ಆ್ಯಪ್ನಗರ

ಕರ್ನಾಟಕ, ತೆಲಂಗಾಣ ಮುಂದಿನ ಕೊರೊನಾ ಹಾಟ್‌ಸ್ಪಾಟ್‌ - ತಜ್ಞರ ಎಚ್ಚರಿಕೆ

ಕರ್ನಾಟಕ ರಾಜ್ಯದಲ್ಲಿ8.5 ದಿನಕ್ಕೆ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಕಳೆದ 10-12 ದಿನಗಳಲ್ಲಿ ರಾಜ್ಯದಲ್ಲಿ ಸೋಂಕಿನ ಪ್ರಕರಣಗಳು ದಿನಕ್ಕೆ ಸರಾಸರಿ ಒಂದು ಸಾವಿರದಷ್ಟು ಹೆಚ್ಚುತ್ತಿವೆ.

Agencies 8 Jul 2020, 10:58 pm

ಹೊಸದಿಲ್ಲಿ: ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ಇಡೀ ದೇಶದಲ್ಲೇ ಕೋವಿಡ್‌-19 ಸೋಂಕಿನ ಮುಂದಿನ ಹಾಟ್‌ಸ್ಪಾಟ್‌ ಆಗಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
Vijaya Karnataka Web Karnataka testing
ಸಾಂದರ್ಭಿಕ ಚಿತ್ರ


ಪ್ರಸ್ತುತ ಈ ಎರಡೂ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರುತ್ತಿದ್ದು , ಮಹಾರಾಷ್ಟ್ರ ಮತ್ತು ದಿಲ್ಲಿಯಂತೆಯೇ ಆಗಲಿವೆ. ಎರಡೂ ರಾಜ್ಯಗಳ ಸೋಂಕಿನ ಏರಿಕೆ ಪ್ರಮಾಣವು ದಿಲ್ಲಿ ಮತ್ತು ಮಹಾರಾಷ್ಟ್ರಕ್ಕೆ ಸಾಮ್ಯತೆ ಹೊಂದಿವೆ. ಕರ್ನಾಟಕ ದೇಶದಲ್ಲೆ ಏಳನೇ ಅತ್ಯಂತ ಗಂಭೀರ ಸೋಂಕಿತ ರಾಜ್ಯವಾಗಿದೆ. ಪ್ರಕರಣಗಳ ಏರಿಕೆ ಸಂಖ್ಯೆ, ಸೋಂಕಿನ ದರ, ಸಾವಿನ ಪ್ರಮಾಣವನ್ನು ಮಾನದಂಡವಾಗಿ ಪರಿಗಣಿಸಿ ಈ ವಿಶ್ಲೇಷಣೆ ಮಾಡಲಾಗಿದೆ.

ರಾಜ್ಯದಲ್ಲಿ8.5 ದಿನಕ್ಕೆ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಕಳೆದ 10-12 ದಿನಗಳಲ್ಲಿ ರಾಜ್ಯದಲ್ಲಿ ಸೋಂಕಿನ ಪ್ರಕರಣಗಳು ದಿನಕ್ಕೆ ಸರಾಸರಿ ಒಂದು ಸಾವಿರದಷ್ಟು ಹೆಚ್ಚುತ್ತಿವೆ.
ಕೊನೆಗೂ 3500 ಹಾಸಿಗೆ ಬಿಟ್ಟುಕೊಡಲು ಖಾಸಗಿ ಆಸ್ಪತ್ರೆಗಳ ಸಮ್ಮತಿ

ಬೆಂಗಳೂರು ತಲ್ಲಣ

ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗುತ್ತಿದ್ದು, ಪ್ರತಿ 5 ಸೋಂಕಿತರಲ್ಲಿ ಇಬ್ಬರು ಬೆಂಗಳೂರಿನಲ್ಲೇ ಪತ್ತೆಯಾಗುತ್ತಿದ್ದಾರೆ. ಅತ್ತ ತೆಲಂಗಾಣದಲ್ಲೂ ಹೈದರಾಬಾದ್‌ ಸೊಂಕಿನ ಹಾಟ್‌ಸ್ಪಾಟ್‌ ಆಗಿ ಹೊರಹೊಮ್ಮಿದೆ. ಪ್ರತಿ ಐದು ಪ್ರಕರಣಗಳಲ್ಲಿ ನಾಲ್ಕು ಹೈದರಾಬಾದ್‌ನಲ್ಲೇ ಪತ್ತೆಯಾಗುತ್ತಿವೆ. ಹೈದರಾಬಾದ್‌ ಒಟ್ಟು ಪ್ರಕರಣಗಳಲ್ಲಿ ಶೇಕಡಾ 70ರಷ್ಟು ಕಳೆದ ಎರಡು ವಾರಗಳಲ್ಲಿ ಪತ್ತೆಯಾಗಿವೆ.

ದಿನಕ್ಕೆ 2.87 ಲಕ್ಷ ಸೋಂಕಿತರು

ಒಂದು ವೇಳೆ ಕೊರೊನಾ ವೈರಸ್‌ಗೆ ಸೂಕ್ತ ಲಸಿಕೆ ಲಭ್ಯವಾಗದೆ ಹೋದರೆ 2021ರ ಚಳಿಗಾಲದ ವೇಳೆಗೆ ಭಾರತದಲ್ಲಿ ದಿನವೊಂದಕ್ಕೆ 2.87 ಲಕ್ಷ ಕೋವಿಡ್‌-19 ಪ್ರಕರಣಗಳು ಪತ್ತೆಯಾಗಲಿವೆ. ಆ ಮೂಲಕ ಅಮೆರಿಕವನ್ನೂ ಹಿಂದಿಕ್ಕಿಲಿದೆ ಎಂದು ಮಿಷಿಗನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎಂಐಟಿ) ತಜ್ಞರು ಅಂದಾಜಿಸಿದ್ದಾರೆ. ಪ್ರತಿನಿತ್ಯ ಪತ್ತೆಯಾಗುತ್ತಿರುವ ಪ್ರಕರಣಗಳನ್ನು ಆಧರಿಸಿ ಈ ಅಂದಾಜು ಮಾಡಲಾಗಿದೆ. ಅಮೆರಿಕ, ದಕ್ಷಿಣ ಆಫ್ರಿಕಾ, ಇಂಡೊನೇಷ್ಯಾ, ಬ್ರಿಟನ್‌, ನೈಜೀರಿಯಾ, ಟರ್ಕಿ, ಫ್ರಾನ್ಸ್‌ ಮತ್ತು ಜರ್ಮನಿಯನ್ನು ನಂತರದ ಸ್ಥಾನದಲ್ಲಿ ಹೆಸರಿಸಲಾಗಿದೆ.
ಜುಲೈ 31ರವರೆಗೆ ಕೆ.ಆರ್‌. ಮಾರ್ಕೆಟ್‌, ಕಲಾಸಿಪಾಳ್ಯ ಸೀಲ್‌ಡೌನ್‌ಗೆ ಬಿಬಿಎಂಪಿ ಆದೇಶ!

ನಿರ್ಲಕ್ಷಿಸಿದರೆ ದೊಡ್ಡ ಅಪಾಯ

ಸರಕಾರಗಳು ಭಾರಿ ಪ್ರಮಾಣದಲ್ಲಿ ಟೆಸ್ಟಿಂಗ್‌ ನಡೆಸುವುದು, ಸಾಮಾಜಿಕ ಅಂತರದಂತಹ ಕ್ರಮಗಳಿಂದ ಸೋಂಕನ್ನು ನಿಯಂತ್ರಿಸಬಹುದು. ಆದರೆ, ಕೋವಿಡ್‌ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಈ ಸಾಂಕ್ರಾಮಿಕ ನಿಯಂತ್ರಣ ಅಸಾಧ್ಯ. ಮತ್ತೊಂದು ಸುತ್ತಿನ ಸೋಂಕಿನ ಅಲೆಗೂ ಕಾರಣವಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ