ಆ್ಯಪ್ನಗರ

ಎಸಿಬಿ ದಾಳಿ ವೇಳೆ ಕಿಟಕಿಯಿಂದ ಹಣದ ಚೀಲ ಎಸೆದಿದ್ದ ಅಧಿಕಾರಿಗೆ ಪ್ರಭಾವಿ ಹುದ್ದೆ

ಎಸಿಬಿ ದಾಳಿ ವೇಳೆ ಕಿಟಕಿಯಿಂದ ಹಣದ ಚೀಲ ಎಸೆದು ಬಚಾವಾಗಲು ಯತ್ನಿಸಿದ್ದ ಅಧಿಕಾರಿಗಳೆ ಕೆಐಎಡಿಬಿ ಮುಖ್ಯ ಎಂಜಿನಿಯರ್‌ ಹುದ್ದೆ ನೀಡಲು ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

Vijaya Karnataka 23 Aug 2019, 8:17 am
ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದಿಂದ(ಎಸಿಬಿ) ದಾಳಿಗೊಳಗಾಗಿ ಅಮಾನತು ಶಿಕ್ಷೆಗೆ ಗುರಿಯಾಗಿದ್ದ ಅಧಿಕಾರಿಗೆ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ(ಕೆಐಎಡಿಬಿ) ಮುಖ್ಯ ಎಂಜಿನಿಯರ್‌ ಹುದ್ದೆ ನೀಡಲು ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರೇ ಸೂಚನೆ ಕೊಟ್ಟಿರುವ ಅಂಶ ಬೆಳಕಿಗೆ ಬಂದಿದೆ.
Vijaya Karnataka Web acb


ಅಧಿಕಾರಿಗಳ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ

ಮುಖ್ಯ ಎಂಜಿನಿಯರ್‌ ದರ್ಜೆಯ ಟಿ.ಆರ್‌.ಸ್ವಾಮಿ ಕಳೆದ ವರ್ಷ ಎಸಿಬಿ ದಾಳಿಗೊಳಗಾಗಿದ್ದರು. ಅವರ ಮನೆಯಲ್ಲಿ ಕೋಟ್ಯಂತರ ರೂ. ಸಿಕ್ಕಿತ್ತು. ಎಸಿಬಿ ದಾಳಿ ವೇಳೆ ಬಾತ್‌ರೂಮ್‌ನ ಕಿಟಕಿಯಿಂದ ಹಣ ಎಸೆದು ಬಚಾವಾಗಲು ಯತ್ನಿಸಿದ್ದರು. ಬಳಿಕ ಸ್ವಾಮಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಈ ಅಧಿಕಾರಿಯ ಪ್ರಾಸಿಕ್ಯೂಷನ್‌ಗೆ ಸರಕಾರ ಅನುಮತಿ ನೀಡಿರಲಿಲ್ಲ.

ಈ ಮಧ್ಯೆ ಅಮಾನತು ತೆರವುಗೊಳಿಸಿ ಪುನಃ ಕೆಐಎಡಿಬಿಗೆ ಸ್ವಾಮಿ ಅವರನ್ನು ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕಳುಹಿಸಲಾಗಿತ್ತು. ಆದರೆ, ಯಾವುದೇ ಕಾರ್ಯಕಾರಿ ಹುದ್ದೆ ನೀಡಿರಲಿಲ್ಲ. ಎಸಿಬಿ ದಾಳಿಗೊಳಗಾದವರು ಹಾಗೂ ಅಮಾನತು ಶಿಕ್ಷೆ ಅನುಭವಿಸಿದವರಿಗೆ ಕಾರ್ಯಕಾರಿ ಹುದ್ದೆ ನೀಡುವ ಕ್ರಮವೂ ಇಲ್ಲ.

ಇದೀಗ ಸಿಎಂ ಬಿಎಸ್‌ವೈ ಅವರೇ ಟಿ.ಆರ್‌.ಸ್ವಾಮಿ ಅವರಿಗೆ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಮತ್ತು ಮುಖ್ಯ ಎಂಜಿನಿಯರ್‌ 1 ಮತ್ತು 2ರ ಹುದ್ದೆಯಡಿಯ ಸಂಪೂರ್ಣ ಅಭಿವೃದ್ಧಿ ಕಾಮಗಾರಿಗಳು ಹಾಗೂ ಆಡಳಿತಾತ್ಮಕ ವಿಷಯದ ಮೇಲುಸ್ತುವಾರಿ ವಹಿಸಲು ಆದೇಶಿಸುವಂತೆ ಸೂಚಿಸಿದ್ದಾರೆ. ಸಂಸ್ಥೆಯಲ್ಲಿ ಇದು ಅತ್ಯಂತ ಮಹತ್ವದ ಜವಾಬ್ದಾರಿಯಾಗಿದೆ. ಭ್ರಷ್ಟಾಚಾರದ ಆಪಾದನೆ ಹೊಂದಿರುವ ಅಧಿಕಾರಿಗೆ ಇಂಥ ಹೊಣೆ ನೀಡುತ್ತಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿ ಕೊಡುವಂತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ