ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಅಶೋಕ್ ಕುಮಾರ್ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಶೋಕ್ ಕುಮಾರ್ ಆತ್ಮಹತ್ಯೆ ಸುದ್ದಿ ಕೇಳಿ ಶಾಕ್ ಆಗಿದೆ. ಆತ್ಮಹತ್ಯೆ ಹಿಂದೆ ಏನು ಕಾರಣ ಎಂಬ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಉಪಕುಲಪತಿ ನೇಮಕ ವಿಚಾರದಲ್ಲಿ ನಾಲ್ವರ ನಡುವೆ ಪೈಪೋಟಿ ಇತ್ತು. ಈ ಹಿನ್ನೆಲೆಯಲ್ಲಿ ಹಣಕಾಸಿನ ವ್ಯವಹಾರವೂ ನಡೆದಿದೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
'ನನ್ನ ಸಾವಿಗೆ ನಾನೇ ಕಾರಣ, ನೇತ್ರದಾನ ಮಾಡಿ': ಆತ್ಮಹತ್ಯೆಗೆ ಶರಣಾದ ಪ್ರೊ. ಅಶೋಕ್ ಕುಮಾರ್ ಕೊನೆ ಮಾತು..
ಉಪಕುಲಪತಿ ಹುದ್ದೆ ಪಡೆದುಕೊಳ್ಳಲು ಬಡ್ಡಿಗೆ ಸಾಲ ಮಾಡಿ ಹಣ ಕೊಟ್ಟಿದ್ದಾರೆ. ಆದರೆ ಹುದ್ದೆಯೂ ಸಿಗಲಿಲ್ಲ, ಇದಕ್ಕಾಗಿ ನೀಡಿದ ಸುಮಾರು 2.50 ಕೋಟಿ ಹಣವೂ ವಾಪಸ್ ಸಿಗಲಿಲ್ಲ ಎಂಬ ಮಾಹಿತಿ ಇದೆ. ಇದರಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಚರ್ಚೆ ವಿ.ವಿ ಆವರಣದಲ್ಲಿ ನಡೆಯುತ್ತಿದೆ ಎಂದರು.
ಪ್ರಕರಣದ ಹಿಂದೆ ದೊಡ್ಡ ವ್ಯಕ್ತಿಗಳ ಕೈವಾಡವಿದ್ದು, ಸರ್ಕಾರದ ಮಟ್ಟದಲ್ಲಿ ಇರುವವರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಇದೆ. ಡೆತ್ ನೋಟ್ ನಲ್ಲಿ ಸಾವಿಗೆ ನಾನೇ ಕಾರಣ ಎಂದಿದ್ದರೂ ಪ್ರಕರಣದ ಹಿಂದೆ ಅನುಮಾನಗಳಿವೆ. ಅಷ್ಟೇ ಅಲ್ಲದೆ ಉಪಕುಲಪತಿ ಹುದ್ದೆಯನ್ನು ವ್ಯಾಪಾರಕ್ಕೆ ಇಡಲಾಗಿದೆ ಎಂಬ ಚರ್ಚೆ ಇದೆ. ಈ ನಿಟ್ಟಿನಲ್ಲಿ ಪ್ರಕರಣದ ಕುರಿತಾಗಿ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಅಶೋಕ್ ಕುಮಾರ್ ಆತ್ಮಹತ್ಯೆ ಪ್ರಕರಣದ ಚರ್ಚೆ ಎಸ್ ಐ ಟಿಯಿಂದ ಸಾಧ್ಯವಿಲ್ಲ. ಬದಲಾಗಿ ಸಿಟ್ಟಿಂಗ್ ಜಡ್ಜ್ ನೇತ್ರತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಡಿಕೆಶಿ ಒತ್ತಾಯಿಸಿದ್ದಾರೆ. ಪ್ರೊ. ಅಶೋಕ್ ಕುಮಾರ್ ಬೆಂಗಳೂರಿನ ಮೈಕೋ ಲೇಔಟ್ನಲ್ಲಿ ಇರುವ ತಮ್ಮ ಮನೆಯಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿವಮೊಗ್ಗ ಮೂಲದವರಾದ ಪ್ರೊ. ಅಶೋಕ್ ಕುಮಾರ್, ಮೈಸೂರಿನಲ್ಲೂ ವ್ಯಾಸಂಗ ಮಾಡಿದ್ದರು. ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಗೊಂಡಿದ್ದರು. ವಿದ್ಯುನ್ಮಾನ ಮಾಧ್ಯಮ ವಿಭಾಗದ ಕೋರ್ಸ್ ಕೋ ಆರ್ಡಿನೇಟರ್ ಕೂಡಾ ಆಗಿದ್ದರು.
ಬೆಂಗಳೂರಿನಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಶೋಕ್ ಕುಮಾರ್ ಆತ್ಮಹತ್ಯೆ ಸುದ್ದಿ ಕೇಳಿ ಶಾಕ್ ಆಗಿದೆ. ಆತ್ಮಹತ್ಯೆ ಹಿಂದೆ ಏನು ಕಾರಣ ಎಂಬ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಉಪಕುಲಪತಿ ನೇಮಕ ವಿಚಾರದಲ್ಲಿ ನಾಲ್ವರ ನಡುವೆ ಪೈಪೋಟಿ ಇತ್ತು. ಈ ಹಿನ್ನೆಲೆಯಲ್ಲಿ ಹಣಕಾಸಿನ ವ್ಯವಹಾರವೂ ನಡೆದಿದೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
'ನನ್ನ ಸಾವಿಗೆ ನಾನೇ ಕಾರಣ, ನೇತ್ರದಾನ ಮಾಡಿ': ಆತ್ಮಹತ್ಯೆಗೆ ಶರಣಾದ ಪ್ರೊ. ಅಶೋಕ್ ಕುಮಾರ್ ಕೊನೆ ಮಾತು..
ಉಪಕುಲಪತಿ ಹುದ್ದೆ ಪಡೆದುಕೊಳ್ಳಲು ಬಡ್ಡಿಗೆ ಸಾಲ ಮಾಡಿ ಹಣ ಕೊಟ್ಟಿದ್ದಾರೆ. ಆದರೆ ಹುದ್ದೆಯೂ ಸಿಗಲಿಲ್ಲ, ಇದಕ್ಕಾಗಿ ನೀಡಿದ ಸುಮಾರು 2.50 ಕೋಟಿ ಹಣವೂ ವಾಪಸ್ ಸಿಗಲಿಲ್ಲ ಎಂಬ ಮಾಹಿತಿ ಇದೆ. ಇದರಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಚರ್ಚೆ ವಿ.ವಿ ಆವರಣದಲ್ಲಿ ನಡೆಯುತ್ತಿದೆ ಎಂದರು.
ಪ್ರಕರಣದ ಹಿಂದೆ ದೊಡ್ಡ ವ್ಯಕ್ತಿಗಳ ಕೈವಾಡವಿದ್ದು, ಸರ್ಕಾರದ ಮಟ್ಟದಲ್ಲಿ ಇರುವವರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಇದೆ. ಡೆತ್ ನೋಟ್ ನಲ್ಲಿ ಸಾವಿಗೆ ನಾನೇ ಕಾರಣ ಎಂದಿದ್ದರೂ ಪ್ರಕರಣದ ಹಿಂದೆ ಅನುಮಾನಗಳಿವೆ. ಅಷ್ಟೇ ಅಲ್ಲದೆ ಉಪಕುಲಪತಿ ಹುದ್ದೆಯನ್ನು ವ್ಯಾಪಾರಕ್ಕೆ ಇಡಲಾಗಿದೆ ಎಂಬ ಚರ್ಚೆ ಇದೆ. ಈ ನಿಟ್ಟಿನಲ್ಲಿ ಪ್ರಕರಣದ ಕುರಿತಾಗಿ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಅಶೋಕ್ ಕುಮಾರ್ ಆತ್ಮಹತ್ಯೆ ಪ್ರಕರಣದ ಚರ್ಚೆ ಎಸ್ ಐ ಟಿಯಿಂದ ಸಾಧ್ಯವಿಲ್ಲ. ಬದಲಾಗಿ ಸಿಟ್ಟಿಂಗ್ ಜಡ್ಜ್ ನೇತ್ರತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಡಿಕೆಶಿ ಒತ್ತಾಯಿಸಿದ್ದಾರೆ. ಪ್ರೊ. ಅಶೋಕ್ ಕುಮಾರ್ ಬೆಂಗಳೂರಿನ ಮೈಕೋ ಲೇಔಟ್ನಲ್ಲಿ ಇರುವ ತಮ್ಮ ಮನೆಯಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿವಮೊಗ್ಗ ಮೂಲದವರಾದ ಪ್ರೊ. ಅಶೋಕ್ ಕುಮಾರ್, ಮೈಸೂರಿನಲ್ಲೂ ವ್ಯಾಸಂಗ ಮಾಡಿದ್ದರು. ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಗೊಂಡಿದ್ದರು. ವಿದ್ಯುನ್ಮಾನ ಮಾಧ್ಯಮ ವಿಭಾಗದ ಕೋರ್ಸ್ ಕೋ ಆರ್ಡಿನೇಟರ್ ಕೂಡಾ ಆಗಿದ್ದರು.