ಆ್ಯಪ್ನಗರ

ಮಾಧ್ಯಮಗಳ ಕಣ್ತಪ್ಪಿಸಿ ಕಲಾಪ: ಖಾಸಗಿ ಟಿವಿಗಳ ನೇರ ಪ್ರಸಾರಕ್ಕೆ ತಡೆ ಒಡ್ಡಿದ ಕರ್ನಾಟಕ ಸರಕಾರ

ಫೋಟೊ ತೆಗೆಯಲೂ ನಿರ್ಬಂಧ ವಿಧಿಸಿದ ಸ್ಪೀಕರ್‌, ಅಸಭ್ಯ, ಅಕ್ರಮ ನಡೆ ಮುಚ್ಚಿಕೊಳ್ಳಲು ಯತ್ನ , ದಮನಕಾರಿ ನಿಲುವಿಗೆ ಪ್ರತಿಪಕ್ಷಗಳ ಆಕ್ಷೇಪ ..

Vijaya Karnataka 10 Oct 2019, 8:15 am
ಬೆಂಗಳೂರು: ಕಲಾಪಗಳನ್ನು ಎಚ್ಚರಿಕೆ ಕಣ್ಣಿನಿಂದ ವೀಕ್ಷಿಸುತ್ತ ವಿಧಾನ ಮಂಡಲದಲ್ಲಿ ಜನಪ್ರತಿನಿಧಿಗಳ ನಡವಳಿಕೆಗಳನ್ನು ಬಯಲು ಮಾಡುತ್ತಿದ್ದ ಮಾಧ್ಯಮಗಳ ಕಣ್ಣಿಗೆ ಕಪ್ಪುಪಟ್ಟಿ ಹಾಕಲು ರಾಜ್ಯ ಸರಕಾರ ನಿರ್ಧರಿಸಿದೆ. ಗುರುವಾರ ಆರಂಭವಾಗಲಿರುವ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಕಲಾಪವನ್ನು ನೇರ ಪ್ರಸಾರ ಮಾಡದಂತೆ ಖಾಸಗಿ ಟಿವಿ ವಾಹಿನಿಗಳಿಗೆ ನಿರ್ಬಂಧ ವಿಧಿಸಲಾಗಿದೆ.
Vijaya Karnataka Web Vidhan Saudha


ಸಿದ್ದರಾಮಯ್ಯ ಮತ್ತೆ ಪ್ರತಿಪಕ್ಷ ನಾಯಕ: ಕಾಂಗ್ರೆಸ್‌ ಹೈ ಕಮಾಂಡ್‌ ಘೋಷಣೆ

ಜತೆಗೆ ದಿನಪತ್ರಿಕೆಗಳ ಛಾಯಾಗ್ರಾಹಕರೂ ಫೋಟೊ ತೆಗೆಯಲು ಅವಕಾಶ ನಿರಾಕರಿಸಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾಧ್ಯಮ ಪ್ರತಿನಿಧಿಗಳು ಮೊಬೈಲ್‌, ಟ್ಯಾಬ್‌ಗಳನ್ನೂ ತರಬಾರದು ಎಂದು ಕಟ್ಟಾಜ್ಞೆ ವಿಧಿಸಲಾಗಿದೆ.

ಸರಕಾರದ ವಿರುದ್ಧ ಒಗ್ಗಟ್ಟಾಗಿ ಮುಗಿಬೀಳಲು ಕಾಂಗ್ರೆಸ್‌ ತೀರ್ಮಾನ

ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತೆಗೆದುಕೊಂಡಿರುವ ಈ ಕಠಿಣ ತೀರ್ಮಾನಕ್ಕೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಅಧಿವೇಶನದಲ್ಲಿ ಶಾಸಕರು ತೋರುವ ಹದ್ದು ಮೀರಿದ ವರ್ತನೆ, ಅಸಭ್ಯ, ಅಕ್ರಮ ನಡವಳಿಕೆಗಳನ್ನು ಮುಚ್ಚಿಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.


ಅವರು ಲೋಕಸಭೆ ಮಾದರಿಯಲ್ಲಿ ಕಲಾಪ ಪ್ರಸಾರ ತಡೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಹತ್ತಾರು ವರ್ಷಗಳ ಈ ಪ್ರಸ್ತಾಪ ಅನುಷ್ಠಾನಕ್ಕೆ ಅವರು ಬಯಸಿದ್ದಾರೆ. ಈ ನಿರ್ಧಾರಕ್ಕೆ ಬಿಜೆಪಿಯ ಬಹುತೇಕ ಶಾಸಕರು ಬೆಂಬಲ ನೀಡಿದ್ದಾರೆ. ಬುಧವಾರ ಸಂಜೆಯವರೆಗೂ ಸಿಎಂ ಯಡಿಯೂರಪ್ಪ ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಿಳಿಸಿರಲಿಲ್ಲ. ಆದರೆ, ಸಾಯಂಕಾಲ ಸ್ಪೀಕರ್‌ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದೆ.


ಡಿಡಿ ನೀಡಿದ್ದೇ ಪ್ರಸಾದ
: ಇನ್ನು ದೂರದರ್ಶನಕ್ಕೆ ಮಾತ್ರ ಕಲಾಪವನ್ನು ಪ್ರಸಾರ ಮಾಡುವ ಅವಕಾಶವಿರುತ್ತದೆ. ಅದು ಸ್ಯಾಟಲೈಟ್‌ ಮೂಲಕ ಖಾಸಗಿ ವಾಹಿನಿಗಳಿಗೆ ಸಂಪರ್ಕ ಒದಗಿಸಲಿದೆ. ಆದರೆ, ಅದು ಸೆರೆ ಹಿಡಿದ ದೃಶ್ಯಗಳಷ್ಟೇ ಸಿಗಲಿದೆ. ಬುಧವಾರ ಬೆಳಗ್ಗೆಯೇ ದೂರದರ್ಶನ ಹಾಗೂ ವಾರ್ತಾ ಇಲಾಖೆ ಸಿಬ್ಬಂದಿ ವಿಧಾನಸಭೆ ಗ್ಯಾಲರಿಯಲ್ಲಿ 10 ಕ್ಯಾಮೆರಾಗಳನ್ನು ಅಳವಡಿಸಿದ್ದು, ಸಿ-ಬಾಂಡ್‌ ಹಾಗೂ ಕ್ಯೂ-ಬಾಂಡ್‌ ಮೂಲಕ ಖಾಸಗಿ ವಾಹಿನಿ ಗಳಿಗೆ ಕಲಾಪದ ಲಿಂಕ್‌ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.


ಯಾರ ಕಾಲದ ಪ್ರಸ್ತಾಪ?:
ಇದು ನಮ್ಮ ಕಾಲದ ಪ್ರಸ್ತಾಪವಲ್ಲ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಮೈತ್ರಿ ಸರಕಾರದ ಅವಧಿಯಲ್ಲಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಈ ಬಗ್ಗೆ ಚಿಂತನೆ ನಡೆಸಿದ್ದರೂ ಅನುಷ್ಠಾನ ಸಾಧ್ಯವಾಗಿರಲಿಲ್ಲ. ವಾಸ್ತವವಾಗಿ ಮೊದಲು ಈ ಚಿಂತನೆ ನಡೆದಿದ್ದೇ ಬಿಜೆಪಿ ಅವಧಿಯಲ್ಲಿ. ಕಲಾಪ ವೇಳೆ ನೀಲಿಚಿತ್ರ ವೀಕ್ಷಿಸಿದ ಕಾರಣಕ್ಕಾಗಿ ಸವದಿ, ಸಿ.ಸಿ. ಪಾಟೀಲ್‌, ಪಾಲೇಮಾರ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ ಟಿವಿ ವಾಹಿನಿ ನಿಯಂತ್ರಣದ ಬಗ್ಗೆ ಅಂದಿನ ಸ್ಪೀಕರ್‌ ಕೆ.ಜಿ.ಬೋಪಯ್ಯ ಚಿಂತನೆ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ