ಆ್ಯಪ್ನಗರ

ಖಾತೆ ಮಾಡಿಕೊಡಲು ವಿಳಂಬ: ತಹಸೀಲ್ದಾರ್‌ ಅಮಾನತುಗೆ ಹೈಕೋರ್ಟ್‌ ಆದೇಶ

ರೈತನ ಜಮೀನಿನ ಖಾತೆ ಮಾಡಿಕೊಡಲು ವಿಳಂಬ ಮಾಡಿದ ಕಾರಣಕ್ಕೆ ಕನಕಪುರ ತಾಲೂಕಿನ ತಹಸೀಲ್ದಾರ್‌ ಕೆಎಎಸ್‌ ಅಧಿಕಾರಿ ಆನಂದಯ್ಯ ಅವರನ್ನು ಸೇವೆಯಿಂದ ...

Vijaya Karnataka 15 Jun 2019, 5:00 am
ಬೆಂಗಳೂರು: ರೈತನ ಜಮೀನಿನ ಖಾತೆ ಮಾಡಿಕೊಡಲು ವಿಳಂಬ ಮಾಡಿದ ಕಾರಣಕ್ಕೆ ಕನಕಪುರ ತಾಲೂಕಿನ ತಹಸೀಲ್ದಾರ್‌ ಕೆಎಎಸ್‌ ಅಧಿಕಾರಿ ಆನಂದಯ್ಯ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಹೈಕೋರ್ಟ್‌ ಆದೇಶಿಸಿದೆ.
Vijaya Karnataka Web khata dealy
ಖಾತೆ ಮಾಡಿಕೊಡಲು ವಿಳಂಬ: ತಹಸೀಲ್ದಾರ್‌ ಅಮಾನತುಗೆ ಹೈಕೋರ್ಟ್‌ ಆದೇಶ


ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯ ಹುಳುಗೊಂಡನಹಳ್ಳಿ ವಾಸಿ ವೆಂಕಟೇಶ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಎನ್‌.ಸತ್ಯನಾರಾಯಣ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ಮಾಡಿದೆ.

ಅರ್ಜಿದಾರರು ಗ್ರಾಮದ ಸರ್ವೇ ನಂ-58ರಲ್ಲಿನ ಒಂದು ಎಕರೆ ಜಮೀನಿನ ಖಾತೆ ಮಾಡಿಕೊಡಲು ತಹಸೀಲ್ದಾರ್‌ ಆನಂದಯ್ಯ ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು.

ವೆಂಕಟೇಶ್‌ಗೆ ಖಾತೆ ಮಾಡಿಕೊಡುವಂತೆ ಹೈಕೋರ್ಟ್‌ ಹಿಂದೆ ನೀಡಿದ್ದ ಆದೇಶವನ್ನು ಪಾಲಿಸದ ಕಾರಣಕ್ಕೆ ಆನಂದಯ್ಯ ಅವರನ್ನು ಸೇವೆಯಿಂದ ಅಮಾನತು ಪಡಿಸುವಂತೆ ನ್ಯಾಯಪೀಠ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ. ಜತೆಗೆ, ಆನಂದಯ್ಯ ವಿರುದ್ಧ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆಯೂ ನ್ಯಾಯಪೀಠ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ಗೆ ಸೂಚನೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ