ತಿರುಪತಿ: ದಶಕಗಳಿಂದ ಜೀವಂತವಾಗಿರುವ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ನ್ಯಾಯಾಂಗದಿಂದ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಮಾತುಕತೆಯಿಂದ ಮಾತ್ರವೇ ವಿವಾದ ಇತ್ಯರ್ಥ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ತಿರುಪತಿಯಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ''ಕನ್ನಡಿಗರು ಮತ್ತು ತಮಿಳರು ಶತ್ರುಗಳಲ್ಲ. ನೀರಿನ ಒಳಹರಿವು ಮತ್ತು ವಾಸ್ತವ ಪರಿಸ್ಥಿತಿ ಆಧರಿಸಿ ಕಾವೇರಿ ನೀರು ಹಂಚಿಕೆ ಆಗಬೇಕು,'' ಎಂದು ಹೇಳಿದರು. ಒಂದು ವಾರದ ಅವಧಿಯಲ್ಲಿ ಎರಡನೇ ಸಲ ಅವರು ತಮಿಳುನಾಡು ಜತೆ ಮಾತುಕತೆ ಪ್ರಸ್ತಾವ ಇಟ್ಟಿದ್ದಾರೆ. ಆದರೆ ತಮಿಳುನಾಡು ಇದಕ್ಕೆ ಸುತಾರಾಂ ಒಪ್ಪಿಲ್ಲ. ಜತೆಗೆ, ಮೇಕೆದಾಟು ಅಣೆಕಟ್ಟು ನಿರ್ಮಾಣ ವಿರೋಧಿಸಿ ಸಂಸತ್ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ಹೋರಾಟ ಮುಂದುವರಿಸಿದೆ.
ನ್ಯಾಯಾಂಗದಿಂದ ಶಾಶ್ವತ ಪರಿಹಾರ ಅಸಾಧ್ಯ, ಮಾತುಕತೆಯೇ ಮಾರ್ಗ
ದಶಕಗಳಿಂದ ಜೀವಂತವಾಗಿರುವ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ನ್ಯಾಯಾಂಗದಿಂದ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಮುಖ್ಯಮಂತ್ರಿ ಎಚ್ಡಿ...
Vijaya Karnataka 19 Dec 2018, 5:00 am