ಬೆಂಗಳೂರು: ಪ್ರಚೋದನಕಾರಿ ಮತ್ತು ವ್ಯಕ್ತಿಯ ಚಾರಿತ್ರ್ಯಹರಣದಂತಹ ಸುದ್ದಿಗಳಿಗೆ ಮಾಧ್ಯಮಗಳು ಒತ್ತು ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ರಾಜ್ಯ ಸಮಿತಿ ಅಧ್ಯಕ್ಷ ನ್ಯಾ.ಸುಭಾಷ್ ಬಿ.ಅಡಿ ಹೇಳಿದರು.
ಕನ್ನಡ ಭವನದ ನಯನ ಸಭಾಂಗಣದಲ್ಲಿ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಗುರುವಾರ ಹಮ್ಮಿಕೊಂಡಿದ್ದ 'ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ' ಸಮಾರಂಭದಲ್ಲಿ ಮಾತನಾಡಿ, ''ಪತ್ರಿಕೋದ್ಯಮ ಸೇವೆಯೇ ಹೊರತು, ವೃತ್ತಿಯಲ್ಲ. ನಿಖರ ಮಾಹಿತಿ ಮತ್ತು ಸತ್ಯವಾದ ವಿಷಯಗಳ ಪ್ರಕಟಣೆಗೆ ಪತ್ರಕರ್ತರು ಒತ್ತು ನೀಡಬೇಕು,'' ಎಂದರು.
''ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ಸುದ್ದಿ ಮಾಧ್ಯಮಗಳನ್ನು ಮೀರಿ ಹೆಸರು ಮಾಡುತ್ತಿವೆ. ಆದರೆ, ಇವು ಜನರಿಗಾಗಲೀ ಮತ್ತು ಸಮಾಜಕ್ಕಾಗಲಿ ಉತ್ತರಾದಾಯಿಯಾಗಿಲ್ಲ. ಯಾರು ಏನನ್ನಾದರೂ, ಬರೆದು ಸಾಮಾಜಿಕ ಮಾಧ್ಯಮಗಳಲ್ಲಿ ತೇಲಿ ಬಿಡಬಹುದಾಗಿದೆ. ಆದರೆ, ಪತ್ರಿಕೋದ್ಯಮ ಎಂಬುದು ಇದಕ್ಕಿಂತ ಭಿನ್ನವಾಗಿದೆ,''ಎಂದು ಅಭಿಪ್ರಾಯಪಟ್ಟರು. ''ಇಂಗ್ಲಿಷ್ ಭಾಷೆಯಲ್ಲಿನ ಕೋರ್ಟ್ ತೀರ್ಪುಗಳನ್ನು ಅರ್ಥೈಸಿಕೊಂಡು ಜನರಿಗೆ ಅರ್ಥವಾಗುವಂತೆ ಸರಳವಾಗಿ ಬರೆಯುವುದು ಸವಾಲಿನ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ಕೋರ್ಟ್ನ ಸುದ್ದಿಗಳನ್ನು ರಾಜೇಂದ್ರ ಅವರು ಅತ್ಯುತ್ತಮವಾಗಿ ಬರೆಯುತ್ತಿದ್ದರು,''ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪಿ.ರಾಜೇಂದ್ರ ಅವರಿಗೆ ಪ್ರಸಕ್ತ ಸಾಲಿನ 'ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ'ಯನ್ನು ನೀಡಿ ಗೌರವಿಸಲಾಯಿತು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಅಂಜಲಿ ರಾಮಣ್ಣ ಮತ್ತು ತುಮಕೂರಿನ 'ಪ್ರಜಾಪ್ರಗತಿ' ಪತ್ರಿಕೆಯ ಸಂಪಾದಕ ಎಸ್.ನಾಗಣ್ಣ ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ, 'ಮಾಧ್ಯಮ-ನ್ಯಾಯಾಂಗ: ಭಾರತೀಯ ದೃಷ್ಟಿಕೋನ' ಎಂಬ ವಿಷಯದ ಬಗ್ಗೆ ಸಂವಾದ ನಡೆಯಿತು. ಸಂವಾದದಲ್ಲಿ ಸುಪ್ರೀಂ ಕೋರ್ಟ್ ವಕೀಲ ಧನಂಜಯ್, ಹಿರಿಯ ಪತ್ರಕರ್ತರಾದ ಅರಕೆರೆ ಜಯರಾಮ್, ವೀರನಾರಾಯಣ ಮತ್ತು ನಂಜುಂಡಪ್ಪ ಪಾಲ್ಗೊಂಡಿದ್ದರು.
ಕನ್ನಡ ಭವನದ ನಯನ ಸಭಾಂಗಣದಲ್ಲಿ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಗುರುವಾರ ಹಮ್ಮಿಕೊಂಡಿದ್ದ 'ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ' ಸಮಾರಂಭದಲ್ಲಿ ಮಾತನಾಡಿ, ''ಪತ್ರಿಕೋದ್ಯಮ ಸೇವೆಯೇ ಹೊರತು, ವೃತ್ತಿಯಲ್ಲ. ನಿಖರ ಮಾಹಿತಿ ಮತ್ತು ಸತ್ಯವಾದ ವಿಷಯಗಳ ಪ್ರಕಟಣೆಗೆ ಪತ್ರಕರ್ತರು ಒತ್ತು ನೀಡಬೇಕು,'' ಎಂದರು.
''ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ಸುದ್ದಿ ಮಾಧ್ಯಮಗಳನ್ನು ಮೀರಿ ಹೆಸರು ಮಾಡುತ್ತಿವೆ. ಆದರೆ, ಇವು ಜನರಿಗಾಗಲೀ ಮತ್ತು ಸಮಾಜಕ್ಕಾಗಲಿ ಉತ್ತರಾದಾಯಿಯಾಗಿಲ್ಲ. ಯಾರು ಏನನ್ನಾದರೂ, ಬರೆದು ಸಾಮಾಜಿಕ ಮಾಧ್ಯಮಗಳಲ್ಲಿ ತೇಲಿ ಬಿಡಬಹುದಾಗಿದೆ. ಆದರೆ, ಪತ್ರಿಕೋದ್ಯಮ ಎಂಬುದು ಇದಕ್ಕಿಂತ ಭಿನ್ನವಾಗಿದೆ,''ಎಂದು ಅಭಿಪ್ರಾಯಪಟ್ಟರು. ''ಇಂಗ್ಲಿಷ್ ಭಾಷೆಯಲ್ಲಿನ ಕೋರ್ಟ್ ತೀರ್ಪುಗಳನ್ನು ಅರ್ಥೈಸಿಕೊಂಡು ಜನರಿಗೆ ಅರ್ಥವಾಗುವಂತೆ ಸರಳವಾಗಿ ಬರೆಯುವುದು ಸವಾಲಿನ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ಕೋರ್ಟ್ನ ಸುದ್ದಿಗಳನ್ನು ರಾಜೇಂದ್ರ ಅವರು ಅತ್ಯುತ್ತಮವಾಗಿ ಬರೆಯುತ್ತಿದ್ದರು,''ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪಿ.ರಾಜೇಂದ್ರ ಅವರಿಗೆ ಪ್ರಸಕ್ತ ಸಾಲಿನ 'ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ'ಯನ್ನು ನೀಡಿ ಗೌರವಿಸಲಾಯಿತು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಅಂಜಲಿ ರಾಮಣ್ಣ ಮತ್ತು ತುಮಕೂರಿನ 'ಪ್ರಜಾಪ್ರಗತಿ' ಪತ್ರಿಕೆಯ ಸಂಪಾದಕ ಎಸ್.ನಾಗಣ್ಣ ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ, 'ಮಾಧ್ಯಮ-ನ್ಯಾಯಾಂಗ: ಭಾರತೀಯ ದೃಷ್ಟಿಕೋನ' ಎಂಬ ವಿಷಯದ ಬಗ್ಗೆ ಸಂವಾದ ನಡೆಯಿತು. ಸಂವಾದದಲ್ಲಿ ಸುಪ್ರೀಂ ಕೋರ್ಟ್ ವಕೀಲ ಧನಂಜಯ್, ಹಿರಿಯ ಪತ್ರಕರ್ತರಾದ ಅರಕೆರೆ ಜಯರಾಮ್, ವೀರನಾರಾಯಣ ಮತ್ತು ನಂಜುಂಡಪ್ಪ ಪಾಲ್ಗೊಂಡಿದ್ದರು.