ಆ್ಯಪ್ನಗರ

ರಾಮ್‌ ರಹೀಮ್‌ ಜೈಲು ಸೇರುವಂತೆ ಮಾಡಿದ್ದು ಕಾಸರಗೋಡು ಅಧಿಕಾರಿ

ಸ್ವ-ಘೋಷಿತ ದೇವ ಮಾನವ ಗುರ್‌ಮೀತ್‌ ರಾಮ್‌ ರಹೀಮ್‌ ಸಿಂಗ್‌ ಜೈಲಿಗೆ ಹೋಗಲು ಕಾಸರಗೋಡು ಮೂಲದ ಅಧಿಕಾರಿ ಕಾರಣ.

Vijaya Karnataka Web 28 Aug 2017, 9:34 pm
ಕಾಸರಗೋಡು: ಡೇರಾ ಸಚ್ಚಾ ಸೌಧ ಮುಖ್ಯಸ್ಥ ರಾಮ್‌ ರಹೀಮ್‌ ಸಿಂಗ್ ಜೈಲಿಗೆ ಹೋಗಲು ಕಾಸರಗೋಡು ಮೂಲದ ನಿವೃತ್ತ ಸಿಬಿಐ ಅಧಿಕಾರಿ.
Vijaya Karnataka Web kasrgod officer who investigated dera chief case
ರಾಮ್‌ ರಹೀಮ್‌ ಜೈಲು ಸೇರುವಂತೆ ಮಾಡಿದ್ದು ಕಾಸರಗೋಡು ಅಧಿಕಾರಿ

ಹೌದು ರಾಮ್‌ ರಹೀಮ್‌ ಸಿಂಗ್‌ ಅತ್ಯಾಚಾರ ನಡೆಸಿರುವ ಕುರಿತು ದೂರು ಬಂದಾಗ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.



ಆಗ ಇದನ್ನು ಕೈಗೆತ್ತಿಕೊಂಡು ಯಾವುದೇ ಒತ್ತಡ, ರಾಜಕಾರಣಿಗಳ ಹಾಗೂ ಬಾಬಾ ಬೆಂಬಲಿಗರ ಬೆದರಿಕೆಗೆ ಬೆದರದೇ ತನಿಖೆ ನಡೆಸಿದವರು ಕಾಸರಗೋಡಿನ ಉಪ್ಪಳ ಮುಳಿಂಜ ನಿವಾಸಿ ನಾರಾಯಣ (65).

ದೇವಮಾನವನ ಬಂಧನ, ಶಿಕ್ಷೆ, ದೇಶಾದ್ಯಂತ ಚರ್ಚಿಸುತ್ತಿರುವಾಗ ಅದರ ಹಿಂದೆ ಕಾರ್ಯಾಚರಿಸಿದ ನಾರಾಯಣ್‌ ಎಂಬ ಸಿಬಿಐ ಅಧಿಕಾರಿಯ ಹುಟ್ಟೂರು ಕಾಸರಗೋಡು ಜಿಲ್ಲೆಯಾಗಿದೆ ಎಂಬ ವಿಷಯ ಯಾರಿಗೂ ತಿಳಿದಿಲ್ಲ.

1970ರಲ್ಲಿ ವಿದ್ಯಾನಗರ ಸರಕಾರಿ ಕಾಲೇಜಿನಿಂದ ವಿಜ್ಞಾನದಲ್ಲಿ ಪದವಿ ಪಡೆದ ಬಳಿಕ ನಾರಾಯಣ ಸಿಬಿಐಯಲ್ಲಿ ಸೇರ್ಪಡೆಯಾಗಿದ್ದರೂ, ಬಳಿಕ ಅವರ ಜೀವನ ಸಂಕಷ್ಟದ ಕಾಲ ಘಟ್ಟವಾಗಿತ್ತು. ದೇವಮಾನವ ಬಂಧನ ಕೇಸ್‌ ಸೇವಾ ಕಾಲದ ಅತ್ಯಂತ ಪ್ರಮುಖ ಪ್ರಕರಣ ಆಗಿದೆ ಎಂದು ಪ್ರಸ್ತುತ ದಿಲ್ಲಿಯ ಕಾಯಂ ನಿವಾಸಿ ನಾರಾಯಣ್‌ ತಿಳಿಸಿದ್ದಾರೆ.

2002 ಸೆಪ್ಟೆಂಬರ್‌ನಲ್ಲಿ ದೇವ ಮಾನವ ವಿರುದ್ಧದ ಅತ್ಯಾಚಾರ ಪ್ರಕರಣ ಪಂಜಾಬ್‌-ಹರ್ಯಾಣ ಹೈಕೋರ್ಟ್‌ ಸಿಬಿಐಗೆ ವರ್ಗಾಯಿಸಿತು. ದೇವ ಮಾನವ ಹಣ ಹಾಗೂ ರಾಜಕೀಯದ ಪ್ರಭಾವದ ಮುಂದೆ ಮೊದಲ 5 ವರ್ಷಗಳ ಕಾಲ ತನಿಖೆ ಸಾಗಲಿಲ್ಲ. ಪ್ರಕರಣ ಮತ್ತೆ ನ್ಯಾಯಾಲಯಕ್ಕೆ ತಲುಪಿತು. ಸ್ವಾಧೀನಕ್ಕೆ, ಪ್ರತಿಭಟನೆಗೆ, ಬೆದರಿಕೆಗೆ ಮಣಿಯದೆ ತನಿಖೆಗೆ ಮಾಡಲು ನ್ಯಾಯಾಲಯ ಆದೇಶಿಸಿತು.

2002 ಡಿಸೆಂಬಧಿರ್‌ 12ರಂದು ಸಿಬಿಐ ಕೇಸು ದಾಖಲಿಸಿತು. ಇದರ ನೇತೃತ್ವದ ಜವಾಬ್ದಾರಿ ಹೊತ್ತವರಲ್ಲಿ ನಾರಾಯಣ ಕೂಡ ಒಬ್ಬರಾಗಿದ್ದರು.

ಈ ಸಂದರ್ಭ ನಾರಾಯಣ ಅವರಿಗೆ ದೇವಮಾನವನ ಬೆದರಿಕೆಯೂ ಇತ್ತು. ಆದರೆ ಅವರು ಯಾವುದಕ್ಕೂ ಜಗ್ಗದೆ ನ್ಯಾಯಾಲಯದ ಆದೇಶದಂತೆ, ಆತ್ಮವಿಶ್ವಾಸದ ಬಲದಿಂದ ಮುಂದಿನ ಕ್ರಮಗಳೊಂದಿಗೆ ಕೇಸನ್ನು ನಡೆಸಿಕೊಂಡು ಬಂದಿದ್ದರು.

ವರ್ಷಗಳು ಕಳೆದ ನಂತರ ಕೊನೆಗೆ ದೂರುದಾರರಾದ ಮಾಜಿ ಆಶ್ರಮವಾಸಿಯನ್ನು ನಾರಾಯಣನ್‌ ಪತ್ತೆ ಹಚ್ಚಿದರು. ಆ ವೇಳೆ ದೂರು ನೀಡಿದ ಯುವತಿ ಸಾಂಸಾರಿಕ ಜೀವನ ನಡೆಸುತ್ತಿದ್ದರು. ಬಳಿಕ ಸ್ವತಃ ನಾರಾಯಣ ಅವರು ತಂದೆಯ ಸ್ಥಾನದಲ್ಲಿ ನಿಂತು ಕೊಂಡು ಅವರು ದೂರುದಾರಳನ್ನು ಮ್ಯಾಜಿಸ್ಪ್ರೇಟರ ಮುಂದೆ ಹಾಜರುಪಡಿಸಿ ಹೇಳಿಕೆ ಕೊಡಿಸಿದರು.

ಮುಂದಿನ ಹಂತದಲ್ಲಿ ದೇವಮಾನವನನ್ನು ವಿಚಾರಿಸುವುದಾಗಿತ್ತು. ವಿಚಾರಣೆಗೆ ಅರ್ಧ ಗಂಟೆ ಮಾತ್ರ ನೀಡಿದ ದೇವಮಾನವ ಪ್ರಥಮದಲ್ಲಿ ಎಲ್ಲವನ್ನೂ ಮರೆಮಾಚಲು ಯತ್ನಿಸಿದ್ದ. ಬಳಿಕ ಮಾಡಿದ ತಪ್ಪನ್ನು ದೇವಮಾನವ ಒಪ್ಪಿಕೊಂಡ. ಮರೆಮಾಚಲು ಯತ್ನಿಸಿದ ಪ್ರತಿ ವಿಷಯವನ್ನು ಬಹಿರಂಗಗೊಳಿಸಲಾಯಿತು ಎಂದು ಸಿಬಿಐ ಅಧಿಕಾರಿ ವಿವರಿಸಿದರು.

ಸೇವಾ ಅವಧಿಯ 38 ವರ್ಷಗಳಲ್ಲಿ ನಾರಾಯಣ ಅವರು ಸಿಬಿಐಯಲ್ಲಿ ಕಾರ್ಯಾಚರಿಸಿದ್ದು, ಮಾಜಿ ಪ್ರಧಾನಮಂತ್ರಿ ರಾಜೀವ ಗಾಂಧಿ ಕೊಲೆ, ಅಯೋಧ್ಯಾ ರಾಮ ಮಂದಿರ ಪ್ರಕರಣ, ಕಂದಹಾರ್‌ ವಿಮಾನ ಅಪಹರಣ ಪ್ರಕರಣಗಳನ್ನು ತನಿಖೆ ನಡೆಸಿದ ಸಿಬಿಐ ತಂಡದ ಸದಸ್ಯರಾಗಿದ್ದರು. 2009ರಲ್ಲಿ ಸೇವೆಯಿಂದ ನಿವೃತ್ತರಾದ ಅವರನ್ನು ಅದೇ ವರ್ಷ ಸಿಬಿಐಯ ಉಪನಿರ್ದೇಶಕರಾಗಿ ನೇಮಕ ಮಾಡಲಾಯಿತು. 1992ರಲ್ಲಿ ಪೊಲೀಸ್‌ ಪದಕ, 1999ರಲ್ಲಿ ರಾಷ್ಟ್ರಪತಿಯ ಪೊಲೀಸ್‌ ಪದಕ ನಾರಾಯಣ ಅವರಿಗೆ ಲಭಿಸಿದೆ.

Kasrgod Officer who investigated dera chief case

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ