೊರೊನಾ ರಿಪೋರ್ಟ್ ತಲೆ ಬಿಸಿ!
ಶಾಲೆ ಕಾಲೇಜು ಆರಂಭವಾಗಿದ್ದು, ವಿದ್ಯಾರ್ಥಿಗಳಲ್ಲಿ ಕೊರೊನಾ ರಿಪೋರ್ಟ್ ತಲೆಬಿಸಿ ಇನ್ನಿಲ್ಲದಂತೆ ಕಾಡುತ್ತಿದೆ. ಜಿಲ್ಲೆಯಲ್ಲಿ ಒಟ್ಟು 6 ಕೊರೊನಾ ಟೆಸ್ಟಿಂಗ್ ಸೆಂಟರ್ಗಳಿದ್ದು, ನೆಲಮಂಗಲದಲ್ಲಿ ಸಿದ್ಧಾರ್ಥ ಮೆಡಿಕಲ್ ಕಾಲೇಜು, ಹೊಸಕೋಟೆಯ ಎಂವಿಜೆ, ಏರ್ ಪೋರ್ಟ್, ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ಕೆಲವು ಆಸ್ಪತ್ರೆಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಿದರೂ ರಿಪೋರ್ಟ್ ಸಿಗದೆ ಅಲೆದಾಟ ತಪ್ಪುತ್ತಿಲ್ಲ ಎಂದು ಕೆಲವು ಪೋಷಕರು ದೂರಿದ್ದಾರೆ.
ವಿದ್ಯಾರ್ಥಿಗಳಿಗೆ ಕೊರೊನಾ ರಿಪೋರ್ಟ್ ತಲೆ ಬಿಸಿ; ಆಸ್ಪತ್ರೆಗೆ ದಿನನಿತ್ಯ ಅಲೆದಾಟ!
ಹಕ್ಕಿ ಜ್ವರ ಭೀತಿ, ಕುಕ್ಕುಟೋದ್ಯಮಕ್ಕೆ ಬಂತು ಕುತ್ತು!
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಆತಂಕ ಮನೆ ಮಾಡಿದೆ. ಚಿಕ್ಕಬಳ್ಳಾಪುರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಕಸ್ಮಿಕವಾಗಿ ಸತ್ತಿರುವ ಪಕ್ಷಿಗಳು ಹಕ್ಕಿಜ್ವರ ಭೀತಿಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದ್ದು, ಜಿಲ್ಲೆಯ ಕೋಳಿಗಳ ವ್ಯಾಪಾರದಲ್ಲಿ ಭಾರೀ ಇಳಿಕೆಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚಿದ ಹಕ್ಕಿ ಜ್ವರ ಭೀತಿ: ಕುಕ್ಕುಟೋದ್ಯಮಕ್ಕೆ ಬಂತು ಕುತ್ತು!
ರಾಧಿಕಾ ಯಾರು ಅಂತ ನನಗೆ ಗೊತ್ತಿಲ್ಲ, ಎಚ್ಡಿಕೆ
ರಾಧಿಕಾ ಕುಮಾರಸ್ವಾಮಿ ಯಾರು ಅಂತ ತನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ಭಾನುವಾರ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನೇರಳಕೆರೆ ಹಾಗೂ ಮಹದೇವಪುರ ಗ್ರಾಮದಲ್ಲಿ 50 ಕೋಟಿ ರೂ. ವೆಚ್ಚದ ಬಹು ಗ್ರಾಮಗಳ ಕುಡಿಯುವ ನೀರು ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ಯಾರಪ್ಪ ಅದ್ಯಾರು ನಂಗೆ ಗೊತ್ತಿಲ್ಲ ಎಂದಿದ್ದಾರೆ.
ರಾಧಿಕಾ ಯಾರು ಅಂತ ನನಗೆ ಗೊತ್ತಿಲ್ಲ: ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ
ಮೀನುಗಾರಿಕಾ ಬೋಟ್ಗಳಿಗೆ ದೇಶೀ ನಿರ್ಮಿತ ಯಂತ್ರ!
ರಾಜ್ಯದಲ್ಲಿ ಮೀನುಗಾರಿಕೆ ಬೋಟ್ಗಳಿಗೆ ಈಗ ಬಳಸಲಾಗುತ್ತಿರುವ ಚೀನಾ ನಿರ್ಮಿತ ಯಂತ್ರಗಳ ಬದಲಿಗೆ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಯ ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಂತೆ ದೇಶೀ ನಿರ್ಮಿತ ಯಂತ್ರಗಳನ್ನು ಬಳಸಲು ಚಿಂತನೆ ನಡೆಸಲಾಗಿದೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮೀನುಗಾರಿಕಾ ಬೋಟ್ಗಳಿಗೆ ದೇಶೀ ನಿರ್ಮಿತ ಯಂತ್ರ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಯತ್ನಾಳ್ ಮಾತಿಗೆ ನಾವ್ಯಾರು ಬೆಲೆಕೊಡಲ್ಲ!
ಯತ್ನಾಳ್ ಅವರ ಹೆಸರನ್ನು ಶಿಸ್ತು ಸಮಿತಿಗೆ ಕಳುಹಿಸಿದ್ದೇವೆ. ಅವರ ಮಾತಿಗೆ ನಾವ್ಯಾರು ಬೆಲೆಕೊಡಲ್ಲ ಎಂದು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ. ಚುನಾವಣೆ ಬಂದಾಗೆಲ್ಲ ಆ ರೀತಿ ಸಿದ್ದರಾಮಯ್ಯ ಹೇಳ್ತಾರೆ. ಸಂಕ್ರಾಂತಿ ವೇಳೆ ಬದಲಾವಣೆ ಆಗುತ್ತೆ ಅನ್ನುತ್ತಿದ್ದಾರೆ, ಇದು ಸಿದ್ದರಾಮಯ್ಯನವರದ್ದು ಹಗಲುಗನಸು, ಸಿಎಂ ಸ್ಥಾನದ ಬಗ್ಗೆ ಸಿದ್ದರಾಮಯ್ಯ ತೀರ್ಮಾನ ಮಾಡೋಕಾಗಲ್ಲ ಎಂದರು.
ಯತ್ನಾಳ್ ಮಾತಿಗೆ ನಾವ್ಯಾರು ಬೆಲೆಕೊಡಲ್ಲ, ಅವರ ಹೆಸರನ್ನು ಶಿಸ್ತುಸಮಿತಿಗೆ ಕಳುಹಿಸಿದ್ದೇವೆ; ಈಶ್ವರಪ್ಪ
ಬಿಜೆಪಿ ಬಗ್ಗೆ ಮಾತನಾಡಲು ಸಿದ್ಧರಾಮಯ್ಯ ಯಾರು?
ಬಿಜೆಪಿ ಬಗ್ಗೆ ಮಾತನಾಡಲು ಸಿದ್ಧರಾಮಯ್ಯ ಯಾರು? ಎಂದು ಸಚಿವ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ. ಬಿಎಸ್ ವೈ ಸಿಎಂ ಕುರ್ಚಿ ಅಲುಗಾಡುತ್ತಿದೆ, ಶೀಘ್ರ ಕುರ್ಚಿಯಿಂದ ಇಳಿಯಲಿದ್ದಾರೆ ಎಂದು ಸಿದ್ದರಾಮಯ್ಯನವರು ಪದೇ ಪದೇ ಹೇಳುತ್ತಿರುವುದಕ್ಕೆ ಬೀದರ್ನಲ್ಲಿ ಪ್ರತಿಕ್ರಿಯೆ ನೀಡಿದ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯನವರೇನು ಬಿಜೆಪಿ ಹೈ ಕಮಾಂಡಾ? ಅಥವಾ ಬಿಜೆಪಿ ವಕ್ತಾರರಾ ? ಎಂದು ಸಚಿವ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.
ಬಿಜೆಪಿ ಬಗ್ಗೆ ಮಾತನಾಡಲು ಸಿದ್ಧರಾಮಯ್ಯ ಯಾರು?: ಸಚಿವ ಜಗದೀಶ್ ಶೆಟ್ಟರ್
ಮಾಜಿ ಸಚಿವ ಎಂ.ಸಿ.ಮನಗೂಳಿ ಆಸ್ಪತ್ರೆಗೆ ದಾಖಲು
ಮಾಜಿ ಸಚಿವ, ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಅವರು ಅನಾರೋಗ್ಯದಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಂದೆಯವರು ಚೇತರಿಸಿಕೊಂಡಿದ್ದಾರೆಂದು ಮನಗೂಳಿಯವರ ಪುತ್ರ ಡಾ.ಶಾಂತವೀರ ಮನಗೂಳಿ ತಿಳಿಸಿದ್ದಾರೆ.
ಉಸಿರಾಟದ ಸಮಸ್ಯೆ, ಮಾಜಿ ಸಚಿವ ಎಂ.ಸಿ.ಮನಗೂಳಿ ಆಸ್ಪತ್ರೆಗೆ ದಾಖಲು
ಎಚ್. ನಾಗೇಶ್ ವಿಶ್ವಾಸ
ಕಷ್ಟ ಕಾಲದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಕೈ ಹಿಡಿದಿದ್ದೇನೆ ಈ ಕಾರಣದಿಂದ ನನ್ನನ್ನು ಸಂಪುಟದಿಂದ ಕೈ ಬಿಡಲ್ಲ ಎಂಬ ವಿಶ್ವಾಸ ಇದೆ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನನ್ನನ್ನು ಸಂಪುಟದಿಂದ ಕೈ ಬಿಡುವುದಿಲ್ಲ, ಎಚ್. ನಾಗೇಶ್ ವಿಶ್ವಾಸ
ಪಕ್ಷಗಳ ಜತೆ ‘ಸಮಾನ ಅಂತರ’ ಕಾಯ್ದುಕೊಳ್ಳಲು ಕಾಂಗ್ರೆಸ್ ನಿರ್ಧಾರ!
ಹಿಂದೂ, ಮುಸ್ಲಿಮ್ ಮತೀಯವಾದಿ ಸಂಘಟನೆಗಳು ಹಾಗೂ ಪಕ್ಷಗಳ ಜತೆ ರಾಜಕೀಯವಾಗಿ ಸಮಾನ ಅಂತರವನ್ನು ಕಾಯ್ದುಕೊಳ್ಳಲು ರಾಜ್ಯ ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಯಾವುದೇ ರೀತಿಯ ಚುನಾವಣಾ ಹೊಂದಾಣಿಕೆ ಹಾಗೂ ಪಕ್ಷ, ಸಂಘಟನೆಗಳ ನಿಲುವುಗಳ ಕುರಿತಾಗಿ ರಾಜಿ ಆಗದಂತೆ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಸ್ಪಷ್ಟ ಸೂಚನೆಯನ್ನು ನೀಡಿದೆ. ಪಕ್ಷ ಸಂಘಟನೆ ನಿಟ್ಟಿನಲ್ಲಿ ನಡೆಯುತ್ತಿರುವ ವಿಭಾಗೀಯ ಸಂಕಲ್ಪ ಸಮಾವೇಶದಲ್ಲಿ ಈ ಸೂಚನೆಯನ್ನು ನೀಡಲಾಗಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಹಿಂದೂ-ಮುಸ್ಲಿಮ್ ಮತೀಯವಾದಿ ಸಂಘಟನೆ, ಪಕ್ಷಗಳ ಜತೆ ‘ಸಮಾನ ಅಂತರ’ ಕಾಯ್ದುಕೊಳ್ಳಲು ಕಾಂಗ್ರೆಸ್ ನಿರ್ಧಾರ!
ಸಂಪುಟ ವಿಸ್ತರಣೆಗೆ ಅಮಾವಾಸ್ಯೆ ಕಂಟಕ?
ಜನವರಿ 13 ಅಥವಾ 14 ರಂದು ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದರೂ ಗೊಂದಲ ಮನೆಮಾಡಿದೆ. 13ರಂದು ಮಧ್ಯಾಹ್ನ ದವರೆಗೆ ಅಮಾವಾಸ್ಯೆ ಇರುವುದರಿಂದ ಇದು ಕಂಟಕವಾಗಿ ಪರಿಣಮಿಸಲಿದ್ಯಾ ಎಂಬುವುದು ಆಕಾಂಕ್ಷಿಗಳ ಆತಂಕಕ್ಕೆ ಕಾರಣವಾಗಿದೆ.
ಸಂಪುಟ ವಿಸ್ತರಣೆಗೆ ಅಮಾವಾಸ್ಯೆ ಕಂಟಕ? ಆಕಾಂಕ್ಷಿಗಳಲ್ಲಿ ಆತಂಕ
ಆಯುಷ್ಮಾನ್ ಹೆಲ್ತ್ ಕಾರ್ಡ್ ವಿತರಣೆಗೆ ಮರುಜೀವ
ಕೊರೊನಾ ಹಿನ್ನೆಲೆಯಲ್ಲಿ 2020ರ ಮಾರ್ಚ್ 19ರಿಂದ ನಿಂತು ಹೋಗಿದ್ದ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ 'ಆಯುಷ್ಮಾನ್ ಭಾರತ್ ಆರೋಗ್ಯ ಹೆಲ್ತ್ಕಾರ್ಡ್' ಯೋಜನೆಗೆ ಮರು ಜೀವ ಸಿಕ್ಕಿದೆ.
ಆಯುಷ್ಮಾನ್ ಹೆಲ್ತ್ ಕಾರ್ಡ್ ವಿತರಣೆಗೆ ಮರುಜೀವ: ಗ್ರಾಪಂ ಬಾಪೂಜಿ ಕೇಂದ್ರಗಳಲ್ಲಿ ಲಭ್ಯ!
ಶಿಕ್ಷಕ ವರ್ಗಕ್ಕೆ ಹಿನ್ನಡೆ
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ) ಅಧಿನಿಯಮ- 2020ರ ಅನ್ವಯ ಕಾಯಿದೆಯಲ್ಲಿರುವ ಅಂಶ ಹೊರತುಪಡಿಸಿ ಬೇರೆ ಯಾವುದೇ ಅಂಶಗಳನ್ನು ಜಾರಿಗೊಳಿಸದೆ ಪ್ರಸ್ತಕ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸುವಂತೆ 'ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಟಿ)' ಆದೇಶ ಹೊರಡಿಸಿದೆ.
ಶಿಕ್ಷಕ ವರ್ಗಕ್ಕೆ ಹಿನ್ನಡೆ: ಹೆಚ್ಚುವರಿ, ಕಡ್ಡಾಯ ವರ್ಗವಾಗಿದ್ದ ಶಿಕ್ಷಕರ ಟ್ರಾನ್ಸ್ಫರ್ಗೆ ಕೆಎಟಿ ತಡೆ!
ಜಿಪಿಟಿಯವರಿಗೂ ಬಡ್ತಿ ನೀಡಲು ಕೋರ್ಟ್ ಆದೇಶ!
1ರಿಂದ 5ನೇ ತರಗತಿ ಪಾಠ ಮಾಡುವ 6 ಸಾವಿರ ಶಿಕ್ಷಕರಿಗೆ ಸರಕಾರ ಪ್ರೌಢ ಶಾಲೆಗೆ ಈಚೆಗೆ ಬಡ್ತಿ ನೀಡಿದ್ದು, ಇದರಿಂದ ಈಗ ಸರಕಾರವೇ ಇಕ್ಕಟ್ಟಿಗೆ ಸಿಲುಕಿದೆ. ಇದಕ್ಕೆ ಕಾರಣ ಪದವೀಧರರ ಶಿಕ್ಷಕರು ಅಂದರೆ 6ರಿಂದ 8ನೇ ತರಗತಿಯವರೆಗೆ ನೇಮಕಗೊಂಡಿರುವ ಶಿಕ್ಷಕರು ತಮಗೂ ಬಡ್ತಿ ನೀಡಬೇಕೆಂದು ಕೆಎಟಿ ಮೊರೆ ಹೋಗಿದ್ದಾರೆ. ಕೆಎಟಿ ಕೂಡ ಸಿ ಆ್ಯಂಡ್ ಆರ್ ನಿಯಮಾವಳಿ ತಿದ್ದುಪಡಿ ಮಾಡಿ ಇವರಿಗೂ ಬಡ್ತಿ ನೀಡಬೇಕು ಎಂದು ಆದೇಶಿಸಿದೆ.
ಶಿಕ್ಷಕರ ಬಡ್ತಿ ತಾರತಮ್ಯ, ಇಕ್ಕಟ್ಟಲ್ಲಿ ಸರಕಾರ: ಜಿಪಿಟಿಯವರಿಗೂ ಬಡ್ತಿ ನೀಡಲು ಕೋರ್ಟ್ ಆದೇಶ!
ಬಹುನಿರೀಕ್ಷಿತ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್..!
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಈ ಬಾರಿಯ ದೆಹಲಿ ಯಾತ್ರೆ ಯಶಸ್ವಿಯಾಗಿದ್ದು, ಬಹುನಿರೀಕ್ಷಿತ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಜನವರಿ 13ರಂದು ಬಿಎಸ್ವೈ ಸಂಪುಟಕ್ಕೆ 7 ಜನ ಸೇರುವುದು ಖಚಿತವಾಗಿದೆ. ಪೂರ್ಣ ಪ್ರಮಾಣದ ಸಚಿವ ಸಂಪುಟ ರೂಪುಗೊಳ್ಳುವ ಸಾಧ್ಯತೆಯಿದೆ.
ಬಹುನಿರೀಕ್ಷಿತ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್..! ಜನವರಿ 13ರಂದು 7 ಹೊಸ ಸಚಿವರ ಪ್ರಮಾಣ ವಚನ
ತಲೆ ಬೋಳಿಸಿ ಅವಮಾನ, ಯುವಕ ಆತ್ಮಹತ್ಯೆಗೆ ಯತ್ನ
ಪೋಸ್ಟ್ ಆಫೀಸ್ನಲ್ಲಿ ಹಣ ಕಳುವು ಮಾಡಿದ್ದಾರೆಂದು ಆರೋಪಿಸಿ ಯುವಕನೊಬ್ಬನ ತಲೆ ಬೋಳಿಸಿದ ಹಿನ್ನೆಲೆಯಲ್ಲಿ ಆತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರಿನ ಬೀರಿಹುಂಡಿಯಲ್ಲಿ ನಡೆದಿದೆ.
ಮೈಸೂರಿನಲ್ಲಿ ಕಳ್ಳತನ ಆರೋಪಿಗೆ ತಲೆ ಬೋಳಿಸಿ ಅವಮಾನ: ಮನನೊಂದ ಯುವಕ ಆತ್ಮಹತ್ಯೆ ಯತ್ನ
ರಾಜ್ಯದಲ್ಲಿ ಕಾಂಗ್ರೆಸ್ ಎಂಬುದೇ ಇಲ್ಲ..!
ರಾಜ್ಯದಲ್ಲಿ ಕಾಂಗ್ರೆಸ್ ಎನ್ನುವುದೇ ಇಲ್ಲ. ಅದರ ನೆನಪು ಏಕೆ ಮಾಡಿಕೊಳ್ಳುತ್ತೀರಿ ಎಂದು ಪಕ್ಷದ ನಾಯಕರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಶ್ನಿಸಿದ್ದಾರೆ. ನಗರದಲ್ಲಿ ಆಯೋಜಿಸಿದ್ದ ಜನಸೇವಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವವೇ ಇಲ್ಲ. ಆದ್ದರಿಂದ ಕಾಂಗ್ರೆಸ್ನ್ನು ನೆನಪಿಸಿಕೊಳ್ಳುವ ಅವಶ್ಯಕತೆ ಇಲ್ಲ. ಗೋ ಮಾಂಸ ತಿನ್ನುವುದನ್ನು ಮೈಸೂರಿನ ಕಾಂಗ್ರೆಸ್ ನಾಯಕರೊಬ್ಬರು ಸಾಧನೆ ಎಂದು ಹೇಳುತ್ತಿದ್ದಾರೆ. ಅವರಿಗೆಲ್ಲಾ ಉತ್ತರ ನೀಡುವ ಅಗತ್ಯ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಎಂಬುದೇ ಇಲ್ಲ..! ನಿಮಗೇಕೆ ಅದರ ನೆನಪು: ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಪ್ರಶ್ನೆ