ಆ್ಯಪ್ನಗರ

MB Patil | ಮಠ, ಮಸೀದಿ, ಚರ್ಚ್‌ಗಳತ್ತ ಕಾಂಗ್ರೆಸ್‌ ಚಿತ್ತ: ಆ.19ರಿಂದ ಎಂ.ಬಿ.ಪಾಟೀಲ್‌ ರಾಜ್ಯ ಪ್ರವಾಸ

2023 Karnataka Assembly elections: 2023ರ ವಿಧಾನಸಭೆ ಚುನಾವಣೆಗೆ ಪ್ರಚಾರ ಸಾರಥ್ಯ ವಹಿಸಿಕೊಂಡು ಸುಮಾರು 6 ತಿಂಗಳ ಬಳಿಕ ಎಂ.ಬಿ. ಪಾಟೀಲ್‌ ಅಖಾಡಕ್ಕೆ ಎಂಟ್ರಿ ಪಡೆದಿದ್ದು, ಪ್ರಚಾರ ಸಮಿತಿಯ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿದರು. ಆ.19ರಂದು ಕಲ್ಯಾಣ ಕರ್ನಾಟಕ ಭಾಗದಿಂದ ಪ್ರವಾಸ ಆರಂಭಿಸಲಿರುವ ಅವರು, ಸೆ.10ರವರೆಗೆ ನಾನಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಚಾರ ಸಮಿತಿಯ ಪದಾಧಿಕಾರಿಗಳ ಪಟ್ಟಿ ಸಿದ್ಧವಾಗಿದ್ದು, ಸದ್ಯದಲ್ಲೇ ಪಟ್ಟಿ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದರು.

Edited byಹೇಮಂತ್ ಕುಮಾರ್ ಎಸ್ | Vijaya Karnataka 16 Aug 2022, 11:10 pm

ಹೈಲೈಟ್ಸ್‌:

  • ಆ.19ರಂದು ಕಲ್ಯಾಣ ಕರ್ನಾಟಕ ಭಾಗದಿಂದ ಪ್ರವಾಸ ಆರಂಭ
  • ಕಲಬುರಗಿಯಲ್ಲಿ ಶರಣಬಸಪ್ಪ ಅಪ್ಪ ದೇವಾಲಯಕ್ಕೆ ಭೇಟಿಯೊಂದಿಗೆ ಪ್ರವಾಸ ಶುರು
  • ಹಲವು ಭಾಗಗಳಲ್ಲಿ ಪಕ್ಷದ ವತಿಯಿಂದ ಸಮಾವೇಶ
  • ಸೆ.10ರವರೆಗೆ ನಾನಾ ಜಿಲ್ಲೆಗಳಲ್ಲಿ ಪ್ರವಾಸ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web KPCC campaign committee MB Patil
ಎಂ.ಬಿ.ಪಾಟೀಲ್‌
ಬೆಂಗಳೂರು: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರ ಮತಬೇಟೆಗಾಗಿ ಆ.19 ಶುಕ್ರವಾರದಿಂದ ಮೊದಲ ಹಂತದ ರಾಜ್ಯ ಪ್ರವಾಸ ಆರಂಭಿಸುತ್ತಿದ್ದಾರೆ. ನಾನಾ ಸಮುದಾಯಗಳ ಮತ ಗಳಿಕೆ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯಾದ್ಯಂತ ಮಠ, ಮಂದಿರ, ಮಸೀದಿ, ಚರ್ಚ್‌ಗಳ ಭೇಟಿಗೆ ಪಾಟೀಲ್‌ ತಮ್ಮ ಪ್ರಥಮ ಪ್ರವಾಸ ಪಟ್ಟಿಯಲ್ಲಿಆದ್ಯತೆ ನೀಡಿರುವುದು ವಿಶೇಷವಾಗಿದೆ.
2023ರ ವಿಧಾನಸಭೆ ಚುನಾವಣೆಗೆ ಪ್ರಚಾರ ಸಾರಥ್ಯ ವಹಿಸಿಕೊಂಡು ಸುಮಾರು 6 ತಿಂಗಳ ಬಳಿಕ ಎಂ.ಬಿ. ಪಾಟೀಲ್‌ ಅಖಾಡಕ್ಕೆ ಎಂಟ್ರಿ ಪಡೆದಿದ್ದು, ಪ್ರಚಾರ ಸಮಿತಿಯ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿದರು. ಆ.19ರಂದು ಕಲ್ಯಾಣ ಕರ್ನಾಟಕ ಭಾಗದಿಂದ ಪ್ರವಾಸ ಆರಂಭಿಸಲಿರುವ ಅವರು, ಸೆ.10ರವರೆಗೆ ನಾನಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಚಾರ ಸಮಿತಿಯ ಪದಾಧಿಕಾರಿಗಳ ಪಟ್ಟಿ ಸಿದ್ಧವಾಗಿದ್ದು, ಸದ್ಯದಲ್ಲೇ ಪಟ್ಟಿ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದರು.
M B Patil: ಇದು ದಿಕ್ಕು ದೆಸೆ ಇಲ್ಲದ ಸರ್ಕಾರವಾಗಿದೆ: ಬಿಜೆಪಿ ವಿರುದ್ಧ ಎಂಬಿ ಪಾಟೀಲ್ ಕಿಡಿ
ರಾಜ್ಯದ ನಾನಾ ಭಾಗಗಳ ಮಠ, ಮಂದಿರಗಳು, ದರ್ಗಾ, ಚರ್ಚ್‌ಗಳಿಗೆ ಭೇಟಿ ನೀಡುವ ಜತೆಗೆ, ಹಲವು ಭಾಗಗಳಲ್ಲಿ ಪಕ್ಷದ ವತಿಯಿಂದ ನಡೆಯಲಿರುವ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ಜತೆಗೆ, ವಿವಿಧ ಸಮುದಾಯಗಳ ಪ್ರಮುಖರನ್ನು ಭೇಟಿ ಮಾಡಲಿದ್ದಾರೆ. ಎಲ್ಲ ಸಮುದಾಯಗಳ ಮತದಾರರನ್ನು ಓಲೈಸಲು ಪೂರಕವಾಗಿ ಪ್ರವಾಸದ ಪಟ್ಟಿ ಸಿದ್ಧಪಡಿಸಲಾಗಿದೆ.

ಭೇಟಿ ನೀಡಲಿರುವ ಮಠಗಳು:
ಎಂ.ಬಿ. ಪಾಟೀಲ್‌ ಆ.19ರಂದು ಕಲಬುರಗಿಯಲ್ಲಿ ಶರಣಬಸಪ್ಪ ಅಪ್ಪ ದೇವಾಲಯಕ್ಕೆ ಭೇಟಿಯೊಂದಿಗೆ ಪ್ರವಾಸ ಆರಂಭಿಸಲಿದ್ದಾರೆ. ತಮ್ಮ 3 ವಾರಗಳ ಪ್ರವಾಸದ ಅವಧಿಯಲ್ಲಿಅವರು, ಹುಬ್ಬಳ್ಳಿ ಮೂರು ಸಾವಿರ ಮಠ, ಮುರುಘಾ ಮಠ, ಸಿರಿಗೆರೆ ಮಠ, ಮಾದಾರ ಚೆನ್ನಯ್ಯ ಪೀಠ, ಭಗೀರಥ ಪೀಠ, ಭೋವಿ ಗುರುಪೀಠ, ಬೆಕ್ಕಿನ ಕಲ್ಮಠ, ವಾಲ್ಮೀಕಿ ಪೀಠ, ಹೊಸಹಳ್ಳಿ ರೆಡ್ಡಿ ಪೀಠ, ನಂದಿದುರ್ಗದ ನೊಳಂಬ ಪೀಠ, ಉಡುಪಿ ಶ್ರೀಕೃಷ್ಣ ಮಠ, ಬಾಳೆಹೊನ್ನೂರು ಮಠ, ಶೃಂಗೇರಿ ಮಠ, ರಂಭಾಪುರಿ, ಷಡಕ್ಷರಿ ಮಠ, ದೇವನೂರು ಗುರುಮಲ್ಲೇಶ್ವರ ಮಠ, ಚಾಮರಾಜನಗರದ ವಿರಕ್ತ ಮಠ, ಸಿದ್ದಗಂಗಾ ಮಠ, ಗವಿಮಠ, ಯಾದಗಿರಿಯ ಕೋರಿ ಸಿದ್ಧೇಶ್ವರ ಮಠ ಹಾಗೂ ಮಂತ್ರಾಲಯದ ಗುರುರಾಯರ ಪೀಠಕ್ಕೆ ಭೇಟಿ ನೀಡಲಿದ್ದಾರೆ.
Congress Freedom March | ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಮಾಡಬೇಕಿದೆ: ರಣದೀಪ್ ಸಿಂಗ್ ಸುರ್ಜೇವಾಲ
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಾಲಯ, ಮಲೆ ಮಹಾದೇಶ್ವರ ದೇವಾಲಯ, ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯ ಸೇರಿದಂತೆ ಹಲವು ದೇವಸ್ಥಾನಗಳ ಭೇಟಿಯೂ ಪ್ರಚಾರ ಸಮಿತಿ ಅಧ್ಯಕ್ಷರ ಪ್ರವಾಸ ಪಟ್ಟಿಯಲ್ಲಿದೆ. ಜತೆಗೆ, ಕಲಬುರಗಿಯ ಖಾಜಾ ಬಂದೇನವಾಜ್‌ ದರ್ಗಾ, ಹುಬ್ಬಳ್ಳಿಯ ಪತ್ತೇಸಾಬ ದರ್ಗಾ, ಉಲ್ಲಾಳದ ದರ್ಗಾಕ್ಕೆ ಭೇಟಿ ನೀಡಲಿರುವ ಎಂ.ಬಿ.ಪಾಟೀಲ್‌, ಮಂಗಳೂರಿನ ಆರ್ಚ್ ಬಿಷಪ್‌ರನ್ನು ಭೇಟಿ ಮಾಡಲಿದ್ದಾರೆ.
Congress Freedom March | ಬೆಂಗಳೂರಿನಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ: ಪ್ರಮುಖ ಹೈಲೈಟ್ಸ್ ಇಲ್ಲಿದೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್‌ ಖರ್ಗೆ ಸುದ್ದಿಗೋಷ್ಠಿಯಲ್ಲಿದ್ದರು.
ಲೇಖಕರ ಬಗ್ಗೆ
ಹೇಮಂತ್ ಕುಮಾರ್ ಎಸ್
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ 2022ರಿಂದ ಕಾರ್ಯನಿರ್ವಹಿಸುತ್ತಿರುವ ಹೇಮಂತ್ ಮಾಧ್ಯಮ ರಂಗಕ್ಕೆ ಅಧಿಕೃತ ಪ್ರವೇಶ ಆಗಿದ್ದು 2011ರಲ್ಲಿ ನ್ಯೂಸ್ ಚಾನೆಲ್ ಮೂಲಕ. ಅದಕ್ಕೂ ಹಿಂದಿನಿಂದ ವಾರಪತ್ರಿಕೆಗಳಿಗೆ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳ ಬರವಣಿಗೆಯಿಂದ ಬರಹದ ನಂಟು ಬೆಳೆಸಿಕೊಂಡಿದ್ದರು. ಸಿನಿಮಾ, ಕ್ರೈಂ, ರಾಜಕೀಯ, ಮೆಟ್ರೊ, ಕನ್ನಡ ಮತ್ತು ಸಂಸ್ಕೃತಿ, ಶಿಕ್ಷಣ, ರಾಷ್ಟ್ರ-ಅಂತಾರಾಷ್ಟ್ರೀಯ ವಿದ್ಯಮಾನಗಳು ಹಾಗೂ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಸಕ್ತಿ ವಿಸ್ತರಿಸಿಕೊಂಡಿದ್ದಾರೆ. ಟಿವಿ, ಪತ್ರಿಕೆ, ಡಿಜಿಟಲ್‌/ ವೆಬ್‌, ಕೆಲ ಸಮಯ ರೇಡಿಯೊ ಚಾನೆಲ್‌ನಲ್ಲೂ ತೊಡಗಿಸಿಕೊಂಡ ಅನುಭವಿರುವ ಇವರ ಮಂತ್ರ 'ಬದುಕು ನಿರಂತರ'. ಚಾರಣ, ರಂಗಭೂಮಿ, ಪ್ರವಾಸ, ಓದು,...ಹೀಗೆ ಒಂದಷ್ಟು ಅಭ್ಯಾಸ-ಹವ್ಯಾಸಗಳು ಜೊತೆಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ