ಆ್ಯಪ್ನಗರ

ಕೆಎಚ್‌ಬಿ ನಿವೇಶನ ಹಂಚಿಕೆಗೆ ವಿವೇಚನಾ ಕೋಟ : ಸರಕಾರದ ನಿಲುವು ಕೇಳಿದ ಹೈಕೋರ್ಟ್‌

ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ)ಯ ನಿವೇಶನ ಹಂಚಿಕೆಯಲ್ಲಿರುವ ವಿವೇಚನಾ ಕೋಟಾದ ನಿಯಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್‌ ...

Vijaya Karnataka 27 Aug 2019, 5:00 am
ಬೆಂಗಳೂರು: ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ)ಯ ನಿವೇಶನ ಹಂಚಿಕೆಯಲ್ಲಿರುವ ವಿವೇಚನಾ ಕೋಟಾದ ನಿಯಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್‌ ಸರಕಾರದ ನಿಲುವು ಕೇಳಿದೆ.
Vijaya Karnataka Web House-mortgage


ವಕೀಲ ಕೆ. ಬೋಜಪ್ಪ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಿಜೆ ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ವಾದ ಆಲಿಸಿದ ಬಳಿಕ ನ್ಯಾಯಪೀಠ, ಕೆಹೆಚ್‌ಬಿ ನಿವೇಶನ ಹಂಚಿಕೆಯಲ್ಲಿ ಸರಕಾರದ ವಿವೇಚನಾ ಕೋಟಾ ನ್ಯಾಯೋಚಿತವಲ್ಲ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು. 'ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳಿಗೆ ನಿವೇಶನ ನೀಡಲು ಅವಕಾಶವಿದೆ. ಆದರೆ ನಿವೇಶನ ಹಂಚಿಕೆಗೆ ಸೂಕ್ತ ಮಾನದಂಡ ರೂಪಿಸಿಲ್ಲ'ಎಂದ ನ್ಯಾಯಪೀಠ ಈ ಬಗ್ಗೆ ಸರಕಾರದ ನಿಲುವು ಏನು ಎಂಬುದನ್ನು ಸೆ.11 ರೊಳಗೆ ತಿಳಿಸಲು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.

ಅರ್ಜಿದಾರರ ಪರ ವಕೀಲರು, ಕೆಎಚ್‌ಬಿ ನಿವೇಶನ ಹಂಚಿಕೆಯಲ್ಲಿ ವಿವೇಚನಾ ಕೋಟಾ ಹೊಂದಿರುವುದು ಸರಿಯಲ್ಲ, ಅದು ಕಾನೂನು ಬಾಹಿರ. ಕೆಎಚ್‌ಬಿ ನಿಯಮ 4ರಲ್ಲಿ ಕೆಲವು ನಿವೇಶನಗಳನ್ನು /ಮನೆಗಳನ್ನು ಮೀಸಲಿಟ್ಟುಕೊಳ್ಳಬಹುದು. ಆದರೆ ಶೇ.10ರಷ್ಟು ವಿವೇಚನಾ ಕೋಟಾ ಹೊಂದಲು ನಿಯಮ ತಿದ್ದುಪಡಿ ಮಾಡಿರುವುದು ನಿಯಮ ಉಲ್ಲಂಘನೆಯಾಗಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ