ಆ್ಯಪ್ನಗರ

ಕೆಎಎಸ್‌ ಸಂದರ್ಶನ ಪ್ರಕ್ರಿಯೆ ಆರಂಭಿಸದ ಕೆಪಿಎಸ್‌ಸಿ: ಬಿಜೆಪಿ ಶಾಸಕ ಸುರೇಶ್‌ಕುಮಾರ್‌ ನಿರಶನ ನಾಳೆಯಿಂದ

ಕೆಎಎಸ್‌ 2015ನೇ ಸಾಲಿನ ನೇಮಕ ಸಂಬಂಧ ಸಂದರ್ಶನ ದಿನಾಂಕ ಪ್ರಕಟಿಸದ ಕೆಪಿಎಸ್‌ಸಿ ಧೋರಣೆ ಖಂಡಿಸಿ ಜು...

Vijaya Karnataka 2 Jul 2019, 5:00 am
ಬೆಂಗಳೂರು: ಕೆಎಎಸ್‌ 2015ನೇ ಸಾಲಿನ ನೇಮಕ ಸಂಬಂಧ ಸಂದರ್ಶನ ದಿನಾಂಕ ಪ್ರಕಟಿಸದ ಕೆಪಿಎಸ್‌ಸಿ ಧೋರಣೆ ಖಂಡಿಸಿ ಜು. 3ರಿಂದ ನಿರಶನ ನಡೆಸುವುದಾಗಿ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಹೇಳಿದ್ದಾರೆ.
Vijaya Karnataka Web BJP- suresh kumar


''ಕೆಎಎಸ್‌ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟವಾಗಿ ವರ್ಷ ಕಳೆದರೂ ಸಂದರ್ಶನ ಪ್ರಕ್ರಿಯೆ ಕೈಗೊಂಡು ಆಯ್ಕೆ ಪಟ್ಟಿ ಪ್ರಕಟಿಸಿಲ್ಲ. ಕೆಪಿಎಸ್‌ಸಿಯ ಈ ವೈಫಲ್ಯದ ವಿರುದ್ಧ ಹಾಗೂ ಶೀಘ್ರ ಸಂದರ್ಶನ ವೇಳಾಪಟ್ಟಿ ಪ್ರಕಟಿಸುವಂತೆ ಒತ್ತಾಯಿಸಿ ನಿರಶನ ಆರಂಭಿಸುತ್ತೇನೆ'' ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

''2015ನೇ ಸಾಲಿನ ಕೆಎಎಸ್‌ ನೇಮಕಕ್ಕೆ 2017ರಲ್ಲಿ ಅಧಿಸೂಚನೆ ಹೊರಡಿಸಿ ಇಷ್ಟು ವರ್ಷ ಕಳೆದರೂ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. 10 ವರ್ಷಗಳ ಅವಧಿಯಲ್ಲಿ 2008, 2010 ಮತ್ತು 2014 ಈ ಮೂರು ಬ್ಯಾಚ್‌ನ ಫಲಿತಾಂಶ ಮಾತ್ರ ಪ್ರಕಟವಾಗಿದ್ದು, ಅಭ್ಯರ್ಥಿಗಳು ಹತಾಶರಾಗಿದ್ದಾರೆ. ಈ ಸಂಬಂಧ ಕೆಪಿಎಸ್‌ಸಿ ಅಧ್ಯಕ್ಷರ ಜತೆ ಹಲವು ಬಾರಿ ಚರ್ಚಿಸಿದ್ದು, ಸಂಸ್ಥೆ ಎದುರು ಪ್ರತಿಭಟನೆಯನ್ನೂ ನಡೆಸಿದ್ದೇನೆ. ಈ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದೇನೆ. ಆದರೂ, ಕೆಪಿಎಸ್‌ಸಿ ಕಾರ್ಯವೈಖರಿ ನಿರಾಶದಾಯಕವಾಗಿದೆ'' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

''ಚಿತ್ರಕಲಾ ಶಿಕ್ಷಕರು, ಬೆರಳಚ್ಚುಗಾರರು, 'ಸಿ' ಗ್ರೂಪ್‌ ನೌಕರರ ನೇಮಕ ವಿಚಾರದಲ್ಲೂ ಕೆಪಿಎಸ್‌ಸಿ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಸಂಸ್ಥೆಯ ವೈಫಲ್ಯತೆ ಎದ್ದುಕಾಣುತ್ತಿದೆ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ