ಬೆಂಗಳೂರು: ರಮೇಶ್ ಜಾರಕಿಹೊಳಿ ಅವರ ಜೊತೆಗೆ ಸಿ.ಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿಯ ಆಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಹೆಸರು ಉಲ್ಲೇಖ ಮಾಡಲಾಗಿದ್ದು ಇದಕ್ಕೆ ಡಿಕೆಶಿ ಇನ್ನೂ ಸ್ಪಷ್ಟನೆ ನೀಡಿಲ್ಲ. ಯುವತಿ ವಿಡಿಯೋ ರಿಲೀಸ್ ಬೆನ್ನಲ್ಲೇ ತಮ್ಮ ಮನೆಮಂದಿಯ ಜೊತೆಗೆ ಮಾತನಾಡಿದ್ದಾರೆ ಎನ್ನಲಾಗಿದ್ದ ಆಡಿಯೋವೊಂದು ಬಿಡುಗಡೆಗೊಂಡಿತ್ತು. ಈ ಆಡಿಯೋದಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗುತ್ತಿರುವುದಾಗಿ ಯುವತಿ ಹೇಳಿಕೊಂಡಿದ್ದರು.
ಆಡಿಯೋ ಲೀಕ್ ಆದ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ಪಾತ್ರದ ಬಗ್ಗೆಯೂ ಚರ್ಚೆ ಶುರುವಾಗಿತ್ತು. ಆದರೆ ಇದಕ್ಕೆ ಡಿ.ಕೆ ಶಿವಕುಮಾರ್ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಸದ್ಯ ಅವರು ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ತೆರಳಿದ್ದರಿಂದ ಈ ಕುರಿತಾಗಿ ಹೇಳಿಕೆಯನ್ನು ನೀಡಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ನನ್ನ ಕೊಲೆ ಪ್ರಯತ್ನ ನಡೆಯುತ್ತಿದೆ! ರಮೇಶ್ ಜಾರಕಿಹೊಳಿ ವಿರುದ್ಧ ಸಿ.ಡಿ ಯುವತಿ ಗಂಭೀರ ಆರೋಪ
ಇನ್ನು ಟ್ವಿಟ್ಟರ್ನಲ್ಲೋ, ಪತ್ರಿಕಾ ಹೇಳಿಕೆಯ ಮೂಲಕವೂ ಈ ಆಡಿಯೋ ಡಿಕೆಶಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ತಮಿಳುನಾಡಿನಿಂದ ಬಂದ ಬಳಿಕ ಅವರು ಪ್ರತಿಕ್ರಿಯೆ ನೀಡುತ್ತಾರೆ ಎಂದು ತಿಳಿದುಬಂದಿದೆ.ಇನ್ನು ಆಡಿಯೋ ವಿಚಾರವಾಗಿ ಯುವತಿ ಮತ್ತೊಂದು ವಿಡಿಯೋ ಮೂಲಕ ಸಮರ್ಥನೆ ನೀಡಿದ್ದಾರೆ.
ಮಾರ್ಚ್ 2 ರಂದು ನಮ್ಮ ಸಿಡಿ ಬಿಡುಗಡೆ ಆಗುತ್ತದೆ. ಆಗ ನಾನು ತುಂಬಾ ಹೆದರಿದ್ದೆ. ನನಗೆ ಪತ್ರಕರ್ತರಲ್ಲಿ ನರೇಶ್ ಮಾತ್ರನೇ ಪರಿಚಯವಿದ್ದದ್ದು. ನೀವು ನನಗೆ ನ್ಯಾಯ ಕೊಡಿಸ್ತೀನಿ ಅಂದಿದ್ರಿ. ಆದರೆ ಈಗ ಸಿ.ಡಿ ರಿಲೀಸ್ ಆಗಿದೆ ಎಂದು ಹೇಳಿಕೊಂಡಿದ್ದೆ. ಅದಕ್ಕೆ ನರೇಶ್, ಇಂತಹ ವಿಚಾರದಲ್ಲಿ ನಾನಿನ್ನು ಚಿಕ್ಕವನು.ರಾಜಕೀಯ ಸಪೋರ್ಟ್ ಬೇಕಾಗುತ್ತೆ. ಡಿಕೆ ಶಿವಕುಮಾರ್ , ಸಿದ್ಧರಾಮಯ್ಯ ಅವರ ಸಪೋರ್ಟ್ ಕೇಳೋಣ ಅಂದಿದ್ದರು. ಅಲ್ಲದೆ ಡಿ.ಕೆ ಶಿವಕುಮಾರ್ ಮನೆಗೆ ಹೋಗಿದ್ದಿವಿ ಆದರೆ ಅವರು ಸಿಕ್ಕಿರಲಿಲ್ಲ ಎಂದಿದ್ದಾರೆ.
ಆಡಿಯೋ ಲೀಕ್ ಆದ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ಪಾತ್ರದ ಬಗ್ಗೆಯೂ ಚರ್ಚೆ ಶುರುವಾಗಿತ್ತು. ಆದರೆ ಇದಕ್ಕೆ ಡಿ.ಕೆ ಶಿವಕುಮಾರ್ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಸದ್ಯ ಅವರು ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ತೆರಳಿದ್ದರಿಂದ ಈ ಕುರಿತಾಗಿ ಹೇಳಿಕೆಯನ್ನು ನೀಡಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ನನ್ನ ಕೊಲೆ ಪ್ರಯತ್ನ ನಡೆಯುತ್ತಿದೆ! ರಮೇಶ್ ಜಾರಕಿಹೊಳಿ ವಿರುದ್ಧ ಸಿ.ಡಿ ಯುವತಿ ಗಂಭೀರ ಆರೋಪ
ಇನ್ನು ಟ್ವಿಟ್ಟರ್ನಲ್ಲೋ, ಪತ್ರಿಕಾ ಹೇಳಿಕೆಯ ಮೂಲಕವೂ ಈ ಆಡಿಯೋ ಡಿಕೆಶಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ತಮಿಳುನಾಡಿನಿಂದ ಬಂದ ಬಳಿಕ ಅವರು ಪ್ರತಿಕ್ರಿಯೆ ನೀಡುತ್ತಾರೆ ಎಂದು ತಿಳಿದುಬಂದಿದೆ.ಇನ್ನು ಆಡಿಯೋ ವಿಚಾರವಾಗಿ ಯುವತಿ ಮತ್ತೊಂದು ವಿಡಿಯೋ ಮೂಲಕ ಸಮರ್ಥನೆ ನೀಡಿದ್ದಾರೆ.
ಮಾರ್ಚ್ 2 ರಂದು ನಮ್ಮ ಸಿಡಿ ಬಿಡುಗಡೆ ಆಗುತ್ತದೆ. ಆಗ ನಾನು ತುಂಬಾ ಹೆದರಿದ್ದೆ. ನನಗೆ ಪತ್ರಕರ್ತರಲ್ಲಿ ನರೇಶ್ ಮಾತ್ರನೇ ಪರಿಚಯವಿದ್ದದ್ದು. ನೀವು ನನಗೆ ನ್ಯಾಯ ಕೊಡಿಸ್ತೀನಿ ಅಂದಿದ್ರಿ. ಆದರೆ ಈಗ ಸಿ.ಡಿ ರಿಲೀಸ್ ಆಗಿದೆ ಎಂದು ಹೇಳಿಕೊಂಡಿದ್ದೆ. ಅದಕ್ಕೆ ನರೇಶ್, ಇಂತಹ ವಿಚಾರದಲ್ಲಿ ನಾನಿನ್ನು ಚಿಕ್ಕವನು.ರಾಜಕೀಯ ಸಪೋರ್ಟ್ ಬೇಕಾಗುತ್ತೆ. ಡಿಕೆ ಶಿವಕುಮಾರ್ , ಸಿದ್ಧರಾಮಯ್ಯ ಅವರ ಸಪೋರ್ಟ್ ಕೇಳೋಣ ಅಂದಿದ್ದರು. ಅಲ್ಲದೆ ಡಿ.ಕೆ ಶಿವಕುಮಾರ್ ಮನೆಗೆ ಹೋಗಿದ್ದಿವಿ ಆದರೆ ಅವರು ಸಿಕ್ಕಿರಲಿಲ್ಲ ಎಂದಿದ್ದಾರೆ.