ಆ್ಯಪ್ನಗರ

ಕಳಪೆ ಪ್ರದರ್ಶನ ನೀಡಿದ ಸರಕಾರಿ ಶಾಲೆಗಳ ಶಿಕ್ಷಕರಿಗೆ ಸಿಂಗಾಪುರ ಭಾಗ್ಯ

ರಾಜ್ಯದಲ್ಲಿ ಇತ್ತೀಚೆಗೆ ನಡೆದ 10ನೇ ತರಗತಿ ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಸರಕಾರಿ ಶಾಲೆಗಳಲ್ಲಿ ಪಾಠ ಮಾಡುತ್ತಿರುವ ಶಿಕ್ಷಕರಿಗೆ ಸಿಂಗಾಪುರಕ್ಕೆ ಹೋಗುವ ಭಾಗ್ಯ ದೊರೆತಿದೆ.

Bangalore Mirror Bureau 14 Jun 2018, 3:43 pm
ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದ 10ನೇ ತರಗತಿ ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಸರಕಾರಿ ಶಾಲೆಗಳಲ್ಲಿ ಪಾಠ ಮಾಡುತ್ತಿರುವ ಶಿಕ್ಷಕರಿಗೆ ಸಿಂಗಾಪುರಕ್ಕೆ ಹೋಗುವ ಭಾಗ್ಯ ದೊರೆತಿದೆ. ಪರಿಕ್ರಮ ಹ್ಯುಮಾನಿಟಿ ಫೌಂಡೇಶನ್ ಎಂಬ ಸಂಸ್ಥೆಯ ಸಹಯೋಗದೊಂದಿಗೆ ರಾಜ್ಯದ 20 ಸರಕಾರಿ ಶಾಲೆಗಳ 40 ಶಿಕ್ಷಕರಿಗೆ ತರಬೇತಿ ನೀಡಲು ಸಿಂಗಾಪುರಕ್ಕೆ ಕಳಿಸಲು ರಾಜ್ಯ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಸಿಂಗಾಪುರದ ತರಬೇತುದಾರರು ರಾಜ್ಯದ 40 ಶಿಕ್ಷಕರಿಗೆ ಸಿಂಗಾಪುರಕ್ಕೆ ಕಳಿಸಲಾಗುತ್ತಿದೆ. ಕರ್ನಾಟಕದ 607 ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿ ವಿಷಯಕ್ಕೆ 10ಕ್ಕಿಂತ ಕಳಪೆ ಅಂಕಗಳನ್ನು ಪಡೆದುಕೊಂಡಿದ್ದಾರೆ. ಹೀಗಾಗಿ, ಮಕ್ಕಳಿಗೆ ಸುಲಭವಾಗುವಂತೆ ಶಿಕ್ಷಕರು ನವೀನ ಮತ್ತು ಹೆಚ್ಚು ಪರಿಣಾಮಕಾರಿ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕೆಂದು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
Vijaya Karnataka Web singapore


ರಾಜ್ಯದ 607 ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ 10ಕ್ಕಿಂತ ಕಡಿಮೆ ಅಂಕಗಳನ್ನು ಪಡೆದುಕೊಂಡಿದ್ದಾರೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ. ಹೀಗಾಗಿ, ಈ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ತರಬೇತಿ ನೀಡಬೇಕೆಂಬುದು ಶಿಕ್ಷಣ ಇಲಾಖೆಯ ಚಿಂತನೆಯಾಗಿದೆ ಎಂದು ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಈ ಬೆಳವಣಿಗೆಯನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಕಳೆದ ಹಲವು ವರ್ಷಗಳಿಂದ ಪರಿಕ್ರಮ ಫೌಂಡೇಶನ್ ಸರಕಾರಿ ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡುವುದರಲ್ಲಿ ತೊಡಗಿಸಿಕೊಂಡಿದೆ.

ಸಿಂಗಾಪುರ ಯಾಕೆ ?
ಇತ್ತೀಚೆಗೆ ಶಿಕ್ಷಕರತ್ತ ಸರಿಯಾದ ಗಮನ ನೀಡುತ್ತಿಲ್ಲ. ಅಲ್ಲದೆ, ಸದ್ಯ ಹಲವು ತಂತ್ರಗಳೊಂದಿಗೆ ಗುಣಮಟ್ಟದ ಬೋಧನೆ ನೀಡುವ ಅಗತ್ಯವಿದೆ. ಅಲ್ಲದೆ, ಶಿಕ್ಷಕರ ಕೌಶಲ್ಯ, ಜ್ಞಾನ, ಮತ್ತು ವರ್ತನೆಯನ್ನು ಉತ್ತಮಪಡಿಸಬೇಕಿದೆ. ಪ್ರಮುಖವಾಗಿ ಗಣಿತ ಹಾಗೂ ವಿಜ್ಙಾನದ ವಿಷಯಗಳಲ್ಲಿ ತರಬೇತಿ ನೀಡಬೇಕಾದ ಅಗತ್ಯವಿದೆ. ಹೀಗಾಗಿ ಇವೆರಡು ವಿಷಯಗಳ ಶಿಕ್ಷಣ ನೀಡುವಲ್ಲಿ ಸಿಂಗಾಪುರ ಹಾಗೂ ದಕ್ಷಿಣ ಕೊರಿಯಾ ವಿಶ್ವದಲ್ಲಿ ಮುಂಚೂಣಿಯಲ್ಲಿದೆ. ಈ ಪೈಕಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಕಾರಿ ಶಾಲೆಗಳ ಕೆಲ ಶಿಕ್ಷಕರನ್ನು ಸಿಂಗಾಪುರಕ್ಕೆ ಕಳಿಸಲಾಗಿದೆ ಎಂದು ಪರಿಕ್ರಮ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಓ ಶುಕ್ಲಾ ಬೋಸ್ ಮಾಹಿತಿ ನೀಡಿದ್ದಾರೆ.

ಅಲ್ಲದೆ, ಹಲವು ವಿದ್ಯಾರ್ಥಿಗಳು ನೆನಪಿನ ಶಕ್ತಿಯ ಮೂಲಕವೇ ಕಲಿಯುತ್ತಾರೆ. ಇಂತಹವರು ವಿಷಯದ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಹೀಗಾಗಿ, ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಶಿಕ್ಷಣದ ನೀತಿ ಬದಲಿಸಬೇಕಾದ ಅಗತ್ಯವಿದೆ ಎಂದು ಹಲವು ಶಿಕ್ಷಣ ತಜ್ಙರು ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಂಗಾಪುರದ ಎನ್‌ಜಿಒದೊಂದಿಗೆ ಪರಿಕ್ರಮ ಸಂಸ್ಥೆ ಸಂಯೋಜನೆ ಮಾಡಿಕೊಂಡಿದ್ದು, ಅಲ್ಲಿನ ತರಬೇತಿದಾರರು ಶಿಕ್ಷಕರಿಗೆ ತರಬೇತಿ ನೀಡುತ್ತಾರೆ. ಒಂದು ವರ್ಷದ ಅವಧಿಯಲ್ಲಿ ಹಂತ ಹಂತವಾಗಿ ತರಬೇತಿ ನಡೆಸಲಿದ್ದು, ಈ ಟ್ರೈನಿಂಗ್ ಹಲವು ಬ್ಯಾಚ್‌ಗಳಲ್ಲಿ ಕರ್ನಾಟಕದಲ್ಲೇ ಆರಂಭವಾಗಲಿದೆ. ಬಳಿಕ ಕೊನೆಯ ಹಂತದಲ್ಲಿ ಅವರನ್ನು ಸಿಂಗಾಪುರಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲದೆ, ಗಣಿತ ಹಾಗೂ ವಿಜ್ಙಾನದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಇಷ್ಟವಾಗುವಂತೆ ಹೇಗೆ ಕಲಿಸುವುದು ಎಂಬುದನ್ನು ಅಲ್ಲಿ ಶಿಕ್ಷಕರಿಗೆ ಅರಿವು ಮೂಡಿಸಲಾಗುವುದು ಎಂದು ಶುಕ್ಲಾ ಮಾಹಿತಿ ನೀಡಿದ್ದಾರೆ. ಈ ಮೂಲಕ ಶಿಕ್ಷಕರಲ್ಲಿ ಹೆಮ್ಮೆ ಮತ್ತು ಜವಾಬ್ದಾರಿಯನ್ನು ತಿಳಿಸುವುದು ಇದರ ಮತ್ತೊಂದು ಉದ್ದೇಶ ಎಂದು ಸಹ ಪರಿಕ್ರಮ ಸಂಸ್ಥೆಯ ಶುಕ್ಲಾ ಬೋಸ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ