ಆ್ಯಪ್ನಗರ

ಶಬರಿಮಲೆ ಯಾತ್ರೆ ಕೈಗೊಳ್ಳಲು ಹೊರರಾಜ್ಯದ ಭಕ್ತರಿಗೂ ಅವಕಾಶ: ಕೇರಳ ಸರ್ಕಾರ ನಿರ್ಧಾರ

ಶಬರಿಮಲೆ ಯಾತ್ರೆ ಕೈಗೊಳ್ಳಲು ಹೊರರಾಜ್ಯದ ಭಕ್ತರಿಗೆ ಅವಕಾಶವನ್ನು ಕೇರಳ ಸರ್ಕಾರ ನೀಡಿದೆ. ಎರಡು ತಿಂಗಳ ವಾರ್ಷಿಕ ಮಂಡಲ ಪೂಜೆ ಮಹೋತ್ಸವ ಮತ್ತು ಮಕರವಿಳಕ್ಕು ಉತ್ಸವ ನ. 16ರಿಂದ ಆರಂಭವಾಗಲಿದೆ. ಆದರೆ, ಹಿಂದಿನಂತೆ ಬಯಸಿದವರಿಗೆಲ್ಲ ಅವಕಾಶ ಸಿಗುವ ಖಾತ್ರಿ ಇಲ್ಲ. ಸಂಖ್ಯೆಯ ಮಿತಿಯ ವಿವರ ಸದ್ಯವೇ ಪ್ರಕಟವಾಗಲಿದೆ.

Vijaya Karnataka Web 1 Oct 2020, 7:56 am
ತಿರುವನಂತಪುರಂ: ಹೊರರಾಜ್ಯದ ಮಾಲಾಧಾರಿಗಳಿಗೂ ಶಬರಿಮಲೆ ಯಾತ್ರೆ ಕೈಗೊಳ್ಳಲು ಅವಕಾಶ ನೀಡುವ ಮಹತ್ವದ ತೀರ್ಮಾನವನ್ನು ಕೇರಳ ಸರಕಾರ ತೆಗೆದುಕೊಂಡಿದ್ದು, ಕರ್ನಾಟಕದ ಭಕ್ತರಿಗೆ ಅನುಕೂಲವಾಗಿದೆ.
Vijaya Karnataka Web sabarimala


ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಈ ಬಾರಿ ಹೊರ ರಾಜ್ಯದ ಭಕ್ತರಿಗೆ ನಿಷೇಧ ಹೇರಲಾಗುತ್ತದೆ ಎಂಬ ವದಂತಿ ಹರಡಿತ್ತು.
ವಿಡಿಯೋ: ಅಯ್ಯಪ್ಪನಿಗೂ ತಟ್ಟಿದ ಕೊರೊನಾ ಬಿಸಿ..! ಭಕ್ತರಿಲ್ಲದೆ ಶಬರಿಮಲೆಯಲ್ಲಿ ಮಾಸಿಕ ಪೂಜೆ

ಎರಡು ತಿಂಗಳ ವಾರ್ಷಿಕ ಮಂಡಲ ಪೂಜೆ ಮಹೋತ್ಸವ ಮತ್ತು ಮಕರವಿಳಕ್ಕು ಉತ್ಸವ ನ. 16ರಿಂದ ಆರಂಭವಾಗಲಿದೆ. ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಹೊರ ರಾಜ್ಯದ ಭಕ್ತರಿಗೂ ಅವಕಾಶ ನೀಡಲು ನಿರ್ಧರಿಸಲಾಗಿದೆ. ಆದರೆ, ಹಿಂದಿನಂತೆ ಬಯಸಿದವರಿಗೆಲ್ಲ ಅವಕಾಶ ಸಿಗುವ ಖಾತ್ರಿ ಇಲ್ಲ. ಯಾಕೆಂದರೆ, ಕೇರಳ ಸರಕಾರ ನಿಗದಿಪಡಿಸಿದಷ್ಟು ಸಂಖ್ಯೆಯ ಭಕ್ತರು ಮಾತ್ರ ಶಬರಿಮಲೆಗೆ ಹೋಗಬಹುದು. ಸಂಖ್ಯೆಯ ಮಿತಿಯ ವಿವರ ಸದ್ಯವೇ ಪ್ರಕಟವಾಗಲಿದೆ.
18 ವರ್ಷಗಳಿಂದ ಶಬರಿಮಲೆಗೆ ಬರಿಗಾಲಿನಲ್ಲಿಪಾದಯಾತ್ರೆ

ಈ ಬಾರಿ ಭಕ್ತರಿಗೆ ದೇವಸ್ಥಾನ ಹೊರತುಪಡಿಸಿ ಬೇರೆಲ್ಲೂ ಹೋಗಲು ಮತ್ತು ಗೆಸ್ಟ್‌ಹೌಸ್‌ನಲ್ಲಿ ಉಳಿದುಕೊಳ್ಳಲು ಹಾಗೂ ಅಯ್ಯಪ್ಪ ಸನ್ನಿಧಾನದ ಇನ್ನಿತರೆ ಪ್ರದೇಶಗಳಲ್ಲಿ ಸುತ್ತಾಡಲು ಭಕ್ತರಿಗೆ ಅವಕಾಶ ನೀಡದೇ ಇರಲು ತೀರ್ಮಾನಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ